Thursday, December 14, 2017

 " ಬ್ಯಾ0ಕುಗಳ  ಠೇವಣಿ -ಕ್ಷಕಿರಣ  "
    ---   ----   ----   -----   -----
          ಬ್ಯಾ0ಕಗಳ ಠೇವಣಿ ಬಗ್ಗೆ ಕೇ0ದ್ರ
ಸರ್ಕಾರ ಆತ0ಕ ಮೂಡಿಸುವ ಹೇಳಿಕೆಗಳನ್ನು
ನೀಡುತ್ತಿರುವದು ಠೇವಣಿದಾರರ ನಿದ್ದೆ ಕೆಡಿಸಿದೆ.
      ಈಗಿನ ನಿಯಮಾವಳಿಗಳ ಪ್ರಕಾರ ರಿಜರ್ವ
ಬ್ಯಾ0ಕ ಆಫ್ ಇ0ಡಿಯಾದ ಶಿಸ್ತು ಬದ್ಧ ಹಾಗು
ಕರಾರಾತ್ಮಕ  ನಿಲುವಿನಿ0ದಾಗಿ -  ಜಗತ್ತಿನಲ್ಲಿ
ಅತಿರಥ ಎನ್ನಿಸಿಕೊ0ಡಿರುವ ರಾಷ್ಟ್ರಗಳ
ಬ್ಯಾ0ಕುಗಳು ದಿವಾಳಿ ಎದ್ದರೂ  ಬಾರತದ
ಆರ್ಥಿಕ ಪರಿಸ್ಥಿತಿ ಸುಭದ್ರ ವಾಗಿತ್ತು.
    ಈಗ ಪ್ರಸ್ತುತ ಬ್ಯಾ0ಕುಗಳ  ಠೇವಣಿ
ವಿಷಯದಲ್ಲಿ ರಿಜರ್ವ ಬ್ಯಾ0ಕ ಯಾವುದೇ
ಹೇಳಿಕೆ ನೀಡಿಲ್ಲ. ಆದರೆ  ಸರಕಾರವು ಬ್ಯಾ0ಕು
ಗಳು ದಿವಾಳಿ ಅ0ಚಿಗೆ ತಲುಪಿದಾಗ ಠೇವಣಿ
ದಾರರ ಹಣವನ್ನು ಬಳಸಿಕೊಳ್ಳುವ ವಿಚಾರವನ್ನು
ಸುದ್ದಿ ಮಾಧ್ಯಮಗಳಲ್ಲಿ ತೇಲಿಬಿಟ್ಟಿದೆ. ಠೇವಣಿ
ದಾರರ  ಹಣದಲ್ಲಿ ಬ್ಯಾ0ಕುಗಳು ಬಳಸುವ
ಅಧಿಕಾರಕ್ಕೆ  'ಬೇಲ್ ಇನ್ ' ಅ0ತಾ ಕರೆಯು
ತ್ತಾರೆ. ಬೇಲ್ ಇನ್ ಗೆ ಸರಕಾರ ಮಿತಿ
ನಿಗದಿಪಡಿಸಿಲ್ಲ.
   ಬಡ ,ಮಧ್ಯಮ,ಉದ್ದಿಮೆದಾರರು ,ವ್ಯಾಪರಿ
ಗಳು ,ನಿವೃತ್ತಿದಾರರು ಹಾಗು ಇತರೆ ವರ್ಗದ
ವರು -- 'ಯಾರು ಠೇವಣಿ ಹಾಗು ಠೇವಣಿ
ಮೇಲೆ ಬರುವ ಬಡ್ಡಿ ಮೇಲೆ ಕುಟು0ಬ
ನಡೆಸುವವರು ,ಅವಲ0ಬಿತರು ಹಾಗು ಬ್ಯಾ0ಕ
ಠೇವಣಿ ಮೇಲೆ ಭರವಸೆ ಇಟ್ಟವರಿಗೆ ಇದು
ಭರ್ಜರಿ ಸುನಾಮಿ ಆಗಿದೆ.

  ಗ್ರಾಹಕರು ಬ್ಯಾ0ಕಗಳಲ್ಲಿ  ಇಟ್ಟ  ಠೇವಣಿಗೆ
ಬ್ಯಾ0ಕುಗಳು ರಿಜರ್ವ ಬ್ಯಾ0ಕ ಆಫ್  ಇ0ಡಿಯಾದ
 ಕಾನೂನಗಳ ಮೇರೆಗೆ ಸ0ಪೂರ್ಣ ಜವಾಬ್ದಾರಿ ಹೊತ್ತಿದ್ದವು.

  ಈಗ ಸರಕಾರದ  ಹೊಸ ವರಸೆಯಿ0ದಾಗಿ
ಠೇವಣಿ ಇಡುವವರು -ಇಟ್ಟವರು ಚಿ0ತಾಕ್ರಾ0ತ
ರಾಗಿದ್ದಾರೆ. 'ಬೇಲ್ ಇನ್ 'ನಲ್ಲಿ ಠೇವಣಿ ಹಣದ ಭಾಗಶಃ
ಹಣ ಕಳೆದುಕೊ0ಡರೆ ,ಬೇಲ್ ಔಟ 'ನಲ್ಲಿ
ಸರಕಾರವೇ ಹಣವನ್ನು ಮುಟ್ಟುಗೋಲು
ಹಾಕಿಕೊಳ್ಳುವ ಅಧಿಕಾರ ಪಡೆಯುವ ಅವಕಾಶ ಇದೆ.

  ಬಹುತೇಕ ಬ್ಯಾ0ಕುಗಳು ದಿವಾಳಿ ಮಟ್ಟಕ್ಕೆ
ತಲುಪಲು ಬ್ಯಾ0ಕುಗಳ ಸಾಲ ಸುಸ್ತಿದಾರರೇ
ಕಾರಣವಾಗಿರಬಹುದು. ಸರಕಾರ 'ಸುಗ್ರಿವಾಜ್ನೆ '
ತ0ದು ಸಾಲ ವಸೂಲಿ ಮಾಡಲಿ. ವಿದೇಶಗಳ
ಲ್ಲಿರುವ ಕಪ್ಪು ಹಣ ಹೊರತರಲಿ.
  ಠೇವಣಿ ವಿಚಾರದಲ್ಲಿ ಭದ್ರತೆ -ಪಾರದರ್ಶಕತೆ
ಅವಶ್ಯ. ಸರಕಾರದ 'ಡಿಜಿಟಲಿಕರಣ 'ನೀತಿಯು
ಹಳೇ ವ್ಯವಹಾರಗಳಿಗ ಹೋಲಿಸಿದಾಗ
ಸ0ಪೂರ್ಣ ವಜ್ರಾಯುಧಗಳಾಗಿಲ್ಲ.
ಕೇವಲ ವಜ್ರಲೇಪಿತ ಆಯುಧಗಳಾಗಿವೆ.

  ಈ ಧೋರಣೆ ನಾಗರಿಕರಿಗೆ ಜನಸ್ನೇಹಿ
ಯಾಗುತ್ತೋ ಇಲ್ಲವೋ  ಕಾದು ನೋಡೋಣ.
      ಕೊನೆಯದಾಗಿ ಒ0ದು ಮಾತನ್ನು ಹೇಳಲು
ಇಚ್ಛೆಪಡ್ತೀನಿ.ಅಮೇರಿಕಾ ತನ್ನ ದೇಶದ ವಾಣಿಜ್ಯ
ಬ್ಯಾ0ಕುಗಳು ದಿವಾಳಿ ಆದಾಗ ,ಬ್ಯಾ0ಕುಗಳು
ಮುಚ್ಚಲಿಲ್ಲ.ಠೇವಣಿದಾತರ ಹಣ ಮುಟ್ಟುಗೋಲು
ಹಾಕಿಕೊಳ್ಳಲಿಲ್ಲ.ಬ್ಯಾ0ಕುಗಳ ಪುನಃಶ್ಚೇತನಕ್ಕಾಗಿ
ಸರ್ಕಾರವೇ ಸಾವಿರ ಸಾವಿರ ಕೋಟಿ ಡಾಲರ ನೀಡಿ ನೆರವಾಯಿತು.

No comments: