" ಎಡವಟ್ಟು "
------- ------
ಉಪ್ಪು -ಖಾರ ತಿ0ದ ಮನುಷ್ಯ
ಜೀವನದಲ್ಲಿ ಎಡವದು ಸಾಮಾನ್ಯ. ಎಡವಿ
ಬೀಳುವದು ಸಹಜ.
ಈಗ ಎಡವಿ ಬೀಳುವದು ,ಬಿದ್ದು
ಎದ್ದೇಳುವದು ಸಹಜವಾಗಿದೆ.ಆದರೆ
ಎಡವಿ ಯಾಕೆ ಬಿದ್ದ ಎ0ಬುದರ ಪೂರ್ವಪರ
ಚಿ0ತನೆಯ ಗೊಡವಿಗೆ ಈಗ ಮನುಷ್ಯ ಹೋಗಲ್ಲ.
ಕಾಲ ಬದಲಾಗಿದೆ.
'ಹಗರಣಗಳು ' -ಎ0ದು ಬೆಚ್ಚಿಬಿದ್ದು ಮೂಲೆ
ಸೇರುವ ಹಾಗಿಲ್ಲ. ಪ್ರಭಾವಗಳ ಸೆಲೆಗಳನ್ನು
ಬಳಸಿ ಹಗರಣಗಳು -ಮುಚ್ಚಿಹೋಗಿ ,
ಹಗರಣಗಳ ಪೆಟ್ಟಿಗೆಗೆ -"ಗೌರವ. ಸತ್ಕಾರ '
ಅಭಿನ0ದನೆಗಳ ಪುರಸ್ಕಾರಗಳನ್ನು ಲವಲೇಶವು
ಎಗ್ಗಿಲ್ಲದೇ ಪು0ಖಾನು ಪು0ಖವಾಗಿ ಲೇಪಿಸಿ
ಜಗಜ್ಜಾಹಿರುಪಡಿಸುವ ಕಾಲವಿದು.
ಯಾವುದನ್ನು ನ0ಬಿರುತ್ತೇವೆಯೋ ,ಅದು
ನಶಿಸಿ ಮೂಲೆಗು0ಪು ಸೇರಿರುತ್ತದೆ.
ಯಾವುದನ್ನು -ಕಸದ ಬುಟ್ಟಿಗೆ ಸೇರಿಸುತ್ತೇ
ವೆಯೋ , ಅದು ಸರ್ವಕಾಲಿಕ ಪ0ಚಾ0ಗವಾಗು
ವ ಕಾಲ ಇದಾಗಿದೆ.
ಮನುಷ್ಯನ ಬುದ್ಧಿವ0ತಿಕೆ ,ಪಾ0ಡಿತ್ಯ ,
ಪದವಿ,ಜನಪ್ರಿಯತೆ ,ಕೆಲವೊಮ್ಮೆ ಎಡವಟ್ಟಿಗೆ
ಮೂಲಾಧಾರವಾಗುತ್ತದೆ.
ಎಡವಟ್ಟಾಗಿ ಬೀಳುವಮುನ್ನ ಯಾಕೆ
ಎಡವಟ್ಟಾಯಿತೆ0ದು ಪರಾಮರ್ಶಿಸಿ ಅದು
ಪುನರಾವರ್ತನೆಯಾಗದ0ತೆ ಹಾಗು ಈ
ಎಡವಟ್ಟು ನಮ್ಮ ಜೀವನವನ್ನು ಮೃತ್ಯುಕೂಪಕ್ಕೆ
ತಳ್ಳದ0ತೆ -ನಾವು ನಮ್ಮ ಜೀವನವನ್ನು
ರೂಪಿಸಿ ಮುನ್ನಡೆಯುವದು ಹೆಚ್ಚುಶ್ರೇಯಸ್ಕರ.