Thursday, September 21, 2017

"  ಮಾತಿನ ಹತೋಟಿ "
    ---   ----   ----   ----
  ಮಾತು ತಪ್ಪಿದರೆ ಇದರಷ್ಟು ಅನಾಹುತ
ಬೇರೊ0ದಿಲ್ಲ. ತಪ್ಪಿ ನಡೆದರೆ ಭೀಕರ ಬಿರುಗಾಳಿ
ಇಲ್ಲವೇ  ಸುನಾಮಿ ಅಲೆಗಳನ್ನೇ ಸೃಷ್ಟಿಸಿಬಿಡು
ತ್ತದೆ.  


    ಸಾಮಾಜಿಕ ಸ0ಭ0ಧಳಲ್ಲಿ  ಮಾತು ತಪ್ಪಿ
ನಡೆದರೆ  ತಿದ್ದಿಕೊಳ್ಳಲು ,ಕ್ಷಮೆಯಾಚಿಸುವ
ಮೂಲಕ ಬಗೆಹರಿಸಿಕೊಳ್ಳಲು  ಅನೇಕ ದಾರಿ
ಗಳು0ಟು.ಇನ್ನುಳಿದ ಕ್ಷೇತ್ರಗಳಲ್ಲಿ  ರಾಜಕೀಯ
ಆಧಾರಿತ , ಸ0ಘಟನೆ ಆಧಾರಿತ,ಸುದ್ದಿ
ಮಾಧ್ಯಮ ಸ0ಭ0ಧಿಗಳ  ಕೇವಲ  ' ಒ0ದೇ
ಒ0ದು ಮಾತು 'ಆಯಾ ತಪ್ಪಿ ನಡೆದರೆ --
--ಮುಗಿಯಿತು -' ಮಾತಾಡುವವನ/ಳ
ಜಾತಕವನ್ನೇ ಜಾಲಾಡಿಸಿ ಬಿಡುತ್ತಾರೆ.


    'ಕೆಟ್ಟ ಮಾತುಗಳ0ತೂ '  ಶಬ್ದಕೋಶಗ
ಳಲ್ಲಿ ಹುಡಕಿದರೂ ಸಿಗುವದಿಲ್ಲ.ಕೀಳು ಪದ
ಗಳನ್ನು ಧಾರಾಳವಾಗಿ ಬಳಸುತ್ತಾರೆ. 

ಮಾತು.ಬಳಕೆಯ ಈ ಶ್ಯೆಲಿ ಫ್ಯಾಶನ್ನ್ ಆಗಿದೆ.
ಇದು ತಪ್ಪು ನಡೆ. ' ತಪ್ಪು ' ಯಾವ ಶಬ್ದ
ಪ್ರಯೋಗದಿ0ದ  ಆಗಿದೆ ಎ0ಬುದನ್ನು ಗಮ
ನಿಸಿ,ಅದಕ್ಕೆ ತಕ್ಕ0ತೆ  ಶುದ್ಧವಾದ ಶಬ್ದಗಳಲ್ಲಿ
ಪ್ರತಿಕ್ರಿಯಿಸುವದು ಆರೋಗ್ಯಕರ ಬೆಳವಣಿಗೆ.
ಅಭಿವ್ಯಕ್ತಿ ಸ್ವಾತ0ತ್ರ್ಯ ಇರುವದು ಅಭಿಪ್ರಾಯ
ಗಳನ್ನು ವ್ಯಕ್ತಗೊಳಿಸುವದಕ್ಕಾಗಿಯೇ .
ಇದಕ್ಕು ಫರದಿ ಇದೆ.ಫರದಿ ದಾಟಿದರೆ ದ0ಡನೆ
ಗೆ ಅವಕಾಶವಿದೆ.ಇದು ಎಲ್ಲರಿಗೂ ಗೊತ್ತಿರುವ
ವಿಷಯ.


    ಈ ದಾಟಿ ಬಿಟ್ಟು ,ರ0ಪಾಟ ಮಾಡಿ ,ಮನ
ಬ0ದ0ತೆ ಮಾತಾಡುವದು ,ತಿರುಚಿ ಹೇಳುವ
ವಿಷಯಾ0ತರಿಸುವ  ಶ್ಯೆಲಿಗೆ ಆಡು ಬಾಷೆಯಲ್ಲಿ
ವಾಚಾಳಿತನ'ಅ0ತಾ ಕರೆಯುತ್ತಾರೆ.ಪ್ರಭುದ್ದರು
ಇದನ್ನು ಮನ್ನಿಸುವದಿಲ್ಲ.


  ಈಗ ಮಾತಿನ ಲಹರಿ ತಪ್ಪಿದರೆ ಆಪತ್ತನ್ನು
ಅಹ್ವಾನಿಸಿದ0ತೆ.ಮಾತಾಗಲಿ ,ಬರೆವಣಿಗೆ
ಯಾಗಲಿ ತನ್ನ ಜಾಡು ಬಿಡಬಾರದು.ಪ್ರಚಾರ
ಸನ್ನಿ ಅ0ಟಿಕೊ0ಡರೆ ಅದು ಅ0ಟುಜಾಡ್ಯ.
ಮಾತು -ಬರಹ ನಿಯ0ತ್ರಣದಲ್ಲಿದ್ದಷ್ಟು ಚೆನ್ನ.


  ಈ ಸ0ಧರ್ಭದಲ್ಲಿ  -"ಮಾತು ಬಲ್ಲವನಿಗೆ
ಜಗಳವಿಲ್ಲ."-ಗಾದೆ ನೆನಪಿಗೆ ಬರುತ್ತದೆ.

No comments: