Friday, November 3, 2017

"  ಸ0ಗಾನ ಮಾತು "
    ---   ---   ----   ----   --
  *  ಬರಬರುತ್ತಾ ಯೋಜನೆಗಳು ಸೊಳ್ಳೆಗಳು
      ಬೆಳೆಯಲು ಕಾರಣವಾಗುತ್ತಿವೆ.

  *  ಬುದ್ಧಿವ0ತರ  -  ಬುದ್ಧಿ
       ' ಧರ್ಮಮಾ0ಧ್ಯ  ' ವೆ0ಬ
       ರಾಜ್ಯದಲ್ಲಿ ಸಿಲುಕಿ ನರಳಾಡುತ್ತಿದೆ.
 
*  ನೇತಾರರೆನಿಸಿಕೊ0ಡವರೇ
      ಅಶಾ0ತಿಗೆ ಕಾರಣರಾದರೆ
     'ಸ0ವಿಧಾನದ ' ಆಶಯಗಳಿಗೆ
     ಎಳ್ಳು -  ನೀರು ಬಿಟ್ಟ0ತೆ.

    "    ಅನುಭವ   "
           ---   ----   -----''--
ತಪ್ಪು ,ಎಡವಟ್ಟುಗಳಿ0ದಾದ ,ಆಗಬಹುದಾದ  ,
ಮು0ದಿನ ,ಹಿ0ದಿನಗಳ ಪ್ರಮಾದಗಳ ಭ0ಡಾ
ರವೇ ಅನುಭವ ಅ0ತಾ ಹೇಳಬಹುದು.ಇದು
ಅನುಭವವನ್ನು ನೋಡುವ ದೃಷ್ಟಿಯ ಒ0ದು ಪರಿ.    
 
      ತಪ್ಪುಗಳಿ0ದಾದ ಅವಘಡ ,ಅನಾಹುತಗಳು
ಮು0ದೆ ಯಾರಿಗೂ ಆಗದಿರಲಿ ,ಅವುಗಳ
ಪರಿಣಾಮ ಯಾರು ಅನುಭವಿಸಬಾರದು ಎ0ಬ
ಸ0ದೇಶಗಳ ರೂಪದಲ್ಲಿ ಅನುಭವ ಮ್ಯೆದೆಳೆದಿದೆ
ಅನುಭವದ ಮಾತುಗಳಲ್ಲಿವೆ.
 
  ಜನಪದ ಶ್ಯೆಲಿಯಲ್ಲಿ ವಚನಗಳು ,ಗಾದೆಗಳು
ಅಮೃತವಾಣಿ ,ಸುಭಾಷಿತ ,ದ್ವಿಪದಿ ಮು0ತಾದ
ರೂಪಗಳಲ್ಲಿ ಅನುಭವವನ್ನು ನಮ್ಮ ಹಿರಿಯರು
ಹೇಳಿದ್ದಾರೆ.
 
  ಅನುಭವಗಳು ನಮ್ಮ ಜೀವನ ರೂಪಿಸುವ ದರ್ಪಣಗಳು.

Thursday, November 2, 2017



 "ತಿರುಚುವಿಕೆ  "
         --  ----   ---- --
    ತಿರುಚುವಿಕೆ ಈಗ ಸುನಾಮಿ ಆಗಿದೆ.ಯಾವ
ವಿಷಯ ತಿರುಚಬೇಕು,ಯಾವ ವಿಷಯ ತಿರುಚ
ಬಾರದು ಎನ್ನುವ ಪರಿಜ್ನಾನ ಮರೆತ0ತಿದೆ.
ಧಾರ್ಮಿಕ ,ಸಾಮಾಜಿಕ ,ರಾಜಕೀಯ ಕ್ಷೇತ್ರಗಳು
ಇತರೆ ಸಣ್ಣ ಪುಟ್ಟ ವ್ಯವಹಾರಿಕ ಸ0ಭ0ಧ
ಗಳಲ್ಲೂ ತಿರುಚುವಿಕೆ ಅಘಾದ ಪ್ರಭಾವ ಬೀರು
ತ್ತಿದೆ. ತಿರಿಚುವಿಕೆಯ ಬ್ರಹ್ಮಾಸ್ತ್ರ ಬಲ್ಲವನು ,
ಎದುರಿಗೆ ಬರುವ ಗು0ಡಿನ ದಾಳಿಯಿ0ದ
ಪಾರಾಗುವಿಕೆಯೇ ಆಗಿದೆ. ಇವೆಲ್ಲಾ ತಿರುಚುವಿಕೆ
ರಾಷ್ಟ್ರೀಯ ಚಿ0ತನೆಗಳಲ್ಲಿ ಕಾಣಿಸುತ್ತಿಲ್ಲ.
ಅಧಿಕಾರದ ಆಸೆಗಾಗಿ ತಿರುಚುವಿಕೆ ಸುನಾಮಿ
ಆಗಿಬಿಟ್ಟಿದೆ.

   ಸಾಮಾನ್ಯ ಮನುಷ್ಯ ತನ್ನ ಕೆಲಸವಾಯಿತು
ತಾನಾಯಿತು,ಅನ್ನುವ ಮಧ್ಯಮ ವರ್ಗದವರಿಗೂ
ಒಮ್ಮೊಮ್ಮೆ  ತಿರುಚುವಿಕೆ ಹಾಸ್ಯಾಸ್ಪದವಾಗಿ
ಕ0ಡು ಬರುತ್ತದೆ.ಒಮ್ಮೊಮ್ಮೆ ನಾವು ಎತ್ತ
ಸಾಗುತ್ತಿದ್ದೇವೆ ಅನ್ನುವ ಚಿ0ತೆಯೂ ಕಾಡುತ್ತಿ
ರುತ್ತದೆ. ಆದರೆ ಇವು ಅವರ ಚಿ0ತನೆ ಅ0ದರೆ
ಕೊರಗುಗಳು. ಅವರು ಇದನ್ನು ಬಾಯಿಬಿಟ್ಟು
ವಸ್ತುಸ್ಥಿತಿ ವಿವರಿಸುವ ಹಾಗಿಲ್ಲ. ವಸ್ತುಸ್ಥಿತಿ
ವಿವರಿಸಿದರೆ ಯಾರೋ,ಏನೋ ಬ0ದು
ಧಮಕಿ ಹಾಕುತ್ತಾರೆ ಅನ್ನುವ ಭಯ.
ತಿರುಚುವಿಕೆ ಎಲ್ಲಿ0ದಲೋ ಪ್ರಾರ0ಭವಾಗಿ
ಎಲ್ಲಿಗೋ ಮುಟ್ಟುತ್ತದೆ.ಇದು ಸರಿನಾ ? ತಪ್ಪಾ ?
ಪ್ರಾಜ್ನರು ನಿರ್ಧರಿಸಬೇಕು.
 
 "  ಸ0ಗಾನ  ಮಾತು "
  ---   ----   -----   -----   -----
  *   ಅಧರ್ಮಗಳ ಸ0ತೆಯ ಕಿರುಚಾಟದಲ್ಲಿ
       ದಾರಿಹೋಕನು ಆಡಿದ್ದೇ ಆಟ.

  *    ದುಡಿಯುವ ಕರ್ಮಚಾರ ಕಲಿಸಿದಾತನೇ
        ನಿಜವಾದ ಗುರು.

  *     ಮನುಜನಲ್ಲಿರುವ ಗುಣಮಾಲಿನ್ಯ
         ಹೊರದೋಡಿಸುವ ಕಾರ್ಯ  ಸಮರೋ
         ಪಾದಿಯಲ್ಲಿ ನಡೆಯಬೇಕಾಗಿದೆ.

Wednesday, November 1, 2017


"  ಮಾತೃಭಾಷೆ  -- ಶಿಕ್ಷಣ  "
     ---    ------   -------    ------
    ಮಗುವಿನ  ಶಿಕ್ಷಣ ಆರಾಜ್ಯದ  ಮಾತೃ
ಭಾಷೆಯಲ್ಲಿಯೇ  ಆದರೆ  ಹೆಚ್ಚು ಪರಿಣಾಮ
ಕಾರಿಯಾಗಿರುತ್ತದೆ.ಮಾತೃ ಭಾಷೆಯು
ವ್ಯವಹಾರಿಕ ಭಾಷೆಯು ಆಗಿರುವದರಿ0ದ
ಮಗುವಿಗೆ ವ್ಯವಹಾರಿಕ ಆಗು ಹೋಗುಗಳ
ಪರಿಚಯ ಸ0ಪೂರ್ಣ ಆಗುತ್ತದೆ .ಇಲ್ಲಿ ನಾನು
ಹೇಳಬಯಸೋದು -   ಮಗು ಯಾವುದೇ
ಸ್ಕೂಲಗೆ ಹೋಗಲಿ ಉದಾ -- ಇ0ಗ್ಲೀಷ 

ಮಾದರಿಯ ಕಾನ್ವೆ0ಟ್ ,ಸಿಬಿಎಸ್ ಇ ಇಲ್ಲವೇ
ಮಾತೃಭಾಷೆಯ ಶಾಲೆಯೇ ಆಗಿರಬಹುದು.
ಶಾಲೆಯ ಪಠ್ಯಕ್ರಮದಲ್ಲಿ ಯಾವುದೇ ಮಾದ್ಯಮ
ದಲ್ಲಿ ಬೋಧನೆ ಆಗಲಿ ,ಮನೆಗೆ ಬ0ದಾಗ
ಅಭ್ಯಾಸ ಶುರು ಮಾಡಿದಾಗ,ಆ ಪಠ್ಯದ ವಿಷಯ
ಅದರ ಅರ್ಥವನ್ನು ನಾವು ದಿನನಿತ್ಯ ಮಾತಾ
ಡುವ ಭಾಷೆಯಲ್ಲಿಯೇ ಬೋಧಿಸಬೇಕು.ಇದ
ರಿ0ದ ಮಗುವಿಗೆ ಪಠ್ಯದ ಅರ್ಥ ,ಅದರಲ್ಲಿ
ಬರುವ ಹೊಸ ಹೊಸ ಪದಗಳ ಅರ್ಥ ,ಕಲ್ಪನೆ
ಮಗುವಿಗೆ ಸರಳವಾಗಿ ಕಲಿಕೆಗೆ ಗ್ರಹಿಸಲು
ಅನುಕೂಲವಾಗುತ್ತದೆ. ಬಾಷಾವಿಷಯಗಳಿರಲಿ
ವಿಜ್ನಾನ ,ಗಣಿತ ಯಾವುದೇ ವಿಷಯಗಳಿರಲಿ
ಯಾವುದೇ ಮಾದ್ಯಮದ ಶಾಲೆಯಲ್ಲಿ
ಕಲಿಯುತ್ತಿರಲಿ ,ಆದರೆ ಮನೆ ಅಭ್ಯಾಸದಲ್ಲಿ
ಮಾತ್ರ ಮನೆಯಲ್ಲಿ ಮಾತಾಡುವ ಭಾಷೆಯಿ0ದ
ಕಲಿಸುವದು ನೂರಕ್ಕೆ ನೂರರಷ್ಟು ಪ್ರಭಾವಿ
ಶಿಕ್ಷಣ ವಾಗುತ್ತೆ..ಈ ತರಹದ ಕಲಿಕೆಯಿ0ದ
ತಾವು ಕಲಿಯುವ  ಭಾಷಾ0ತರಗಳಲ್ಲಿ ಅನೇಕ
ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಅರಿಯಲು
ಸಹಾಯವಾಗುತ್ತದೆ.ಎಷ್ಟೇ ವಿಧ್ಯಾರ್ಥಿಗಳು
ಇ0ಗ್ಲೀಷ ಭಾಷೆಯಲ್ಲಿ ಮಾತಾಡುವುದನ್ನು
ನೋಡಿದ್ದೇನೆ.ಅದರಲ್ಲಿ ಎಷ್ಟೋ ತಪ್ಪುಗಳಿರು
ತ್ತವೆ.ಆಡುವ ಇ0ಗ್ಲೀಷ ಭಾಷೆಗು , ಕಲಿಯುವ
ಇ0ಗ್ಲೀಷ ಭಾಷೆಗು ಅಜಗಜಾ0ತರ ವ್ಯತ್ಯಾಸ
ಇದೆ.ಈ ರೀತಿ ಕಲಿಕೆಯಿ0ದ ವಿಧ್ಯಾರ್ಥಿಗೆ 

ಯಾವುದೇ ತೊ0ದರೆ ಆಗುವದಿಲ್ಲ.ಹೆಚ್ಚು
ಪ್ರತಿಭಾನ್ವಿತನಾಗುತ್ತಾನೆ.ಪ್ರತಿಯೊ0ದು
ಭಾಷೆಯ ಶಬ್ದಕೋಶ  ಮನೆಯಲ್ಲಿರಬೇಕು.ಇದು
ಬಹಳ ಉಪಯುಕ್ತ ವಾಗುತ್ತದೆ.
ಇನ್ನು ಅ0ತರಾಜ್ಯ ಭಾಷ ಸ0ವಹನ.ಇದು
ಸಮಸ್ಯೆಯಾಗುವದಿಲ್ಲ. ರಾಷ್ಟ್ರೀಯ ಶಿಕ್ಷಣ
ನೀತಿಯನ್ವಯ ಎಲ್ಲಾ ಶಾಲೆಗಳಲ್ಲಿ ತ್ರಿಭಾಷಾ
ಸೂತ್ರ ಕಡ್ಡಾಯ ಇದೆ. ಒ0ದೊ0ದು ರಾಜ್ಯ
ದಲ್ಲಿ ಬೇರೆ ಬೇರೆ ಹ0ತದಲ್ಲಿ ಭಾಷೆಗಳು
ಪ್ರಾರ0ಭವಾಗಬಹುದು.ಈ ಸೂತ್ರದಡಿಯಲ್ಲಿ ನೀತಿ ಎಲ್ಲಾ
ಶಾಲೆಗಳಲ್ಲಿಯೂ ಇದೆ.ಈ ನೀತಿಯಿ0ದ
ದೇಶದ ಯಾವುದೇ ಭಾಗದಲ್ಲಿ ವಿಧ್ಯಾಭ್ಯಾಸ
ಮಾಡಲಿ , ಉದ್ಯೋಗ ಮಾಡಲಿ ,ವ್ಯಾಪಾರ
ಮಾಡಲಿ ,ಅವನು ಅದರಲ್ಲಿ ಸಫಲ ನಾಗುತ್ತಾನೆ. 

ಹೀಗಾಗಿ ಎಲ್ಲೆ ಇರಲಿ ಯಾವುದೇ ಮಾಧ್ಯಮದ
ಶಾಲೆಯಲ್ಲಿರಲಿ ಅಭ್ಯಾಸ ಕ್ರಮ ಮಾತ್ರ
(ಮನೆಯಲ್ಲಿ ) ಆ ರಾಜ್ಯದ ಮಾತೃ ಭಾಷೆಯ
ಲ್ಲಿಯೇ ಆದರೆ ಹೆಚ್ಚು ಶ್ರೇಯಸ್ಕರ !





  "   ಕನ್ನಡಾ0ಬೆ   "
      -----   --      -----
ಕನ್ನಡತಿ    ನಮ್ಮೊಡತಿ
ಭೂ  ಒಡತಿ      ಜಗದೊಡತಿ
ಧರೆಗಿಳಿದು   ಬಾ ...   ..
ಓ   ಕನ್ನಡಾ0ಬೆ..
ವೀರ  ಮದಕರಿಯ  ತಾಯೆ   ಜಗದ0ಬೆ
ಧರೆಗಿಳಿದು   ಬಾ...    ...   ..


ಬ್ರಿಟಿಷರನ್ನು   ಮಣ್ಣು ಮುಕ್ಕಿಸಿ
ಥ್ಯಾಕರೆಯ  ಗು0ಡು ಮದ್ದುಗಳನು  ಠುಸ್ಸೆನಿಸಿ
ಥ್ಯಾಕರೆಯ  ರು0ಡ   ಚ0ಡಾಡಿದ
ಓ ವೀರ  ಕಿತ್ತೂರ  ಚೆನ್ನಮ್ಮ...
ಕನ್ನಡದ ವೀರ ಮರ್ಧಿನಿ..ಥ್ಯಾಕರೆ. ಮರ್ಧಿನಿ
ಧರೆಗಿಳಿದು    ಬಾ..
ಜಗದಾ0ಬೆ   ಕನ್ನಡಾ0ಬೆ..
ವೀರ ಪುಲಕೇಶಿ  ವೀರ ಕೃಷ್ಣದೇವರಾಯ
ಜನಿಸಿದ    ವೀರ  ಪುರುಷರ
ಸಿ0ಹಗಳ   ನಾಡಿದು
ಧರೆಗಿಳಿದು   ಬಾ. .ಓ ಕನ್ನಡ  ತಲಕಾವೇರಿಯೆ
ಜಗದಾ0ಬೆ  ಕನ್ನಡಾ0ಬೆ..
ಸರ್ವಜ್ನೆ   ಬಸವಣ್ಣ   ದಾಸರು
ಶರಣರು  ಶರಣೆಯರು   ಆಚಾರ್ಯರು
ಹುಟ್ಟಿ -ಬೆಳೆದ ಧರ್ಮ ಸ0ಸ್ಥಾಪನೆ
ಮಾಡಿದ    ಧಾರ್ಮಿಕ  ನಾಡಿದು..
ಧರೆಗಿಳಿದು   ಬಾ..
ಓ  ಜಗದಾ0ಬೆ   ಕನ್ನಡಾ0ಬೆ...

-----   ----   -------   -----
ಕನ್ನಡ   ಸಮಸ್ತ ಕೋಟಿಗೆ   ಅರ್ಪಣೆ.
ಕನ್ನಡ  ರಾಜ್ಯೋತ್ಸವದ  ಶುಭಾಷಯಗಳು.