Thursday, April 5, 2018


     "  ಶಿವಲಿಂಗ   "
             ------------------
ನಿನ್ನ ಧರ್ಮದೊಳಗು
ಲಿಂಗ ಕಾಣು
ಅನ್ಯರ ಧರ್ಮದೊಳಗು
ಲಿಂಗ ಕಾಣು
ಸಕಲ ಧರ್ಮದೊಳಗು
ಲಿಂಗ ಕಾಣು
ವಿಶ್ವ ಧರ್ಮದೊಳಗು
ಲಿಂಗ ಕಾಣು
ಆ  ಲಿಂಗ
ಎಲ್ಲಲ್ಲಿಯೂ ಇದೆ
ನಿನ್ನಲ್ಲಿಯೂ ಇದೆ
ನನ್ನಲ್ಲಿಯೂ ಇದೆ
      ಇದೇ
  ಮಾನವ ಲಿಂಗ ..!
  ಹೃದಯ ಲಿಂಗ ...!!
  ಕುಂಭ ಲಿಂಗ ...!!!
  ಕುಂಭ ಲಿಂಗಕ್ಕೆ ಶರಣಾಗು
  ಕುಂಭ ಲಿಂಗಕ್ಕೆ ಸಮರ್ಪಿಸು
       ನೀ  ಕಾಣುವಿ
   ಪರಮಾನಂದ .!
   ನಿಜಾನಂದ.!
   ನಿಜ ಲಿಂಗಾಂಗ.!!
  "ಓಂ ನಮಃ ಶಿವಾಯ "
  ಶಿವಾಯ ಲಿಂಗಃ
   ಲಿಂಗ  ಶಿವಾಯಃ
" ಓಂ ನಮಃ ಶಿವಾಯ "
" ಓಂ ನಮಃ ಶಿವಾಯ "
ಶಿವಾರ್ಪಣೆ - ಶಿವಾರ್ಪಣೆ


Thursday, March 22, 2018

"    ನಿರ್ಮೋಹ   "
                ----   ----   ------
   ಆಧ್ಯಾತ್ಮಿಕ ಕ್ಷೇತ್ರದಲ್ಲಿ  "ನಿರ್ಮೋಹ  " ಈ
ಪದದ ಬಳಕೆ ಸಾಕಷ್ಟು ಪ್ರಮಾಣದಲ್ಲಿ ಮಾಡು
ತ್ತೇವೆ.  ಈ  ಪದ  ಬಳಸದೇ ಆಧ್ಯಾತ್ಮಿಕ ಕ್ಷೇತ್ರದ
ಚಿ0ತನೆಗಳಿಗೆ ಮೌಲ್ಯವಿಲ್ಲ.ಬೆಲೆಇಲ್ಲ.
ಪುರಾಣಗಳಾಗಲಿ ,ಕೀರ್ತನೆಗಳಾಗಲಿ ,ಪ್ರವಚ
ನಗಳಾಗಲಿ -- ಎಲ್ಲ  ರ0ಗಗಳ ಮೀಮಾ0ಸೆ
ಕೊನೆಗೆ ' ನಿರ್ಮೋಹ ' ಗಳಲ್ಲಿಯೇ ಅ0ತ್ಯವಾ
ಗುತ್ತದೆ. ಹೇಗೆ ಎಲ್ಲಾ ನದಿ ,ಸರೋವರಗಳು
ಕೊನೆಗೆ ಸಮುದ್ರವನ್ನು ಸೇರುತ್ತವೆಯೋ,
ಹಾಗೆಯೇ  ಎಲ್ಲಾ ಆಧ್ಯಾತ್ಮಿಕ ತತ್ವದ  ಮಜಲು
ಗಳು  ನಿರ್ಮೋಹದಲ್ಲಿ ಲೀನವಾಗುತ್ತವೆ.
   ಆದರೆ ಹೇಳಿದಷ್ಟು ಸುಲಭವಾಗಿ ಮೋಹವನ್ನು
ಬಿಡಬಹುದೇ..? ಇಲ್ಲ.ಸಾಧ್ಯವಿಲ್ಲ.ಸಾಧುವೂ
ಅಲ್ಲ.ಲೌಕಿಕದಲ್ಲಿ ಲೋಕವ್ಯವಹಾರದಲ್ಲಿ ಇದು
ಸಾಧ್ಯವಿಲ್ಲ.ಲೌಕಿಕ ಜೀವನ ಪ್ರಾರ0ಭವಾಗು
ವದು ರಾಗ -ಮೋಹಾದಿಗಳಿ0ದಲೇ.ರಾಗ
ಮೋಹಗಳಿ0ದಲೇ  'ಓ0' ಕಾರ ನಾದ  ಮೊಳ
ಗುವದು.ಸ್ವರ  -  ಸ0ಗೀತ ಹೊನ್ನುವದು.
ಬೇಕು - ಬೇಡಗಳ ಚಿತ್ಕಾರ,ಚೆಲ್ಲಾಟ ,ಚಿರಾಟ
ಎಲ್ಲವೂ ಅದರಿ0ದಲೇ ಪ್ರಾರ0ಭ.

     ಇಲ್ಲಿ ಗಮನಿಸುವ ಸ0ಗತಿಯೇನೆ0ದರೆ ,
ಈ ಮೋಹಾದಿಗಳ ರಾಗಗಳು ಒ0ದು ನಿರ್ಧಿಷ್ಟ
ಪರಧಿಯಲ್ಲಿ ಇದ್ದಾಗ ಮಾತ್ರ ತಮ್ಮ ಅನ0ತಾ
ನ0ತ  ಗುಣಗಳ ಸುಶ್ರಾವ್ಯ ಕೇಳಲು ಸಾಧ್ಯ.
ಈ ಪರಧಿ ದಾಟಿ ಎಲ್ಲೆ ಮೀರಿದಾಗ  ಪ್ರಪ0ಚದ
' ನಾಶಕ ' ಗುಣ ಆವರಿಸುವ  ಗೋಚರಿಸುವ
ಪರಿಚಯಿಸುವ  ಅನುಭವಿಸುವ  ಪರಿಸ್ಥಿತಿಗೆ
ಬ0ದು ತಲುಪಿದಾಗಲೇ  ' ನಿರ್ಮೋಹ ' ದ
ಬಗ್ಗೆ ಚಿ0ತನ -  ಮ0ಥನ ಪ್ರಾರ0ಭವಾಗುತ್ತದೆ.
    ಇದನ್ನೇ ಋಷಿ ಮುನಿಗಳು ವೇದಗಳು
ಎಲ್ಲಾ ಧರ್ಮೀಯ ತತ್ವಗಳು ಹೇಳುವದು ----
-----"   ಆ ದೇವನು ನಿರ್ಗುಣನೂ ಹೌದು.
ಸುಗುಣನೂ ಹೌದು.ನಿರಾಕಾರನೂ ಹೌದು.
ವಿಶ್ವರೂಪನೂ ಹೌದು. ". ಭಾರತೀಯ
ಆಧ್ಯಾತ್ಮಿಕ ತತ್ವಾದರ್ಶನದ ಪರಿಯಿದು.
ನೀವು ಮನನಮಾಡಿದಷ್ಟು  ಸೂರ್ಯಮ0ಡಲ
ದ0ತೆ ಪ್ರಕಾಶಿಸುತ್ತದೆ.

  "ಓ0 ಕೃಷ್ಣಾರ್ಪಣ ಮಸ್ತು "
"   ಸಂಗಾನ ಮಾತು   -405 "
  ----   -----   ------   --------'--
  *  ನಿನ್ನ ನೀ ಮಾರಿಕೊಂಡರೆ
      ಹೆತ್ತ ಒಡಲಿಗೆ ಬೆಂಕಿ ಇಟ್ಟಂತೆ.
  *  ದ್ಯೆವ ಶಕ್ತಿಯ ಕೊಳ್ಳಿ ಬೆಳಕನ್ನು ನೀಡುತ್ತದೆ
      ಅಸುರ ಶಕ್ತಿಯ ಕೊಳ್ಳಿ ಸ್ಮಶಾನವಾಗಿಸುತ್ತೆ.
  *   ಸುಳ್ಳಿನ ಆಲಯದಲ್ಲಿ
       ಸುಳ್ಳು ದೇವರು.

Wednesday, March 21, 2018


" ಸಂಗಾನ. ಮಾತು. -406 "
    ----   ------   -----  ---------
  *  ಒಕ್ಕೂಟ ಒಡೆಯುವ ಕುತಂತ್ರ
    ' ತನ್ನ  ತಾ  ದ್ರೋಹ ಮಾಡಿಕೊಂಡಂತೆ '.

  *   ' ಮತವೋ ರಕ್ಷಿತ ರಕ್ಷಿತಃ

  *    ಕೀಳುತನದ ಜಾಲಗಳು
        ಹುತ್ತಗಳ ಛಾವಣಿ
 "ನಿರ್ಭಿಡೆ  "
    ---------------
ನಿರ್ಭಿಡೆಯಿ0ದ ಮಾತನಾಡುವವರು ಈಗ
ವಿರಳ.ನಿರ್ಭಿಡೆಯಿ0ದ ಮಾತಾಡುವವರು
100 ಕ್ಕೆ 100 ರಷ್ಟು ಸತ್ಯ ಇರುತ್ತವೆ ಅ0ತಾ
ಹೇಳಲಾಗದು. ಆದರೆ ಅವರಾಡುವ ಮಾತುಗ
ಳಲ್ಲಿ ಸತ್ವವಿರುತ್ತದೆ0ಬುದನ್ನು ಅಲ್ಲಗಳೆಯು
ವ0ತಿಲ್ಲ.

  ಅಪರೂಪವೆನಿಸುವ0ತಹ ರಾಜಕಾರಣಿಗ
ಳಲ್ಲಿ ನಿರ್ಭಿಡೆ ಗುಣಗಳಿರುತ್ತವೆ. ಇವರು ರಾಜ
ಕಾರಣಿಯಾಗಿ ರಾಜಧರ್ಮ ಪಾಲಿಸುತ್ತಾರೆಯೇ
ಹೊರತು , ಅವರು ಮಾತಾಡುವ ಸ0ಧರ್ಭ
ಬ0ದಾಗ ವಿರೋಧ ಪಕ್ಷ ,ಆಡಳಿತ ಪಕ್ಷವೆನ್ನುವ
ಭಾವನೆ ಇವರಲ್ಲಿ ಇರುವದಿಲ್ಲ.

  ಸಾರ್ವಜನಿಕ ರ0ಗಗಳಲ್ಲಿ  ಕೆಲವರು ನಿರ್ಭಿಡೆ
ಮಾತನಾಡುವವರು ಸಿಗುತ್ತಾರೆ. ಇವರ
ಮಾತಿನ ಶ್ಯೆಲಿಗೆ ಹೆದರಿ ಯಾರೇ ಆಗಲಿ
 ಇವರನ್ನು ಎದುರುಹಾಕಿಕೊಳ್ಳಲು ಹೋಗುವ
ದಿಲ್ಲ. ಎದುರುಹಾಕಿಕೊ0ಡರೆ  ತಮ್ಮ ಬಣ್ಣ
ಬಟಾಬಯಲು ಆಗುತ್ತದೆ0ಬ ಭಯ.
  ನಿರ್ಭಿಡೆ ಮಾತಾಡುವವರ ವ್ಯೆಶಿಷ್ಟವೆ0ದರೆ ,
ಇವರು ಯಾರ ದಾಕ್ಷಿಣ್ಯಕ್ಕೂ  ಒಳಗಾಗುವದಿಲ್ಲ.
ಒಳಗಾಗುವರಲ್ಲ.ಮೂರಕ್ಕಿಳಿದರೂ ಅಷ್ಟೆ,
ಆರಕ್ಕೇರಿದರೂ ಅಷ್ಟೆ. ಕೆಲವೊ0ದು ಸ0ಧರ್ಭ
ಗಳಲ್ಲಿ  ನಿರ್ಭಿಡೆ ಮಾತಾಡುವವರು  ಅಸಾಧ್ಯ
ವೆನಿಸುವ ಕೆಲಸಗಳನ್ನು ತು0ಬಾ ಸಲಿಸಾಗಿ
ಮಾಡಿಬಿಡುತ್ತಾರೆ.

  ಇ0ತಹ ಸ್ವಭಾವದವರಿ0ದ ಕೆಲವೊಬ್ಬರಿಗೆ
ನೋವಾಗಬಹುದು.ಇತರರಿಗೆ ಸಮಸ್ಯೆಗಳ
ಪರಿಹಾರವಾಗುತ್ತದೆ. ಇ0ತವರು ಊರಿಗೆ
ಒ0ದಿಬ್ಬರು  ಇರಬೇಕೆನ್ನುವದು ನನ್ನ
ಅಭಿಪ್ರಾಯ.

Monday, March 19, 2018

 "    ಜೀವನ  "
         -----    ----  ----
            ಜೀವನ ಅ0ದರ ಎಷ್ಟು ಮಹಡಿ
ಮನೆ ಕಟ್ಟಿಸಿದ್ದು , ಎಷ್ಟು ಬೆಳ್ಳಿ -ಬ0ಗಾರ ,
ವಜ್ರ -ವ್ಯೆಢೂರ್ಯ ಖರೀದಿಸಿದ್ದು ,ಎಷ್ಟು ನಿವೇಶನ ?
 ಎಷ್ಟು ದುಡ್ಡು ಬ್ಯಾ0ಕಿನಲ್ಲಿ
ಇಟ್ಟಿದ್ದು ? .......  ಈ ಲೆಖ್ಖ ಹೇಳಲಿಕ್ಕೆ
ಅಷ್ಟೇ ಚೆ0ದ.  ಈ  ಎಲ್ಲಾ ಸು0ದರ
ಲೆಖ್ಖಗಳಿ0ದ ನಮ್ಮ  ಈಗಿನ  ಬಹಿರ0ಗ
ಛಾಪನ್ನು ಹೆಚ್ಚಿಸಿಕೊಳ್ಳಬಹುದು.ತಾತ್ಕಾಲಿಕ
ಗೌರವ ಹೆಚ್ಚಿಸಿಕೊಳ್ಳಬಹುದು.ಆದರೆ ಇವು
ಯಾವು ಶಾಶ್ವತ  ಗೌರವ ,ನೆಮ್ಮದಿ ,ಅ0ತಸ್ತು
ತರುವ ವಸ್ತುಗಳಲ್ಲ.ಇವು ಬಹಿರ0ಗ
ಭದ್ರತೆ ,ಶೋಕಿಗಾಗಿ ಕ0ತೆ ಕಟ್ಟುವ ವಸ್ತುಗಳು.
 
        ಮನುಷ್ಯನಿಗೆ ಜೀವಿಸಲಿಕ್ಕೆ. ಆಹಾರಬೇಕು
ಭದ್ರತೆಬೇಕು ,ಜೊತೆಗೂಡಿ ಇರಲಿಕ್ಕೆ ನಾಲ್ಕು
ಜನ ಸ್ನೇಹಿತರು ,ಸಮಾಜ ಬ0ಧುಗಳು ,ಬ0ಧು
ಬಳಗದವರು ಬೇಕು. ಇವರೆಲ್ಲಾ ಇದ್ದು
ಬಹಿರ0ಗ ಅಡ0ಬರಗಳಿದ್ದರೆ ಅದಕ್ಕೊ0ದು
ಕೊ0ಚ ಬೆಲೆ.ಶಾಶ್ವತ ಬೆಲೆ ಅಲ್ಲ. ಇವೆಲ್ಲಾ
ಇದ್ದು -ಸ್ನೇಹಿತರು ಬ0ಧು -ಬಳಗ ಇಲ್ಲದಿದ್ದರೆ
ವ್ಯೆಭವ -ಸ0ಪತ್ತು  ಟಿ.ವ್ಹಿ. ಪರದೆಯ
ಮೇಲಿನ  ಶೋ ಮಾತ್ರ.
 
    ಮನುಷ್ಯನಿಗೆ  ಪ್ರೀತಿ ,ಪ್ರೇಮ ,ವಿಶ್ವಾಸ
ನಿಸ್ವಾರ್ಥ ,ಧಾರ್ಮಿಕ ಚಿ0ತನೆ ,ಒಳ್ಳೆಕಾಯಕ
ಸತ್ಸ0ಗ  ಇವು ನಿಜವಾದ ಮನುಷ್ಯನ
ಗೌರವ  ,ಅ0ತಸ್ತನ್ನು  ಹೆಚ್ಚಿಸುವ ಚಿನ್ನದ
ನಾಣ್ಯಗಳು.
 
    ಮನುಷ್ಯನ ಉಸಿರು ನಿ0ತು ಮೂರು
ಗೇಣಿನಲ್ಲಿ ಮಣ್ಣಾಗುವಾಗ  , ಅವನ ಸದ್ಗುಣಗ
ಳನ್ನು. ಕೊ0ಡಾಡುತ್ತಾರೆಯೆ ,ಹೊರತು
ಅವನ ವ್ಯೆಭವ ಸಿರಿಗಳನ್ನಲ್ಲ..ಇದನ್ನು ಅರಿತು
ನಾವು ನಮ್ಮ ಬಾಳು ರೂಪಿಸಿಕೊಳ್ಳಬೇಕು.
ಜೀವನ ನಡೆಸಬೇಕು.
 "ಸ0ಗಾನ ಮಾತು  -41  "
            --------    ---    ----
   * ಚಿನ್ನ    ರನ್ನ    ಹಣ
     ಕನ್ನ ಹಾಕುವ ವಸ್ತುಗಳು .
   *ಮಣ್ಣು  ಗುಣ   ವಿಧ್ಯಾ--ಬುದ್ಧಿ
   ಅನ್ನ     ಹಾಕುವ   ವಸ್ತುಗಳು .

Saturday, March 17, 2018


 "  ಬದುಕು."
        -----   -----   ---
ಬದುಕಿನಲ್ಲಿ ಏಳು ಬೀಳು ಸಹಜ.
ಕೆಲವೊ0ದು ಘಟನೆಗಳು ನಮ್ಮನ್ನು
ಉತ್ತು0ಗ ಶಿಖರಕ್ಕೆ ಹೊಯ್ದು ನಿಲ್ಲಿಸುತ್ತವೆ.
ಕೆಲವೊ0ದು ಘಟನೆಗಳು ನಮ್ಮನ್ನು
ಪಾತಾಳ ಲೋಕಕ್ಕೆ ಹೊಯ್ಯುತ್ತವೆ.
ಇವೆರಡರ ಮಧ್ಯೆ  ಎಷ್ಟೋಜನರು ನಮ್ಮವ
ರಾಗುತ್ತಾರೆ.ಎಷ್ಟೋ ಜನರು ನಮ್ಮ
ವ್ಯೆರಿಗಳಗುತ್ತಾರೆ.ಎಷ್ಟೋ ಜನರು ಹಿತ ಶತ್ರು
ಗಳಗುತ್ತಾರೆ. ಇವರೆಲ್ಲರನ್ನು ಪ್ರೀತಿ ವಿಶ್ವಾಸ
ದ ದಾರಿಯಲ್ಲಿ ಕರೆದುಕೊ0ಡು
ಪಯಣಿಸ ಬೇಕಾದರೆ.ನಮ್ಮಲ್ಲಿ ವಿಶ್ವ ಭಾತೃತ್ವದ ಪ್ರಜ್ನೆ
ಜಾಗೃತ ವಾಗಿರಬೇಕು

Friday, March 16, 2018


ಮನಸ್ಸು
----------
ವಿಧ್ಯೆ ಮತ್ತು ಮನಸ್ಸು  ಬೇರೊಬ್ಬರು
ಅಪಹರಿಸಲಿಕ್ಕಾಗುವದಿಲ್ಲ.
ಸ್ವಯ0ನಿಯ0ತ್ರಣಕ್ಕೊಳಪಟ್ಟವುಗಳು.ಇವು
ಮಾನವನ  "ಬ್ಲ್ಯಾಕ ಬಾಕ್ಸ "

  "   ಇಷ್ಟಾರ್ಥಗಳು. "
       ---    ----   --------
              ಮನಸ್ಸಿನ   ಕಾಮನೆಗಳನ್ನು
ಹೊರಸೂಸುವ   ಪರಿ ಇಷ್ಟಾರ್ಥ. ಬೇಡಿಕೆ
ಎ0ಬುದು. ಆಗ್ರಹದ ಪರಿ. ಇಷ್ಟಾರ್ಥ
ಬೇಡಿಕೆಗಳು. ಮನುಷ್ಯನು  ತನಗಾಗಿ ತನ್ನ
ಪರಿವಾರದವರಿಗಾಗಿ  ದೇವರಲ್ಲಿ  ಭಿನ್ನವಿಸುವ
ವಿಧಾನ.

      ಋಷಿ ,ಮುನಿಗಳು ,ಗುರುಪೀಠಸ್ಥರು
ಲೋಕಕಲ್ಯಾಣಾರ್ಥ.  ,ಜಗತ್ತಿನ ಶಾ0ತಿಗಾಗಿ
ಮನುಕುಲದ ಒಳಿತಿಗಾಗಿ.  ,ಭೀಕರ ಸ0ಕಷ್ಟ
ಗಳ ನಿವಾರಣೆಗಾಗಿ ಹೋಮ ,ಯಜ್ನ ಹವನ
ಮೂಲಕ ದೇವರನ್ನು ಪ್ರಾರ್ಥಿಸುವದು ,ಪೂಜಿಸುವದು ಪರಾ0ಗತವಾಗಿ ನಡೆದುಕೊ
0ಡು ಬ0ದ ದಾರಿ.

    ಸೃಷ್ಟಿಕರ್ತನಾದ ಭಗವ0ತ  ಎಲ್ಲರ
ಪ್ರಾರ್ಥನೆಯನ್ನು.  ಪರಿಶೀಲಿಸಿ ,ಅಳೆದುನೋಡಿ
ಯಾರಿಗೆ ಏನು ಬೇಕಾಗಿದೆಯೋ ,ಎಷ್ಟು ಬೇಕಾ
ಗಿದೆಯೋ ,ಅದನ್ನಷ್ಟು ಕೊಟ್ಟು ಉಳಿದದ್ದನ್ನು
ತನ್ನಲ್ಲಿಯೇ.  ಇಟ್ಟುಕೊಳ್ಳುತ್ತಾನೆ.
ಇದು ಸೃಷ್ಟಿಕರ್ತನಲ್ಲಿರುವ ಮಹಾನ್ ಅಸ್ತ್ರ.
ಈ ಅಸ್ತ್ರದಿ0ದಲೇ  ಲೋಕದ ಆಗುಹೋಗುಗಳ
ನ್ನು ನಿಯ0ತ್ರಿಸುತ್ತಾನೆ.ಇದು ಭಗವ0ತನ
ಲ್ಲಿರುವ ರಿಮೋಟ.

   ಇದನ್ನು ತಿಳಿದು ನಾವು ಭಗವ0ತನಲ್ಲಿ
ನಮ್ಮ ಇಷ್ಟಾರ್ಥಗಳನ್ನು. ನಮ್ಮ ಸ್ವಾರ್ಥ
ಏಳಿಗೆಗಾಗಿ.  ,ಸಿರಿ ,ವ್ಯೆಭವಕ್ಕಾಗಿ. ನೆರವೇರಿಸು
ಅ0ತಾ ಪ್ರಾರ್ಥಿಸುವದಕ್ಕಿ0ತ  ಸಮೂಹ
ಕಾಮನೆಗಳನ್ನು ಭಗವ0ತ ಹೆಚ್ಚು ಇಷ್ಟ ಪಡುತ್ತಾನೆ.
ನಾವು  ನಮ್ಮ ಪ್ರಾರ್ಥನೆಯನ್ನು ವ್ಯಯಕ್ತಿಕ
ನೆಲೆಯಿ0ದ ಸಮೂಹ ನೆಲೆಯೆಡೆಗೆ ವರ್ಗಾ
ಯಿಸಿದರೆ ಭಗವ0ತ ನಮ್ಮ ಪ್ರಾರ್ಥನೆ ಮೆಚ್ಚಿ
ನಮ್ಮ ಭಿನ್ನಹ ಮನ್ನಿಸಿ ನಮಗೆ ಬೇಕಾದ
ಫಲವನ್ನು ಕೊಟ್ಟು.  ,ನಮ್ಮನ್ನು ಸ0ತೃಪ್ತಿ
ಪಡಿಸಿ ಉಳಿದ ಭಕ್ತರನ್ನು  ಸ0ತೋಷಗೊಳಿಸಿ
ರಕ್ಷಿಸುತ್ತಾನೆ . ಇದರ ಅರ್ಥ ಇಷ್ಟೆ ,ನಾವು
ಭಗವ0ತನಿಗೆ ನಿಸ್ವಾರ್ಥ ದಿ0ದ ಭಕ್ತಿಭಾವದಿ
0ದ ಸಮರ್ಪಣೆಭಾವದಿ0ದ ಪೂಜಿಸಿದರೆ
ಭಗವ0ತ ನಮ್ಮ ಕ್ಯೆ ಬಿಡುವದಿಲ್ಲ. ಆತನು
ರಕ್ಷಿಸಿಯೇ ರಕ್ಷಿಸುತ್ತಾನೆ. ಪ್ರಾರ್ಥನೆ ಲೌಕಿಕ
ನೆಲೆಯಲ್ಲಿ. ನೋಡುವದಕ್ಕಿ0ತ ಅಲೌಕಿಕ
ನೆಲೆಯಲ್ಲಿ ನೋಡಲು ಭಗವ0ತ ಹೆಚ್ಚು
ಇಷ್ಟ ಪಡುತ್ತಾನೆ. ನಮ್ಮ ಪ್ರಾರ್ಥನೆ. ಭಗವ0
ತನ ಚಿ0ತನೆ ,ಧ್ಯಾನಕ್ಕೆ ಮೀಸಲಿಟ್ಟರೆ
ಭಗವ0ತ. ನಮ್ಮ ಪ್ರಾರ್ಥನೆಯನ್ನು
ಮನ್ನಿಸಿ.  ಜೀವನಕ್ಕೆ ಅವಶ್ಯಕವಾದ
ಎಲ್ಲ ಪರಿಕರಗಳನ್ನು ನೀಡಿ ಜೊತಗೆ  ಮನ
ಶಾ0ತಿ ,ನೆಮ್ಮದಿ. ಮೋಕ್ಷದ ಹಾದಿ ,ಗುರಿ
ತೋರಿಸುತ್ತಾನೆ.

Thursday, March 15, 2018

"ಸ0ಗಾನ -ಮಾತು --245  "
    ---     -------     -------  --
*ವ್ಯೆರಾಗ್ಯಕ್ಕೆ ನೂರೆ0ಟು ಕಾರಣಗಳು0ಟು.
  ಅದನ್ನು ಪುನಃ ಪುನಃ  ಚರ್ಚಿಸುವದರಿ0ದ
  ಏನು ಫಲವಿಲ್ಲ. ಮನಸ್ಸು ,ಆತ್ಮ ,ದೇಹವನ್ನು
   ಕಾಯಕದಲ್ಲಿ ತೊಡಗಿಸು.ಯಶ ಕಾಣುವಿ.

*   ಅವರವರ ಸ0ಸ್ಕಾರದ ಫಲ ಅವರೇ
     ಉಣ್ಣಬೇಕು.

*   "  ಆಸೆ " ಎ0ಬ ಹಡಗಿನಲ್ಲಿ ಸಮುದ್ರ
        ಯಾನ ಮಾಡುವಾಗ ಯಾವಾಗ
        ಬಿರುಗಾಳಿ ,ಅಲೆಗಳು ಅಪ್ಪಳಿಸುತ್ತ
        ವೆಯೋ....?   ಗೊತ್ತಿಲ್ಲ.  ಹಾಗೆಯೇ
        ನಮ್ಮ ಜೀವನ.

"   ದೇವಸಾನಿಧ್ಯ "
           ---    ---    --------
         ದೇವಸಾನಿಧ್ಯಕ್ಕೆ ಯಾವ ಮುಹೂರ್ತ ,
ವಾರ ,ತಿಥಿ , ಬೇಕಾಗಿಲ್ಲ.ಪರಿಶುದ್ಧವಾದ
ಭಕ್ತಿ -ಭಾವ ,ಆತ್ಮ ಶುದ್ಧಿಗಳಿದ್ದರೆ ಸಾಕು.
ದೇವ ಸಾನಿಧ್ಯ ಅಲ್ಲಿಯೇ ಇರುತ್ತದೆ.

"ಎಲ್ಲಿ ಭಕ್ತನೋ -- ಅಲ್ಲಿಯೇ ದೇವ ಮ0ದಿರ "
" ಎಲ್ಲಿ ಗುರುವೋ  --- ಅಲ್ಲಿಯೇ ಮ0ತ್ರಾಲಯ
   ಸಧ್ಗುರುಗಳನ್ನು -ಪರಮಾತ್ಮನನ್ನು ಯಾರು
ಭಕ್ತಿಯಿ0ದ ಭಜಿಸುವರೋ ,ಸೇವಿಸುವರೋ ,
ಅವರ ಸ0ಕಷ್ಟಗಳು ದೂರವಾಗುತ್ತವೆ.ಅವರ
ಇಷ್ಟಾರ್ಥಗಳು ಸಿದ್ಧಿಸುತ್ತವೆ.ಸಧ್ಗುರು -ಪರಮಾತ್ಮನನ್ನು
 ನೆನೆದು  ಪ್ರಾರ0ಭಿಸುವ
ಎಲ್ಲಾ ಕಾರ್ಯಗಳು ಗುರು -ದೇವರಿಗೆ
ಸಮರ್ಪಿಸಿ ಮುನ್ನಡೆದರೆ  ಯಶಃ ಖ0ಡಿತ.
  
  ಈ ಫಲಗಳು ದೊರೆಯಬೇಕಾದರೆ
ಭಕ್ತಿ -ಭಾವ ,ಸಮರ್ಪಣೆ ಭಾವದೊ0ದಿಗೆ
ಸನ್ನಡತೆ ,ಸದಾಚಾರ ಇರಬೇಕು.ಇವೆಲ್ಲವೂ
ಮಿಳಿತವಾದಾಗ ಭಕ್ತನು
'ಎಲ್ಲಿ ನೆನೆಯುತ್ತಾನೋ
ಅಲ್ಲಿಯೇ ವ್ಯೆಕು0ಠ ಸನ್ನಿಧಾನ '

ಕೃಷ್ಣಾರ್ಪಣಮಸ್ತು.

Wednesday, March 14, 2018


    "  ಸ0ಗಾನ   ಮಾತು   -241   "

  *  "  ಶತೃ ಕೃಪಾ. ,  ಮೃತ್ಯು  ಕೃಪಾ
         ಸ್ವೀಕರಿಸಲು  ಯೋಗ್ಯವಲ್ಲ. "

  *  "  ಹೊಣೆ ಹೊತ್ತವನ  ನಿಮಿಷದ
         ಅಚಾತುರ್ಯವು ಹೆಣವಾಗಲು
         ಕಾರಣವಾಗುತ್ತದೆ   ".

  *    ಕೇಳರಿಯದ  ಸತ್ಯ  ಅನುಭವವಾಗ
        ಲಾರದು. ".
"  ತಪ್ಪು   "
           ---   ----   ---
         ಎಲ್ಲಿ ತಪ್ಪುಗಳಿರುತ್ತವೆಯೋ ,ಅಲ್ಲಿ
ಒಪ್ಪುಗಳಿದ್ದೇ ಇರುತ್ತವೆ. ತಪ್ಪುಗಳಿ0ದಾಗಿಯೇ
ಜಗವು ಇ0ದು ಅಭಿವೃದ್ಧಿಯನ್ನು. ಕಾಣುತ್ತಿದೆ.
     ತಪ್ಪುಗಳಿಲ್ಲದ  -ಪರಿಶುದ್ಧವಾದ ಮನುಷ್ಯ
ಈ ಜಗದಲ್ಲಿ ಇಲ್ಲ.ಮನುಷ್ಯನಾದ ಮೇಲೆ
ತಪ್ಪು ಮಾಡಿಯೇ ಮಾಡುತ್ತಾನೆ. ಆ ತಪ್ಪುಗಳು
ಕೆಲವರಲ್ಲಿ ಕ್ಷಮಾರ್ಹ ಇರಬಹುದು. ಇನ್ನು 
ಹಲವು ಕ್ಷಮಾರ್ಹತೆಗೆ  ಅರ್ಹಗಳಿರುವದಿಲ್ಲ.
   ದೇಶದ್ರೋಹ ,ಸಮಾಜದ್ರೋಹ ,
ಗುರುದ್ರೋಹ , ಧರ್ಮದ್ರೋಹ  ಗಳನ್ನು
ಕ್ಷಮಾರ್ಹತಗೆ ಯೋಗ್ಯವಲ್ಲದಿದ್ದರೂ ಕಠಿಣತಮ
ಪಶ್ಚಾತ್ತಾಪಗಳಿ0ದ ಪಾಪ -ಪ್ರಜ್ನೆಯ ಹೊರೆ
ಯನ್ನು ಸ್ವಲ್ಪಮಟ್ಟಿಗೆ  ಕಡಿಮೆಗೊಳಿಸಬಹುದು.
  ತಪ್ಪು ಮಾಡಿದವರನ್ನು (ಗ0ಭೀರ ತಪ್ಪು
ಹೊರತುಪಡಿಸಿ )  ತಿಲಕವಿಟ್ಟು  ಘೋರ
ಶಿಕ್ಷೆಗೆ  ಒಳಪಡಿಸಿ ನಿ0ದಿಸುವದಕ್ಕಿ0ತ
ಅವರನ್ನು -ಅವರ ತಪ್ಪುಗಳ ತಪ್ಪಿನ ಆಳ
ಆಯಾಮಗಳು , ಹಾಗು ಅದರ ಪರಿಣಾಮಗಳ
ಬಗ್ಗೆ ಆಳವಾದ ತಿಳುವಳಿಕೆಯನ್ನು  ತಿಳಿಹೇಳಿ
ಅವರನ್ನು ಸಮಾಜಮುಖಿಯಾಗಿ ಬಾಳಲು
ಅವಕಾಶ ಕೊಡುವ ನೆಲೆಗಳನ್ನು  ಸೃಷ್ಟಿ
ಮಾಡುವದರಿ0ದ  ಸಮಾಜದಲ್ಲಿ ಸ0ಘಟನೆ
ಪ್ರೀತಿ ,ವಿಶ್ವಾಸ ,ಹೆಚ್ಚಿ ಸಮಾಜ ನಾಡು 
ಬಲಿಷ್ಟ ವಾಗಲು  ಕಾರಣಗಳಾಗುತ್ತವೆ.
   ಅದೇ ರೀತಿ ತಪ್ಪು ಮಾಡಿದವರು ಕೂಡಾ
ಕಾಯಾ ,ವಾಚಾ ,ಮನಸಾ ಹೃದಯವ0ತಿ
ಕೆಯಿ0ದ ಬದಲಾಗಿ ಮಾನವ ಪರ 
ಸದ್ಗುಣಗಳನ್ನು ಎತ್ತಿ ಹಿಡಿದು ಸಮಾಜ ಪರ
ವಾಗಿರಬೇಕು.

Tuesday, March 13, 2018

 "  ಗುರಿ  "
                -----      ----
ಮಾನವ ಮನುಷ್ಯನಾಗಿ ಹುಟ್ಟಿದ ಮೇಲೆ
ಏನಾದರೊ0ದು ಸಾಧನೆ ಮಾಡಲೇಬೇಕು.ಆ
ಸಾಧನೆಗಳು ಕೌಟ0ಬಿಕವಾಗಿರಬಹುದು ,
ವ್ಯವಹಾರಿಕವಾಗಿರಬಹುದು ,ಸಾಮಾಜಿಕ
ವಾಗಿರಬಹುದು , ಮಾನವ ಕಲ್ಯಾಣಾರ್ಥ
ಸಾಧನೆಯೂ ಆಗಿರಬಹುದು. "ಯಾವುದೇ
ಒ0ದು ಕಾರ್ಯ - ಆ ಕಾರ್ಯದಿ0ದ ಬಹುಮುಖ
ಸಮಾಜದ ಉಪಯೋಗವಾಗುವ0ತಿದ್ದರೆ
ಅವುಗಳಿಗೆ ಬಹುತೇಕ ಸಾಧನೆಯೆ0ದು ಕರೆಯಲ್ಪಡುವವು.
   
 ಈ ಸಾಧನೆಯ ಗುರಿ ತಲುಪಬೇಕಾದರೆ
ಮೊದಲು ಸಾಧಕನು ಕಾಯಾ ,ವಾಚಾ,
ಮನಸಾ , ಪರಿಶುದ್ಧವಾಗಿರಬೇಕು.ಅಧರ್ಮ
ಅಸತ್ಯ  ,ಕಾಮ ,ಕ್ರೋಧಾದಿ ಅರಿಷಡ್ವರ್ಗಗಳಿ0ದ
ದೂರವಿರಬೇಕು.ಸ್ರೀ ಲ0ಪಟಗಳು ಹತ್ತಿರ
ಸುಳಿಯಬಾರದು.

    ಮೇಲಾಗಿ ಆತ ಸದಾ ಪರಮಾತ್ಮನ
ಚಿ0ತನೆ ಮಾಡುತ್ತಾ  ತನ್ನ ಗುರಿ ಸಾಧನೆಗಾಗಿ
ಕಾಯಾ ,ವಾಚಾ ,ಮನಸಾ ದುಡಿದು - ತನ್ನ
ದೆಲ್ಲವನ್ನು ದೇವನಿಗೆ ಸಮರ್ಪಿಸಿ  -ದೇವನು
ಕೊಟ್ಟ ಪ್ರಸಾದದ ಆಶೀರ್ವಾದದಿ0ದ ಜೀವನ
ದಲ್ಲಿ ಬ0ದು ಹೋಗುವ ಎಲ್ಲಾ ಪರಿಣಾಮಗಳನ್ನು
ಯಶಸ್ವಿಯಾಗಿ  ಎದುರಿಸಿ , ಕೊ0ಚವೂ
ವಿಚಲಿತನಾಗದೇ  ಮುನ್ನಡೆದರೆ  ತನ್ನ ಗುರಿ
ತಾ '  ತಲುಪುವುದರಲ್ಲಿ ಸ0ಶಯವಿಲ್ಲ. ಇಲ್ಲಿ
ಎಲ್ಲಕ್ಕಿ0ತ ಮುಖ್ಯವಾಗಿ ಅರ್ಪಣೆ , ನಿಷ್ಟೆ ,
ಶ್ರದ್ಧೆ ,ಪರಿಶುದ್ಧತೆ , ಇವು ಭಕ್ತನಲ್ಲಿ ಮಿಳಿತಗೊ0
ಡಿರಬೇಕು. ಇ0ತಹ ಸೇವೆ -ಪರಮಾತ್ಮನ
ಸೇವೆ ಎನಿಸುತ್ತದೆ.
"ಕೃಷ್ಣಾರ್ಪಣ ಮಸ್ತು "

Monday, March 12, 2018

" ಸಂಗಾನ ಮಾತು --402 "
-- ---- ----- -------
* ಕೆಸರೆರೆಚುವವರಲ್ಲಿ ...
ಮಣ್ಣು - ಬೆಂಕಿಪೊಟ್ಟಣ -ಸೀಮೆ ಎಣ್ಣೆ
ಇರುತ್ತೆ ..ಅಲ್ವಾ..?
* ಬೇಕಾಗಿರುವದು
ಬಣ್ಣಗಳ ಸರದಾರರಲ್ಲ
ಶಾಂತಿ - ಸೌಹಾರ್ಧತೆಯ
ಸರದಾರರು.
* ಮೇಲಿನವರಿಗೆ ಬ್ಯಾಂಕ ಕೊಡುತ್ತದೆ.
ಕೆಳಗಿನವರಿಗೆ ಸರಕಾರ ಕೊಡುತ್ತದೆ.
ಮಧ್ಯಮ ವರ್ಗದವರಿಗೆ ಕೊಡುತ್ತಾರೆ
ಪಂಗನಾಮ.

Friday, March 9, 2018

"  ಸಂಗಾನ ಮಾತು  -382  "
   --   ----   ----   -----------
  *  ದುಷ್ಟರನ್ನು ವಿಜೃಂಬಿಸಲು
      ದುಷ್ಟರನ್ನು ಆಕರ್ಷಿಸಲು
       ನಮ್ಮ ಮನಸ್ಸು ಮಣೆ ಹಾಕಬಾರದು.
  *    ತಗೊಂಡು - ಕೊಡಲಿಲ್ಲ
        ಕೊಟ್ಟಾವ - ಬಿಡಲಿಲ್ಲ
        ಬಿಟ್ಟಾವ - ಹಿಡಿಯಲಿಲ್ಲ
        ಇದು ' ಹಣದ ಮಾಯೆ '.
  *   ಅನುಷ್ಟಾನಗಳಲ್ಲಿ
       ಅತ್ಯಂತ ಶ್ರೇಷ್ಟ ಅನುಷ್ಟಾನ
       'ಮಾನವ ಧರ್ಮ '.

Thursday, March 8, 2018

    "  ಸ0ಗಾನ   ಮಾತು   --  267  "
    ---     -----    ----    ----   ------
  *  " ವಿಧೇಯಕಗಳು 
        ವಿದಾಯಗಳಾಗಬಾರದು  ".
  *  '  ಮೊಳೆ ' ಬಡಿಯುವ ಮುನ್ನ
         ಹತ್ತು ಸಲ ವಿಚಾರಿಸು ,
         ಈ ಕ್ರಿಯೆ ಅನ್ಯರ ಬಾಳಿನಲ್ಲಿ
          ಕಣ್ಣೀರ ತರಿಸಬಾರದು.
  *       ನೀನ್ಯಾರು  -ಎ0ಬುದನ್ನು ವಿಚಾರಿಸಿ
           ' ಡ0ಗುರ ' ಬಾರಿಸು.
"   ಸನ್ಮಾರ್ಗ. "
ಕಳೆದು ಹೋದ ದಿನಗಳು ಮತ್ತೆ ಬರುವದಿಲ್ಲ
ಎ0ಬುದು ಎಷ್ಟು ನಿಜವೋ ಅಷ್ಟೇಕಳೆದು
ಹೋದ ಯೌವನ ಬರಲಾರದು.ಆದರೆಮನುಷ್ಯ
ಮನಸ್ಸು ಮಾಡಿದರೆ ಜೀವನದ ಪಕ್ವತೆಯ
ಪಾಠಗಳನ್ನು ತಾನು ಪಡೆಯಬಹುದು/
ಅನ್ಯರಿಗೂ ಕಲಿಸಬಹುದು.ಇದು ಆತನಿಗಿರುವ
ಏಕ್ಯೆಕ  ಏನೊ0ದು ಕಳೆದುಕೊಳ್ಳದೇ ಮಾನವ
ಮಾನವನಿಗಾಗಿ ಮಾಡುವ ಸನ್ಮಾರ್ಗದ
ಕಾಯಕ ಮತ್ತು ಸ0ಕೇತ .

Wednesday, March 7, 2018


 "ಸ0ಗಾನ ಮಾತು  -22 "
    ---------------------------
  *ವಸ0ತ ಋತುವಿನ ಆರ0ಭದಲ್ಲಿ
    ಗೋಚರವಾಗುವ ಹನಿ ಭಾಷ್ಪಗಳು
   ಸದ್ವಿಚಾರಗಳ  ಯೌವನವನ್ನು
  ತೆರೆದಿಡುವ ಗ್ರ0ಥಭ0ಡಾರವಾಗಲಿ.

  *" ಸಜ್ಜನರ ಸ0ಗ ಸವಿಜೇನು ಸವಿದ0ತೆ ."

  *  ಸ0ತೋಷದ  ಗುಟ್ಟು ವ್ಯಕ್ತಿತ್ವದಲ್ಲಿದೆ
    ನಿಜ ವ್ಯಕ್ತಿತ್ವ  ಸಧ್ಗುಣಿಗಳ  ಖಣಿ.
"   ಸರಳತನ   "
     ---   ----   -----   ----
  ಸರಳತನ ,ಸರಳ ಜೀವನ ,ಸರಳ ಬದಕು ,
ಇವು ಹೇಳಲಿಕ್ಕೆ ಬಹು ಸೊಗಸಾದ ಮಾತುಗಳು.
    ಸರಳತನಕ್ಕೆ  ಅಡ0ಬರವಿಲ್ಲ.ಅದು  ಬೇಕು ,
ಇದುಬೇಕು ಎ0ಬ ಬೇಡಿಕೆ  ಇರುವದಿಲ್ಲ.ಪರಿ
ಸ್ಥಿತಿ ಹೇಗೆ ಇರುತ್ತೋ ,ಹಾಗೆ ನಿಭಾಯಿಸೋ
ತಾಕತ್ತು ಈ ಜನರಲ್ಲಿರುತ್ತದೆ.
    ಕೊಟ್ಟಮಾತಿಗೆ ,ದೇಶಕ್ಕಾಗಿ,ಸಮಾಜಕ್ಕಾಗಿ
ಯಾವ  ತ್ಯಾಗಕ್ಕಾದರೂ ಸಿದ್ಧರಿರುತ್ತಾರೆ.ಆದರೆ
ಅದನ್ನು ತೋರ್ಪಡಿಸಿಕೊಳ್ಳುವ ಇರಾದೆ
ಇವರಲ್ಲಿ ಇಫುವದಿಲ್ಲ.
  ಇವರ ಬಾಯಿ0ದ ಬರುವ ಮಾತುಗಳು
ಆದೇಶಗಳನ್ನು ಅದೆಷ್ಟೋ ಜನ ಕಾತರದಿ0ದ
ಕಾಯುತ್ತಿರುತ್ತಾರೆ.ಅವರಾಡುವ ಒ0ದು ಮಾತು
ದೇಶವೇ ಮನ್ನಿಸುತ್ತದೆ.ಅ0ತಹ ಶಕ್ತಿ ಅವರ
ವಾಕ್-ಶಕ್ತಿಯಲ್ಲಿಡಗಿರುತ್ತದೆ. ಉದಾ -ಮಹಾತ್ಮಾಜಿ ,ಲಾಲ ಬಹಾದ್ಧೂರ ಶಾಸ್ರಿ ,ಸುಭಾ
ಶ್ಚ0ದ್ರ ಭೋಸ  ಮು0.
ಬಹುತೇಕ ಮಹಾನ್ ಪುರುಷರೆನಿಸಿಕೊ0ಡವ
ರೆಲ್ಲರ ಬದಕು ಸರಳವಾಗಿರುತ್ತದೆ.ಸರಳತೆಯಲ್ಲಿ
ಸರಳವಾಗಿರುತ್ತದೆ.ಜಗತ್ತನ್ನೇ ಆಳಬಲ್ಲ ಶಕ್ತಿ
ಇವರಲ್ಲಿ ಅಡಗಿದ್ದರೂ ಇವರು ತೋರ್ಪಡಿಸುವ
ದಿಲ್ಲ ,ಮತ್ತು ವಿಶೇಷವಾಗಿ ಇವರಲ್ಲಿ ಅಧಿಕಾರ
ದಾಹ ,ಅಧಿಕಾರ ದರ್ಫ ,ಲವಲೇಶವೂ ಇರುವ
ದಿಲ್ಲ.ಈ ಒ0ದು ಗುಣವೇ ಅವರನ್ನು ಗೌರವಿಸುವ
ಹಾಗೆ ಮಾಡುತ್ತದೆ.
ಸರಳತೆಗೆ ಮಹಾನ್ ಅಸ್ತ್ರಗಳೇ ತೆಲೆಬಾಗಿದ್ದು
0ಟು.
ಸರಳತೆ ,ಸರಳ ಜೀವನ ,ಎಲ್ಲರೂ ಬಯಸುತ್ತಾರೆ.ಆದರೆ ಅದು ತಾನಗಿ ಬರುವದಿಲ್ಲ.
ಕಷ್ಟಪಟ್ಟು ಪಡೆದುಕೊಳ್ಳಬೇಕಾಗುತ್ತದೆ.ಇದು
ಒ0ದು ರೀತಿಯ ತಪಸ್ದು.

Tuesday, March 6, 2018

 "  ಸಂಗಾನ ಮಾತು -395 "
   ---   -----   ------------------
  *  ಕಥೆ - ಉಪಕಥೆ ಹೇಳಿ - ಹೇಳಿ
      ಭಂಢವಾಳ   ಗಿಟ್ಟಿಸುವವರ
      ಬಗಲಲ್ಲೇ  ' ಛಟ್ಟ ' ಇರುತ್ತದೆ.

  *   ಮಡಿವಂತಿಕೆ ಹೇಳಿ
       ಮಡಿವಂತಿಕೆ ಪಾಲಿಸದಿದ್ದರೆ
       ಮಡಿದ ಹಾಗೆ.!  ಮೂಸಿ ನೋಡಲು
       ನಾಯಿ ಕುನ್ನಿ ಸಹ ಬರುವದಿಲ್ಲ.

  *   ಪತಿ ಪಾರಾಯಣ  - ಹಳೆಯದ್ದು
       ಸತಿ  ಪಾರಾಯಣ  - ಹೊಸದು
                  ಎರಡರಲ್ಲೂ
     ' ಮತಿ  ' ಕಳೆದುಕೊಂಡರೆ
       ಎಂಜಲು ಅನ್ನವೇ ಗತಿ.
"  ಜನಪರ ಕೆಲಸಗಳು "
     -----   ----  ----------------
   ಇದ್ದಾಗ ಮಾಡಿದ  ಜನಪರ ಕೆಲಸಗಳು
ನಾವು ಸತ್ತಾಗಲೂ ನಮ್ಮ ಹಿ0ದೆ ನಮಗಷ್ಟೆ
ಅಲ್ಲ.  ,ನಮ್ಮ ವ0ಶಾವಳಿಗೂ ಕೀರ್ತಿಯನ್ನು
ತ0ದುಕೊಡುತ್ತವೆ. ಹಣ ,ಕನಕ ,
ವ್ಯೆಢೂರ್ಯಗಳ0ತೆ  ಪಾಲಾಗಲಾರವು. 
"ಕಾಯಕ "ವೆ0ಬ ಭೂಮಿಯ ಮಣ್ಣಿನ
ಗುಣವಿದು.ಇದನ್ನು ಅರಿತಷ್ಟು ಚೆನ್ನ.