Friday, October 23, 2015

"ವಿಜಯ ದಶಮಿ "

ದುಷ್ಟ ಶಕ್ತಿಗಳ  ಮೇಲೆ
ವಿಜಯ  ಮೊಳಗಿಸಿದ ದಿನ  ವಿಜಯದಶಮಿ.
ವಿಶ್ವದಲ್ಲಿಯ   ಗಾಢಾ0ಧಕಾರವನ್ನು
ತೊಲಗಿಸಿ , ಪ್ರಕಾಶಮಾನವಾದ ಬೆಳಕನ್ನು
ನೀಡಿ  ನಮ್ಮನ್ನು ಸಲಹು ಎ0ದು ಜಗದಾ0ಬೆ
  ಶ್ರೀ ಚೌಡೇಶ್ವರಿಯಲ್ಲಿ  ಅನನ್ಯವಾಗಿ
  ಪ್ರಾರ್ಥಿಸುವ  ಸುದಿನ  ಇದು.

ಅ0ದು ರಾವಣಾಸುರ ,ರಕ್ತಬೀಜಾ
ಸುರ  ,ಮಹಿಷಾಸುರ ,ಕೀಚಕ , ಮಧು-ಕ್ಯೆಟಭ
ರಿದ್ದರು.ಇವರು ದುಷ್ಟ ಶಕ್ತಿಗಳ ಪ್ರತೀಕ. ಆ 
ಶಕ್ತಿಗಳು  ಮನುಷ್ಯನಲ್ಲಿವ್ ಈಗಲೂ ಇವೆ.
ಸ್ಯೆತಾನ  ರೂಪದಲ್ಲಿವೆ.

ಇ0ತಹ  ಶಕ್ತಿಗಳ  ಅಟ್ಟಹಾಸವನ್ನು
ಆಡಗಿಸಲೆ0ದೇ  ದೇಶದೆಲ್ಲಡೇ ಈ ನವರಾತ್ರಿ
ಮಹೋತ್ಸವವನ್ನು ಆಚರಿಸುವ ಪದ್ಧತಿ
ರೂಢಿಯಲ್ಲಿ ಬ0ದಿದೆ.ದುಷ್ಟ ಶಕ್ತಿಗಳ ನಿರ್ನಾಮ
ಜೊತೆಗೆ  ಮನುಷ್ಯನ ನಾಗರಿಕತೆಗೆ ಪ0ಚಮ
ವೇದಗಳಾದ  ಸಾಹಿತ್ಯ ,ಕಲೆ  , ಸ0ಗೀತ , 
ವಿಜ್ನಾನ , ಸ0ಸಕೃತಿ, ಇವುಗಳ
ಪುನರ್ ಜೀವನ ,ಪುನರ್ ಸ್ಮರಣೆಯ ಉತ್ಸವ
ಇದಾಗಿದೆ. ಅದಕ್ಕೆ0ದೇ ಇವುಗಳ ಸ0ಗಮ
ಇತಿಹಾಸ ಪ್ರಸಿದ್ಧವಾದ "ಮ್ಯೆಸೂರು-ದಸರಾ"
ಉತ್ಸವ.

ಈ ಹಿನ್ನಲೆಯೊ0ದಿಗೆ ವಿಜಯ
ದಶಮಿಯ0ದು ಆಚರಿಸುವ ನಾಡಹಬ್ಬ
"ದಸರಾ" ದ ಪ್ರಯುಕ್ತ ಸಮಸ್ತ ಕರುನಾಡ
ಕನ್ನಡ ಕುಲ ಕೋಟಿಗೆ ಹಾರ್ಧಿಕ ಶುಭಾಶಯ
ಗಳು.ಕನ್ನಡಾ0ಬೆಯ ಕನ್ನಡ ಹಿರಿಮೆ ,ಗರಿಮೆ,
ಸಿರಿಯನ್ನು ಪಸರಿಸುವ  ಶಕ್ತಿಯನ್ನು
ನಮ್ಮೆಲ್ಲರಿಗೂ ನೀಡಲಿ.

No comments: