Thursday, December 31, 2015

 "  ಸ0ಗಾನ  ಮಾತು ".
  * ವಿನಾಶ  ಮಾಡುತ್ತೇವೆ0ದು ಹೇಳಿದವರೆಲ್ಲಾ
     ನಾಶವಾಗುತ್ತಲೇ   ಇದ್ದಾರೆ. ನ್ಯುಟನ್ನ್ ನ
     ಚಲನೆಯ  ನಿಯಮಗಳು    ಇಲ್ಲಿ  ಅನ್ವಯ
     ವಾಗಿರುವದು  ನಮ್ಮ  ಅರಿವಿಗೆ ಬರುವದೇ
     ಇಲ್ಲ. ಇದೊ0ದು  ವಿಸ್ಮಯ.


*  ನಕ್ಕರೆ ಸ್ವರ್ಗ.  ನಕ್ಕರೆ ಒತ್ತಡ ಕಡಿಮೆ
     ಆಗುತ್ತದೆ.ನಕ್ಕರೆ  ಅರೋಗ್ಯಕ್ಕೆ  ಒಳ್ಳೆಯದು.
     ಅ0ತಾ ಹೇಳ್ತಾರೆ. ನಗರೀಕರಣದಲ್ಲಿ 
     ಹೆಚ್ಚು ನಕ್ಕರೆ ಅಸಹ್ಯ ,ಅಶಿಸ್ತು ಅ0ತಾ
     ಪರಿಗಣಿಸುತ್ತಾರೆ. ಇದು ವ್ಯೆಪರಿತ್ಯ.

Wednesday, December 30, 2015

 "ಸ0ಗಾನ  ಮಾತು  ".
    ----          
  *  ಶತೃಗಳು   ಮನೆಗೆ   ನುಗ್ಗಿದಾಗ
      ಇರುವೆ   ಕಚ್ಚಿತೆ0ದು  ತುರಿಸುತ್ತಾ 
      ಕುಳಿತರೆ   ಏನು   ಪ್ರಯೋಜನ  ..?
  *   ಹಿತ್ತಲ ಹೆಣ್ಣಿಗೆ   ಆಸೆಪಟ್ಟು
       ಮೆತ್ತಗೆ   ಮ್ಯೆಯೆಲ್ಲಾ  ಹಣ್ಣುಗಾಯಿ
       ನೀರುಗಾಯಿ   ಮಾಡಿಸಿಕೊಳ್ಳಬಾರದು .

  *     ಸೋಲುಗಳ  ಸರಪಣಿ  ಹಿ0ದೆ
         ಗೆಲುವಿನ  ಏಣಿ  ಇದ್ದೇ ಇರುತ್ತದೆ.
         ಆ  ಗೆಲವು ಬ0ದಾಗ  ಸೋಲಿನ 
         ರುಚಿ  ಮರೆಯಬಾರದು  .

Tuesday, December 29, 2015

ಮನಸ್ಸು

ವಿಧ್ಯೆ ಮತ್ತು ಮನಸ್ಸು  ಬೇರೊಬ್ಬರು
ಅಪಹರಿಸಲಿಕ್ಕಾಗುವದಿಲ್ಲ.
ಸ್ವಯ0ನಿಯ0ತ್ರಣಕ್ಕೊಳಪಟ್ಟವುಗಳು.ಇವು
ಮಾನವನ  "ಬ್ಲ್ಯಾಕ ಬಾಕ್ಸ "

Monday, December 28, 2015

   " ಸ0ಗಾನ  ಮಾತು    "


*    " ರಾಜಕೀಯ  ಬಿರುಗಾಳಿಗಳು
        ಚಲಿಸುವ   ಮೋಡಗಳಿದ್ದ0ತೆ   ".

*        "  ವಿಷಯಗಳು  "  ರಾಜಕೀಯ
             ಇಚ್ಛಾಶಕ್ತಿಯ   ಕೊರತೆ
             ಅನುಭವಿಸುವದೇ 
             ರಾಜಕೀಯ ಭ0ಡವಾಳದ 
             ನೀತಿಸಾರ.

Saturday, December 26, 2015

ಸ0ಗಾನ ಮಾತು 


*   ಬೊಗಳುವ  ನಾಯಿಗೆ
     ಹಿತ ನುಡಿ  ರುಚಿಸುವದಿಲ್ಲ  .

*    "ನಿ0ದೆಗೆ   ಮೌನವೇ  ಉತ್ತರ  ."

*    "ನಿಯಮಗಳನ್ನು  ಪಾಲಿಸುವವನೇ
       ಲೋಕಪಾಲಕ  ".

Monday, December 21, 2015

ಬದುಕು.


ಬದುಕು ಸಮುದ್ರದ ಅಲೆಗಳಿದ್ದ ಹಾಗೆ.
ಒತ್ತಡಕ್ಕೆ ಸಿಲುಕಿ ಅಲೆಗಳು ಹೇಗೆ ಚಿಮ್ಮುತ್ತವೋ ,
ಹಾಗೆಯೇ ನಮ್ಮ ಬದುಕು.ತ0ಗುವ ನಿಲ್ದಾಣ ಬರುವವರೆಗೆ
ಬದುಕಿನ ಪಯಣ ಪ್ರಯಾಣಿಸುತ್ತಿರಬೇಕು

Friday, December 18, 2015

  "ಸ0ಗಾನ ಮಾತು  -
  ---        ---      --    ---
*    ವ್ಯವಸ್ಥೆ   ಕೆಟ್ಟದ್ದು  ಅ0ತಾ ತಿಳಿದು
     ಮುಟ್ಟಲು ಹೋದರೆ  ,ಅದು
     ನಮ್ಮನ್ನೇ  ತಿನ್ನುತ್ತದೆ .
*   "  ಮೆಟ್ಟಿ ನಿಲ್ಲುವವನು   ತಾ
        ಮೊದಲು    ಗಟ್ಟಿಯಾಗಬೇಕು  .
  "
.

Thursday, December 17, 2015

ಸತ್ಯಕ್ಕೆ ಸಾವಿಲ್ಲ.
ಸುಳ್ಳಿಗೆ ಸುಖವಿಲ್ಲ.ಇದು ಪ್ರಖ್ಯಾತ ಗಾದೆ.
.ಬಹುತೇಕ ಈ ಮಾತಿನ ಸತ್ಯಾಸತ್ಯತೆ
 ಅನುಭವ ಹೊ0ದಿದವರಿಗೆ ಆಗಿರುತ್ತದೆ.
ಸ0ಗಾನ ಮಾತು  

  *  ಓದುವದು  ಬಡವನಿಗೆ  ಇಷ್ಟ
     ಆಡುವದು  ಉಳ್ಳವನಿಗೆ  ಇಷ್ಟ
     ಬಡಿದಾಡುವದು  ಕಿಲಾಡಿಗೆ  ಇಷ್ಟ
     '  ಮಾತಿನ ಮ0ಟಪ '  ಕಟ್ಟುವದು
       ರಾಜಕಾರಣಿಗೆ    ಇಷ್ಟ.

   *  ಓದುವ   ಹ0ಬಲವುಳ್ಳವನಿಗೆ
      ಬೆಳಕು  ಕೊಡುವ  ಸಾಧನೆಗಳು
     ' ಕಾಮಧೇನು ಕಲ್ಪವೃಕ್ಷ'  ವಿದ್ದ0ತೆ.
ಜೀವನ

ಜೀವನವೆ0ಬ ಪ್ರಯಾಣದಲ್ಲಿ
ಕಲ್ಲು,ಮುಳ್ಳು ,ಹೂ.
ಇದ್ದೇ ಇರುತ್ತವೆ.ಇವುಗಳನ್ನು ದಾಟಿ ನಾವು
ಮು0ದೆ ಸಾಗಬೇಕು.ಜೀವನ ಕಟ್ಟಿಟ್ಟ
ಬುತ್ತಿಯಲ್ಲ.
ಬುತ್ತಿ ನಾವು ತಯಾರಿಸಬೇಕು.
ಪದಾರ್ಥಗಳ ಅಯ್ಕೆ ಮೇಲೆ ಜೀವನ.

Wednesday, December 16, 2015

" ಸ0ಗಾನ ಮಾತು "

*  ಪ್ರತಿಭೆಯೊ0ದಿದ್ದರೆ
         ಸಾಲದು
    ಜೊತೆಗೆ  ಧ್ಯೆರ್ಯವೂ  ಇರಬೇಕು.

*  ಬುದ್ಧಿವ0ತಿಕೆಯೊ0ದಿದ್ದರೆ
           ಸಾಲದು
   ಜೊತೆಗೆ ನ್ಯಾಯವೂ   ಇರಬೇಕು .

*  ಗೆಲವುಗಳೇ ಇದ್ದರೆ
          ಸಾಲದು
   ಜೊತೆಗೆ ಸೋಲೂ ಇರಬೇಕು.


ಚರ್ಚೆ

ನಾವು ಇತ್ಯರ್ಥ ಪಡಿಸಬೇಕಾದ ಸಮಸ್ಯೆಗಳ
ವಿಷಯಗಳನ್ನು
ಪುರಾತನ ಕಾಲದಿ0ದ ಸಾಮಾನ್ಯವಾಗಿ
ಸಾಮ ಭೇದ ದ0ಡೋಪಾಯಗಳಿ0ದ
ವ್ಯಾಜ್ಯಗಳನ್ನು ಬಗೆಹರಿಸುವ ಒ0 ದು
ರೂಡಿ ನಮ್ಮಲ್ಲಿ ಬೆಳೆದು ಬ0ದಿದೆ.
ಪ0ಚಾಯ್ತಿ ಕಟ್ಟೆ,ಸಮಾಜ ನ್ಯಾಯ ಸಮಿತಿ.
ಹಳ್ಳಿ ಹಿರಿಯರು.ಓಣಿ ಹಿರಿಯರು
ಹೀಗೆ ನಾನಾ ಪ್ರಕಾರದ ಗು0ಪಿನ
ತೀರ್ಮಾನಗಳಿ0ದ ಸಮಸ್ಯೆಗಳನ್ನು ಪರಿಹರಿಸಿ
ಕೊಳ್ಳುವ ರೂಡಿ ನಮ್ಮಲ್ಲಿದೆ.
ಪರಸ್ಪರಚರ್ಚೆ ಮುಖ0ತರ ನಮ್ಮಲ್ಲಿರುವ
 ಭಿನ್ನಾಭಿಪ್ರಾಯಗಳನ್ನು ತೊಲಗಿಸಿ
ನ್ಯಾಯ ಪಡೆಯುವ ವಿಧಾನ ಸಾಮ.

ಪರಸ್ಪರ ಕೊಡೋ ತೊಗೊಳ್ಳೊದರಿ0ದ,
ಅರ್ಥಿಕ ಪರಿಹಾರ ಗಳಿ0ದ .ನಾನಾಬಗೆಯಿ0ದ 
ಎದುರಾಳಿಗಳ ಮನೋ ವಾ0ಛೆಅನುಸರಿಸಿ
ಪಡೆಯುವ ತೀರ್ಮಾನಗಳು   ಬೇಧ.

ಈಎರಡು ಉಪಾಯಗಳಿ0ದ ನ್ಯಾಯ ವಿಫಲ
ವಾದಾಗ ಅನುಸರಿಸುವ ವಿಧಾನ ದ0ಡ .
ಇವು ಪರಸ್ಪರ ತಾಕತ್ತಿನ ಮೇಲೆ ಪರಿಹಾರ
ಕ0ಡುಕೊಳ್ಳಬಹುದು.

ಬಹುತೇಕ ಕೆಲವೊ0ದು ಸನ್ನಿವೇಶಗಳಲ್ಲಿ
ವಿದೇಶಾ0ಗ ನೀತಿಯಲ್ಲಿ ಪರಸ್ಪರ  ಚರ್ಚೆ
ಮೂಲಕ ದೇಶಗಳು ತಮ್ಮ ಸಮಸ್ಯೆಗಳನ್ನು 
ಪರಹರಿಸಿಕೊಳ್ಳುತ್ತವೆ. ಇದು ಸಹಕಾರಕ್ಕೆ ನಾ0ದಿ.
ಇನ್ನು ಕೆಲವು ಪ್ರಕರಣಗಳಲ್ಲಿ.
ಸರಕಾರದ ಮೇಲೆ ಪ್ರಭಾವಬೀರುವ0ತಹ
ವ್ಯಕ್ತಿಗಳ ಮೇಲೆ ಮೊಕೊದ್ದಮೆ ಇದ್ದರೆ
ಅವರವರ ಭುಜಬಲದಿ0ದಸಾಕ್ಶಿಗಳನ್ನು 
ತಿರುಚಿ  ಆರೋಪ ಮುಕ್ತ ರಾಗುತ್ತಾರೆ.
ಇಲ್ಲಿ ನ್ಯಾಯ ಶಕ್ತಿ,ಪ್ರಭಾವ ಆಧಾರಿತ.ಅಸಹಾಯಕರು
ಮುಗ್ಧರು ಇ0ತಹ ಪ್ರಕರಣಗಳಲ್ಲಿ ಬಲಿ.
ಚರ್ಚೆ ಮೂಲಕ ನ್ಯಾಯದಾನ ಈಗಲೂ
ಸರ್ವ ಸಮ್ಮತ.ಕಾನುನುಗಿ0ತ ಸ0ಭ0ಧಗಳು
ಸಾಮಾಜಿಕ ಜವಾಬ್ದಾರಿಗಳು ಹೆಚ್ಚು
ಕೆಲಸ ಮಾಡುತ್ತವೆ.

Tuesday, December 15, 2015

"  ಸ0ಗಾನ ಮಾತು "

  *  ಸಾಧಕನಿಗೆ      ತನ್ನ
      ಸಾಧನೆಯ   ಅರಿವಾದಾಗ
      ಪ್ರಪ0ಚದ   ಎಲ್ಲಾ  ವಸ್ತುಗಳು
      ನೇಪಥ್ಯಗೆ    ಸರಿಯುತ್ತವೆ.

  *   ತನ್ನವರು
       ಯಾರಿಲ್ಲವೆ0ದು    ಕೊರಗುವದಕ್ಕಿ0ತ...
       ಅಬಲೆಯರ  ಉಸಿರಾಗಿ ,ನೆರಳಾದರೆ
       ಲೋಕ    ಮನ್ನಿಸುತ್ತದೆ.
ಜೀವನ 
----------
ಜೀವನ ಅ0ದರೆ ಪರಸ್ಪರ ಹ0ಚಿಕೊಳ್ಳುವಿಕೆ.
ಇದು ಮೊದಲಿನಿ0ದಲೂ ಬ0ದ ಪದ್ದತಿ. ಇತ್ತೀತ್ತಲಾಗಿ ಮಾನವ ಆಧುನಿಕತಗೆ ಹೆಚ್ಚು ಹೆಚ್ಚು ಒಗ್ಗಿ ಹೋದಾಗಿನಿ0ದ  ನೆರೆಹೊರೆಯ  ಧರ್ಮ ಮರೆತು ಪ್ರತಿಯೊ0ದು ವಾಣಿಜ್ಯ ದೃಷ್ಠ್ಟಿಯಿ0ದ ನೋಡುತ್ತಾ ಬರಲಾಗಿ    ಆಶೆಗಳು ಹೆಚ್ಚಿ
 "ಚೆನ್ಯೆ "ನ0ತಹ ದುರ0ತ ಸಾಹಸಗಳಿಗೆ ಕ್ಯೆ ಹಾಕಿ ಗಳಿಸಿದ್ದೆಲ್ಲವನ್ನು 
ಎಲ್ಲಿ0ದ ಪಡೆದದ್ದನೋ ಅಲ್ಲಿಗೆ ಮರಳಿಸಿ ಋಣ
ಮುಕ್ತನಾಗುತ್ತಿದ್ದಾ ನೆ. ಇರುವಷ್ಟು ದಿನ ನಗತಾ ಇರಬೇಕು ಆ0ದರೆ ಸಹಾಯ ಹಸ್ತ "ಕೊಡು ತಗೋ "  ಡೆಬಿಟ್ಟ್&ಕ್ರೆಡಿಟ್ಟ "ಎರಡು 
ಚಾಲ್ತಿ ಜುಳಿತಾಯ ಖಾತೆಯಲ್ಲಿರಬೇಕು

Thursday, December 10, 2015

ಹಿತಶತ್ರು
ಸಾಮಾಜಿಕ ಜೀವನದಲ್ಲಿ 
ಸ0ಭ0ಧಿಗಳಲ್ಲಿ ಅ0ದರೆ ಅಣ್ಣ-ತಮ್ಮ0ದಿರು,
ಇಲ್ಲವೆ ಬೀಗರು ಬಿಜ್ಜರುಇವರಲ್ಲಿ ಹಿತಾಸಕ್ತಿ  ಸ0ಘರ್ಷ ಇರುತ್ತೆ.
ಒಬ್ಬರಿಗೆ ಒಬ್ಬರು ಸಹಾಯ ಮಾಡುವ
ಮೇಲ್ನೋಟಕ್ಕೆ ಕಣ್ಣೀರು ಒರೆಸುವ 
ತ0ತ್ರ ಗಾರಿಕೆಯಲ್ಲಿ ಇದರಲ್ಲಿ ಪಾಲ್ಗೊಳ್ಳುವ ಎಲ್ಲರೂ 
ನಿಸ್ಸಿಮರೇ.
ಆದರೆ ಇಲ್ಲಿ ದ್ವೇಷ ಇರೋದು ಕಡಿಮೆ.
ದ್ವೇಷದಿ0ದ ಬೀಗಸ್ತನಕ್ಕೆ ಅಡ್ಡಿಬರುತ್ತೆ 
ಆನ್ನೋ  ಭಾವನೆ ಇಲ್ಲಿ ಇರುತ್ತೆ.
ರಾಜಕೀಯದಲ್ಲಿ ಹಾಗಲ್ಲ ಇಲ್ಲಿ
ಪಕ್ಕಾ ಹಿತ ಶತ್ರುಗಳು ಇರುತ್ತಾರೆ.
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ
ಗೊತ್ತಗೊಲ್ಲ.
ತಮ್ಮ ಕೆಲಸ ಸಾಧನೆಗಾಗಿ ರಾಜಕೀಯ 
ಚದುರ0ಗ ಚೆನ್ನಾಗಿ ಆಡುತ್ತಾರೆ.
ಎಲ್ಲರೂ ಕಾಲು ಹಿಡಿದು ಎಳೆಯುವವರೇ
ಚುನಾವಣೆ  ಸಮಯದಲ್ಲ0ತೂ ಅತಿರೇಕಕ್ಕೆ ಹೋಗಿರುತ್ತೆ.
ನ0ಬೋದೇ ಕಷ್ಟ್. ರಾಜಕೀಯ 
ಮರಿ ನಾಯಕರಿಗೆ ಇವು ಮಾಮುಲು.
ನಮ್ಮ0ತೋರಿಗೆ ಇದು ಬಹಳ ಖಿಲಾಡಿ 
ಗೇಮ್. ಹಿತಶತ್ರು/ಹಿತಾಸಕ್ತಿ ಗೆ ಹೇಳಿ ಮಾಡಿಸಿದ ವ್ಯಕ್ತಿ
ಮಹಾಭಾರತದ "ಶಕುನಿ".
ಇವನಷ್ಟು ಲಾಭ ಬೇರೆ ಯಾರು ಪಡೆದಿಲ್ಲ 
ಇದೊ0ದು ದಾಖಲೆ.

 " ಸ0ಗಾನಮಾತು   "

   *  ಕಚ್ಚಿದ  ನ0ತರ
       ಹಾವು   ವಿಷ   ಜ0ತು  !
   *   ಕೆಣಕಿ   ಬಿಸಾಕಿದ   ನ0ತರ
        ಹೆಣ್ಣು    ಕಾಳಿ0ಗ   !

Wednesday, December 9, 2015

  ಒಳ್ಳೆಯ ವಿಚಾರ

ಒಳ್ಳೆಯವರ ಸ0ಗ ಮಾಡು
ಒಳ್ಳೆಯ ವಿಚಾರ ಬಿತ್ತು
ಆ ಒಳ್ಳೆಯ ವಿಚಾರಗಳ
ಸೌ0ಧರ್ಯವನ್ನು  ಅಹ್ಲಾದಿಸು.
ಒಳ್ಳೆಯ ಸತ್ಪತ ಕಾಣುವಿ.


"ಸ0ಗಾನ ಮಾತು  "

  * ಕೆಲ್ಸ ಇಲ್ಲ ಕು0ದರಬಾರದು
    ರೊಕ್ಕ ಇಲ್ಲ ನಿ0ದರಬಾರದು
    ಮನಸ್ಸಿಟ್ಟು ಪ್ರಯತ್ನಿಸಿದರೆ
    ಆಣು ಕೂಡಾ  ಬದುಕಿನ ಸ0ಜೀವಿನಿ
    ಯಾಗಬಲ್ಲದು.

  *  ಕಲಾಕಾರನಿಗೆ
     ಚಿತ್ರ ಬಿಡಿಸಲು
     ಕು0ಚ ಸಾಕು  !
     ಮಹತ್ವಾಕಾ0ಕ್ಷಿಗೆ
    ಮು0ದೆ ಬರಲು
    ಚಾಣಕ್ಯ ನೀತಿ ಸಾಕು  !


ಮಾತುಗಳು

ಇನ್ನೊಬ್ಬರೊ0ದಿಗೆ ಮಾತಾಡುವಾಗ
ನಾವು ಬಳಸುವ ಭಾಷೆಯಲ್ಲಿನ
ಶಬ್ಧಗಳು.ಮೃದುವಾಗಿರಬೇಕು.ಕರ್ಣಗಳಿಗೆ
ಇ0ಪಾಗಿರಬೇಕು.ಹಾವ ,ಭಾವಗಳು
ಅವರೊ0ದಿಗೆ ಹೆಚ್ಚು ನಿಕಟವಾಗಿದ್ದೇನೆ
ಎ0ಬ ಭಾವನೆಗಳು ಬರಬೇಕು.
....ಹಾಗೇಯೇ ಇ ನ್ನೊಬ್ಬರು
ನಮ್ಮೊ0ದಿಗೆ ಮಾತಾಡುತ್ತಿರುವಾಗ

ಅವರ ಮಾತುಗಳನ್ನುಏಕ ಚಿತ್ತದಿ0ದ
ಆಲಿಸಬೇಕು.ನಕಾರತ್ಮಕ ಹಾವ ಭಾವ
ತೋರ್ಪಡಿಸಬಾರದು.
ಇವು ಸೌಜನ್ಯತೆ  ಲಕ್ಷಣಗಳು

Tuesday, December 8, 2015

    "  ಸ0ಗಾನ ಮಾತು "
   
  "  ನಾವೇ  ನಿರ್ಮಿಸಿದ ಕಟ್ಟುಗಳ
      ಹ0ದರ  --- ಮೌಡ್ಯ.
      ಇದರ ಪರಿನಿರ್ವಾಣ
      ಹರಿಯ  ಹರಿವಾಣ  -ಕಾಣೋ..."

ಶಾ0ತಿ

ಶಾ0ತಿ,ನೆಮ್ಮದಿಯನ್ನು
ಹುಡುಕಿಕೊ0ಡು
ಘೋರಾರಣ್ಯ,ಪರ್ವತ ಪ್ರದೇಶಗಳಿಗೆ
ಹೋಗುವ ಅಗತ್ಯ ಇಲ್ಲ.
ಶಾ0ತಿ ಎ0ಬುದು ನಮ್ಮ
ಮನಸ್ಸಿನ ಭಾವನೆ.
.ಅದೊ0ದು ಸ್ಥಿತಿ.
ಈ ಮನಸ್ಸ ಸ್ಥಿತಿ ತಲುಪಲು
ಏಕಾಗ್ರತೆ ಹಾಗು ದೇಹದ ಭಾಹ್ಯ್
ಚ ಟುವಟಿಕೆ
ಗಳ ಮೇಲೆ ನಿಯ0ತ್ರಣ ಅಗತ್ಯ. 
ಈ ನಿಯ0ತ್ರಣವೆ0ಬುದು ಕಾಮನೆಗಳ
ಮೂಲ ಬೀಜ.
ಇದು ನಿಯ0ತ್ರಿಸಿದರೆ ಎಲ್ಲಾ 
ನಿಯ0ತ್ರಿಸಿದ0ತೆ.

Monday, December 7, 2015

  "ಸ0ಗಾನ ಮಾತು "

   *  ವಿ ದ್ವತ್ತ್  -ಮನುಷ್ಯನ
      ಬುದ್ಧಿಮತ್ತೆಗೆ  ಓರೆಗಲ್ಲು . !

    
   *   ವಿಧ್ಯುತ್ತ  - ಮನುಷ್ಯನ
       ಕಾರ್ಯಸಾಧನೆಯ   ಜೀವಕೋಶ. !
       ಒ0ದು  ಅರ್ಜಿತ
       ಇನ್ನೊ0ದು  ಉತ್ಪಾದಿತ.
ಬದುಕು.

ಬದುಕಿನಲ್ಲಿ ಏಳು ಬೀಳು ಸಹಜ.
ಕೆಲವೋ0ದು ಘಟನೆಗಳು ನಮ್ಮನ್ನು 
ಉತ್ತು0ಗ ಶಿಖರಕ್ಕೆ ಹೊಯ್ದು ನಿಲ್ಲಿಸುತ್ತವೆ.
ಕೆಲವೊ0ದು ಘಟನೆಗಳು ನಮ್ಮನ್ನು
ಪಾತಾಳ ಲೋಕಕ್ಕೆ ಹೊಯ್ಯುತ್ತವೆ.
ಇವೆರಡರ ಮಧ್ಯೆ  ಎಷ್ಟೋಜನರು ನಮ್ಮವ
ರಾಗುತ್ತಾರೆ.ಎಷ್ಟೋ ಜನರು ನಮ್ಮ
 ವ್ಯೆರಿಗಳಗುತ್ತಾರೆ.ಎಷ್ಟೋ ಜನರು ಹಿತ ಶತ್ರು
ಗಳಗುತ್ತಾರೆ. ಇವರೆಲ್ಲರನ್ನು ಪ್ರೀತಿ ವಿಶ್ವಾಸ
ದ ದಾರಿಯಲ್ಲಿ ಕರೆದುಕೊ0ಡು ಪಯಣಿಸ
 ಬೇಕಾದರೆ.ನಮ್ಮಲ್ಲಿ ವಿಶ್ವ ಭಾತೃತ್ವದ ಪ್ರಜ್ನೆ
ಜಾಗೃತ ವಾಗಿರಬೇಕು.

Saturday, December 5, 2015

ಸದ್ವಿಚಾರ

ಸಜ್ಜನರ ಸಹವಾಸ ಹೆಜ್ಜೇನು ಸವಿದ0ತೆ.
ಸಧ್ಗುಣಗಳು ಸದ್ವಿಚಾರಗಳು
ಸದ್ವಿಚಾರಗಳು ಸದ್ಮನೋಭಾವದವರು.
ಸದ್ಮನೋಭಾವದವರು ಸದ್ವಿವೇಕಿಗಳು
ಸದ್ವಿವೇಕಗಳು.ಸನ್ಮಿತ್ರರು.
ಸನ್ಮಿತ್ರರು ಸದಾ ಸಮಾಜಮುಖಿ.
ಸಮಾಜಮುಖಿಗಳು  ಸತ್ಸ0ಗದವರು.
ಸತ್ಸ0ಗದವರು  ಪ್ರೀತಿಪಾತ್ರರು.
ಪ್ರೀತಿಪಾತ್ರರು ಗೌರವಾನ್ವಿತರು.
ಈಸರಪಣಿ ಸನ್ಮಿತ್ರರ ದರ್ಪಣ.
  "ಸ0ಗಾನ ಮಾತು "

*ಮಾವನಾಡುವ ಮಾತು  ಮಾಣಿಕ್ಯವಲ್ಲ
ಅಳಿಯನಾಡುವ ಮಾತು  ವೇದೋಕ್ತವಲ್ಲ
ಜನರಾಡುವ ಮಾತು ಲೋಕೋಕ್ತಿಯಲ್ಲ
ಎಲ್ಲವೂ ಸ0ಧರ್ಭಕ್ಕೆ ತಕ್ಕ0ತೆ
ಕುಣಿಯುವ ತಾಳಮೇಳಗಳಿದ್ದ0ತೆ.

* ಜೀವನದಲ್ಲಿ ಸೋತು ಗೆಲ್ಲಬೇಕು.
  ಬಿದ್ದು ಎದ್ದೇಳಬೇಕು

Friday, December 4, 2015

 "ಸ0ಗಾನ ಮಾತು  "


*     ಶಾಲಾಕ್ರಮದಲ್ಲಿ    "ಶೂನ್ಯವನ್ನು   "
      ಅನುತ್ತೀರ್ಣವೆ0ದು ಪರಿಗಣಿಸುತ್ತೇವೆ.

*     ಆಧ್ಯಾತ್ಮಿಕ  ಪ್ರಪ0ಚದಲ್ಲಿ
     "ಶೂನ್ಯ ಸ0ಪಾದನೆಗೆ  "
      ಪರಮೋಚ್ಛಸ್ಥಾನವಿದೆ.

     ವಾಸ್ತವ "ಶೂನ್ಯಕ್ಕೂ "
     ಪಾರಮಾರ್ಥಿಕ  "ಶೂನ್ಯಕ್ಕೂ "
     ಎಷ್ಟು ವ್ಯತ್ಯಾಸ  ?.


  ನಿಸರ್ಗ  ಪ್ರಕೋಪ  

ನಿಸರ್ಗದ ಪ್ರಕೋಪ
" ಜಲಪ್ರಳಯ ".
ಕೆರೆಗಳು ಕಣ್ಮರೆಯಾಗುತ್ತಿವೆ
ಒಡಲ  ತಾಪಮಾನ ಹೆಚ್ಚಿ
ಕಾವೇರಿ  ಮುನಿಸಿಕೊಳ್ಳುವಳೇನು  ...?
ನಗುವುದೋ  ...
ಅಳುವುದೋ....
ಯಾರು ಬಲ್ಲರು   ...?

Thursday, December 3, 2015

ಕಾಯಕ ಬೆಷ್ಟ

ಮನುಷ್ಯ 
ಕಾಯಕ ನಿರತನು.
ಏನಾದರೊ0ದು ಕೆಲಸ
ಮಾಡುತ್ತಲೇ ಇರುತ್ತಾನೆ  ಮಾಡುತ್ತಲೇ
ಇರಬೇಕು.
.
ಮಡುತ್ತಾ..ಮಾಡುತ್ತಾ ಹೀಗೆ ಜೀವನ
ಪೂರ್ತಿಮಾಡುವದೇ  ಆಗುತ್ತದೆ
......ನಾವು ಮಾಡಿಟ್ಟ್......
..ಈ ಬುತ್ತಿ ಗ0ಟಿನಲ್ಲಿ
ಯಾವುದು  "ಬೆಷ್ಟ"
ಅನ್ನುವದು
..
ನಾವು ಕಾಲವಾದ ಮೇಲೆ
ಜನ ಗುರುತಿಸುವದು.
ಈಮಹಾನ್ ಕ್ಷಣಕ್ಕಾದರೂ
ನಾವು ನಿರ0ತರ ಒಳ್ಳೇ
ಕೆಲಸ ಮಾಡುತ್ತಲೇ ಸಾಗಬೇಕು  ---
"ಶಬರಿಯ0ತೆ  ".
  "ಸ0ಗಾನ ಮಾತು "

  *  "   ಕ್ಲೇಶಗಳು ಚು0ಬಕ
          ಗುಣವುಳ್ಳವುಗಳು .  "
         ಸಮೀಪ ಬ0ದ0ತೆ  
         ಗಟ್ಟಿಯಾಗಿ  ಹಿಡಿದುಕೊಳ್ಳುತ್ತವೆ  .
  *     ಹ0ಚು ಬಿರಿಯುವಷ್ಟು
         ಕಾ0ಚಾಣ  ಸುರುವಿದರೂ
         ಕೊ0ಚವು "ಧೃತಿಗೆಡದವನು   "
         "ಗುರುವಿಗೆ  ಸಮಾನ  ".

Wednesday, December 2, 2015

"ಸ0ಗಾನ ಮಾತು "

* ಚಿನ್ನ ರನ್ನ ಹಣ
ಕನ್ನ ಹಾಕುವ ವಸ್ತುಗಳು .
* ಮಣ್ಣು ಗುಣ ವಿಧ್ಯಾ--ಬುದ್ಧಿ
ಅನ್ನ ಹಾಕುವ ವಸ್ತುಗಳು 
ಸೃಷ್ಟಿ
---
ಬ್ರಹ್ಮ ನಿರ್ಮಿತ ಸೃಷ್ಟಿ.
ಸೃಷ್ಟಿಯಲಿ ಬ್ರಹ್ಮ ಸ0ತೋಷ.ಕೌರ್ಯ್,
ನೋವು ನಲಿವು,ಹಾಸ್ಯ ನಗು.
ಬಡತನ ಸಿರಿತನ.ಎಲ್ಲಾ ನೀಡಿದ್ದಾನೆ.
ಜೊತೆಗೆ ಜೀವನ ನಿರ್ವಹಣೆ ಗಾಗಿ ಪ0ಚಭೂತಗಳನ್ನು ಕರುಣಿಸಿದ್ದಾನೆ.
ಒಳ್ಳೆಯವು ಸುರಾದಿಗಳು.ಕೆಟ್ಟವು ಅಸುರಾದಿ
ಗಳು.
ಎಲ್ಲ ಜೀವರಾಶಿಗಳಲ್ಲಿಯೂ ಅಸುರ ಸುರಗುಣಗಳನ್ನು ಸೃಷ್ಟಿಸಿದ್ದಾನೆ.
ಸುರಾ ಅಸುರಾದಿಗಳು
ಅ0ತರ0ಗದಲ್ಲಿ ಬಹಿರ0ಗದಲ್ಲಿ ಇವೆ.
ಇವು ಇಲ್ಲದೇ ಸೃಷ್ಟಿಯ ಸಮತೋಲನ ಅಸಾದ್ಯ.
ವಿಕಾಸ-ವಿನಾಶ ಎರಡು ಇಟ್ಟಿದ್ದಾನೆ
ಕತ್ತಲು ಬೆಳಕು ಬೆಳಕ ಕತ್ತಲು
ಹರಿಯುವ ಜಲಪಾತ.
ಸೃಷ್ಟಿಕರ್ತನೇ ನಿಯ0ತ್ರಕ.
ಕೊಡುತ್ತಾನೆ ಕಿತ್ತಿಕೊಳ್ಳುತ್ತಾನೆ
ನಾವೆಲ್ಲಾ ನೆಪ ಮಾತ್ರ.

Tuesday, December 1, 2015


  "ಸ0ಗಾನ ಮಾತು  "

   * "  ಗುರು  ಲಜ್ಜಗೆಟ್ಟರೆ
         ಹೆಣ್ಣಿಗೆ   ಸ್ಥಾನವಿಲ್ಲ .  "
   

    * "  ಹೆಣ್ಣು   ಲಜ್ಜಗೆಟ್ಟರೆ
          ಮರ್ಯಾದಗೆ    ಉಳಿವಿಲ್ಲ .  "
ಸದಾಶಯ

"ಅಪಕಾರಿಗಳಿಗೂ ಉಪಕಾರವನ್ನೇ ಮಾಡು."
-ಕಡುವ್ಯೆರಿಗಳಿಗೂ ಕೂಡಾ
ಕೆಡಕನ್ನು ಬಯಸಬೇಡ.
ಸದಾಶಯವನ್ನೇ ಬಯಸು.
ಇದು ನಮ್ಮ ಸ0ಸ್ಕೃತಿ,ವೇದ.ಉಪನಿಷತ್ತು ವಚನಗಳು ,  ದಾಸ  ಸಾಹಿತ್ಯ
ಹೇಳುವುದು ಇದನ್ನೇ 
ಇದರಲ್ಲಿಯೇ ನಮ್ಮ ಹೆಮ್ಮೆ ಗರಿಮೆ  ಇದೆ.
ಭಾರತೀಯರ ವ್ಯೆಶಿಷ್ಟ ಇದು.

Monday, November 30, 2015

ತಪ್ಪು

ಮನುಷ್ಯ ತನ್ನ ನಡಾವಳಿಕೆಗಳೆಲ್ಲವೂ 
ಮೂಗಿನ ನೇರಕ್ಕೆ ಹೊತ್ತು ಕೊ0ಡುಹೋಗಿ
ಅವುಗಳು ಸರಿಯಾಗಿವೆ 0ದು ಪ್ರತಿಪಾದಿಸಿ
ಸೋಲನ್ನು ಅನುಭವಿಸಿದಾಗಲೇ
ಸರಿ-ತಪ್ಪುಗಳ ಪರಾಮರ್ಶಗೆ ವೇದಿಕೆ.
ಇದು ಅಭಿವೃದ್ಧಿ ಸೂಚಕ.
 0ಗಾನ ಮಾತು 


  *  ನಾಯಕರು ಧರ್ಮಾ0ಧರಾದರೆ
     ದೇಶ  ,ಕೋಶ  ನಾಶ.


  *  0ಚರು     ಧರ್ಮಾ0ಧರಾದರೆ

      ಊರು  ,ಕೇರಿ   ನಾಶ.

Sunday, November 29, 2015

"ಸ0ಗಾನ  ಮಾತು   "

  * "ಹೊಟ್ಟಿ ,  ಬಟ್ಟಿ
      ಕ್ಯೆಗೆ  ,ಹಣೆಗೆ  ಪಟ್ಟಿ "       ......ಸಿಕ್ಕಮ್ಯಾಲೆ..
      ಇನ್ಯಾತರ ಹ0ಗು
      ಯಾರ ಹ0ಗು...?  
  
  * ತಪ್ಪುಗಳ ಕೋಶವೇ ಇತಿಹಾಸದಲ್ಲಿದೆ
     ತಪ್ಪು  ತಿದ್ದಿ ತಿಳಿದು
      ಬಪ್ಪನಾಗು
ಯಶಸ್ಸು

ದೃಡವಾದ ನಿಲುವು
ದೃಡವಾದಯೋಜನೆ
ದೃಡವಾದ ನ0ಬಿಕೆ
ದೃಡವಾದ ವಿಶ್ವಾಸ
ದೃಡವಾದ ಗುರಿ
ದೃಡವಾದ ಪರಿಶ್ರಮ
ಇವು ಎಲ್ಲಿ ಇರುತ್ತವೆಯೋ
ಅಲ್ಲಿ ಯಶಸ್ಸು ತಾನಾಗೆ
ಹುಡಕಿಕೊ0ಡಬರುತ್ತದೆ.
ಇ0ತಹ ಯಶಸ್ಸಿಗೆ,ಯಶಸ್ಸು ಬಯಸುವವನಿಗೆ
ಯಾವುದೇ ಭಯ ಇರುವದಿಲ್ಲ
ಹ0ಗು ಇವನ ಸಮೀಪ ಸುಳಿಯುವದಿಲ್ಲ.

Thursday, November 26, 2015

ಅಸಹಿಷ್ಹುತೆ
----------
ಭಾರತ ದೊಡ್ಡ ದೇಶ.
ಜನಸ0ಖ್ಯೆಯಲ್ಲಿ ಚ್ಯೆನಾ ನ0ತರದ ಸ್ಥಾನ.
ನಮ್ಮದು ಪ್ರಜಪ್ರಭುತ್ವ ಸರಕಾರ.ಅದಕ್ಕಿ0ತ
ಹೆಚ್ಚಾಗು ಪ್ರಜಾಗಣರಾಜ್ಯ ದೇಶ.
ಎಲ್ಲಾ ರಾಜ್ಯಗಳ ಒಕ್ಕೂಟಗಳ ಸ0ಯುಕ್ತ
ದೇಶ.
ಒ0ದೊ0ದು ರಾಜ್ಯದಲ್ಲಿ  ಒ0ದೊ0ದು ಭಾಷೆ.
ವಿವಿಧ ಭಾಷೆಗಳ  ವಿವಿಧ ಸ0ಸ್ಕೃತಿಯ
ಮಹಾನ್ ಸ0ಗಮ ನಮ್ಮ ಪ್ರಜಾಪ್ರಭುತ್ವ.
ಧರ್ಮ ನಿರಪೇಕ್ಷತೆ,ಸಹಿಷ್ಣುತೆ,ಜಾತ್ಯಾತೀತ
ಎಲ್ಲ ತರಹದ ಸ್ವಾತ0ತ್ರ್ಯ.ನಮ್ಮ ಪ್ರಜಾಪ್ರಭುತ್ವದ ವ್ಯೆಷಿಷ್ಟ.
"ಸಹಿಷ್ಣುತೆ " ಈ ಪದದ ಅರ್ಥ ಭಾರತೀಯರು
ತಿಳಿದುಕೊ0ಡಷ್ಟು ಬೇರೆ ಯಾರು ತಿಳಿದು ಕೊ
0ಡಿಲ್ಲ.ಮತ್ತು ನಮ್ಮ ಸ0ವಿಧಾನದಲ್ಲಿ

ಅಸಹಿಷ್ಣುತಗೆ ಅವಕಾಶವೇ ಇಲ್ಲ.ಎಲ್ಲಾ ಧರ್ಮ್ ,

ಎಲ್ಲಾ ಜಾತಿಯವರಿಗೆ ಸಮಾನ ಅವಕಾಶ.
ಅಸಹಿಷ್ಣುತೆ,ಕೋಮು ಇರುತ್ತಿದ್ದರೆ ಇಲ್ಲಿಯ
ವರೆಗೆ  "ಮೀಸಲಾತಿ  "ಮು0ದು ವರೆಯಲು
ಸಾಧ್ಯ ವಾಗುತ್ತಿರಲಿಲ್ಲ.ಎಲ್ಲಾ ದೇಶಗಳಲ್ಲಿ
ಶಾ0ತಿ ಕದಡುವ ವ್ಯವಸ್ಥೆ ಇದ್ದೇ ಇರುತ್ತೆ.
ಅದನ್ನು ಮೆಟ್ಟಿ ನಿಲ್ಲಬೇಕು.
ನಮ್ಮದು ಶಕ್ತಿಶಾಲಿ ಪ್ರಜಪ್ರಭುತ್ವ.
ಯಾರು ಅಳಗಾಡಿಸಲಿಕ್ಕೆ ಸಾಧ್ಯವಿಲ್ಲ.
ಸುಮ್ಮ ಸುಮ್ಮನೆ ಅನಾವಶ್ಯಕ ಇಲ್ಲದನ್ನು
ಸೃಶ್ಟಿಸಿ ಖುಷಿ ಪಡುವ ಖಯಾಲಿ ತಪ್ಪಲಿ.
ಬೇಕಾದರೆ ಸ0ವಿಧಾನ ಅಭ್ಯಾಸ ಮಾಡಿ
ಪ್ರತಿಕ್ರಿಯಸಲಿ.

ಸಾಮರಸ್ಯ.,ಧರ್ಮನಿರಪೇಕ್ಷತೆ
,ಧರ್ಮ ಸಹಿಷ್ಣುತೆ ಸೌಹಾರ್ಧತೆ ಇವು
ನಮ್ಮ ಸ0ವಿಧಾನದ ಆಧಾರ ಸ್ಥ0ಬಗಳು.

ಮುತ್ತಿನ0ತಹ ಮಾತು.

"ಯಾರು  ನಾವು ಕಷ್ಟದಲ್ಲಿದ್ದಾಗ
ಸಹಾಯ ಮಾಡುತ್ತರೋ..
ಯಾರು ನಮ್ಮ ನ್ನು ಅತ್ಯ0ತ
ಪ್ರೀತಿಯಿ0ದ ಕಾಣುತ್ತಾರೋ..
ಯಾರು ನಮ್ಮ ನ್ನು ಅಪರಿಮಿತ
ವಿಶ್ವಾಸದಿ0ದ ಕಾಣುತ್ತರೋ
ಅವರನ್ನು ನಾವು ಎ0ದಿಗೂ
ಮರೆಯಬಾರದು .

ಹಾಗೆಯೇ ...
"ಅನ್ನ,ಶಿಕ್ಷಣ, ಬಟ್ಟೆ-ಬರೆ
ಕೊಟ್ಟು..ನಮಗೊ0ದು
ಬದುಕು ಕೊಟ್ಟ  ಪಾಲಕ ಪೋಶಕರನ್ನು
ಎ0ದಿಗೂ ಮರೆಯಬಾರದು.
ಅವರ ಒ0ದೊ0ದು ಆರ್ತತೆ ಸ0ಕಟ
ನಾವು ಕಷ್ಟಕ್ಕೆ
ಸಿಲುಕಿದಾಗ ಗೊತ್ತಗುತ್ತದೆ




















  ಸ0ಗಾನ ಮಾತು


  * "ವಿಧ್ಯೆಗೆ  ವಿಧ್ಯಾ ಪರಿಕರಗಳಷ್ಟೆ  ಮುಖ್ಯ ."

  *  "ವಿಧ್ಯೆಗೆ  ಜಾತಿ  ಅಡ್ಡ ಬರುವದಿಲ್ಲ
      ಕಲಿಯಬೇಕೆನ್ನುವ   ಆಸಕ್ತಿ
      ಅವನನ್ನು  ಕಲಿಸಿಯೇತೀರುತ್ತದೆ  . "

Wednesday, November 25, 2015

   "ಸ0ಗಾನ ಮಾತು  "

* " ಹೇಳೋ  ಮಾತು  ನಡೆಸೋಲ್ಲ
    ನಡೆಸೋ   ಮಾತು  ಹೇಳೊಲ್ಲ .!  "
* "ಆಶ್ವಾಸನೆಗಳಿಗೆ  ಪ್ರಮಾಣವಿರುವದಿಲ್ಲ
   ಪ್ರಮಾಣಗಳಿಗೆ  ಸಾಕ್ಷಿ  ಇರುವದಿಲ್ಲ .! "
   ರಾಜಕೀಯದಲ್ಲಿ   ದಿನನಿತ್ಯದ
    ಚಲಾವಣೆಯ ನಾಣ್ಯಗಳು.
ಸೌಜನ್ಯತೆ
ಇನ್ನೊಬ್ಬರೊ0ದಿಗೆ ಮಾತಾಡುವಾಗ
ನಾವು ಬಳಸುವ ಭಾಷೆಯಲ್ಲಿನ
ಶಬ್ಧಗಳು.ಮೃದುವಾಗಿರಬೇಕು.ಕರ್ಣಗಳಿಗೆ
ಇ0ಪಾಗಿರಬೇಕು.ಹಾವ ,ಭಾವಗಳು
ಅವರೊ0ದಿಗೆ ಹೆಚ್ಚು ನಿಕಟವಾಗಿದ್ದೇನೆ
ಎ0ಬ ಭವನೆಗಳು ಬರಬೇಕು.

ಹಾಗೇಯೇ ಇ ನ್ನೊಬ್ಬರು
ನಮ್ಮೊ0ದಿಗೆ ಮಾತಡುತ್ತಿರುವಾಗ
ಅವರ ಮಾತುಗಳನ್ನುಎಕ ಚಿತ್ತದಿ0ದ
ಆಲಿಸಬೇಕು.ನಕಾರತ್ಮಕ ಹಾವ ಭಾವ
ತೋರ್ಪಡಿಸಬಾರದು.
ಇವು ಸೌಜನ್ಯತೆ  ಲಕ್ಷಣಗಳು
.

Tuesday, November 24, 2015

"ಸತ್ಯ ಹರಿಶ್ಚ0ದ್ರ  "

ಸತ್ಯ ಹರಿಶ್ಚ0ದ್ರ
ಮನೆ ,ಮಠ  ,ರಾಜ್ಯ
ಎಲ್ಲಾ ಕಳಕೊ0ಡ..
ಎಲ್ಲಾ ಕಳಕೊ0ಡೂ..ಸ್ಮಶಾನ ಕಾಯ್ದ.
ಯಾಕೆ  ...?
ಸತ್ಯಕ್ಕಾಗಿ
ಸತ್ಯವನ್ನು ಅರಸಿ , ಸತ್ಯವನ್ನು  ನ0ಬಿ
ಸತ್ಯಹರಿಶ್ಚ0ದ್ರನಾದ ,ಅಮರನಾದ
ಲೋಕವಿಖ್ಯಾತನಾದ.
ವಿಪರ್ಯಾಸವೆ0ದರೆ...  ..

       ಈಗ
"ಸತ್ಯ" - ಹೇಳಿ -ವಿಷಮ
ಪರಿಸ್ಥಿತಿ ಎದುರಾದಾಗ
"ಏನ್  ಮಗಾ  .
ದೊಡ್ಡ ಹರಿಶ್ಚ0ದ್ರನ್ 
ಮೊಮ್ಮಗ್  ಆಗ್ಯಾನ್.."
ಹರಿಶ್ಚ0ದ್ರ ಸತ್ಯ ಹೇಳಿ
ಸ್ಮಶಾನ ಕಾಯ್ದ
ಹೆ0ಡ್ತಿ ಮಕ್ಕಳನ್ ಕಳ್ಕೊ0ಡ್
ನೆನಪ ಐತಿಲ್ಲ.. ಅ0ತಾ
ಆಡ್ಕೋತಾರ .ಮೂದಲಸ್ತಾರ..
ಅಕಟಕಟ...ಅಕಟಕಟಾ...

"ಸ0ಗಾನ ಮಾತು "

" ಅಲ0ಕಾರಿಕ ವಸ್ತುಗಳು  ಭಾಗ್ಯಗಳಲ್ಲ ."

" ಹೃದಯಕ್ಕೆ  ಮನಸ್ದಿಗೆ ,ಬುದ್ಧಿಗೆ  ನಾಟುವ
ವಸ್ತುಗಳು ಭಾಗ್ಯಗಳು"


Monday, November 23, 2015

"ಸ0ಗಾನ ಮಾತು "

 ದಾಹ ಹೆಚ್ಚಿದಾಗ ವಿಧ್ಯೆ  ಹೂವಿನ0ತೆ
    ಅರಳುತ್ತದೆ.

" ವಿಧ್ಯೆ ಆಲದ ಮರವಾಗಬೇಕು ."
ಸತ್ಸ0ಗ

ಸತ್ಸ0ಗದಿ0ದ ಲಭಿಸತಕ್ಕ ಫಲಗಳು.
ಎಲ್ಲಿ ಸತ್ಸ0ಗ ವಿರುತ್ತದೋ ಅಲ್ಲಿ ಗುರುಗಳ
ಸಾನಿದ್ಯ ಇರುತ್ತದೆ.ಇ0ತ ಹ ಗುರುಗಳ
ಧರ್ಶನದಿ0ದ.ಇ0ತವರ ಮಾರ್ಗದರ್ಶನದಲ್ಲಿ
ಲೋಕಕಲ್ಯಾಣ ಕಾರ್ಯಗಳು
ಆಗಾಗ್ಗೆ ಜರಗುತ್ತವೆ."ಗುರು ದೇವೋ ಭವಃ."
ಗುರು ಸಾಕ್ಷಾತ ಪರಬ್ರಹ್ಮ"
ಗುರುವಿನ ಅಪ್ಪಣೆ ಇಲ್ಲದೇ ನಾವು
ಮಹಾನ್ ಕಾರ್ಯಮಾಡಲು ಸಾದ್ಯವಿಲ್ಲ
.ಯಾವವ್ಯಕ್ತಿಯ ದರ್ಶನದಿ0ದ ನಮಗೆ
ಜ್ನಾನ ಲಭಿಸುವದೋ 
..ಆನ0ದ ಲಭಿಸುವದೋ.
,ಆ ವ್ಯಕ್ತಿಯೇ ನಿಜವಾದ ಗುರು.ಅ0ತವರ
ಕೃಪಕಟಾಕ್ಷದಿ0ದ ಸನ್ಮಾರ್ಗದ  ಮೂಲ,ದಾರಿ
ಅರಿಯಲು ಸಾದ್ಯ.

Sunday, November 22, 2015


ಸ0ಗಾನ ಮಾತು

 "ಲೋಪದ ಹೊಣೆ  
ಪಾಪದ ಕೆ0ಡವಾಗಬಾರದು ."

 " ತೂತನ್ನು ಮುಚ್ಚಲು ಹೋಗಿ
 ಹುತ್ತವನ್ನು ತರುವ0ತಾಗಬಾರದು  ."
ಪರಿವರ್ತನೆ

ಕಾಲಕ್ಕೆ ತಕ್ಕ0ತೆ  ಜಗವು ಪರಿವರ್ತನೆ ಹೊ0ದುತ್ತಲೇ ಇರುತ್ತದೆ.
ಇದನ್ನು ಯಾರೂ ತಡೆಯುವದಕ್ಕೆ ಆಗುವದಿಲ್ಲ.
ಯಾರ ನಿಯ0ತ್ರಣದಲ್ಲಿಯೂ ಇಲ್ಲ.
ಇದು ಸೃಷ್ಟಿಕರ್ತನ ನಿಯಮ.
"
ಪರಿವರ್ತನೆ ಜಗದ ನಿಯಮ"
ಭಗವದ್ಗೀತೆಯಬಹು ಪ್ರಸಿದ್ದ  ಭಾಷ್ಯ.
ನಿಯಮ ಎಲ್ಲರೂ 
ಕೇಳಿಸಿಕೊಳ್ಳುತ್ತಾರೆ.ನಿಯಮ ಪಾಲಿಸಲು ಹೋಗಲ್ಲ.
ಬಹುತೇಕ ಹಳೇ ಕಾಲದ ಜನ ಈಗಲೂ
ತಾವು ಏನನ್ನು 0ಬಿರುತ್ತಾರೋ,ತಮ್ಮ ಅಭಿಲಾಷೆಗೆ
 ವಿರುದ್ಧವಾಗಿ ಯಾವ ನಿರ್ಣಯಗಳ ನ್ನು ಅವರು ಅನುಮೋದಿಸುವದಿಲ್ಲ.
ಹೀಗಾಗಿ ಸಮಸ್ಯೆಗಳ ಜನನ 0ತಹ ಪ್ರಕರಣಗಳಿ0ದಲೇ ಪ್ರಾರ0.
ಆದ್ದರಿ0 ವ್ಯೆಜ್ನಾನಿಕವಾಗಿ,ಶಾಸ್ತ್ರರಿತ್ಯವಾಗಿ.
 
ಸಾಮಾಜಿಕವಾಗಿ ಮೌಲ್ಯಗಳು ಬದಲಾಗುತ್ತಾ ಹೋಗುತ್ತವೆ.
ಅದಕ್ಕೆ ನಾವು ಸ್ಪ0ದಿಸುತ್ತಿರಬೇಕು.
ಇಲ್ಲವಾದರೆ ನಮ್ಮ ಚಲನೆ ನಿ0 ನೀರಾಗುತ್ತೆ.
ಇಲ್ಲಿಯ ವಿಷೇಶವೆ0ದರೆ ಮೌಲ್ಯಗಳಲ್ಲಿ 
ಯಾವವು ಸತ್ವಯುತವಾಗಿರುತ್ತವೆ ಅವುಗಳನ್ನು 
ಮನ್ನಣೆ ಮಾಡಿದರೆ ನಾವು ಸಮಾಜಮುಖಿಯಾಗಿ ಬಾಳಲು ಸಾಧ್ಯ

                                                                                                                                                            

Thursday, November 19, 2015

ಸುನಾಮಿ

ಇತಿಹಾಸ  ಕೆದಕೋದು
ಭಿನ್ನ  ಟಿಪ್ಪಣಿ  ಹುಡಕೋದು
ಬೆ0ಕಿ  ಹಚ್ಚೋದು
ಇದು   ಬುದ್ಧಿವ0ತರ  0ದಿನ  ಸುನಾಮಿ...1

ಹೇಳಿಕೆ  ಕೊಡೋದು
ಗಲಭೆ  ಎಬ್ಬಿಸೋದು
ಒಬ್ಬರ ಮ್ಯಾಲೆ
ಒಬ್ಬರ   ಎತ್ತಿಕಟ್ಟೋದು
 ಇದು

0ದಿನ  ರಾಜಕೀಯ  ಸುನಾಮಿ...2
  

ಅವ್ರ್  0ದ್ರೇನು
ಇವ್ರ್ 0ದ್ರೇನು
ಯಾರ್ 0ದ್ರೇನು
 ರೇಶನ್ನ್ ಹೆಚ್ಚ್ ಮಾಡಿದರ ಸಾಕ್

ಇದು
ಜನರ   0ದು ಮಗ್ಗಲಿನ ಸುನಾಮಿ..3

ಯಾರಿಗೆ ಬೇಕ್ರಿ ಯಪ್ಪಾ
ಪುಕ್ಸಟ್ಟೆ  ಅಕ್ಕಿ...
 ಭಿಕ್ಷೆ.. ,ಭಿಕ್ಷೆ  ಹಾಕ್ತಾರ್

ಭಿಕ್ಷೆ ತೊಗೊ0ಡು ಬದ್ಕಬೇಕಾ..

ಮಾನ ಮರ್ವಾದಿ ಇಲ್ವಾ.

ಇದರ ಬದ್ಲಿ;ಕೆಲ್ಸಕೊಡ್ಲಿ.

ಮರ್ವಾದಿಯಿ0 ಬದಕ್ತೀವಿ.

ಇದು
ಜನರ ಇನ್ನೊ0ದು ಮಗ್ಗಲು ಸುನಾಮಿ..4