Friday, September 22, 2017



" ಸಮಸ್ಯೆ -- ಅವಕಾಶ "
--- --- --- ---- ---
ಸಮಸ್ಯೆಗಳು ಎಲ್ಲಿಲ್ಲ.. ? ಸಮಸ್ಯೆಗಳು
ಎಲ್ಲಾ ಕಡೆಗೂ ಇವೆ.ಜಗತ್ತು ಸಮಸ್ಯೆಗಳ
ಸಾಗರ.ಹಾಗ0ತ ಚಲನಶಕ್ತಿಯನ್ನು ಕಳೆದುಕೊ
0ಡಿಲ್ಲ.ಜಡತ್ವವೂ ಇದೆ.ಜಡತ್ವ ಇರುವದರಿ0
ದಲೇ ಜಗತ್ತು ದಿನೇ ದಿನೇ ಹೊಸ -ಹೊಸ
ಚಿ0ತನೆಗಳಿಗೆ ,ಅವಿಷ್ಕಾರಗಳಿಗೆ ,ಅನ್ವೇಷಣೆ
ಗಳಿಗೆ ,ಯೋಜನೆಗಳಿಗೆ -ಚಾಲನೆ ಶಕ್ತಿ
ಒದಗಿಸುತ್ತದೆ.ಈ ಚಲನ ಶಕ್ತಿಗಳೇ ಅವಕಾಶ
ಗಳು.ಈ ಅವಕಾಶಗಳು ಬ0ದಾಗ ಶ್ರದ್ಧೆ,ಭಕ್ತಿ
ನ0ಬಿಕೆ,ವಿಶ್ವಾಸ,ಧ್ಯೆರ್ಯದಿ0ದ ಸ್ವೀಕರಿಸ
ಬೇಕು. ಯಾರು ಈ ಅವಕಾಶಗಳನ್ನು ಬಳಸಿಕೊ
ಳ್ಳುತ್ತಾರೋ ಜಗತ್ತು ಅವರನ್ನು ಹೃದಯ
ತು0ಬಿ ಸ್ವಾಗತಿಸುತ್ತದೆ.

ಅವಕಾಶಗಳು ಹಾಗೆ ಬರುವದಿಲ್ಲ.ಕಷ್ಟಪಟ್ಟು
ಧ್ಯೆರ್ಯದಿ0ದ ಮುನ್ನುಗ್ಗಿದಾಗ ಅವಕಾಶಗಳು
ಸೃಷ್ಟಿಯಾಗುತ್ತವೆ.

ಸಮಸ್ಯೆಗಳ ತಾಕಲಾಟದಿ0ದ ಹೊರಬರುವ
ದಾರಿ ಹುಡುಕಬೇಕು.ಸಮಸ್ಯೆಗಳಿಗೆ ಬೆನ್ನು
ತೋರಿಸಿದರೆ ಪಲಾಯನವಾದ.ಪಲಾಯನ
ವಾದಕ್ಕೆ ಗಟ್ಟಿ ನೆಲೆ -ಬೆಲೆ ಇಲ್ಲ.ಕರ್ಮಭೂಮಿ
ಯಲ್ಲಿ -ಕರ್ಮಪೂ ಜೆ ಮಾಡದೇ ಇದ್ದಾಗ
ಕುಕರ್ಮಗಳ ಫಲವನ್ನು ಅನುಭವಿಸಬೇಕಾಗು
ತ್ತದೆ.ನಲಿವು,ಒಲವು,ಚೆಲುವು,ಗಳ ಕಡೆ ಸಾಗಿದರೆ
ಜೀವನ ಸಾಕ್ಷಾತ್ಕಾರ.

ಸಮಸ್ಯೆಗಳು ಎದುರಿಸುವಾಗ ನೂರೆ0ಟು
ಗಾಳಿಮಾತು,ಆರೋಪಗಳು ಬರುವದು ಸಹಜ.
ಇವುಗಳಿಗೆ ಹೆದರಬಾರದು.ಇವುಗಳನ್ನು
ಛಲದಿ0ದ ಸ್ವೀಕರಿಸಿ 'ಏಟಿಗೆ -ಎದುರೇಟು '
ನೀಡುವ ಆತ್ಮಸ್ಥ್ಯೆರ್ಯ ಪ್ರದರ್ಶಿಸಬೇಕು.
ಇವು ಸಮಸ್ಯೆಗಳಿಗೆ ಪ್ರತಿಯಾಗಿರುವ
ಸದಾವಕಾಶಗಳ ಹೆದ್ದಾರಿ.ಈ ಹೆದ್ದಾರಿ ಕಡೆಗೆ.ನಮ್ಮ ಪಯಣ ಇರಲಿ.

No comments: