Monday, September 7, 2015

ಒಳನೋಟ  1


ಎಲ್ಲರು ಜೇಬುಗಳ್ಳರಿರವತ್ತಿನ್ಯಾಗ

ಬೆಲ್ಲಧ್ಹ0ಗ ಮಾತಾಡಿ ಜಾರಬೇಕು

ಇಲ್ಲಾ0ದರ ತೆಲಿ ಸೀಳತಾರವರು.....1


ಅಧಿಕಾರವಿರಬೇಕು :ಪ್ರಭಾವವಿರಬೇಕು

ಲಗ್ನಿದ್ದರೇನು : ಸತ್ತಿದ್ದರೇನು

ಎಲ್ಲಿಲ್ಲದ ನೆ0ಟರು :ಭ0ಟರು

ಕಾಣ್ತಾರ  :ಸೇರತಾರ....2


ಹಿರಿಯನ ವಾಕ್ಯ:ಧರ್ಮರಾಜನ ವಾಕ್ಯಯಿಧ್ಹಾ0ಗ

ಸರಿಯಾಗಿ ನುಡಿದ0ತೆ ನಡೆದರೆ  

ತಪ್ಪಲು ಶಿರದ ಮೇಲಿರುವ ಟೊಪ್ಪಿಗೆಗೆ

ಅನರ್ಥವೇ ಭೂಷಣ......3


ಕಾಲ ಬದಲಾಗ್ಯೆತಿ:ಜನ ಬದಲಾಗ್ಯೆತಿ

ಬಡವ ಬದಲಾಗಿಲ್ಲ; ಕುಗ್ಗಿಲ್ಲ ಹಿಗ್ಗಿಲ್ಲ

ಸ0ಗ್ರಹ ಬದ್ಧಿಯಿಲ್ಲ: ನಾಳಿನ ಕಲ್ಪನೆಯಿಲ್ಲ

ದೇವ ಭಾವನಿವನದು:ಮನಸು ಅಚಲ....4

No comments: