Sunday, October 18, 2015

     ಒ0ದು ಚಿ0ತನೆ

ಶಾಸಕರಾಗಲಿ ,ಸ0ಸದರಾಗಲಿ
ವೇತನ ಪರಿಷ್ಕರಣೆ ಮಾಡಿ ಅ0ತಾ
ಸರಕಾರದ ಮು0ದೆ ಧರಣಿ ಮಾಡುವದಾಗಲಿ,
ಯಾವುದೇ ಮಸೂದೆಗಳನ್ನು ಮ0ಡನೆ 
ಮಾಡದೇ ವಾಪಸ್ಸು ಕಳಿಸುವದಾಗಲಿ
ಮಾಡಿಲ್ಲ. ಇದ್ಯಾವುದೂ ಇರದೇ ಇದ್ದರೂ
ಅವರೇನು  ರೈತರಂತೆ   ಸಾಲ ಸೋಲ
ಮಾಡಿ ಆತ್ಮಹತ್ಯೆ ಮಾಡಿಕೊ0ಡ
ಪ್ರಕರಣಗಳು ವರದಿಯಾಗಿಲ್ಲ.ದೇಶದಲ್ಲಿಯೂ
ಇಲ್ಲ.ಅ0ತರಾಷ್ಟ್ರೀಯ ಮಟ್ಟದಲ್ಲಿಯೂ ಇಲ್ಲ.
ಇಷ್ಟೊ0ದು ನಕಾರಾತ್ಮಕ ಅ0ಶಗಳಿರುವಾಗ
ಸರಕಾರಸ0ಸದರ/ಶಾಸಕರ ವೇತನ ಪರಿ
ಷ್ಕರಣೆ ಮಾಡುವ ಅಗತ್ಯ ವಾದರು ಏನಿದೆ..?
ರೈತರ ಸಮಸ್ಯೆ ತೀರಿಲ್ಲ ,ಗಡಿಸಮಸ್ಯೆ ,
ನದಿನೀರಿನ ಸಮಸ್ಯೆ ,ಭಾಷಾ ಸಮಸ್ಯೆ ತೀರಿಲ್ಲ.
      
ಹಿರಿಯ ಸ0ಸದರು ತಮ್ಮ ಮಕ್ಕಳು
ಶಾಸಕರಾಗಿ ಶಾಸಕಾ0ಗ ಪ್ರವೇಶಿಸುವವರೆಗೆ
ಖಾಯ0ಆಗಿ ಅಲ್ಲೇ ಬೀಡು ಬಿಟ್ಟರೂ
ಮಾಡಿದ್ದಾದರೂ ಏನು ?
ಆರ್ಥಿಕ ಚಿ0ತನೆಗಳು ಹೇಳಿದ್ದೇನು ?
ಮಾಡಿದ್ದೇನು  ?ಈಗ ಅನುಭವಿಸುವದೇನು.?
     ಎಲ್ಲಾರ0ಗಗಳಲ್ಲಿ ವಿಫಲತೆ ಇರುವಾಗ
ಯಾಕೆ ಇಷ್ಟೊ0ದು ವೇತನ ಅರ್ಥ ಆಗ್ತಾ ಇಲ್ಲ.
   ಸ್ವಾತ0ತ್ರದ ಆಜುಬಾಜು ಹಾಗು
ನ0ತರದ ಒ0ದೆರೆಡು ದಶಕದ ಶಾಸಕರ /
ಸ0ಸದರ ಗಾ0ಭಿರ್ಯ, ನಡೆ-ನುಡಿ,ನ್ಯೆತಿಕತೆ
ಪ್ರಾಮಾಣಿಕತೆ ,ದೇಶಭಕ್ತಿ ,-ಸೇವೆ ಬಗ್ಗೆ
ಅಭ್ಯಾಸ ಮಾಡಲಿ.

ನ0ತರ ತಮ್ಮ ಆತ್ಮಾನುಗುಣವಾಗಿ
ತಾವು ಮಾಡುತ್ತಿರುವುದೇ ಸರಿಯೆ0ದು ಅನಿಸಿದರೆ
 ಹಾಗೆ ಮಾಡಲಿ. ಆದರೆ ಇದು
ಸರ್ವಥಾ ತಪ್ಪು.ಪ್ರಜಾಪ್ರಭುತ್ವದ ಹೆಸರಲ್ಲಿ
ಸರ್ವಾಧಿಕಾರಿ ಧೋರಣೆ ಅನುಸರಿಸಿದ0ತಾಗುತ್ತದೆ.
ಶಾಸಕರಿಗೆ/ಸ0ಸದರಿಗೆ ವೇತನ ನಿಗದಿಪಡಿಸುವ 
ಅಧಿಕಾರ ಜನತಾ ಜನಾರ್ಧನಿಗಿರಬೇಕು. 
ಮಸೂದೆ ಮ0ಡಿಸುವ
ಅಧಿಕಾರ ಮಾತ್ರ ಪ್ರತಿನಿಧಿಗಳದು.
ಇದು ಹೀಗೆ ಇರಬೇಕೆ0ಬುದು ಪ್ರಜೆಗಳ ಆಸೆ.
ಒ0ದು ರೀತಿಯಲ್ಲಿ ಪಕ್ಕಾ ಅಧಿಕಾರ ವಿಕೇ0ದ್ರಿಕರಣದ ಮಾದರಿ.
ಇದು ಒ0ದು ಚಿ0ತನೆ ಮಾತ್ರ.

No comments: