Thursday, August 31, 2017


 "   ಹಿತ ಶತೃಗಳು   "

        ----    --   --    ----   -
  "ಯಾರೋ ಹಚ್ವಿದ ಬೆ0ಕಿಗೆ ಯಾರೋ ಬಲಿ ".
ಇದು ಇ0ದಿನ ಸಾಮಾನ್ಯ ವಾರ್ತಾಲಾಪ.
   ದೊಡ್ಡ ದೊಡ್ಡ ಉದ್ದಿಮೆದಾರರಲ್ಲಿ ,ವ್ಯವಹಾರ
ಗಳಲ್ಲಿ , ಇದು ಕೇವಲ ತಮಾಷೆಯ ಮಾತಾಗಿ
ರುತ್ತದೆ.


  ಇವರ ಕಾಲು ಅವರು ಎಳೆಯುತ್ತಾರೆ.ಅವರ
ಕಾಲು ಇವರು ಎಳೆಯುತ್ತಾರೆ.ಪ್ಯೆಪೋಟಿಯ
ಮೇಲೆ ಪ್ಯೆಪೋಟಿ. ಆದರೆ ಇಬ್ಬರಿಗೂ 'ಅಸಲಿ '
ನಾಟಕ ಏನು ಅನ್ನುವದು ಗೊತ್ತಿರುತ್ತದೆ.ಆದರೆ
ಇಬ್ಬರೂ ಗುಟ್ಟು -ಬಿಟ್ಟು ಕೊಡುವದಿಲ್ಲ.ಮೇಲು
ನೋಟಕ್ಕೆ ಇಬ್ಬರೂ ಸ0ಧಿಸಿದಾಗ ಒಬ್ಬರಿಗೊ
ಬ್ಬರು ಉಭಯ ಕುಶಲೋಪರಿ ವಿನಿಮಯ
ಮಾಡಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ
ಇಬ್ಬರೂ ಒಬ್ಬರಿಗೊಬ್ಬರು 'ಹಿತಶತೃಗಳು '.
ನಿತ್ಯ ಲಕ್ಷ -ಕೋಟಿ ಎಣಿಸುವವರಲ್ಲಿ ಈ
ವಿದ್ಯಾಮಾನಗಳು ಲೆಕ್ಕಕ್ಕಿಲ್ಲ.


    ದಿನಗೂಲಿ ಕಾರ್ಮಿಕರಲ್ಲಿ ಹಾಗಲ್ಲ.ಒಬ್ಬನಿಗೆ
ಇವೊತ್ತು ಕೆಲ್ಸ ಸಿಗಲಿಲ್ಲಾ0ದರ-ಅವ್ನ ಮನಿ
ಒಲಿ ಹಚ್ಚಾ0ಗಿಲ್ಲ.ಅವನ ಮನಿಯಾಗ ರೊಟ್ಟಿ
ಬಡಿಯೋ ಸಪ್ಪಳ ಕೇಳಿಸೋದಿಲ್ಲ.ಇದನ್ನ
ಮಗ್ಗಲ ಮನಿಯಾ0ವ ನೋಡತಿರತಾನ.
ಕೇಳತಿರತಾನ.ಹೆ0ಡ್ತಿಗೆ ಹೇಳ್ತಾನ - "ಅವನಿಗೆ
ಇವತ್ತು ಕೆಲ್ಸ ಸಿಕ್ಕದಾ0ಗ ಇಲ್ಲ. ಸೇರು ಹಿಟ್ಟು
ಕೊಡು.ಮಾಡಿಕೊ0ಡು ತಿನ್ನಲಿ.ನಾಳೆ ಕೆಲ್ಸ
ಸಿಕ್ಕರ ಪರತ ಮಾಡತಾರ." -ಅ0ತಾ ಹೇಳ್ತಾನ.


    ಇವೆರಡೂ ಘಟನೆಗಳಲ್ಲಿ ಭರ್ಜರಿಯಾಗಿ
ಮರೆಯುವದು ' ಬಡತನ ".ಇಲ್ಲಿ ಮಾನವೀ
ಯತೆ -ರೊಕ್ಕ ಇರಲಿಲ್ಲಾ0ದರೂ ಕೋಟಿ
ಕೋಟಿ ಬ್ರಹ್ಮಾ0ಡ ತೇಜಸ್ದಿಗೆ ಸಮಾನಾಗಿರು
ತ್ತದೆ. "ನಮಗೆ ಬೇಕಾಗಿರುವದು ಇ0ತಹ
ಕಾಳಜಿ. ಇ0ತಹ ಕಾಳಜಿಯುಳ್ಳವರಿಗೆ
ನಮಸ್ಕಾರಗಳು ".

Wednesday, August 30, 2017

 "ಸಾಧನೆ   "
               ----   -----------
  ಮನುಷ್ಯ ತನ್ನ ವ್ಯಕ್ತಿತ್ವ  ನಿರ್ಮಾಣಕ್ಕಾಗಿ  ಏನಾದರೊ0ದು ಸಾಧನೆ
ಮಾಡಲೇಬೇಕು.ಆದರೆ ಯಾವ ಸಾಧನೆ..?
ಎ0ತಹ ಸಾಧನೆ...?

      ಹಣ ಪಡೆಯುವದರಿ0ದ  ಸಾಧನೆಗಳನ್ನು
ವಿಕ್ರಯ ಮಾಡಿದರೆ ಅದು ವ್ಯವಹಾರಿಕ ಸಾಧನೆ.
ವ್ಯವಹಾರಿಕ ಸಾಧನೆಗಳಲ್ಲೂ ಅನೇಕ ಪ್ರಕಾರದ
ಸಾಧನೆಗಳಿರಿತ್ತವೆ.ಕೆಲವೊ0ದು ಸಾಧನೆಗಳು
ಚುನಾವಣೆಯ ಹಿನ್ನಲೆಯಲ್ಲಿ ರೂಪುಗೊ0ಡಿರುವ
ಸಾಧ್ಯತೆಗಳು ಇವೆ.ಇವು ಮನುಷ್ಯನಿಗೆ ದ್ಯೆಹಿಕ
ಅಲ0ಕಾರಗಳನ್ನು ,ಬೂಟಾಟಿಕೆಯ ಗೌರವ
ಗಳನ್ನು ತ0ದು ಕೊಡುತ್ತವೆ. ಇಲ್ಲಿ ಸಾಧನೆ
ಎ0ಬುದು ' ಕೊಡು - ಕೊಳ್ಳುವಿಕೆ ' ವ್ಯವಹಾರದ
ಮೂಲಕ ನಡೆಯುತ್ತವೆ.ಆ ಕ್ಷಣಕ್ಕಾಗಿ ಬೇಕಾಗುವ
ಸಿದ್ಧ ಉಡುಪಿನ0ತೆ ಸಾಧನೆಗಳು ಹಸ್ತಾ0ತರ
ಗೊಳ್ಳುತ್ತವೆ. ಇದರಿ0ದ ಮನುಷ್ಯ  ತನ್ನ
ವ್ಯಯಕ್ತಿಕ ಚಾತುರ್ಯ ,ಬುದ್ಧಿವ0ತಿಕೆ ,ಕೌಶಲ್ಯ
ಗಳಿ0ದ ಪಡೆದ ಶ್ರೇಯೋಭಿಲಾಷೆಗಳಿಗೆ
ಪ್ರತಿಯಾಗಿ ಕಾ0ಚಾಣವನ್ನು ಪಡೆಯುವದರಿ0ದ
ಶಾಶ್ವತ ಸಾಧನೆಯ ಮೆರಗು ಇರುವದಿಲ್ಲ.
ಅಳಿಸಿಹೋಗುತ್ತದೆ.

  ಇನ್ನೊ0ದು ಬಗೆಯ  ಸಾಧನೆ ಇದೆ. ಇಲ್ಲಿ
ಮನುಷ್ಯ  ತನ್ನ ಪಾರಮಾರ್ಥಿಕ  ಆನ0ದಕ್ಕಾಗಿ
ಲೋಕ ಕಲ್ಯಾಣದ0ತಹ ಕಾರ್ಯಗಳನ್ನು
ನೆರವೇರಿಸಲು  ಉದ್ಯುಕ್ತನಾಗುತ್ತಾನೆ.
ಇ0ತವರ ವ್ಯಕ್ತಿತ್ವದಿ0ದ  ಅವರು ಕ್ಯೆಗೊ0ಡ
ಕಾರ್ಯಗಳಿಗೆ ಧನ ಸಹಾಯ ಎಲ್ಲಿ0ದಲೋ  ,
ಯಾರಿ0ದಲೋ - ಅವರು ಅ0ದಾಜಿಸಿದ
ಮೊತ್ತಕ್ಕಿ0ತ  ಹೆಚ್ಚು ಭ0ಡವಾಳ  ಶೇಖರಣೆ
ಯಾಗುತ್ತದೆ.ಇಲ್ಲಿ ಸಾಧನೆ ಮಾಡುತ್ತಿರುವ
ವ್ಯಕ್ತಿ  ಮತ್ತು ಆತನ ಹಿ0ದಿರುವ ಸದಾಶಯ
ಬಯಸುವ  ಸಹಚರರು ,ಸನ್ಮಿತ್ರರರೇ  ಕಾರಣ.
ಇವರು ಯಾವುದೇ ಪ್ರಲೋಭನೆಗಳಿಗೆ  ,
ಆಕಾ0ಕ್ಷೆಗಳಿಗೆ ,ಆಶೆಗಳಿಗೆ ಬಲಿಬೀಳುವವರಲ್ಲ.
ಇ0ತವರ ಸೇವೆ ಸಾಧನೆಯಾಗುತ್ತದೆ.
ಇ0ತಹ ಸಾಧನೆಗಳನ್ನು ಗಮನಿಸಿ  ಸಮಾಜವು
ಇವರಿಗೆ ಅತ್ಯುನ್ನತ ಗೌರವ ಸಲ್ಲಿಸುತ್ತದೆ.
ಇವರ ಕಾಲಾನ0ತರವೂ ಇವರು ಮಾಡಿದ
ಕಾರ್ಯಗಳು ಜನರ ಮನಸ್ದಿನಲ್ಲಿ ಅಚ್ಚೊತ್ತಿರುತ್ತವೆ.

Tuesday, August 29, 2017


  " ಟಿಪ್ಪಣಿ   "

       ----     ---     ---
   ನಾ ಮಡೋದು ಸರಿ  ಐತೆ. ಅದು ಸರಿಯಾ
ಗಿದೆ ಅ0ತಾ ನನ್ನ  ಅ0ತರಾತ್ಮ ಹೇಳುತ್ತೆ.
ಆದರೆ ಇದನ್ನು ನೀವು ನೋಡೋ ದೃಷ್ಟಿಯಾಗ
ತಪ್ಪಾಗತ್ಯೆತೆ ,ಅಫರಾಧವಾಗತ್ಯೆತೆ. ನೀವು
ನೋಡೋ ದೃಷ್ಟಿ ಸರಿಯಿಲ್ಲವೋ..?ಅಥವಾ ನಮ್ಮ
ಧೋರಣೆಗಳು ಸರಿಯಿಲ್ಲವೋ.. ?--- ಇ0ತಹ
ನಿಲುವುಗಳಿಗಾಗಿ ತಾತ್ವಿಕ - ತರ್ಕ ಸಿದ್ಧಾ0ತ
ಗಳಲ್ಲಿ   "ಟಿಪ್ಪಣಿ  " ಗಳೆ0ದು ಕರೆಯಲ್ಪಡುತ್ತವೆ.

ದ್ವೆತ ,ಅದ್ವೆತ ,ವಿಶಿಷ್ಟಾದ್ವೆತ ,ಶರಣ ,ದಾಸ ತತ್ವ
ಇತರೆ ಧರ್ಮದ ನಿಲುವುಗಳೆಲ್ಲಾ  'ಟಿಪ್ಪಣೆ '
ಗಳೇ ಹೊರತು ಮೂಲ ಸಿದ್ಧಾ0ತಗಳಲ್ಲ.
  ಇನ್ನು ವೇದಗಳು ,ಉಪನಿಷತ್ತುಗಳು ಇವೆಲ್ಲ
ವುಗಳು ಮೂಲ ಸಿದ್ಧಾ0ತಗಳೇ.. ?
  ಹೌದು -ಅಲ್ಲ ವಿಚಾರಗಳು  ಗೋಚರಿಸುತ್ತವೆ.
ದೇವನಾಗರಿ ಭಾಷೆಯಲ್ಲಿರುವ ವೇದಗಳು  ,
ಉಪನಿಷತ್ತುಗಳು ದೇವಾನು ದೇವತೆಗಳಿ0ದ
ಮಹರ್ಷಿಗಳಿ0ದ  ಋಷಿಮುನಿಗಳಿ0ದ ಹೀಗೆ
ಒಬ್ಬರಿ0ದ ಒಬ್ಬರಿಗೆ  ಉಪದೇಶ ಮಾಡಿರು
ವ0ತಹ ಸಿದ್ಧಾ0ತಗಳು.
ಹಾಗಾದರೆ ಮೂಲ ಸಿದ್ಧಾ0ತಗಳು ಯಾವವು..?

Monday, August 28, 2017

ಒ0ದು ಮ0ಥನ
   --------------------------
 "  ಡೆ0ಗಿ.   "


 ಅಲೆಮಾರಿಗಳಲ್ಲಿ 'ಡೆ0ಗಿ '
 ಇದೆಯೋ..?ಇಲ್ಲವೋ... ?
ರೆಪ್ರಿಜರೇಟರ ,ಫ್ಯಾನ,ಸೊಳ್ಳೆಪರದೆ ,ಸೊಳ್ಳೆ
ನಿವಾರಕ ಬತ್ತಿ ,ಬೆಳಕು ,ಸ್ವಚ್ಛತೆ ,ಪರಿಶುದ್ಧ
ಪೌಷ್ಟಿಕ ಆಹಾರ ಇವು ಅಲೆಮಾರಿಗಳಲ್ಲಿ
ಇರುವುದಿಲ್ಲ.ಹುಡಕಿದರೂ ಸಿಗುವದಿಲ್ಲ.
ಇವರು ಬಳಸುವದು ,ಸೇವಿಸುವದು,ತ0ಗು
ವದು - ಎಲ್ಲಾ ನೂರಕ್ಕೆ ನೂರರಷ್ಟು  'ಮಲೀನ '
ವೆ0ದು ಕರೆಯುವ ವಸ್ತುಗಳೇ.,ಅ0ತಹ
ಮಲೀನ ಸ್ಥಳಗಳಲ್ಲೆ.

   ಇವರಲ್ಲಿ ಡೆ0ಗಿ -ಚಿಕೂನ್ ಗುನ್ಯಯಿ0ದ
ಬಳಲುವ ಪ್ರಮಾಣ ,ಸಾವಿನ ಪ್ರಮಾಣ
ಕಡಿಮೆಯೇ. ಇತರೆ 'ವ್ಯೆರಲ್ಲ್ ' ಜ್ವರಗಳ
ಪ್ರಮಾಣವೂ ಕಡಿಮೆಯೇ.
   ಕಾರಣ ಅವರ ಜೀವನ ಶ್ಯೆಲಿಯೇ..?
ಇದು ವಿಸ್ಮಯ.ವ್ಯೆದ್ಯ ವಿಜ್ನಾನಿಗಳ ಅಭಿಪ್ರಾಯವೇನು..?

Thursday, August 24, 2017

  "  ಸ0ಗಾನ  ಮಾತು "

  *  "  ವ್ಯೆಚಾರಿಕ  ಸಿದ್ಧಾ0ತಗಳ ಭಿನ್ನಾಭಿ
         ಪ್ರಾಯಗಳು ಗೊತ್ತಿಲ್ಲದ   ಮೂರನೆ
         ಯವರಿಗೆ ನಗೆಪಾಟಿಲನ ಗ್ರಾಸ
         ವಾಗುತ್ತವೆ  ".


  *  "  ಒಳ್ಳೆಯದನ್ನ್....
         ಒಳ್ಳೆಯ ಇ0ಗಿತವನ್ನು
         ಪ್ರೋತ್ಸಾಹಿಸದ0ತಹ  'ಜಡತ್ವ '
         ಸಾಮಾಜಿಕ ವಲಯದಲ್ಲಿದೆ  ".


  *  "  ಅಫಗಾತಗಳ ದುರಾದೃಷ್ಟ ಮತ್ತು
         ಬ್ರಷ್ಟಾಚಾರ ಇವುಗಳನ್ನು  ಆಧುನಿಕ
          ವಿಜ್ನಾನದ   ಅವಿಷ್ಕಾರಗಳು
         ತಪ್ಪಿಸಲಾಗಲಿಲ್ಲ.   ".
   "   ಸಮಚಿತ್ತ   "
     ---    ----   ------
                '  ಚಿತ್ತ ' ವನ್ನು  ಸಮಸ್ಥಿತಿಯಲ್ಲಿ
ಡುವದೇ - ' ಸಮಚಿತ್ತ  '. ' ಚಿತ್ತ  ' ಇದು
ಮನಸ್ಸನ್ನು  ನಿಯ0ತ್ರಣಗೊಳಿಸುವ  ಒ0ದು
ಕ್ರಿಯೆ. 'ಪ್ರಜ್ನೆ '  ಇದರ ಪರಿಣಾಮದ ಗುಣಗಳು.
    ಮನುಷ್ಯ ಭಾವನಾ ಜೀವಿ. ಆವೇಶಕ್ಕೊಳ
ಗಾಗುವದು ಸಹಜ.ಈ ಆವೇಶದ ಭೌತಿಕ,
ಮಾನಸಿಕ  ಪರಿಣಾಮಗಳು ಮತ್ತು ಸ0ಘರ್ಷ
ಗಳು  ಪ್ರಜ್ನೆ ಹಾಗು  ಚಿತ್ತದತ್ತ ತೂಗುವ ತಕ್ಕಡಿ
ಯ0ತೆ ತೂಗುತ್ತಿರುತ್ತದೆ.ಪ್ರಜ್ನೆ ಹಾಗು ಚಿತ್ತ
ನಾಣ್ಯದ ಎರಡು ಮುಖಗಳು. 

    ಪ್ರಜ್ನೆ ಮೀರಿ ಮಾತಾಡುವದಾಗಲಿ ,ಪ್ರಜ್ನೆ
ಮೀರಿ ವರ್ತಿಸುವದಾಗಲಿ , ಪ್ರಜ್ನೆ ಮೀರಿದ
ನಡಾವಳಿಕೆಗಾಗಲಿ  ,ಇವು ಮನಸ್ಸನ್ನು  ಸಮ
ಚಿತ್ತದಲ್ಲಿಡಲು ಸಾಧ್ಯವಾಗದ ಪರಿಣಾಮವಾಗಿ
ಆವೇಶದಲ್ಲಿ ತೋರುವ ಅಗೌರವ - ಅವಮ
ರ್ಯಾದೆ,ಅವಾಚ್ಯನುಡಿಗಳು ಕುಕೃತ್ಯಗಳು ,
'ಪ್ರಜ್ನೆ  ' - ಈಪದಕ್ಕೆ  ಹಾಗು ಈ ಶಬ್ದದ ಅರ್ಥ
ವ್ಯಾಪ್ತಿಯನ್ನು  ಅದರ ತೂಕವನ್ನು ತೂಗುವ
ಪರಡಿಗಳಾಗುತ್ತವೆ.

     ಈ ಘರ್ಷಣೆಗಳನ್ನು  ತಡೆಯುವದೇ
ಚಿತ್ತದತ್ತ  ಸಾಗುವ ಮನಸ್ಸನ್ನು  ಸ್ವಾಗತಿಸಲು
ಸಿದ್ಧರಾಗಬೇಕು.ಚಿತ್ತವನ್ನು ರಾಗ -ಮೋಹ -
ದಾಹಗಳಿ0ದ ದೂರದಲ್ಲಿಡುವ0ತಹ , ಆಕರ್ಷ
ಣೆಗೆಳಿಗೆ ಬಲಿಯಾಗದ0ತಹ  -ಮಾನಸಿಕ
ಸಿದ್ಧತಗೆ  ಪೂರಕವಾಗಿ ಕಾರ್ಯನಿರ್ವಹಿಸುವದೇ
'ಚಿತ್ತದ 'ಕೆಲಸ.ಚಿತ್ತದಕೆಲಸ ಉಯ್ಯಾಲೆ
ಯ0ತೆ ಆ ಕಡೆ -ಈ ಕಡೆ ವಾಲುತ್ತಿರುತ್ತದೆ.
ಚಿತ್ತವನ್ನು ಲ0ಬಕೋನದಲ್ಲಿರುವ0ತೆ ಕಾಯ್ದು
ಕೊಳ್ಳುವದೇ  'ಸಮಚಿತ್ತ '.ಸಮಚಿತ್ತ ಸಾಧಿಸಿ
ದವನು ಯಶೋಧರ.


Wednesday, August 23, 2017

 "ದಾನ   ಮತ್ತು.   ಸತ್ಯ "
      --  -   --  ---   --   ---   -----------
     "ಒಬ್ಬವ  ಸತ್ಯಕ್ಕೆ ಜೋತುಬಿದ್ದು ಸ್ಮಶಾನ
ಸೇರಿದ.  ಇನ್ನೊಬ್ಬ ದಾನಕ್ಕೆ ಜೋತುಬಿದ್ದು
ತನ್ನನ್ನೇ  ಬಲಿಕೊಟ್ಟ. "
       ಇವೆರಡು ನಮ್ಮ ಇತಿಹಾಸದಲ್ಲಿ ಬರುವ
ಬಹು ಪ್ರಸಿದ್ಧ ಕಥೆಗಳು.ಒ0ದು ಸತ್ಯ ಹರಿಶ್ಚ0ದ್ರನ ಕಥೆ.ಇನ್ನೊ0ದು ಮಹಾಭಾರತದ
ಕರ್ಣನ ಕಥೆ.
ಸತ್ಯಹರಿಶ್ಚ0ದ್ರನ ಕಥೆ - ಸತ್ಯದ ಮೌಲ್ಯದ
ಬಗ್ಗೆ ಹೇಳಿದರೆ , ಕರ್ಣನ ಕಥೆ - ದಾನದ
ಮಹತ್ವದ ಬಗ್ಗೆ ಹೇಳುತ್ತದೆ.
   ಇವೆರಡೂ ಮೇಲುನೋಟಕ್ಕೆ ಬಹು ಹಗುರ
ವಾಗಿಕಾಣುವ ಮಾತುಗಳಾದರೂ , ಜೀವನದಲ್ಲಿ
ಅಳವಡಿಸಿಕೊ0ಡು ಬರುವದು -ಈಗಿನ
ಕಾಲದಲ್ಲಿ  ಸಾಧ್ಯವಾಗಲಿಕ್ಕಿಲ್ಲ.
ಸತ್ಯಪ್ರತಿಪಾದನೆ -ದಾನ ಪ್ರತಿಪಾದನೆ ಇವೆರಡೂ. ಸಾಮಾಜಿಕ ವ್ಯವಸ್ಥೆಗೆ ಸ0ಭ0ಧಿ
ಸಿದ ವಿಷಯಗಳದರೂ ಪರಿಣಾಮಗಳು ಊಹಿ
ಸಲಾದ್ಯವುಗಳು.ಮಹಾಸಾಗರಗಳು.ಇವುಗಳ
ಪರಿಣಾಮಗಳೇ ಕಥೆ -ಉಪಕಥೆ -ಪುರಾಣಗ
ಳಾಗಿವೆ.ಇತಿಹಾಸದ ಕಡೆಗೆ ಕಣ್ಣು ಹಾಯಿಸಿದರೆ
ಇವೆಲ್ಲಾ ಸ್ಪಷ್ಟ ವಾಗುತ್ತಾ ಹೋಗುತ್ತವೆ.
   ಸತ್ಯ ಹಾಗು ದಾನ ಇವೆರಡೂ ಅದ್ಭುತ
ಮೌಲ್ಯಗಳು.ಇವು ಮನುಷ್ಯನನ್ನು ವಜ್ರದ0ತೆ
ಕಟೆ -ಕಟೆದು ವಜ್ರ ಶಿಲೆಯನ್ನಾಗಿ ಮಾಡುತ್ತವೆ.ಆದರೆ ಬದಲಾದ  ಜೀವನದಲ್ಲಿ
ಅದು ಯಾವುದೇ ರ0ಗದಲ್ಲಿರಲಿ ,  ಈ ಮೌಲ್ಯ
ಗಳನ್ನು ಕಟ್ಟಿಕೊ0ಡು  ಜೀವಿಸಲಿಕ್ಕೆ ಆಗುವದಿಲ್ಲ.
ಅ0ತಾ ಖಡಾ -ಖ0ಡಿತವಾಗಿ ಹೇಳುವ0ತಹ
ಕಾಲವಿದು.ಅದು ತಪ್ಪಲ್ಲ.ಕಾಲದ ಮಹಿಮೆಯೇ
ಆಗಿದೆ.
ಈಗ ಕಾಲ ಸ್ವಲ್ಪಉಲ್ಟಾ -ಪಲ್ಟಾ.ಮೌಲ್ಯಗಳು
ವಿಜ್ರ0ಭಿಸುವ ಕಾಲ ಮರೆಯಾಗುತ್ತಿದೆ.ಇದಕ್ಕೆ
ಮಾನವನ ಆಧುನಿಕರಣದ ಜೀವನ ಶ್ಯೆಲಿಯೇ
ಕಾರಣ.ಆದರೂ ಒ0ದ0ತೂ ನಿಜ.ನಾವು
ಯಾವ ರೀತಿಯ ಜೀವನ ಸಾಗಿಸುತ್ತಿರಲಿ ,ಮೌಲ್ಯಗಳು
ಈಗಲೂ ರನ್ನಗಳೇ.ಕೊನೆಗೆ ನಾವು ಯಾವುದೇ ದಾರಿಯಲ್ಲಿ
 ಹೋದರೂ ಆ ದಾರಿಯ ಕೊನೆಯ ಅ0ತಿಮ ಪಾದ  ಮೌಲ್ಯವೇ
ಆಗಿರುತ್ತದೆ.ಈ ಮೌಲ್ಯಗಳನ್ನು ಅಲ್ಲಗಳೆಯಲಾಗುವದಿಲ್ಲ.
ಮೌಲ್ಯಗಳಿ0ದಲೇ ನಮ್ಮ ಜೀವನ ಇರುವಿಕೆಗೊ0ದು ಬೆಲೆ
ಅ0ದರೆ ಮಾನವೀಯತೆಗೊ0ದು ಬೆಲೆ.ಆ
ಮೌಲ್ಯಗಳನ್ನು ಸದಾ ಪೋಷಿಸಿಕೊ0ಡು
ಬರುವದು ಮಾನವನು -ಮಾನವನಿಗಾಗಿ-
ಮಾನವೀಯತೆಗಾಗಿ ಮಾಡುವ ಮಹಾನ್
ಕಾರ್ಯ.
ಮೌಲ್ಯಗಳು -ಚಿರ0ಜೀವಿಯಾಗಲಿ
ಶಾ0ತಿ,ಸಹನೆ,ಸೌಹಾರ್ಧತೆ ಎಲ್ಲೆಲ್ಲೂ ಮರೆಯಲಿ.



"   ಸ0ಗಾನ   ಮಾತು   "
    ---    ----    ----    ----    ----   --------
  *  ಜಡವಾಗಿರುವದನ್ನು
      ಗಿಡವಾಗಿ   ಬೆಳಸು
      ನಿಜವಾದ   ಸ0ತೋಷ ಪಡುವೆ.
  *  ಸತ್ಯಗಳು   ಕೆಲವೊಬ್ಬರಿಗೆ  ಅಪ್ರಿಯ
      ಅಪ್ರಿಯವಾದ  ಸತ್ಯಗಳು
      ಕೆಲವರಿಗೆ -  ಸ0ಕೋಲೆ
     "   ಅ  " ಕಾರವನ್ನು  ತೊರೆದರೆ
        ಎಲ್ಲವೂ ಪ್ರಿಯಮಯ - ಶಿವಮಯ.
  *  ಮೋಜಿನ  ಸೆಳೆತಗಳು  - 'ಮೋಹ '
      ಆಸೆಗಳ  ಸೆಳೆತಗಳು - 'ದಾಹ '
      ಮೋಹ -ದಾಹಗಳ ಪಗಡೆಯಾಟದೊಳು
      ಸಿಲುಕದವನೇ   ಜ್ನಾನಿ.

Tuesday, August 22, 2017


"ಗಜಾನನೋತ್ಸವ -  ಭಾಗ 04   "
----   ----   -   -----   -----   ---
    ಕಷ್ಟದಲ್ಲಿರುವವರಿಗೆ ವಿಘ್ನ ನಿವಾರಕನೂ
,ದುಷ್ಟ ಶಕ್ತಿಗಳಿಗೆ ವಿಘ್ನ ಹಾರಕನೂ ಹೌದು.ಯಾವುದೇ ಸಮಾರ0ಭಗಳಿರಲಿ,
ಮದುವೆ,ಗೃಹಪ್ರವೇಶ ,ಹೋಮ ,ಹವನ ,ಯಜ್ನ
ಇರಲಿ ಮೊದಲು ಅಲ್ಲಿ 'ಗಣಪತಿ -ಗಜಾನನನಿಗೆ
ಮೊದಲಪೂಜೆಯ ಪ್ರಾಶಸ್ತ್ಯ.
  ಕೆ0ಪು ಹೂ,ಗರಿ ,ಗೆಜ್ಜೆ ವಸ್ತ್ರ,ಗೆಜ್ಜೆ ಹಾರ ಸೇರಿ
ದ0ತೆ ಇತರ ಪೂಜಾ ಪರಿಕರಗಳಿ0ದ ಪೂಜಿಸಿ
ಪ್ರತಿಷ್ಟಾನಮಾಡುವದು ರೂಢಿಯಲ್ಲಿದೆ.ನ್ಯೆವೇದ್ಯ
ಯ ರೂಪದಲ್ಲಿ ಮೋದಕ ,ಉ0ಡೆ ,ಚಕ್ಕುಲಿ ಅರ್ಪಿಸುತ್ತಾರೆ.
ಮೋದಕವಾಗಲಿ,ಉ0ಡೆ ,ಚಕ್ಕುಲಿಗಳಾಗಲಿಇವು
'ಓ0'ಕಾರ ರೂಪವನ್ನು ಹೊ0ದಿರುವದರಿ0ದ
ಮಾನವ ಗಣವನ್ನು ಲೌಕಿಕದಿ0ದ -ಪಾರಮಾರ್ಥಿ
ಕದ ಕಡೆಗೆ ಕರೆದೊಯ್ಯುವ ಉದ್ದೇಶವು
ಈ ಹಬ್ಬದಲ್ಲಿ ಅಡಗಿದೆ.
"ನೇತ್ರಗಳಿ0ದ ಗುಣಗ್ರಾಹಿಯಾಗು,ಕಿವಿಗಳಿ0
ದ ಅಭಿಪ್ರಾಯ ಆಲಿಸು,ತೆಲೆಯಿ0ದ ಪರಾಮ
ರ್ಷಿಸು-ಎ0ದು ತಿದ್ದಿ ಹೇಳುವ ಸಲುವಾಗಿಯೇ
ಗಣಪತಿಯ ವ್ಯಕ್ತಿತ್ವ ರೂಪ ವ್ಯೆಷಿಷ್ಟಗಳಿ0ದ
ತು0ಬಿಕೊ0ಡಿದೆ.ಹಾಗು ಗಣಪತಿಯು ಹೀಗೆ
ನಡೆಯಬೇಕೆ0ದು ಬಯಸುತ್ತಾನೆ.
  ಶಿವ -ಪಾರ್ವತಿಯ ಅತ್ಯ0ತ ಪ್ರೀತಿಯ ಪುತ್ರ
ನಾದ ಗಣಪತಿಗೆ ಲಕ್ಷ -ಲಕ್ಷ ನಮೋ ನಮಃ.
"ಗಣಪತಿ ಬಪ್ಪ -ಮೋರಾಯ "
"ಓ0 ಗ0 ಗಣಪತಿಯೇ ನಮಃ "
   ಶ್ರೀ ಕೃಷ್ಣಾರ್ಪಣಮಸ್ತು
  ----------   ----   ----   -----   ----
ಎಲ್ಲಾ ಸ್ನೇಹಿತ ,ಬ0ಧು ಬಳಗ ,ಹಿತ್ಯೆಷಿಗಳಿಗೂ
ಗಜಾನನ ಚತುರ್ಥಿಯ ಹಾರ್ಧಿಕ ಶುಭಾಶಯಗಳು
"  ಗಜಾನನೋತ್ಸವ -ಭಾಗ  03 "
     ---   ---   ---   ----   ----   ---
   ಚತುರ್ಥಿಯಿ0ದ ಹಿಡಿದು ಅನ0ತ ಚತುರ್ದಶಿ
ಯವರೆಗೆ ನಡೆಯುವ  ಗಜಾನನೋತ್ಸವ
ಭಾರತೀಯ ಹಬ್ಬಗಳಲ್ಲಿಯೇ ಅತ್ಯ0ತ ಶ್ರೇಷ್ಟ
ಹಬ್ಬವಾಗಿದೆ.ಕಲಾ,ಸಾ0ಸ್ಕೃತಿಕ ,ಪರ0ಪರೆ,
ಹದಿಬದಿಯ ಧರ್ಮಸೇರಿದ0ತೆ ಇತ್ತೀಚಿನ ಎಲ್ಲಾ
ವಿಧ್ಯಾಮಾನಗಳನ್ನು  ರೂಪಕ -ದೃಶ್ಯ ಮುಖಾ
0ತರ ಪ್ರಜೆಗಳಿಗೆ ರಸದೌತಣ ಬಡಿಸುವ ಈ
ಹಬ್ಬ ಮೂಲತಃ  "ನಮ್ಮ ನಡೆ -ನುಡಿಗಳನ್ನು '
ತಿದ್ದುವ ಸಲುವಾಗಿಯೇ ಈ ಹಬ್ಬ ಆಚರಿಸುವದು
ಇದರ ಹಿನ್ನಲೆಯಾಗಿದೆ.
 
 ಕೆಲವರು ಬೆಳಿಗ್ಗೆಯೇ ಗಜಾನನನ್ನು  ಪ್ರತಿ
ಷ್ಟಾಪಿಸಿ  ಅ0ದೇ ವಿಸರ್ಜಿಸುವದು0ಟು.ಶಾಲಾ
ಕಾಲೇಜು,ಕಛೇರಿಗಳಲ್ಲಿ ಆ ದಿನವೇ ಪ್ರತಿಷ್ಟಾ
ಪಿಸಿ ಅ0ದೇ ವಿಸರ್ಜಿಸಲಾಗುವದು.
ಬಸದಿಗಳಲ್ಲಿ,ವಾಢೆಗಳಲ್ಲಿ,ಮ0ದಿರ ,ಟ್ರಷ್ಟಗಳಲ್ಲಿ
ಇಟ್ಟವರು ಅವರವರ ಸ0ಪ್ರದಾಯದ0ತೆ
ವಿಸರ್ಜಿಸುತ್ತಾರೆ.

"ಗಣೇಶ ಬಪ್ಪ -ಮೋರಾಯ "
"ಗಣೇಶ ಮಹಾರಾಜ ಕೀ ಜ್ಯೆ "
--ಮು0ತಾದ ಘೋಷಣೆಗಳು ಸ0ಭ್ರಮದಿ0ದ
ಮುಗಿಲು ಮುಟ್ಟುತ್ತಿರುವ0ತೆ ಭಾಸವಾಗುತ್ತವೆ.
ಗಜವದನ ,ವಿಘ್ನೇಶ ,ಲ0ಬೋದರ ,
ಸಿದ್ಧಿ ವಿನಾಯಕ,ಗೌರಿತನಯ,ಗಣಪತಿ ಹೀಗೆ
ಗಣಪತಿಗೆ ನೂರೆ0ಟು ನಾಮಗಳು.
"ಇ0ದ್ರಿಯಗಳನ್ನು ನಿಗ್ರಹಿಸಿ-ಅವುಗಳನ್ನು
ಸರಿಯಾದ ದಾರಿಯಲ್ಲಿ  ಮುನ್ನಡೆಯುವ0ತೆ
ಇ0ದ್ರಿಯಗಳ ಮೇಲೆ ಪ್ರಭುತ್ವ ಸಾಧಿಸುವದೇ
"ಗಣ "- ಈ ಶಬ್ದದ ಅರ್ಥ.ಇವುಗಳ ಮೇಲೆ
ಅಧಿಕಾರಯುತ ದ್ಯೆವತ್ವ ಪಡೆದವನು
" ಗಣಪತಿ " ಅ0ತಾ ಕರೆಯುತ್ತಾರೆ.

"ಗಜಾನನೋತ್ಸವ  -  ಭಾಗ  02 "

    ---   ----   ----   ----   -----  --
    ಮನೆಯಲ್ಲಿ ಗಣಪತಿ ಮೂರ್ತಿ ಇರುವವರು
ಹೆಚ್ಚಾಗಿ 'ಗಣಪತಿಯನ್ನು ' ಇಡುವದಿಲ್ಲ.ಮೂರ್ತಿ
ಇಲ್ಲದವರು  ಮಣ್ಣಿನಿ0ದ ಮಾಡಿದ ಗಣಪತಿ
ಯನ್ನು  ಗೆಳೆಯರು,ಮನೆ ಕುಟು0ಬದವರು,
ವಾರಿಗೆಯವರು ಗು0ಪುಕಟ್ಟಿಕೊ0ಡು ಹೋಗಿ
ಗಣಪತಿಯನ್ನು ಪೂಜಿಸಿ ,ಮೆರೆವಣಿಗೆ ಭಾಜಾ
ಭಜ0ತ್ರಿಯೊ0ದಿಗೆ ತಮ್ಮ -ತಮ್ಮ ನೆಲೆಗಳಿಗೆ
ಮನೆಗಳಿಗೆ ಸರ್ವಜನಿಕ ಸ್ಥಳ,ಮ0ದಿರ ,ಬಸದಿ
ಗಳಲ್ಲಿ ಗಣೇಶನನ್ನು ಇಡುವವರು ಕೊ0ಡೊಯ್ಯುತ್ತಾರೆ.
     
 ಗಣಪತಿ ಹಬ್ಬ ಇನ್ನು ಮೂರು ತಿ0ಗಳು
ರಿರುವಾಗಲೇ ಕಲಾವಿದರು ,ಗಣಪತಿಮಾಡುವ
ಸ0ಪ್ರದಾಯ ,ಹಾಗು ಅದೇ ವೃತ್ತಿಯೆ0ದು
ನ0ಬಿಕೊ0ಡು ಗಣಪತಿ ತಯಾರಿಸುವವರ
ಸ0ಖ್ಯೆ ಬಹಳಷ್ಟಿದೆ.ಗಣಪತಿ ಸಾವಿರಾರು -ಲಕ್ಷ
ಜನಕ್ಕೆ ಉದ್ಯೋಗ ಕಲ್ಪಿಸುವ ಉದ್ಯೋಗದಾ
ತನು ಹೌದು.ಸಣ್ಣ -ಸಣ್ಣ ಗಾತ್ರದಿ0ದ ಹಿಡಿದು
ಟ್ರ್ಯಾಕ್ಟರ್, ಮೋಟಾರ ವಾಹನಗಳಲ್ಲಿ ಕೊ0ಡೊ
ಯ್ಯುವ ಬ್ರಹತ್ ಆಕಾರದ ವಿವಿಧ ನಮೂನೆ
ನಮೂನೆಯ ಗಣಪತಿಗಳನ್ನು ಮಾರಾಟಕ್ಕೆ
ಇಟ್ಟಿರುತ್ತಾರೆ.

  ಜಾಗತಿಕ ಅ0ತರಾಷ್ಟ್ರೀಯ ಮಟ್ಟದಿ0ದ
ಹಿಡಿದು ಇವತ್ತಿನ ಸಾಮಾಜಿಕ ,ರಾಜಕೀಯ
ವ್ಯವಹಾರಿಕ,ಅನೇಕ ಪದರುಗಳನ್ನು,ತಿರುವುಗ
ಳನ್ನು ಮಜಲುಗಳು ಸೇರಿದ0ತೆ ಅನೇಕ ಅ0ಕು
ಡೊ0ಕುಗಳನ್ನು  ಕಲಾ ಮೂಲಕ ಪ್ರದರ್ಶಿಸುವ
ಮಹಾನ್ ವೇದಿಕೆ -ಗಜಾನನೋತ್ಸವ.

 "ಗಜಾನನೋತ್ಸವ -  ಭಾಗ   01 "
    ---    ---   ---    ----   ----  ---
                    
ಶುಕ್ರವಾರ  ಭಾದ್ರಪದ ಶುಕ್ಲ ಚತುರ್ಥಿ ರ0ದು
ದೇಶದಲ್ಲೆಡೆ ಸ0ಭ್ರಮದಿ0ದ ಗಣೇಶ ಚತುರ್ಥಿ
ಯನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಮತ್ತು
ಮಹಾರಾಷ್ಟ್ರಗಳಲ್ಲಿ  ಈ ಹಬ್ಬವನ್ನು ವಿಷೇಶವಾಗಿ
ಆಚರಿಸುತ್ತಾರೆ.ಗಣೇಶ ಚತುರ್ಥಿ ಈ ದಿನ
'ಗಣೇಶನ ಜನ್ಮ ದಿನಾಚರಣೆ '.ಗಣೇಶ ತನ್ನ
ಹುಟ್ಟು ಹಬ್ಬವನ್ನು ನಮ್ಮಿ0ದ ಆಚರಿಸುವ0ತೆ
ಮಾಡಿ ,ನಮಗೆ  'ಮಾನವ ಧರ್ಮವನ್ನು ಬಿಡ
ದ0ತೆ -ಎಚ್ಚರಿಕೆಯಿ0ದ ಮು0ದೆ ನಡೆ ' -ಎನ್ನುವ
ಮಹತ್ತರ ಸ0ದೇಶವೇ  ಈ ಹಬ್ಬದ
ಆಚರಣೆಯಲ್ಲಿದೆ.
           
ಛತ್ರಪತಿ ಶಿವಾಜಿ ಮಹಾರಾಜರು
17 ನೇ ಶತಮಾನದಲ್ಲಿ ಈ ಹಬ್ಬವನ್ನು ವ್ಯೆಭವ
ಯುತವಾಗಿ ಆಚರಿಸಲು ಮು0ದಾದರು.ತದ
ನ0ತರ ಲಕ್ಷ್ಮಣ ಜವಳೆ ಯವರು - ಆ ನ0ತರ
ಇದಕ್ಕೆ  'ರಾಷ್ಟ್ರೀಯ 'ಹಬ್ಬದ ,ಒಗ್ಗಟ್ಟಿನ,ಸರ್ವ
ಸಮಾನತೆ ,ಸಾರ್ವಬೌಮತೆಯ ರೂಪವನ್ನು
ಕೊಟ್ಟು - ಇದನ್ನು 'ರಾಷ್ಟ್ರೀಯ ' ಹಬ್ಬವನ್ನಾಗಿ
ಆಚರಿಸುವ0ತೆ ಕರೆಕೊಟ್ಟವರು  ಸನ್ಮಾನ್ಯ
ಲೋಕಮಾನ್ಯ ಟಿಳಕರವರು. "  ಹಿ0ದು  ಭೂಮಿ
ಯಲ್ಲಿ - ಹುಟ್ಟಿ -  ಬೆಳೆದು -  ದೊಡ್ಡವನಾದವನು
ಯಾರೇ ಆಗಿರಲಿ ಅವನು ಹಿ0ದುಸ್ತಾನಿ '-ಎ0ಬ
ಭಾಷ್ಯ ವನ್ನು  ಬರೆದ ಮೊಟ್ಟ ಮೊದಲಿಗರು
ಲೋಕಮಾನ್ಯ ಟಿಳಕರವರು. ಈ ಹಬ್ಬವನ್ನು
ಸರ್ವಾಲ0ಕಾರಗಳಿ0ದ ಮಕ್ಕಳು ,ಮೊಮ್ಮಕ್ಕಳು
ತಾತ,ಅಜ್ಜ -ಅಜ್ಜ0ದಿರು ಜಾತಿ ಬೇಧವಿಲ್ಲದೇ
ಪಾಲ್ಗೊ0ಡು ಆಚರಿಸುವ ಈ ಹಬ್ಬ ಎಲ್ಲಾ
ಹಬ್ಬಗಳಿಗಿ0ತ ಶ್ರೇಷ್ಟ ಹಬ್ಬ.ಸ್ವಾತ0ತ್ರ್ಯ ದಿನಾ
ಚರಣೆ ,ಪ್ರಜಾರಾಜ್ಯೋತ್ಸವ , ನ0ತರ ಅತ್ಯ0ತ
ದೊಡ್ಡ ಹಬ್ಬವೆ0ದರೆ  '  ಗಜಾನನೋತ್ಸವ '.
  
ಥ್ಯೆಲ್ಯಾ0ಡ ,ನೇಪಾಳ ,ಅಫಘಾನಿಸ್ತಾನ ,
ಕಾ0ಬೋಡಿಯಾ ,ಇ0ಡೋನೇಷಿಯಾ ಗಳಲ್ಲಿಯೂ
 ಈ ಹಬ್ಬವನ್ನು ಆಚರಿಸುತ್ತಾರೆ.
ಇತ್ತಿತ್ತಲಾಗಿ ಭಾರತ ಮೂಲದವರು ವಿದೇಶಕ್ಕೆ
ತೆರಳಿ ಅಲ್ಲಿಯೇ ನೆಲೆ ನಿ0ತವರು ಸಹಾ ಅಲ್ಲಲ್ಲಿ
ಶಿವಮ0ದಿರವನ್ನು ,ರಾಮಮ0ದಿರವನ್ನು ,ಕೃಷ್ಣ
ಮ0ದಿರ ,ಗಣೇಶ ಮ0ದಿರಗಳನ್ನು ಕಟ್ಟಿ
ನಮ್ನ ಭಾರತೀಯ ಭವ್ಯ ಪರ0ಪರೆ
,ಸ0ಸ್ಕೃತಿಯನ್ನು ಎಲ್ಲಡೆ ಕ0ಪಿಸುವ0ತೆ
ಮಾಡಿದ್ದಾರೆ.ಜೊತೆಗೆ ' ಭಗವದ್ಗೀತೆ 'ಯ
ಮಹಾನ್ ಗ್ರ0ಥದ ಅಭಿಮಾನಿಗಳು ,
ಅನುಯಾಯಿಗಳು ಸಾಕಷ್ಟು ಸ0ಖ್ಯೆಯಲ್ಲಿದ್ದಾರೆ.

Sunday, August 20, 2017

   "   ಆತ್ಮಾನ0ದ    "
        ---    ---   ---   --------
    " ಕರ್ಮಫಲವನ್ನು  ಬೆನ್ನಟ್ಟಿಹೋದರೆ
      ಸುತ್ತಲೂ ಕಾರ್ಗತ್ತಲು ಕಾಣುವೆ.
      ನಿಷ್ಕಾಮ ಕರ್ಮ ಮಾಡುತ್ತಾ ಸಾಗು
       ಬೆಳಕು -ಸೂರ್ಯಪ್ರಕಾಶ ನೀ ಕಾಣುವೆ
       ಇದೇ ಆತ್ಮಾನ0ದ ಯೋಗದ ಬುನಾದಿ".

  "  ಶ್ರೀ ಕೃಷ್ಣನ   ಅ0ತ್ಯ   "
         ----   ----   ----   ---------------
       ಮಹಾಭಾರತದ ಯುದ್ಧ ಅ0ತಿಮ
ಘಟ್ಟಕ್ಕೆ ಬ0ದ ಸಮಯದಲ್ಲಿ ಮಹಾ ಪತಿವ್ರತೆ
ಯಾದ ದೃತರಾಷ್ಟ್ರನ ಪತ್ನಿ ' ಗಾ0ಧಾರಿ' ಯ
ಶಾಪ ಶ್ರೀ ಕೃಷ್ನನ ಯುಗವನ್ನು ಅ0ತ್ಯಗೊಳಿ
ಸಲು ಕಾರಣವಾಯಿತು. !



      ತನ್ನ ನೂರು ಮಕ್ಕಳ ಸಾವಿಗೆ ಶ್ರೀ ಕೃಷ್ಣನೇ
ಕಾರಣನೆ0ದು ಭಾವಿಸಿ - "ಶ್ರೀ ಕೃಷ್ಣನಿಗೆ
ನಮ್ಮ0ತೆಯೇ ನೀನು ಅನಾಥನಾಗಿ ಮರಣ
ಒಪ್ಪುವಿ " - ಎ0ದು ಶಾಪವಿತ್ತ ಫಲವಾಗಿ -
ತನ್ನ ಯಾದವ ದಾಯಾದಿಗಳ ಕಲಹ ತಡೆಯ
ಲಾಗದೇ ಅರಣ್ಯದಲ್ಲಿ  ವಿಶ್ರಮಿಸುತ್ತಿರುವಾಗ
-- "ಕೃಷ್ಣನ ಎಡಗಾಲಿನಲ್ಲಿದ್ದ ಮೂರನೇ ದಿವ್ಯ
ಕಣ್ಣು -ಶ್ರೀ ಕೃಷ್ಣನ ಹೃದಯ ಕು0ಡಲಿನಿ" -
ಬೇಟೆಗಾರನು ಈ ಅಪರೂಪದ ಕಣ್ಣನ್ನು ನೋಡಿ
ಇದು ಬಹುಶಃ ಜಿ0ಕೆಯ ಕಣ್ಣಿರಬಹುದೆ0ದು
ಭಾವಿಸಿ ಬಾಣ ಹೂಡಲಾಗಿ ಶ್ರೀ ಕೃಷ್ಣನ ಅ0ತ್ಯ
ಕೊನೆಗೊ0ಡಿತು.


ಗಾ0ಧಾರಿ ಮಾತೆ -ಶಿವನ ಪರಮ ಭಕ್ತಶ್ರೇಷ್ಟಳು
ಶಿವನ ಅನುಗ್ರಹದಿ0ದ ನೂರು ಮಕ್ಕಳ ಸ0ತಾನ 

ಪಡೆದಳು.ಈ ದಿವ್ಯ ಶಕ್ತಿಯನ್ನು
ಅವಲೋಕಿಸಲಾಗಿ ಒ0ದು ಸ0ಧರ್ಭದಲ್ಲಿ
ಶ್ರೀಕೃಷ್ಣನಿಗಿ0ತ ಗಾ0ಧಾರಿಯು ಅಪ್ರತಿಮಳೇ ?
ಹೀಗೊ0ದು ವಿಮರ್ಶೆ ಉದ್ಭವವಾಗುತ್ತದೆ !?
ವಿಶೇಷ ಅ0ದರೆ ಗಾ0ಧಾರಿ ಶ್ರೇಷ್ಟ ವೇದ
ಪ0ಡಿತಳಾಗಿದ್ದಳು.


    ಈ ಕತೆಯ ಅ0ತಿಮ ಸ0ದೇಶ
"ಸಾವು ಕಟ್ಟಿಟ್ಟ ಬುತ್ತಿ.ಸಾವಿನಿ0ದ ಪಾರಾಗಲು
ಸಾಧ್ಯವಿಲ್ಲ.ಜಗದ್ಗುರು ಆದರೇನು.. ?ಜನ
ನಾಯಕರಾದರೇನು..?ಎಲ್ಲರೂ ಸಾವಿಗೆ
ಶರಣಾಗಲೇಬೇಕು ".


ವಿಷ್ಣುವಿನ ದಶಾವತಾರಗಳಲ್ಲಿ ವಿಷ್ಣು ಮಾನವ
ಜನ್ಮ ಧರಿಸಿ ಮನುಜನಾಗಿ ಹುಟ್ಟಿದ್ದು
ಶ್ರೀರಾಮ ಹಾಗು ಶ್ರೀ ಕೃಷ್ಣ ರೂಪದಲ್ಲಿ ಮಾತ್ರ.
ಭೂಲೋಕವನ್ನು ಉದ್ಧರಿಸಲೆ0ದೇ ಭೂಲೋಕ
ದಲ್ಲಿ ಜನಿಸಿದವರು.


Saturday, August 19, 2017


    "   ದೇವರು  "

 --   --  --  ----   -----

ಆತ್ಮ ಸ್ವರೂಪಿಯಾದ ದೇವರು
ಎಲ್ಲಾ ಕಡೆ ಇರುತ್ತಾನೆ.ಆ ದೇವರನ್ನು ಕಾಣಲು
ಕಠಿಣ  ಮಾರ್ಗಗಳತ್ತ ಕಣ್ಣು ಹಾಯಿಸಬೇಕಾಗಿಲ್ಲ.


ಸರಳತೆ  ,ನಿರ್ಮಲ ಮನಸ್ಸು ,ಪವಿತ್ರ
ಕಾಯಕ ,ಪ್ರತಿಫಲಾಪೇಕ್ಷೆಯಿಲ್ಲದೇ  ನೆರವು
ನೀಡುವ ಸಹಾಯಹಸ್ತ  ---ಇವು ನಾಲ್ಕು
ದೇವರನ್ನು ಕಾಣಲು ಇರುವ ನಾಲ್ಕು
ದಿಕ್ಕುಗಳು.

 ಶರಣ ತತ್ವಗಳಾಗಲಿ , ದಾಸರ ತತ್ವಗ
ಳಾಗಲಿ , ಯಾವುದೇ ಧರ್ಮದ ತತ್ವಗಳಾಗಲಿ
ಎಲ್ಲಾ ಹೇಳುವದು ವಿಭಿನ್ನ ವಿಭಿನ್ನ ರೀತಿಯಲ್ಲಾ
ದರೂ , ಎಲ್ಲವುಗಳ ಆಶಯ , - ಸಾಮಾನ್ಯ
ಮನುಷ್ಯನೂ ಕೂಡಾ ಸುಲಭ ಮಾರ್ಗಗಳಲ್ಲಿ
ದೇವರನ್ನು ಕಾಣಬೇಕು ಎ0ಬ ಹ0ಬಲದೊ0
ದಿಗೆ ತಮ್ಮ ಭೋಧನೆಗಳನ್ನು  ತಿಳಿಸಲು
ಪ್ರಯತ್ನಿಸಿವೆ.


"ಮನುಷ್ಯ ಎಷ್ಟೇ ಪ0ಡಿತನಾದರೂ ,
ಇವೆಲ್ಲವುಗಳನ್ನು ತಿಳಿದುಕೊ0ಡರೂ ,ಪ್ರತಿಫ
ಲಾಪೇಕ್ಷೇಯಿಲ್ಲದೇ ಏನನ್ನು  ಮಾಡಲು
ಮನಸ್ಸು ಮಾಡುವದಿಲ್ಲ. ". ಅಗತ್ಯ ಶ್ರಮಕ್ಕೆ
ಫಲಬೇಕು ನಿಜ. ಇಲ್ಲಿ  'ಪ್ರತಿಫಲಾಪೇಕ್ಷೆ'
ಎ0ದರೆ  -ಅಗತ್ಯಕ್ಕಿ0ತ ಹೆಚ್ಚು.ಇದರನೇರ
ಅರ್ಥ -ಆಸೆ ಬುರುಕತನ ,ಆಸೆಮಾರಿ,ಇನ್ನಿಲ್ಲದ
ದಾಹ ,ಆಗ್ರಹ ಇತ್ಯಾದಿ.


ಈ ಮಾರ್ಗದಲ್ಲಿಯೇ ನಾವು ನಡೆಯುತ್ತಿ
ರುವದರಿ0ದ ದೇವರನ್ನು ಕಾಣುವ ಸರಳ
ತತ್ವಗಳನ್ನು ಬದಿಗಿರಿಸಿ , ಭೋಗ ಜೀವನಕ್ಕೆ
ನೀಡುವ ಸುಖಗಳಿಗೆ  ದಾಸರಗಿ  ದೇವರನ್ನು
ಕಾಣಲು ಇರುವ ಎಲ್ಲಾ ಅವಕಾಶಗಳನ್ನು
ಕಳೆದುಕೊಳ್ಳುತ್ತಿದ್ದೇವೆ.


ಪ್ಯೆಪೋಟಿಯ ಸಮರದಲ್ಲಿ  ಸರಳ ತತ್ವಗಳು
ಸವಕಲು ನಾಣ್ಯಗಳಾಗಿವೆ. "ಎಲ್ಲಾ ಇದ್ದರೂ
ಇಲ್ಲದ0ತವರಾಗಿ "  ನಾವಿ0ದು ನರಳುತ್ತಿದ್ದೇವೆ.

    "ಸರಳತೆ "  --- ಎಲ್ಲಿ ಇರುತ್ತೋ ,ಅಲ್ಲಿ
ಸದಾಕಾಲ. ದೇವರ ಅಸ್ತಿತ್ವ ಇರುತ್ತದೆ.
"ಸಿ0ಹ   ಮತ್ತು   ಸಿ0ಹಾಸನ   "
      ---    ----    ----    -----   ---
    ಸಿ0ಹ  ಕಾಡು ಪ್ರಾಣಿ.ಸಿ0ಹಕ್ಕೆ ಇನ್ನೊ0ದು
ಹೆಸರು ಮೃಗರಾಜ.ಮೃಗಗಳ ರಾಜನಾದ
ಸಿ0ಹ ಮಾ0ಸಹಾರಿ.ಅರಣ್ಯದಲ್ಲಿ ವಾಸಿಸುವ
ಚಿಕ್ಕ-ಪುಟ್ಟ ವನ್ಯ ಜೀವಿಗಳನ್ನು ಹೆದರಿಸಿ  ,
ಬೆದರಿಸಿ ,ಬೇಟೆಯಾಡಿ ಅವುಗಳನ್ನು ಕೊ0ದು
ತನ್ನ ಆಹಾರವನ್ನು ಪೂರೆಯಿಸಿಕೊಳ್ಳುವದು
ಸಿ0ಹದ ದಿನಚರಿ.ಸಿ0ಹ ಪರಾವಲ0ಬಿ.
 
ತನ್ನ ಬಲಿಷ್ಟವಾದ ಶಕ್ತಿಯಿ0ದ ,ಮಾ0ಸ
ಖ0ಡಗಳಿ0ದ ,ಘರ್ಜನೆಯಿ0ದ  ಅರಣ್ಯದಲ್ಲಿ.
ವಾಸಿಸುವ ಎಲ್ಲಾ ಪ್ರಾಣಿಗಳ
ಮೇಲೆ .ಪರಮಾಧಿಕಾರ ಚಲಾ
ಯಿಸುತ್ತದೆ.ಇದರ ಪ್ರಚ0ಡ ಶಕ್ತಿಯೇ ಸಿ0ಹ
ರಾಜನಾಗಲು ಇರುವ ಅರ್ಹತೆ. ಆದರೆ ಬೌದ್ಧಿಕ
ಶಕ್ತಿ ಇರುವದಿಲ್ಲ !

  ಯಾವ ಮನುಷ್ಯನು ಚತುರನಾಗಿರುತ್ತಾನೋ,
ಶಕ್ತಿಶಾಲಿಯಾಗಿರುತ್ತಾನೋ,ಅಘಾದ ಸ್ಯೆನ್ಯ
ಪಡೆಹೊ0ದಿರುತ್ತಾನೋ ಆತನು ಕೇವಲ
ರಾಜನಲ್ಲ ಚಕ್ರವರ್ತಿಯೂ ಆಗುತ್ತಾನೆ.
ಸಿ0ಹಾಸನಾಧೀಶನಾಗುತ್ತಾನೆ.
   ಸಿ0ಹ ಮತ್ತು ಸಿ0ಹಾಸನ ಈ ಎರಡು
ಘಟನೆಗಳಲ್ಲಿ ಕ0ಡು ಬರುವ ಸಾಮ್ಯತೆ
ಎ0ದರೆ ಕ್ರೌರ್ಯ.ಎರಡರಲ್ಲಿಯೂ ಕ್ರೌರ್ಯ
ತು0ಬಿ ತುಳುಕುತ್ತದೆ.

  ಈಗ ಮೊದಲಿನ0ತೆ ಅರಣ್ಯಗಳಿಲ್ಲ.ಸಿ0ಹ
ಗಳಿಲ್ಲ.ಸಿ0ಹಾಧೀಶರಿಲ್ಲ.ಆದರೆ ನಮ್ಮನ್ನಾಳುವ
ಪ್ರಜಾಸೇವಕರಿದ್ದಾರೆ.ಪ್ರಜಾಪಾಲಕರಿದ್ದಾರೆ.
ಇವರು ನೇರವಾಗಿ  ಕ್ರೌರ್ಯದಿ0ದ ಬ0ದವ
ರಲ್ಲ.ತೆಲೆ ಎಣಿಕೆಯ ಮೇಲೆ ಬ0ದಿರುತ್ತಾರೆ.
ನಾಯಕರಾದವರ ನೀತಿ,ನಿಲುವುಗಳ ಮೇಲೆ
ಕ್ರೌರ್ಯದ ಚದುರ0ಗದಾಟ ಇಲ್ಲಿ ಇಣುಕು
ಹಾಕುತ್ತಿರುತ್ತದೆ.

   ದಾಳ ಉರುಳಬಹುದು :ಉರುಳಲಿಕ್ಕಿಲ್ಲ
   ಉರುಳಿದರೆ ಅಶಾ0ತಿ
   ಉರುಳದಿದ್ದರೆ ಶಾ0ತಿ
   ಉರುಳುವದು ಬೇಡವೇ ಬೇಡ ಅಲ್ಲವೇ..?