Monday, September 18, 2017

 "  ಶ್ರೀ ದೇವಿ ನವರಾತ್ರಿ ಮಹೋತ್ಸವ  "
            ಭಾಗ  -01
   ---   -----   -----   ----   ---   ----  --
      ಸಪ್ಟೆ0ಬರ 21 ರಿ0ದ 30 ರ ವರೆಗೆ
ದೇಶದಲ್ಲೆಡೆ ನವರಾತ್ರಿ ಮಹೋತ್ಸವ ವಿಶೇಷ
ವಾಗಿ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ
ಅತ್ಯ0ತ ಸ0ಭ್ರಮದಿ0ದ ಆಚರಿಸುವ ಈ
ಹಬ್ಬ " ದಸರಾ " ಅ0ತಲೂ ಪ್ರಸಿದ್ಧಿ ಪಡೆದಿದೆ.
ಈಹಬ್ಬಕ್ಕೆ ನಾಡಹಬ್ಬ ,ಜ0ಬೂ ಸವಾರಿ ಹಬ್ಬ
ವೆ0ತಲೂ ಕರೆಯುತ್ತಾರೆ.

ದ್ವೇಷ  ಶತೃತ್ವ , ದುಃಖ ,ದಾರಿದ್ರ್ಯ ನಿರ್ಮೂಲನೆ ,ಗೊಳಿಸಿ ,
 ಸ್ನೇಹ ,ಪ್ರೀತಿ ಮೌಲ್ಯಗಳನ್ನು ಎತ್ತಿ
ಹಿಡಿಯುವದೇ ಈ ಹಬ್ಬದ ಆಶಯ.
ಸಾ0ಸ್ಕೃತಿಕ ,ಪರ0ಪರೆ , ಧಾರ್ಮಿಕ ಚಿ0ತನೆ
ಗಳು ಇನ್ನು ದೇಹ -ಮನಸ್ಸಿನಲ್ಲಿ ಜಾಗೃತವಾಗಿವೆ
ಎ0ಬುದಕ್ಕೆ ಈ ಹಬ್ಬವೇ ಸಾಕ್ಷಿಯಾಗಿವೆ.
ಸಾಯ0ಕಾಲದ ವೇಳೆ ಮಿತ್ರರೆಲ್ಲ ಸೇರಿ ಎಲ್ಲಾ
ದೇವಸ್ಥಾನಗಳಿಗೂ ಹೋಗಿ ಅಲ್ಲಿ ಹಾಕಿರುವ
ಘಟಪ್ರಭ ವನ್ನು  ನೋಡುವುದೇ ಕಣ್ಣಿಗೆ ಒ0ದು
ಹಬ್ಬ.ಊಟ ಮಾಡಿದ ಮೇಲೆ ರಾತ್ರಿ 9.0
ಘ0ಟೆಯ ನ0ತರ ಕುಟು0ಬ ಸಮೇತ ದೇವ
ಸ್ಥಾನಕ್ಕೆ ಹೋಗುವದ0ತೂ ತು0ಬಾ ಖುಷಿ.
ದುರ್ಗಾ ಪೂಜೆ ,ರಾಮಲೀಲೆ ,ಕಾಳಿಕಾದೇವಿ ,
ಚಾಮು0ಡಿ ,ಮಹಿಷಮರ್ಧಿನಿ ಇವೆಲ್ಲಾ  ಶಕ್ತಿ
ದೇವತೆಯ ರೂಪಗಳು.ದುಷ್ಟ ಶಕ್ತಿಗಳ
ಸ0ಹಾರವೇ - ಈ ನವರಾತ್ರಿ ಮಹೋತ್ಸವದ
ಉದ್ದೇಶವಾಗಿದೆ.ವಿವೇಕ ,ಜ್ನಾನ ,ಕವಿತ್ವ,
ಸಾಹಿತ್ಯ ,ಲಲಿತ ಕಲೆಗಳ ಅಭಿವೃದ್ಧಿಗಾಗಿ 8ನೇ
ದಿನ ಸರಸ್ವತಿ ಪೂಜೆ , 9ನೇ ದಿನ ಆಯುಧ
ಪೂಜೆ ,10ನೇ ದಿನ ವಿಜಯ ದಶಮಿ ಆಚರಿಸು
ತ್ತಾರೆ.

ಪಾ0ಡವರು ಅಜ್ನಾತವಾಸದ ಕಾಲದಲ್ಲಿ
ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಅಡಗಿಸಿಟ್ಟು ,
ಅಜ್ನಾತವಾಸದ ನ0ತರ ಮರಳಿ ಪಡೆದು
ಕೌರವರನ್ನು ಸೋಲಿಸಿದ ದಿನವೇ 'ವಿಜಯ
ದಶಮಿ ' ಎ0ದು ಪುರಾಣಗಳಲ್ಲಿ ಉಲ್ಲೇಖಿಸ
ಲಾಗಿದೆ.ಈ ವಿಜಯದ ಸ0ಕೇತವಾಗಿ ಇ0ದಿಗೂ
ವಿಜಯದಶಮಿಯ0ದು ಬನ್ನಿ ಮುಡಿಯುತ್ತಾರೆ.
ಬನ್ನಿ ದಿನ ಸಾ0ಕೇತಿಕವಾಗಿ ಬನ್ನಿಗಿಡ ಕಡಿದು
ಬನ್ನಿಯನ್ನು ಬ0ಧು ,ಬಳಗ ,ಸ್ನೇಹಿತರಿಗೆ ,
ಆಪ್ತರಿಗೆ ಕೊಟ್ಟು ಪರಸ್ಪರ 'ಶುಭಕೋರುವ '
ಈ ಸ0ಧರ್ಭ  ವಿಶ್ವದಲ್ಲಿಯೇ  -ಏಕ್ಯೆಕ
"ಬಾ0ಧವ್ಯ ಬೆಸುಗೆ '  - ಹಬ್ಬವೆ0ದು ಕರೆಯ
ಬಹುದಾಗಿದೆ.

ಬಲಿ,ಸ್ವಾರ್ಥ ,ತ್ಯಾಗ ವಿಲ್ಲದೇ  ಶಕ್ತಿ ಪೂಜೆ
ಸ0ಪೂರ್ಣ ವಾಗಲಾರದು.ಮೇಕೆ ಇಲ್ಲವೇ
ಪಶು ಬಲಿ ಇಲ್ಲಿ ಕೇವಲ ಅನುಕಲ್ಪ ಮಾತ್ರ.
ಯಾವ ಉದ್ದೇಶದಿ0ದ ನೀವು ಶಕ್ತಿ ಪೂಜೆ
ಮಾಡುತ್ತೀರೋ  ಆ ಉದ್ದೇಶಕ್ಕಾಗಿ ನಿಮ್ಮ
ಹೃದಯ ,ರಕ್ತ  ತ್ಯಾಗ ಅರ್ಪಿಸಿದರೆ  ಆ ಉದ್ದೇಶಗಳು ಫಲಕಾರಿಯಾಗುತ್ತವೆ.-ಇದು
ಸಾ0ಕೇತಿಕ.ನಾವು ಸಾಮಾನ್ಯವಾಗಿ ವರ್ಷ
ಕ್ಕೊಮ್ಮೆ ಗ್ರಾಮ ದೇವತೆ ಸ0ತುಷ್ಟ ಳಾಗಲು
ಬಲಿ ಕೊಡುವ ಉದ್ದೇಶ ಇದರ ಹಿನ್ನಲೆಯಾಗಿದೆ. ಆದರೆ ಈಗ ಪ್ರಾಣಿ ವಧೆ ನಿಷೇಧವಿದೆ.
(ಮು0ದುವರೆದಿದೆ )

No comments: