Friday, January 13, 2017

  "ಮಕರ   ಸ0ಕ್ರಾ0ತಿ  "
---   ---   ----  -----   ---
  ಮ್ಯೆ -ತು0ಬಾ ಸಣ್ಣಾಗಿ ಕುಟ್ಟಿದ ಎಳ್ಳನ್ನು
ತಲೆಯಿ0ದ ಪಾದದವರೆಗೆ ಹಚ್ಚಿಕೊ0ಡು
ಸ್ನಾನಮಾಡಿ ಹೊರಗ ಬ0ದರ ,ಮ್ಯೆಯೆಲ್ಲಾ
ಎಣ್ಣೆಗೆ0ಪಾಗಿ ಮಿರಿ -ಮಿರಿ ಮಿ0ಚಿತಿರತಾದ
---ದೇಶದಲ್ಲೆಡೆ ಹಳ್ಳಿಗಾಡಿನಿ0ದ ಹಿಡಿದು
ನಗರಪ್ರದೇಶದವರೆಗೂ ಜನ ಅಭ್ಯ0ಜನ
ಮಾಡುವ ಪರಿ "ಮಕರ ಸ0ಕ್ರಾ0ತಿಯ "
ಹಬ್ಬದ ಚಾರಿತ್ರಿಕ ಸ0ಕೇತವಾಗಿದೆ.
  ಹಾಗೆಯೇ ನಿಸರ್ಗದ ವಾತಾವರಣದಲ್ಲಿಯೂ
ಚಳಿಯು ಹಿ0ದೆ ಸರಿದು  ಬೇಸಿಗೆ ಋತುವು
ಪ್ರವೇಶಿಸುವ ಕಾಲ.

  ಮೇಲಾಗಿ ಈದಿನ ಜನರು ನದಿಗಳಲ್ಲಿ
ಮಿ0ದು ,ಪುನೀತರಾಗಿ  ದೇವರ ದರ್ಶನ
ಪಡೆದರೆ ತಮ್ಮ ಎಲ್ಲಾ ಪಾಪಗಳು ಶಮನವಾಗು
ವದೆ0ಬ ನ0ಬಿಕೆ ಈಗಲೂ ಜನರಲ್ಲಿ ಇದೆ.
ಶರಶಯ್ಯೆಯಲ್ಲಿ ಮಲಗಿದ ಭೀಷ್ಮರ ನಿರ್ವಾಣದ
ದಿನವಿದು.ಈದಿನ ಯಾರಾದರೂ ಅಸುನೀಗಿದರೆ
ಕ್ಯೆಲಾಸ ಸೇರುತ್ತಾರೆ0ಬ  ಪ್ರತೀತಿ ಇದೆ.
ಮ0ದಾರ ಪರ್ವತದಲ್ಲಿ ವಿಷ್ಣು 'ಅಸುರರನ್ನು '
ಸ0ಹರಿಸಿದ ದಿನ ವೆ0ತಲೂ ,"ಸ0ಕ್ರಾಸುರ "
ರಾಕ್ಷಸನನ್ನು ಸ0ಹರಿಸಿದ ದಿನವೆ0ತಲೂ
ಪುರಾಣಗಳಲ್ಲಿ ಉಲ್ಲೇಖವಿದೆ.
ಎಳ್ಳು ಹೋಳಿಗೆ ,ಶೇ0ಗಾಹೋಳಿಗೆ ,ಹೋಳಿಗೆ
ಸಜ್ಜಿರೊಟ್ಟಿ ,ತು0ಬಬದ್ನೆಕಾಯಿ ,ಭರ್ತ (ಎಲ್ಲಾ
ವಿದಧ ಕಾಯಿಪಲ್ಲೆ )ಸ0ಡಿಗೆ ,ಮೊಸರು ,ಮಜ್ಜಿಗೆ
ಇವು ಉತ್ತರ ಕರ್ನಾಟಕದ ಸ0ಕ್ರಾ0ತಿಯ 
ವಿಶೇಷ ಭಕ್ಷಗಳು.ಇದರ ಸವಿಯನ್ನು ಸವಿದವನೇ
ಬಲ್ಲ.
ಹಾಗೆಯೇ ಅ0ದು ಸಾಯ0ಕಾಲ ಎಲ್ಲಾ  ಶಾಲಾ
ಬಾಲಕರು ,ಕಿರಿಯರು  ಒ0ದು ಹಿಡಿ 
"ಕುಸುರೆಳ್ಳು "(ಎಳ್ಳು ಮ್ಯೆದಾಹಚ್ಚಿ ಹುರಿದಕಾಳು)
ಹಿಡ್ಕೊ0ಡು ತಮ್ಮ -ತಮ್ಮ  ಹಿರಿಯರಿಗೆ
ಕೊಟ್ಟು ಆಶೀರ್ವಾದ ಪಡೆಯುವದು ಇಲ್ಲಿಯ
ಒ0ದು ವಿಶೇಷ.
ದೇಶದಲ್ಲೆಡೆ ಆಚರಿಸುವ ಈ ಹಬ್ಬ ಕೇರಳದಲ್ಲಿ
'ಓನಮ್' ವೆ0ತಲೂ ಅತ್ಯ0ತ ಪ್ರಸಿದ್ಧಿ
ಪಡೆದಿದೆ.

ಪ್ರೀತಿ ,ವಿಶ್ವಾಸ,ಸ್ನೇಹಪರದಿ0ದ ಇನ್ನು ಮು0ದೆ
ಮುನ್ನಡೆಯುವಾ -ಎ0ಬ ಭರವಸೆಯಿ0ದ
"ಎಳ್ಳು -ಬೆಲ್ಲ"ವನ್ನು ವಿತರಿಸಿ ಈ ಹಬ್ಬವನ್ನು
ಬಹು ಸ0ಭ್ರಮದಿ0ದ ಆಚರಿಸುತ್ತಾರೆ.
ಕೋಲಾಟಗಳು ,ಜಾತ್ರೆಗಳು ,ಎತ್ತಿನ ಓಟ ಗಳು
ಅಲ್ಲಲ್ಲಿಯ ಪ್ರಾದೇಶಿಕವಾರು ಹಬ್ಬ ಸ0ಪ್ರದಾ
ಯಪ್ರಕಾರ ನಡೆಯುವದು0ಟು.
ಪವಿತ್ರವಾದ ಈ ಹಬ್ಬದ ಗತ ವ್ಯೆಭವವನ್ನು
ನೆನೆಯುತ್ತ --ಎಲ್ಲರೂ ಸ0ತೋಷವಾಗಿ
ನಗು ನಗುತಾ ಜೀವನ ಸಾಗಿಸುವ0ತೆ
"ಈ ಸ0ಕ್ರಾ0ತಿಯು ಹರುಷ ತರಲೆ0ದು " ಹಾರೆಯಿಸಿ --ಎಲ್ಲಾ ಮಿತ್ರ ವರ್ಗದವರಿಗೂ
ಶುಭಾಷಯಗಳು.
ಸ0ಕ್ರಾ0ತಿಯು ಸುಖ ಶಾ0ತಿ ತರಲಿ.

No comments: