Monday, September 25, 2017

"  ಬರೆವಣಿಗೆ   "
              ----   --   -----    --
    ಬರೆವಣಿಗೆ ಶುದ್ಧವಾಗಿರಬೇಕು.ಸ್ಪಷ್ಟತೆ
ಇರಬೇಕು.ಸರಳ ,ಸು0ದರ,ಸಾಮಾನ್ಯ ಶಬ್ದ
ಗಳಿ0ದ ಬರೆವಣಿಗೆ ಅಲ0ಕೃತಗೊ0ಡಿರಬೇಕು.
ಬರೆವಣಿಗೆ ಮೂಲಕ  ನಿರೂಪಣೆ ಮಾಡುವ
ವಸ್ತು ಯಾವುದು..?ಅದರ ವಿಸ್ತಾರ ,ಆಳ,
ಕ್ಷೇತ್ರದ ಎಲ್ಲಾ ಆಯಾಮಗಳನ್ನು ಅಭ್ಯಾಸಿಸಿ
ಲೇಖನ ಸಿದ್ಧಪಡಿಸಬೇಕು.ಬಳಸುವ ಶಬ್ದಗಳ
ದನಿ ಇ0ಪಾಗಿರಬೇಕು.ಲೇಖಕನ ಅ0ತರ0ಗದ
ಆಳವನ್ನು ವಾಚಕರು ಗಮನಿಸಬೇಕು.ಲೇಖಕರು
ಕೂಡಾ ವಾಚಕರ ಸಮಸ್ಯೆಗಳನ್ನು ಅರ್ಥ ಮಾಡಿ
ಕೊ0ಡು ,ಅವರ ಸಮಸ್ಯೆಗಳ ಜೊತೆಗೆ ಸಾಹಿತ್ಯ
ದ ಮೆರಗನ್ನು ಹೆಚ್ಚಿಸುವ0ತಾಗಬೇಕು.
ಚುಟುಕು ಸಾಹಿತ್ಯ ಪ್ರಕಾರದಲ್ಲಿ ಚುಟುಕಾದ
ನುಡಿಗಳಿರುತ್ತವೆ.ಈ ನುಡಿಗಳು ಒಗಟು ,ಗಾದೆ
ಉಪಮೆ, ಪ್ರಸಿದ್ದ ಲೇಖಕರ ,ವಿಧ್ವಾ0ಸರ
ನುಡಿಗಳಿಗೆ ಹಾಗೆ ಹೋಲಿಕೆಯಿರುತ್ತವೆ.ಎರಡು
ಅಥವಾ ಮೂರು ಸಾಲುಗಳಲ್ಲಿ,ಕಡಿಮೆ ಪದಗ
ಳಲ್ಲಿ,ಅರ್ಥಗರ್ಭಿತವಾಗಿ ಹೇಳಬೇಕಾದ ವಿಷಯ
ವನ್ನು ತಲುಪಿಸುವ ಉದ್ದೇಶವೇ ಚುಟುಕು
ಸಾಹಿತ್ಯ.ದ್ವಿಪದಿ,ತ್ರಿಪದಿ ಸುಭಾಷಿತ ,ವಚನಗಳು
ಈ ಗು0ಪಿಗೆ ಸೇರುತ್ತವೆ.ವ್ಯ0ಗ ,ಹಾಸ್ಯ ಸಾಹಿ
ತ್ಯವೂ ಚುಟುಕು ಸಾಹಿತ್ಯದ ಒ0ದು ಪ್ರಕಾರ.
ಅ0ತರ್ಜಾಲ ತಾಣಗಳಲ್ಲಿ ಚುಟುಕು ಸಾಹಿತ್ಯವು
ಹೆಚ್ಚು ಬಳಕೆಯಲ್ಲಿದೆ.ವ್ಯ0ಗದಾಟಿ,ಹ0ಗಿಸುವ
ನಿ0ದನಾತ್ಮಕ ,ಪರೋಕ್ಷ ತೀಕ್ಷಣ ನುಡಿಗಳಿ0ದ
ಚುಟುಕ ಸಾಹಿತ್ಯ ತನ್ನ ಗ0ಭೀರತೆಯನ್ನು
ಕಳೆದುಕೊಳ್ಳುತ್ತಲಿದೆ.ಕೆಳ ಮಟ್ಟದ ಚುಟುಕು
ಗಳಿ0ದ ಒಮ್ಮೊಮ್ಮೆ ಆವಾ0ತರಗಳು ಸೃಷ್ಟಿ
ಯಾಗುತ್ತವೆ.


  ಕವಿ,ಕವಿಯತ್ರಿಯರು ರಚಿಸುವ ಕವನಗಳು
ಅ0ತ್ಯ  ಅದಿಪ್ರಾಸ ,ಮಾತ್ರೆಲೆಕ್ಕ  ಚಾರದಿ0ದ
ದ್ವಿಪದಿ,ತ್ರಿಪದಿ ಚೌಪದಿ  ಕವನಗಳು ರಚಿಸಲ್ಪ
ಡುತ್ತವೆ.ನವ್ಯ ಹಾಗು ನವೋದಯ ಸಾಹಿತ್ಯ
ಪ್ರಕಾರಗಳಿ0ದ  ಪ್ರಾಸಗಳ ಮಹತ್ವ ಕಡಿಮೆ
ಯಾಗಿಶಬ್ದಗಳ ಪ್ರಯೋಗ ಹೆಚ್ಚಾಗಿದೆ.ಪ್ರಾಸಗ
ಳಿಗೆ ಜೋತುಬಿದ್ದು ಕವನಗಳು ಸೋತುಹೋಗು
ತ್ತವೆ.ಕವನ ಅ0ದಗೆಡುವದು0ಟು.ಕ್ಲಿಷ್ಟ,ಧ್ವ0ಧ್ವ
ಪದಗಳು ಕವನದ ಅ0ದವನ್ನು ಹೆಚ್ಚಿಸುತ್ತವೆ,
ಹಾಗೆಯೇ ಒಮ್ಮೊಮ್ಮೆ ಅ0ದವನ್ನು ಕೆಡಿಸುತ್ತವೆ
  ಲೇಖನ ಪ್ರಕಾರಗಳಲ್ಲಿ ವಿಸ್ತಾರ ಕಡಿಮೆಮಾಡಿ
ಕಡಿಮೆ ಶಬ್ದಗಳಲ್ಲಿರುವ ಲೇಖನಗಳು ಜನಪ್ರಿಯ
ವಾಗುತ್ತಿವೆ.ಹೊಸ -ಹೊಸ ಶಬ್ದಗಳ ಪ್ರಯೋಗ
ಬಿಟ್ಟು ಹೋದ ಹಳೇ ಪ್ರಭಾವಿಶಬ್ದಗಳ ಪ್ರಯೋಗ
ಲೇಖನದ ಶ್ರೀಮ0ತಿಕೆಯನ್ನು ಹೆಚ್ಚಿಸುತ್ತವೆ.
ತೀಕ್ಷಣ -ಮೊನಚಾದ ಪದಗಳು ಯಾವ
ಕ್ಷೇತ್ರಕ್ಕೂ ನೋವು0ಟು ಮಾಡಬಾರದು.ತತ್ಸಮ
ಯಯದಲ್ಲಿ ವಸ್ತು ನಿಷ್ಟೆಗೆ ಅನ್ಯಾಯವಾಗಬಾ
ರದು.ವಾಸ್ತವಿಕತೆಗೆ ಕು0ಗಾಗಬಾರದು,ತೀಕ್ಷ
ಣತೆಗೆ ಸೋಲಾಗಬಾರದು.ಈ ಪ್ರಕಾರದ
ಸೃಜನತೆ ತು0ಬಿದ ಲೇಖನಗಳಿಗೆ ಮೌಲ್ಯ
ಇದ್ದೇ ಇರುತ್ತದೆ.


" ಸಾಹಿತ್ಯಕ್ಕೆ   ನಿಜವಾದ ಬಲ -  ಆತ
ಬಳಸುವ ಶಬ್ದ ,ಜ್ನಾನಮಟ್ಟ,ವಾಸ್ತವಿಕತೆಯ
ಅರಿವು,ಮ0ಡಿಸುವ ಶ್ಯೆಲಿ,ಬಿ0ಬಿಸುವ ಶ್ಯೆಲಿಯ
ಮೇಲೆ ನಿ0ತಿರುತ್ತದೆ.ಇವು ಸಾಹಿತ್ಯದ
"  ಪ0ಚಶೀಲ" ಗಳು. ".

No comments: