" ಎಳ್ಳು ಅಮವಾಸ್ಯೆ "
--- ---- ---- -----
ಉತ್ತರ ಕರ್ನಾಟಕದಲ್ಲಿ ' ಎಳ್ಳು
ಅಮವಾಸ್ಯೆ ' - ಬ0ತೆ0ದರೆ ಖುಷಿಯೋ
ಖುಷಿ. ಒಕ್ಕಲಿಗನಿಗೆ ದೊಡ್ಡ ಹಬ್ಬ. ಗೋಮಾತೆ
ಭೂದೇವಿಗೆ ಪೂಜಿಸಿ ಸತ್ಫಲ ,ಒಳ್ಳೆಯ ಬೆಳೆ
ನೀಡು ತಾಯಿ ಅ0ತಾ ಪ್ರಾರ್ಥಿಸುವ ಈ ಹಬ್ಬ
ಆಚರಿಸುವದೇ ಒ0ದು ದೊಡ್ಡ ಸ0ತೋಷ.
ಈ ಹಬ್ಬಕ್ಕೆ " ಚರಗ " ಚೆಲ್ಲುವ ಹಬ್ಬವೆ0ತಲೂ
ಕರೆಯುತ್ತಾರೆ.
ಎಳ್ಳ ಹೋಳಿಗೆ ,ಶೇ0ಗಾ ಹೋಳಿಗೆ,
ಹೋಳಿಗೆ ,ಚಪಾತಿ ,ಖಡಕ್ ರೊಟ್ಟಿ ,ತು0ಬ
ಬದ್ನಿಕಾಯಿ ,ಗುರೆಳ್ಳ ಇ0ಡಿ ,ಶೆ0ಗಾ ಚಟ್ನಿ
ಸಜ್ಜಿರೊಟ್ಟಿ ,ಗಟ್ಟಿ ಮೊಸರು ,ಕಾಯಿಪಲ್ಲೆ
ಕಾಳು,ಚಿತ್ರಾನ್ನ ,ಮೊಸರನ್ನ , ಈ ಪದಾರ್ಥಗ ಳ
ನ್ನು ನೆನೆದರೆ ಬಾಯಿಯಲ್ಲಿ ನೀರುರುತ್ತೆ.ಇನ್ನು
ಸವಿದರೆ ಎಷ್ಟು ಚೆನ್ನ.!
ಅಮವಾಸ್ಯೆಯ ಬೆಳಿಗ್ಗೆ ಎದ್ದು ಚಿಕ್ಕ
ಮಕ್ಕಳು ,ಹಿರಿಯರು ,ಮನೆಯವರೆಲ್ಲರೂ
ಅ0ದು. ಮ್ಯೆ ತು0ಬ ಎಳ್ಳು ಹಚ್ಚಿಕೊ0ಡು
ಸ್ನಾನ ಮಾಡುವದು ರೂಢಿ.ಜಿಡ್ಡುಗಟ್ಟಿದ
ಚರ್ಮಕ್ಕೆ ಹೊಸ ಚ್ಯೆತನ್ಯ ಬರಲೆ0ದು ಎಳ್ಳು
ಗಳನ್ನು ಹಚ್ಚಿಕೊ0ಡು ಸ್ನಾನ ಮಾಡುತ್ತಾರೆ.
ಮನೆಮ0ದಿ ,ಓಣಿಯ ಸ್ನೇಹಿತರು ,ಬ0ಧು
ಬಳಗ ಎಲ್ಲರನ್ನು ಚಕ್ಕಡಿಯಲ್ಲೋ ,ಟ್ರ್ಯಾಕ್ಟರ
ನಲ್ಲಿ ಕೂಡ್ರಿಸಿಕೊ0ಡು ಹೊಲಕ್ಕ ಹೋಗ್ತಾರ.
ನೇಗಿಲಿಗೆ ,ಭೂದೇವಿಗೆ ಪೂಜಿಸಿ ,ಮಾಡಿದ್ದ
ಎಲ್ಲಾ ಆಹಾರ ಪದಾರ್ಥ ಖಾದ್ಯಗಳನ್ನು
ಭೂದೇವಿಗೆ ಸಮರ್ಪಿಸಿ ,ಭೂದೇವಿಗೆ ಪ್ರಾರ್ಥಿಸಿ
ನ0ತರ ಬ0ದವರೆಲ್ಲರಿಗೂ ಹಬ್ಬದ ಊಟದ
ರಸದೌತಣ ಸವಿಯುವದೇ ಒ0ದು ಮಜಾ.
ಇ0ತಹ ಮಜಾ /ಸ0ತೋಷ /ಖುಷಿ
ಹ0ಚಿಕೊಳ್ಳುವದೇ ಒ0ದು ಮಹಾನ್
ಅವಕಾಶ.ಈಹಬ್ಬ ಬ0ಧು ಬಳಗ ಸ್ನೇಹಿತರ
ಸ್ನೇಹ ಪ್ರೀತಿ ಬ0ಧುತ್ವ ಬೆಸೆಯುವ ಬೆಸುಗೆಯ
ಹಬ್ಬವಾಗಿದೆ.
ಒಕ್ಕಲಿಗನಿಗೆ ಇದು ' ರಾಜಹಬ್ಬ '.ಈ ಹಬ್ಬ
ಒಕ್ಕಲಿಗನಿಗೆಹಾಗು ಒಕ್ಕಲುತನವನ್ನು
ಸಮೃದ್ಧಗೊಳಿಸಿ,ರಾಷ್ಟ್ರ - ನಾಡು ಸಮೃದ್ಧಿಯಾಗಿ
ಎಲ್ಲರೂ ಸ0ತೋಷದಿ0ದಿರಲೆ0ದು ಪ್ರಾರ್ಥಿಸಿ
ಈ ಹಬ್ಬವನ್ನು ಆಚರಿಸೋಣ.