" ಶ್ರೀ ದೇವಿ ನವರಾತ್ರಿ ಮಹೋತ್ಸವ "
ಭಾಗ -02
--- ----- --- --- -- - --- ---
ಮನುಷ್ಯ ಇಲ್ಲದೇ ಇದ್ದರೆ ಭಗವ0ತನನ್ನು
ಯಾರು ಆರಾಧಿಸುತ್ತಿದ್ದರು..?ಅವನ ಅಪಾರ
ಶಕ್ತಿ ,ಮಹಿಮೆಯನ್ನು ಯಾರು ಪ್ರಚಾರಪಡಿ
ಸುತ್ತಿದ್ದರು.. ? " ಭಕ್ತ ಇರುವನು - ಅವನಿ0
ದಲೇ ಭಗವ0ತ ಇರುವನು . " ಶ್ರೀ ರಾಮಕೃ
ಷ್ಣ ಪರಮಹ0ಸರ ಭಕ್ತ ಮತ್ತು ಭಗವ0ತ
ಕುರಿತು ಹೇಳಿದ ಸ್ವಾರಸ್ಯಕರವಾದ ನುಡಿಗಳಿವು.
ಭಾರತೀಯ ಸ0ಸ್ಕೃತಿ ,ಪರ0ಪರೆ ,ಧಾರ್ಮಿಕ
ಆಚಾರ -ವಿಚಾರಗಳನ್ನು ಯುರೋಪ ,
ಅಮೇರಿಕಾ ಸೇರಿದ0ತೆ ವಿದೇಶಗಳಲ್ಲಿ
ಮಾಡಿದ ಭಾಷಣ ,ಅದರ ಹಿರಿಮೆ ಗರಿಮೆಗಳು
ಇ0ದಿಗೂ ಜಗತ್ಪ್ರಸಿದ್ಧವಾಗಿವೆ.ಈಗಲೂ ಆ
ಭಾಷಣದ ನೀನಾದ ,ಚಿ0ತನೆ ನವಿನವೀರಾಗಿ
ಹೊಸ ಚಿಗುರಾಗಿ ಯುವಕರಲ್ಲಿ ರಾಷ್ಟ್ರಪ್ರೇಮ ,
ದೇಶಭಕ್ತಿಯ ಸ0ಚಲನದ ಚಿಲುಮೆಯಾಗಿ
ಭಿತ್ತುವಲ್ಲಿ ಯಶಸ್ವಿಯಾಗಿದೆ.ಈ ಚಿ0ತನೆಗಳೆ
ಲ್ಲವೂ ಸ್ವಾಮಿ ವಿವೇಕಾನ0ದರ 'ರಾಷ್ಟ್ರ ಜಾಗೃತಿ '
ಎ0ದೇ ಪ್ರಸಿದ್ಧವಾಗಿವೆ.ಸ್ವಾಮಿ ವಿವೇಕಾನ0ದ
ರು ಶಕ್ತಿ ದೇವತೆಯ ಉಪಾಸಕರು.ಆ ಶಕ್ತಿ ದೇವ
ತೆಯ ಮಹಾನ್ ಶಕ್ತಿಯ ಪ್ರೇರಣೆಯಿ0ದ
ಸ್ವಾಮಿಜಿಯವರಿಗೆ ಈ ಯಶಸ್ಸು ಸಾಧಿಸಲು
ಸಾಧ್ಯವಾಯಿತು.
ಶಕ್ತಿ ದೇವತೆಯು ನಿತ್ಯಳೂ, ಅನ0ತಳೂ,ಸೃಷ್ಯಿ
ಲಯಕರ್ತಳೂ , ಆದಿಶಕ್ತಿ ,ಪರಾಶಕ್ತಿಯೂ
ಆಗಿರುವಳು.ಮೂಕಾ0ಬಿಕೆ ,ಚೌಡೇಶ್ವರಿ ,
ಲಕ್ಷ್ಮಿ,ಸರಸ್ವತಿ ಇನ್ನು ಅನೇಕಾನೇಕ ರೂಪಗಳು
ನಾಮಗಳು ಇವೆ.ಶಕ್ತಿ ದೇವತೆಯ ಆರಾಧನೆ
ಯಿ0ದ ರಾಜ್ಯ ಶಕ್ತಿ ,ಸ0ಘಟನಾ ಶಕ್ತಿ, ಲಲಿತ
ಕಲಾ ಶಕ್ತಿ,ಇನ್ನು ಅನೇಕ ಶಕ್ತಿಗಳು ಪ್ರಾಪ್ತಿಯಾ
ಗುವವು.ಶಕ್ತಿ ದೇವತೆ ಭಕ್ತರ ಕಲ್ಪವೃಕ್ಷ-
ಕಾಮಧೇನು. "ಶಕ್ತಿ ರಾಜ್ಯದಲ್ಲಿ ಶಕ್ತಿ ಉಪಾಸನೆ "
ಈ ಉಪಮೆ ರೂಢಿಯಲ್ಲಿದೆ.ಈ ಹಿನ್ನಲೆಯಲ್ಲಿ
ಕಲಾ ಪ0ಡಿತರಿಗೆ ,ಶಿಲ್ಪಕಲಾಕಾರರಿಗೆ ,
ವಿದ್ವಾ0ಸರಿಗೆ ,ಗಾಯಕರಿಗೆ ,ನೃತ್ಯ ಕಲಾವಿದರಿ
ಗೆ,ಸಾಧಕರಿಗೆ ದಸರಾ ಮಹೋತ್ಸವದಲ್ಲಿ
ಸನ್ಮಾನ -ಪ್ರಶಸ್ತಿ ನೀಡುವ ಪದ್ಧತಿ ಬೆಳೆದು
ಬ0ದಿದೆ.
ಗುಪ್ತಗಾಮಿನಿ,ವ್ಯಕ್ತಗಾಮಿನಿ ,ಶೂದ್ರಶಕ್ತಿಯೂ
ಹೌದು,ಮಹಾಶಕ್ತಿಯೂ ಹೌದು.ಭಾವನಾ ಜೀವಿ
ಯೂ ಹೌದು,ಸೂಕ್ಷ್ಮ ಜೀವಿಯೂ ಹೌದು.
ಶ್ರೀ ಶಕ್ತಿ ದೇವತೆಯಿ0ದಲೇ ಪ್ರಪ0ಚ.ಅನ್ನ
ಶ್ರವಣಾದಿ ಕ್ರಿಯೆ ನಡೆಯುವವು.ಆಶಕ್ತಿ
ದೇವತೆಯ ಪ್ರೇರಣೆಯಿ0ದಲೇ ಜಗತ್ತು
ಕ್ರಿಯಾಶೀಲವಾಗಿದೆ.
"ಯಾ ದೇವಿ ಸರ್ವ ಭೂತೇಷು
ಶಕ್ತಿ ರೂಪೇಣ ಸ0ಸ್ಥತಾ |
ಸಮಸ್ತಸ್ಸ್ಯ ಸಮಸ್ತಸ್ಸ್ಯೆ ಸಮಸ್ತಸ್ಸ್ತ್ಯೆ
ನಮೋ ನಮಃ | (ಚ0ಡಿ)
ಜಡ ಚೇತನ ಸಕಲದರಲ್ಲಿಯೂ ಸುಪ್ತ
ಮತ್ತು ವ್ಯಕ್ತ ಭಾವದಲ್ಲಿ ಅವ್ಯಸ್ಥಳಾದ ಶಕ್ತಿ
ರೂಪಿಣಿ ದೇವಿಗೆ ನನ್ನ ಅನ0ತ ನಮಸ್ಕಾರಗಳು.
(ಮು0ದುವರೆದದ್ದು )
No comments:
Post a Comment