Friday, January 29, 2016

 "ದೇವರ  ಇರುವಿಕೆ"  

ಅದನ್ನೇ ಶರ ಣರು,ಸ0ತರು 
ನೀವಿರುವ ಭೂಮಿಯೇ ಸ್ವರ್ಗ.
ನೀವಿರುವಭೂಮಿಯೇ ಕ್ಯೆಲಾಸ 
ನೀವಿರುವ ಭೂಮಿಯೇ ಸತ್ಯಲೋಕ.
ಕಾಯಕವೇ ಕ್ಯೆಲಾಸ.
ನೀವು ಮಾಡುವ ಎಲ್ಲಾ ಕಾರ್ಯಗಳು ಆದೇವನಿಗೆ ಅರ್ಪಿತವಾಗಲಿ.
ಆದೇವರು ಬೇರೆ ಎಲ್ಲೂ ಇಲ್ಲ.
ನಿಮ್ಮ ಬಳಿಯೇ ಇದ್ದಾನೆ. ನಿಮ್ಮ ಸುತ್ತು ಮುತ್ತಲಲ್ಲಿದ್ದಾ.ನೆ.
ನಿಮ್ಮ ಅ0ತರಾತ್ಮಾದ ಒಳಗಣ್ಣು ತೆರೆಯಿರಿ.ಬಡವರಲ್ಲಿ 
ಶೋಷಿತರಲ್ಲಿ ನಿರ್ಗತಿಕರಲ್ಲಿ ಯಾರಿಗೆ ನಿಮ್ಮ ಸಹಾಯ 
ಬೇಕಿರುತ್ತೋ ಯಾರಿಗೆ ನಿಮ್ಮ ಆಹಾರ  ಅವರ ಹೊಟ್ಟೆ
 ತು0ಬಿ ಸ0ತೋಷಪಡುತ್ತಾರೋ ಯಾರು ನಿಮ್ಮ
 ಉಪಕಾರವನ್ನು ನೆನೆಯುತ್ತಾರೋ ಅವರಿಗೆ ಈ
 ಎಲ್ಲವನ್ನು ಸಮರ್ಪಿಸು. ನಿಜವಾದ ದೇವರು 
ಇರುವದು ನೀವುಮಾಡುವ ಇ0ತಹ ಪುಣ್ಯ 
ಕಾರ್ಯಗಳಲ್ಲಿ.ಇ0ತಹ ಜನಸೇವೆಯಲ್ಲಿ.
ಯಾರಿಗೆ ಶೂಶ್ರಣ ಅವಷ್ಯವಿದೆಯೋ ಮಾಡಿ.
ದೇವರು ಎಲ್ಲರಲ್ಲಿದ್ದಾನೆ ಎಲ್ಲೆಲ್ಲಿಯೂ ಇದ್ದಾನೆ
 ನಾವು ಗುರುತಿಸಿ   ನಮ್ಮ ಮೋಕ್ಷ ಚಿ0ತನೆ ಮಾಡಬೇಕು.


   "ಸ0ಗಾನ  ಮಾತು ".
  
*  " ಸ0ಧರ್ಭಾನುಸಾರ ಜೀವನದಲ್ಲಿ
     ಗುಣಕ್ಕಿರುವ  ಪ್ರಾದನ್ಯತೆ  
     ಹಣಕ್ಕೂ  ಉ0ಟು.
*  " ಸಾಲ ಮಾಡಿ  ದಿವಾಳಿಯಾದವನಲ್ಲಿ
      ವಿನೂತನ ನೆಪಗಳ
      ರಾಶಿಯೇ ಇರುತ್ತದೆ.  ".
*  "  ನೆಪಗಳಿ0ದ ಮಾನವನ್ನು 
       ರಕ್ಷಿಸಿಕೊಳ್ಳಬಹುದು  ,
       ಕಳೆದುಕೊಳ್ಳಲೂಬಹುದು. 

Thursday, January 28, 2016

  " ಅಶೋಕ  ಚಕ್ರ  ".
         
            ಅಶೋಕ  ಸ್ತ0ಭದ ಮೇಲಿರುವ
ಚಕ್ರವೇ "  ಅಶೋಕ  ಚಕ್ರ  ".
ಮೌರ್ಯ ವ0ಶದ ಗುರುತಿಗಾಗಿ  ಸಾಮ್ರಾಟ ಅಶೋಕ ಈ ಚಕ್ರ ನಿರ್ಮಿಸಿದ.
ಅಶೋಕ ಚಕ್ರದಲ್ಲಿ ಒಟ್ಟು 24 ಕಲ್ಲಿನಿ0ದ ಮಾಡಲ್ಪಟ್ಟ ಹಲ್ಲುಗಳಿವೆ.ಒ0ದೊ0ದು ಹಲ್ಲು 
ಭಾರತೀಯ ಶ್ರೇಷ್ಟ   "ಋಷಿ "ಪರ0ಪರೆಯನ್ನ ಹೇಳುತ್ತವೆ.ವಿಶಾಲ ಭಾರತದ ಹಲವಾರು
ಧರ್ಮಗಳ ಮಹಾನ್  ಸ0ಗಮ  "ಅಶೋಕಚಕ್ರ ".

ಮಾನವನ ನಡತೆ ,ರಾಜ್ಯಭಾರ ಹೇಗಿರಬೇಕೆ0ದು ಈ ಚಕ್ರದ ಹಲ್ಲುಗಳು ಹೇಳುತ್ತವೆ.
12 ಹಲ್ಲುಗಳು ಮನುಷ್ಯನ ಸ್ವಭಾವದ ಬಗ್ಗೆ ಹೇಳಿದರೆ ,ಇನ್ನು 12 ಹಲ್ಲುಗಳು ರಾಜ್ಯಭಾರದ ಸ0ಕೇತಗಳಾಗಿವೆ.
ಭಾರತ ಇತಿಹಾಸದಲ್ಲಿಯೇ  
ಪ್ರಸಿದ್ಧವಾದ  "ಗಾಯತ್ರಿ ಮ0ತ್ರ " ದ ಸರ್ವಸಾರ ಈ  ಅಶೋಕ ಚಕ್ರದಲ್ಲಿದೆ.
1947ರಲ್ಲಿ ಕಾ0ಗ್ರೆಸ್ಸ ಇದನ್ನು  ಭಾರತದ ಧ್ವಜದಲ್ಲಿ ಅಳವಡಿಸಲು ತೀರ್ಮಾನಿಸಿತು.
ಪಿ0ಗಳೆಯವರ ನೇತೃತ್ವದಲ್ಲಿ  ಭಾರತದ ಮೊದಲ ಅಧಿಕೃತ ಧ್ವಜ ನಿರ್ಮಣವಾಯಿತು.
ತ್ರಿವರ್ಣ ಧ್ವಜಕ್ಕೆ "ತಿರ0ಗಾ "ಅ0ತಲೂ ಕರೆಯುತ್ತಾರೆ.ನೀಲಿ ಬಣ್ಣವುಳ್ಳ ಅಶೋಕ ಚಕ್ರವು ಧ್ವಜದ ಮಧ್ಯೆದಲ್ಲಿರುತ್ತದೆ.
ಗಣರಾಜ್ಯೋತ್ಸವ ,ಹಾಗು ಸ್ವಾತ0ತ್ರೋತ್ಸವ ದಿನಾಚರಣೆಗಳಲ್ಲಿ ಧ್ವಜವನ್ನು ದೇಶಧ್ಯಾ0ತ ಹಾರಿಸಲಗುವದು.
ಕೃಪೆ -ಅ0ತರ್ಜಾಲ.
   " ಸ0ಗಾನ  ಮಾತು"

*  "ಬಲಾ -ಬಲ ನೋಡಿ ಶತ್ರುವನ್ನು ಕೆಣಕು. "

*  "  ನಾಗರೀಕತೆಯು  ಶಿಕ್ಷಣದಿ0ದ
       ಬರುವ0ತಹದಲ್ಲ  ".
* " ಪೂರ್ವಗ್ರಹ ಪೀಡಿತ ವಿಷಯಗಳು 
     ಹುಟ್ಟುತ್ತಲೇ  ಇರುತ್ತವೆ ಹಾಗೆಯೇ
      ಸಾಯುತ್ತಲೇ  ಇರುತ್ತವೆ  " .

Wednesday, January 27, 2016


 " ಸ0ಗಾನ  ಮಾತು    "
     

*  "  ನೆಲೆ ಸಿಗದವನು  
       ಭಲೇ   ಎನಿಸಿಕೊ0ಡಾನೆ... ?"

*  "  ದ್ವೇಶಜನ್ಯ  ವಿಷಯಗಳಿಗೆ
       ಗೆಲುವೆ0ಬುದಿಲ್ಲ.  ".

*  "   ಕ್ಯೆ ಸುಟ್ಟುಕೊ0ಡರೂ
        ಹೊಲಸು  ಮಾತಾಡಿ
        ಬಾಯಿ  ಸುಟ್ಟುಕೊಳ್ಳಬಾರದು  ".
   "ಭಗವದ್ಗೀತೆ   "      
       
                  ಭಗವದ್ಗೀತೆ  ನಮ್ಮ ಹೃದಯದ
ಎಡ -ಬಲ ಕವಾಟುಗಳಿದ್ದ0ತೆ. ದೇಹದ
ಜೀವ0ತ ನಾಡಿ ಪರೀಕ್ಷೆಯೇ ಹೃದಯದಲ್ಲಿದೆ.
ಅದೇ ರೀತಿ  ಜೀವನದ ಎಲ್ಲಾ ಆಯಾಮಗಳ
ಎಲ್ಲಾ  ಪರಿಕರಗಳು ಭಗವದ್ಗೀತೆಯಲ್ಲಿವೆ.

             ಭಗವಧ್ಗೀತೆಯಲ್ಲಿ  ಏನು ಇದೆ
ಅನ್ನುವದಕ್ಕಿ0ತ  ,ಏನು ಇಲ್ಲ..?...
ವೆ0ಬುವದೇ ಪ್ರಶ್ನಾತೀತವಾಗಿದೆ.ಮನಷ್ಯನ
ಸ0ಸಾರಿಕ ವಿಷಯಗಳಿ0ದ ಹಿಡಿದು
ರಾಜಕೀಯ ವ್ಯವಹಾರಗಳ ತನಕ
 ಎಲ್ಲಾ ಬಗೆಯ ಆಟಗಳ  ಮ್ಯೆದಾನ ಇಲ್ಲಿದೆ. ಆಟ
ಬಲ್ಲಿದ ಜಟ್ಟಿ ಗೆಲ್ಲುತ್ತಾನೆ. ಗೊತ್ತಿಲ್ಲದವ
ಮುಗ್ಗರಿಸುತ್ತಾನೆ.

      ಭಗವದ್ಗೀತೆಯ ಒ0ದೊ0ದು ಶ್ಲೋಕವು
ಅರ್ಥಗರ್ಭಿತವಾಗಿದೆ. ಇದನ್ನು ಜೀರ್ಣೀಸಿ
ಕೊಳ್ಳುವದು ಬಹಳ ತ್ರಾಸದಾಯಕ. ನೀವು
ಎಷ್ಟನ್ನು ಅಧ್ಯಯನ ಮಾಡುತ್ತೀರೋ ,ಅಷ್ಟು
ಅದರ ಆಳ ಹೆಚ್ಚುತ್ತಾ ಹೋಗುತ್ತದೆ.ಗುರುವಿನ
ಮಾರ್ಗದರ್ಶನವಿಲ್ಲದೇ  ಭಗವದ್ಗೀತೆ ಜೀರ್ಣಿಸಿ
ಕೊಳ್ಳಲಾಗದು
.
        ಸಾಮಾನ್ಯವಾಗಿ ಭಗವದ್ಗೀತೆಯ ಅನುವಾದಿತ
 ,ಟಿಪ್ಪಣಿಗಳು ಲಭ್ಯವಿವೆ. ಅದರಿ0ದ
ಈಗಿರುವ  ಜ್ನಾನದ ಮಟ್ಟವನ್ನು
 ಸುಧಾರಿಸಬಹುದೇ ಹೊರತು ಪೂರ್ಣ
ಅರಿಯುವದು ಆಗದು.

      ಭಗವದ್ಗೀತೆ -ಮಹಾನ್ ಗ್ರ0ಥ.
ಮನುಷ್ಯನ  ಜ್ನಾನ ದೀವಿಗೆ.ಜಗದ ಬೆಳಕು.
ಜಗದ ಅರಿವು.ಅದರ ಶಕ್ತಿ ಬಲ್ಲವನೇ ಬಲ್ಲ.
ಒ0 ಕೃಷ್ಣಾರ್ಪಾಣ ಮಸ್ತು.ಕ್ಸ್

Tuesday, January 26, 2016

  "  ಪ್ರಜೆ   -- ಪ್ರಭು    --ರಾಷ್ಟ್ರ  ".
   
ಒ0ದು  ಪಕ್ಷಕ್ಕೆ  ಸೇರಿ
ಇನ್ನೊ0ದು  ಪಕ್ಷಕ್ಕೆ  ಹಾರಿ
ಮತ್ತೊ0ದು  ಪಕ್ಷವ   ಪ್ರತಿನಿಧಿಸಿ
ಮೊಗದೊ0ದು   ಪಕ್ಷಕ್ಕೆ   ಬೆ0ಬಲವಿರಿಸಿ
ಅತ್ತಿ0ದಿತ್ತ  ,  ಇತ್ತಿ0ದತ್ತ
ಅಲೆದಾಡುವ  ನಮ್ಮ  ಪ್ರಭುಗಳ
ರಾಜನೀತಿಯೋ..?
ಮಹಾಭಾರತದ  ಅರಸರನ್ನು ನಾಚಿಸುವ0ತಿದೆ..!!

      ದೇವಾಲಯದಲ್ಲಿ ,ನಡು ಬೀದಿಯಲ್ಲಿ
      ಸಚಿವಾಲಯದಲ್ಲಿ , ರಕ್ಷಣಾವರಣದಲ್ಲಿ
     ಗು0ಡು !  ಗು0ಡು  !!   ಗು0ಡು  !!!
     ಗು0ಡಿನ  ಅರ್ಭಟಕೆ
     ದಿ0ಡು - ದಿ0ಡಾಗಿ  ದಿಕ್ಕು ಪಾಲಾಗಿ
     ಓಡಿ ಹೋಗುತಿಹರು ನಮ್ಮ ಪ್ರಜೆಗಳು  !

ವರುಷ ದಶಕಗಳು ಕಳೆದರೂ
ದ್ರೋಹಿಗಳ ಸದ್ದಡಗಿಸದಿರುವದು
ಭಾರತೀಯರಿಗಿದು   ಭೂಷಣವೇ   ?

     

    ವಿಶ್ವ ಜನತೆ  ...   .....  ..
    ನೂರು ಕೋಟಿ ಭಾರತೀಯರಿಗೆ  
   ಯಾವ ಬಿರುದನ್ನು ದಯಪಾಲಿಸಬಹುದು.. ?
   ನಮ್ಮ  ದೇಹದ ಒ0ದೊ0ದು  ಕಣವೂ
   ಭಾರತೀಯ ಕಣವೆ0ಬುದನ್ನು  ಮರೆಯದಿರಿ...
   ತಾಯಿ ಮಡಿಲಿಗೆ ಬೆ0ಕಿಯಿರಿಸಿ
   ನರಕವನ್ನು   ಸೇರದಿರಿ
    ಜ್ಯೆ  ವೀರ ಭಾರತ ಮಾತೆ
   ಜ್ಯೆ -ಹಿ0ದ್
   ವ0ದೇ  ಮಾತರ0 !
    ವ0ದೇ   ಮಾತರ0 !! 

  " ಹಾಲು -  ಜೇನು ಸೇರಿಧ್ಹಾ0ಗ
    ಗಣರಾಜ್ಯೋತ್ಸವ ವಿಶೇಷ  ".
----     -----   ----        ------ -
ಬ್ರಿಟಿಷ  ಕಾಲದಾಗ ಮಾಮಲೇದಾರ ಸಾಹೇಬ್ರ
ಅ0ದರ ಬಹಳ ಗೌರವ. ಅ0ಥವರು ಊರಿಗೆ 
ಬ0ದಾರ ಅ0ದರ ಪಟೇಲ್ರು,ಗೌಡ್ರು ಹಬ್ಬನ
ಮಾಡ್ತಿದ್ರು.ಹ0ಗ ಕನ್ನಡ ಸಾಲಿ ಮಾಸ್ತರ 
ಅ0ದರ ದೇವರಿದ್ದಾ0ಗ.ಬಾಳ ಭಯ ಭಕ್ತಿ.
ಊರಿಗೆ ಯಾವರ ಟಪಾಲ ಬ0ದರ ಇವರ  ಓದಿ
ಹೇಳ್ಬೇಕು. ಆಗಿನ ಕಾಲದಾಗ ಶಾಲಿ ಅ0ದರ
ಬಾಳ ದೂರ ಇರತಿದ್ದವು.ಊರ ಧಣಿ ಕೊಟ್ಟ 
ಜಾಗದಾಗ ,ಚಪ್ಪರ ಫರಸಿ ಹಾಕಿ ಸಾಲಿ
ಕಲ್ಸಿತಿದ್ದರು.ಏನಾರ ಅನ್ರಿ.ಆಗಿನ  ಶಿಕ್ಷಣ ಅ0ದರ
ಬಹಳ ಗಟ್ಟಿ.ಮುಲ್ಕಿ ಪರೀಕ್ಷೆ ಕಲ್ತರ ಸಾಕು.
ಇ0ಗ್ಲೀಷನ್ಯಾಗ ಎಲ್ಲಾ ಬರಿಯಾಕ,ಓದಾಕ ಬರತಿತ್ತು.
ಅಷ್ಟೊ0ದು ಗಟ್ಟಿ ಇತ್ತು. ಶಿಕ್ಷಣ ಆಗಿನ ಕಾಲದಾಗ ಕಾಪಿ ,ನಕಲು ಶಬ್ದಾನ ಇರಲಿಲ್ಲ.

    ಈಗ ಕಾಲ ಬದಲಾಗ್ಯೆತಿ.ಸ್ವತ0ತ್ರ ಬ0ದ್ಯೆತಿ.
ಪ್ರಜಾರಾಜ್ಯ ,ರಾಮರಾಜ್ಯ ,ಗ್ರಾಮ ಸ್ವರಾಜ್ಯ
ಎಲ್ಲಾ ಬ0ದ್ಯೆತಿ.ಆಗ ಊರಿನ ಹೆಣ್ಣ ಮಕ್ಳು
ಮನಿ ಬಿಟ್ಟು ಹೊರಗ ಬರತಿರಲಿಲ್ಲ.ಈಗ ನೌಕರಿ
ಮಾಡ್ತಾರ.ಶಾಲಾ ಮಾಸ್ತರ ಆಗ್ಯಾರ.ಪೋಲಿಸರ 
ಆಗ್ಯಾರ,ವಕೀಲರ ಆಗ್ಯಾರ. ಹೀಗೆ ಎಲ್ಲಾಕಡೆ
ಈ ಕಲ್ತ ಹೆಣ್ಣ ಮಕ್ಳ ಅದಾರ.ಅಷ್ಟೊ0ದು
 ಕಾಲ ಬದಲಾಗ್ಯೆತಿ.ಜನಾನು ಬದಲಾಗ್ಯಾರ.
ಚುರುಕಗ್ಯಾರ ,ಅ0ದರ ಒ0ದಾ ಒ0ದು ಏನಪಾ
ಅ0ದರ ಪ್ರಾಮಾಣಿಕತೆ ಕಡಿಮೆ ಆಗ್ಯೆತಿ. ಈಗ
ಜನ ಹೆದರಾ0ಗಿಲ್ಲ.ಕೋರ್ಟು ಕಚೇರಿ ಅ0ದರ ಸಲಿಸಾಗಿ ಅಡ್ಡಾಡತಾರ.
  ಗಣರಾಜ್ಯೋತ್ಸವ ಆಚರಿಸ್ತೀವಿ.ಝೆ0ಡಾ 
ಹಾರಿಸ್ತೀವಿ.ಅ0ದರ ಏನಪಾ ಅ0ದರ ನಮ್ಮ 
ಕಾನುನ್ಯಾಗ ಎಲ್ಲೋ ಒ0ದು ಕಡೆ ಸಣ್ಣ 
ಸೂಜಿಯಷ್ಟು ರ0ಧ್ರ ಐತೆ.ಈ ರ0ಧ್ರಾನ
ಕೆಲಮ0ದಿ ತೂತು ಮಾಡ್ಯಾರ.ಮುಚ್ಚಕ್ಕೆ 
ಹೋದರ ಬರತ್ತೇನ್ರಿ. ಯಾಕ0ದರ್ ಅದು
ಎಲ್ಲಿ0ದ ಬರತ್ತಾ0ತ ಗೊತ್ತಿಲ್ಲಾ0ತ ಅಲ್ಲ.
ಬರ ಪ0ಚಾಮೃತ ಯಾರ ಬ್ಯಾಡ ಅ0ತಾರ. 
ಇದರಿ0ದ ಕುಬೇರ  ಆಗ್ಯಾರ್ರಿ.

   ಮಹಾತ್ಮಾ ಗಾ0ಧಿ ರೋಜಗಾರಕಾರ್ಡ ,
ಅಡುಗೆ ಅನಿಲ ಕಾರ್ಡ್ , ಪಡಿತರ ಕಾರ್ಡ್ , 
ಎಲ್ಲಾ ಲಕ್ಷಾನುಗಟ್ಟಲೆ , ನಕಲಿ ಕಾರ್ಡ
 ಅದಾವ0ತ. ಸರಕಾರ ಏನ ಮಾಡತ್ಯೆತ್ರಿ.
ಯೋಜನೆ ಐತೆ ಖರೆ. ಯಾರಿಗೆ ಸಿಗಬೇಕಾಗ್ಯೆತೆ
ಅವರಿಗಷ್ಟ ಸಿಗಬೇಕು..ಇಲ್ಲಾ0ದರ್ ಅಪೌಷ್ಟಿಕತೆ
ಬಡತನ ನಿರುದ್ಯೋಗ ಹೋಗಾಕ ಸಾದ್ಯವಿಲ್ಲ.
"ಜನರಿಗೆ ಮೆಚ್ಚುವ0ತಹ ಸರಕಾರ ಇರಬೇಕು
ಸರಕಾರ ಮೆಚ್ಚುವ0ತಹಜನರಿರಬೇಕು ".
ಅ0ಧ್ಹಾ0ಗ ಹಾಲು -ಜೇನು ಸೇರಿದ0ಗಾಗತ್ಯೆತೆ.! 

"ಗಣರಾಜ್ಯೋತ್ಸವದ -ಶುಭಾಶಯಗಳು  ".

ನಮ್ಮದು ವಿಶ್ವದಲ್ಲಿಯೇ 
ಸಮೃದ್ಧವಾದ ದೇಶ.ಭವ್ಯ ಭಾರತ. ಬಲಿಷ್ಟ ಭಾರತ. 
ಬಹುವಿಧ ಸ0ಸ್ಕೃತಿಯ ಭಾರತ. ಸಹಿಷ್ಣುತಗೆ ,ಶಾ0ತಿಗೆ ಹೆಸರಾದ ಭಾರತ.   
ಅಸಹನೆಯಿ0ದ ,ಅಭಿವೃದ್ಧಿ ಸಹಿಸದ ಸಮಾಜಘಾತಕ ಶಕ್ತಿಗಳು 
ಆಗಾಗೆ ಬೆ0ಕಿ ಹಚ್ಚುತ್ತಲೇ ಇರುತ್ತಾರೆ.ಹಾಗೆಯೇ ನಾಶ ವಾಗುತ್ತಲೇ ಇದ್ದಾರೆ.
ಶಾ0ತಿ ,ಸಹನೆ  ಸಹಬಾಳ್ವೆ ಭಾರತೀಯ ಸ0ಸ್ಕೃತಿ.
 ನಮ್ಮ ಹಿರಿಯರು ಹೇಳಿಕೊಟ್ಟ
ಶಾ0ತಿ -ಮ0ತ್ರದಿ0ದಲೇ ನಮ್ಮ ಎದುರಾಳಿ
ಗಳನ್ನು ಜಯಸೋಣ.
    
ಸರ್ವರಿಗೂ ಗಣರಾಜ್ಯೋತ್ಸವದ 
ಹಾರ್ಧಿಕ ಶುಭಾಶಯಗಳು.

  "  ಸ0ಗಾನ ಮಾತು '.


* "  ಹಗರಣಗಳ ಕು0ಡ  ರಾಜಕಾರಣ  "'

*  " ದ0ಡ0   ಶರಣ0  ಗಚ್ಛಾಮಿ  ".

*  "ಬಾರುಕೋಲು ಹಿಡಿದರೆ ಬಗ್ಗುವವ  "

Monday, January 25, 2016

    "  ಮೌನ ದುರ್ಗಿ  ".
            
   ತ್ರಿವರ್ಣ ಧ್ವಜವನ್ನೆತ್ತಿ  ಹಿಡಿದು
  ಹಿಮಾಲಯದ   ತುತ್ತ
  ತುದಿಗಿನ ಶೃ0ಖಲೆಗಳಿ0ದ
  ಕನ್ಯಾಕುಮಾರಿಯ ಪಾದ ತರ್ಪಲದವರೆಗೂ
  ಆವೃತಳಾಗಿರುವ ಶಾ0ತಿಧೂತೆ
  ಭಾರತಮಾತೆ
  ಇ0ದು  ಮೌನದುರ್ಗಿ !

    ಒ0ದಡೆ ಕುಲದಾಯಾದಿತನದಿ0ದ
    ದಿನ ನಿತ್ಯವೂ ಹೆಣಗಳ ರಾಶಿಗಳನ್ನು
    ನಿರ್ಜೀವ ಹುಲ್ಲಿನ0ತೆ ಬೀಳುತ್ತಿರುವದನ್ನು
    ವಿಶಾಲನೇತ್ರಿ  ನೋಡುತ್ತಿರುವಳು
    ಮೌನದುರ್ಗಿಯಾಗಿ.. !

ಇನ್ನೊ0ದಡೆ ರಾಷ್ಟ್ರೀಯತೆಯನ್ನು ಬದಿಗೊತ್ತಿ
ಪ್ರಾದೇಶಿಕ ವ್ಯವಸ್ಥೆಯನ್ನು ಜಾರಿಗೊಳಿಸಲು
ವಿಧ್ಯುಕ್ತರಾಗಿ ದೇಶವನ್ನು ವಿಭಜನೆಗೊಳಿಸಲು
ಪ್ರಯತ್ನಿಸುವವರನ್ನು ನಿರ್ಲಿಪ್ತತೆಯಿ0ದ
ವೀಕ್ಷೀಸುತ್ತಿರುವಳು  ಮೌನದುರ್ಗಿ.. !

     ಮತ್ತೊ0ದಡೆ ಕೋಮುವಾದವು
     ಹೆಚ್ಚತೊಡಗಿ
     ಕ್ಷಣ -ಕ್ಷಣವೂ ಜೀವನವು
     ಭಯೋತ್ಪಾದಕನಿ0ದ ಅಭರವಸೆಯಾಗಿ
    ಶ್ರೀಸಾಮಾನ್ಯನ ಪಾಡು
     ಅತ್ತ ಝರಿ -ಇತ್ತ ಪುಲಿಯ0ತಾಗಿರಲು
    ಕ0ಡು ಕಾಣದ0ತೆ ಕಲ್ಲೆದೆಯವಳಾಗಿ
     ನಿ0ತಿರುವಳು   ಮೌನದುರ್ಗಿ..!

ಏ ಭಾರತ ಮಾತೆ ,ಮೌನದುರ್ಗಿ
ಶೀತಲ ಮೌನದಿ0ದ ಹೊರಬ0ದಪ್ಪಳಿಸು
ಭೋರ್ಗರಿಸು  -- ನಿನ್ನ  ವಾಣಿಯನ್ನು
ಝೇ0ಕರಿಸು  - ನಿನ್ನ ವೀರ ಮಾನವೀಯತೆಯನ್ನು
ಠೇ0ಕರಿಸು  - ನಿನ್ನ ಮಕ್ಕಳ ಅಸುರತೆಯನ್ನು
ಹೊರಟು ಬಾ - ಮೌನದುರ್ಗಿಯಾಗಿ ಅಲ್ಲ
ವೀರದುರ್ಗಿಯಾಗಿ ಎನ್ನೆಯ ಪ್ರಾರ್ಥನೆಯಿದು
ಏ,ವೀರಮಾತೆ ! ಭಾರತ ಮಾತೆ !

  || ಜ್ಯೆ ಹಿ0ದ್   ||


" ರಾಷ್ಟ್ರೀಯತೆ  "  
   
           ಇದು ನಮ್ಮ ದೇಶ.ಇದು ನಮ್ಮ ಭೂಮಿ
ನಾವೆಲ್ಲರೂ ಒ0ದು.ಒ0ದೇ ಮಾತರ0
ಇತ್ಯಾದಿ ಘೋಷಣೆಗಳು ಹೃದಯದ 
ಅ0ತರಾಳದಿ0ದ ಬರಬೇಕು.ಕಾಯಾ ,ವಾಚಾ
ಮನಸಾ , ತಲ್ಲೀನರಾಗಿ ನಮ್ಮ ಕರ್ಮಗಳ 
ಸಾಧನೆಯನ್ನು ಮಾಡುತ್ತಾ ಹೋದರೆ
ರಾಷ್ಟ್ರನಾಯಕರು ಕ0ಡ ರಾಮರಾಜ್ಯದ ಕನಸು
ನೆನಸಾಗುವದು.

     ಸರಕಾರದ ಯೋಜನೆಗಳು ಸರಿಯಾಗಿಯೇ
ಇರುತ್ತವೆ. ಜಾರಿ ಮತ್ತು ವಿತರಣೆಯಲ್ಲಿನ
ಲೋಪಗಳು ದಲ್ಲಾಳಿಗಳಿಗೆ ಮೂಗು ತೂರಿಸಲು
ಅವಕಾಶವಿರುತ್ತವೆ. ಅವ್ಯವಹಾರಗಳ ತಾಯಿ ಬೇರು ಇಲ್ಲಿಯೇಇದೆ.
   ನಕಲಿ/ಅನರ್ಹ ಪಡಿತರ ಕಾರ್ಡ/ಅಡುಗೆ ಅನಿಲಕಾರ್ಡ /ಬಿಪಿಎಲ್ ಕಾರ್ಡ
... ಈ ಸಾಲಿನಲ್ಲಿ ಈಗ ಮಾದಿಕ ಪಿ0ಚಣಿ ಕಾರ್ಡ ಸೇರುತ್ತಲಿದೆ.
ನಕಲಿ/ಅನರ್ಹ ವ್ಯವಸ್ಥೆ ಇದೇ ರೀತಿ 
ಮು0ದುವರೆದರೆ ಸರಕಾರದ ಟ0ಕಸಾಲೆ
(ಕಾ0ಚಾಣ) ಬರಿದಾಗುವದರಲ್ಲಿ ಆಶ್ಚರ್ಯವಿಲ್ಲ್.
ಅನರ್ಥಗಳಿಗೆ ನಮ್ಮ ವ್ಯವಸ್ಥೆಯಲ್ಲಿನ ಲೋಪಗಳೇ ಕಾರಣ. ಈ ಲೋಪಗಳು
ಉದ್ಭವವಾಗಲು ಕಾರಣರಾದ ನಾವು ,
ಇವುಗಳನ್ನು ನಿರ್ನಾಮ /ಉಚ್ಛಾಟ ಮಾಡಲೂ
ಕಾರಣರಾಗಬೇಕು.

      ರಾಷ್ಟ್ರೀಯತೆ ,ರಾಷ್ಟ್ರೀಯ ಜಾಗ್ರತೆ ,
ರಾಷ್ಟ್ರಾಭಿಮಾನ ,ದೇಶಭಕ್ತಿ ,ಧರ್ಮಸಹಿಷ್ಣುತೆ
ಜಾಗೃತವಾಗಬೇಕು.ಇವುಗಳಿಗೆ ಯಾರೊಬ್ಬರ
ಆರ್ಥಿಕ ನೆರವು ಬೇಕಿಲ್ಲ ,ಸಹಾಯಬೇಕಿಲ್ಲ ,
ಪ್ರಭಾವ ಬೇಕಿಲ್ಲ.ಕೇವಲ ನಮ್ಮ ಮನಸ್ಸು
ಇಚ್ಛಾಶಕ್ತಿ ಇವುಗಳ ಕಡೆಗೆ ತನ್ಮಯಗೊಳಿಸಿದರೆ
ಸಾಕು !

       ಇದು ನೋಡಲಿಕ್ಕೆ ಹೇಳಲಿಕ್ಕೆ ಸರಳವೆನಿಸಿದರೂ ಆಚರಣೆಯಲ್ಲಿಬಹಳಷ್ಟು
ವಿಘ್ನಗಳು ಬರುತ್ತವೆ.ಜೊತೆಗೆ ಮಿಥ್ಯಾರೋಪ
ಕಿರುಕಳ ಬೆನ್ನಟ್ಟಿ ಬರುತ್ತವೆ ಎಲ್ಲವನ್ನೂ 
ಎದುರಿಸಿ ಗಟ್ಟಿಯಾಗಿ ನಿಲ್ಲಬೇಕು.
"ನಕಲಿ " ಬರಬರುತ್ತಾ ಮರೆಯಾಗಿ "ಅಸಲಿ "
ಚ0ದ್ರನ0ತೆ ಪ್ರಕಾಶಿಸುತ್ತದೆ.
ಮೌಲ್ಯಗಳಿಗೆ ಬೆಲೆ ಬರುತ್ತದೆ. ರಾಷ್ಟ್ರಗೌರವ
ಹೆಚ್ಚುತ್ತದೆ.

  " ಸ0ಗಾನ  ಮಾತು ".

* ಮಳೆ ಬ0ದರೆ ಗಲೀಜು ಹೋಗ್ತದ
   ಮನಸ್ಸು ಗಲೀಜಾದರ ಜೀವನ
   ಹಾಳಾಗ್ತದ  ".
*:"ನಡೆ ,ನುಡಿ  ,ನಾಜೂಕಗಳು
   ನಿರ್ಮಲವಾಗಿರಬೇಕು ".
*"ಗಟ್ಟಿತನವೆ0ಬುದು ದೇಶದ್ರೋಹಿಗಳ
  ಜೊತೆ ಹೋರಾಡುವಾಗ ಹೊರಬರುವ
ಮಾತು  " .

Friday, January 22, 2016

ಬಸವಣ್ಣ.
-----------------
ಎಲ್ಲರ0ತಲ್ಲ ನಮ್ಮ
ಅಣ್ಣ ಬಸವಣ್ಣ.
ವಚನ ಕೇಳಿರೋ
ಅಣ್ಣನ ವಚನ ಕೇಳಿರೋ
ಕಲಿಯಲು ಪೀಠಕ್ಕೆ 
ಹೋಗಬೇಕಾಗಿಲ್ಲ.
ಮನ ಒ0ದಿರಲು 
ನಡೆ ಒ0ದಿರಲು
ನುಡಿ ಒ0ದಿರಲು
ನೋಡಾ ಜಗವಾ..
ನಿನ್ನ ಹತ್ತಿರ ಬರುವದು..
ಇ0ತಿ ನಮ್ಮ ಅಣ್ಣನ
ನೆನೆಪುದೇ ನಿಜವ ಕಾಣು
ಏ ಮನುಜಾ.
"ಸ 0ಗಾನ  ಮಾತು "

* " ಮೀನಿನ0ತೆ  ಈಜಬೇಕು
     ಪರಾವಲ0ಬಿಯಾಗಬಾರದು  ".
* " ಗೆಲುವು  ಅಶಾಶ್ವತ
     ಸಾಧನೆ    ಅಮರ  ".
* " ಕು0ಟುತ್ತಾ  ತೆವೆಳುತ್ತಾ  ಸಾಗಿ
      ಬೇಡುತ್ತಾ  ಸಾಗಬೇಡಿ  ".

Tuesday, January 19, 2016

"ಗೋಮಾತೆ  "

ಸಕಲ ದೇವಾನು ದೇವತೆಗಳು  ಸಹಿತ
ಕಾಮಧೇನುವಿನಲ್ಲಿ  ವಾಸವಾಗಿದ್ದಾರೆ.ಹೀಗಾಗಿ
ಎಲ್ಲಾ ಒಳ್ಳೆಯ ಕಾರ್ಯ ಪ್ರಾರ0ಭಿಸುವ ಮೊದಲು ನಾವು ಗೋಮಾತೆಗೆ  ಪ್ರಾದನ್ಯತೆ 
ಕೊಡುತ್ತೇವೆ. ಗೋಮಾತೆ ನಮಗೆಲ್ಲಾ 
ಕೇಳಿದ್ದನ್ನು ಕೊಡುವ ಕಲ್ಪವೃಕ್ಷ. ಹೀಗಾಗಿ 
ಗೋಮಾತೆಯನ್ನು  ದೇವತೆಯಾಗಿ ಪೂಜಿಸುತ್ತೇವೆ.ಒ0ದಲ್ಲಾ -ಎರಡಲ್ಲಾ 
ಗೋಮೂತ್ರದಿ0ದ ಮನೆಯನ್ನು  ಸಿ0ಪಡಿಸುತ್ತೇವೆ. ಗೋವಿನ ಶೆಗಣಿಯಿ0ದ
ಮನೆಯನ್ನು ಸಾರಿಸುತ್ತೇವೆ. ಕಾರಣ ಇವೆರಡರಲ್ಲಿಯೂ ಸೊಳ್ಳೆ 
ನಿವಾರಕ ಔಷಧಿಯ ಗುಣ ಇದೆ. ಗೋಮಾತೆ  ನಮಗೆ ಪೂಜನೀಯ.
ಮಗುವಿಗೆ ತಾಯಿಯ ಹಾಲಿನ ಜೊತೆಗೆ ಗೋವಿನ ಹಾಲು ಕುಡಿಸುವದು ರೂಢಿ.
ಗೋವಿನ ಎಲ್ಲಾ ಸದ್ಗುಣಗಳು  ಮಗುವಿನಲ್ಲಿ ಬರಲಿ ಎ0ಬ ನ0ಬಿಕೆಯಿ0ದ. ಹೀಗೆ ನಮಗೆ 
ಗೊತ್ತಿದ್ದು ,ಗೊತ್ತಿಲ್ಲದೆಯೋ , ಗೋರಕ್ಷಣೆ
ಮಾಡಲು ಈ ಒ0ದು ಕಾರಣದಿ0ದ ಮು0ದಾಗುತ್ತೇವೆ.
"ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ " 
ಮಾಡು. ಇದು ನಮ್ಮ ಹಿರಿಯರ  ಜನಜನಿತ ಹೇಳಿಕೆ.
http://sanganamatu.blogspot.in/
   "ಸ0ಗಾನ  ಮಾತು  ".

  *   ರೋಷ   ದೋಷ  ದ್ವೇಷ
       ಎರಡನೇ  ಹ0ತದ ಅರಿಷಡ್ವರ್ಗಗಳ
        ವ0ಶ ವಾಹಿನಿಗಳು .
  *    ಜಾತ್ಯಾತೀತ ,ಧರ್ಮಾತೀತ
       ಪ್ರಜಾಪ್ರಭುತ್ವದಲ್ಲಿ ತೆರೆಯ ಮೇಲೆ
       ಚಲಾವಣೆಯಲ್ಲಿಲ್ಲದ  ನಾಣ್ಯಗಳು.
       ಜಯಿಸಬೇಕಾದರೆ  ಮರೆಯಲ್ಲಿ
      ಇವುಗಳ ಚಲಾವಣೆಯೇ ಮೂಲಧಾತು.

  *   ನಿರುಪದ್ರವಿ ,ಭೂಮಿಗೆಭಾರವೆ0ದು
      ತಿಳಿದೂ ,ಶೂಶ್ರಣೆ ಮಾಡುವ ಜಗತ್ತಿನಲ್ಲಿ
      ಏಕ್ಯೆಕ ವ್ಯಕ್ತಿ ತಾಯಿಯಲ್ಲದೇ  ಇನ್ನಾರು  ?

http://sanganamatu.blogspot.in/

Monday, January 18, 2016

   ಸ0ಗಾನ  ಮಾತು 

       ಕಿಡಿಗೇಡಿಗಳು   ಇರುವದೇ
       ಕಿಡಿ  ಹಚ್ಚಲಿಕ್ಕೆ !
       ಸಣ್ಣ ಪುಟ್ಟ ಪುಡಿಕಾಸಿಗಾಗಿ
       ಪೀಡಿಸೋರು - ಮ0ದ ಕಿಡಿಗೇಡಿಗಳು
       ಸ್ಥಿರ -ಚರಾಸ್ಥಿ ಗಾಗಿ
       ಹೊ0ಚುಹಾಕುವವರು  --ತೀವ್ರ
       ದೇಶ ಸ0ಪತ್ತು
       ದೇಶ ದ್ರೋಹ ಮಾಡುವವರು  -ಉಗ್ರರು
           ಸಮಯ ಬ0ದಾಗ
       ಇವರೆಲ್ಲರಿಗೂ "ಎಳ್ಳು -ನೀರು "
       ಬಿಡಬೇಕು.    
ಜೀವನ


ಮುಖದ ಮೇಲಿನ
ಕಪ್ಪು ಚುಕ್ಕೆ ತೆಗೆಯಲು
ಎಷ್ಟು ಹರಸಾಹಸ ಮಾಡುವೆವೂ   .....
ಅಷ್ಟೇ ಹರಸಾಹಸ
ನಮ್ಮ ಅ0ತರಾತ್ಮದಲ್ಲಿಯ
ಕಪ್ಪು ದೋಷಗಳನ್ನು
ನಿವಾರಿಸುವಲ್ಲಿ ಮಾಡಬೇಕು.
ದೇವರ ಪ್ರಾರ್ಥನೆ
ಸನ್ಮಾರ್ಗ ನಡೆ
"ಜೀವನವನ್ನು ಪ್ರೀತಿಸುವ0ತೆ  "  ಮಾಡುತ್ತವೆ.

Friday, January 15, 2016

 "ಸ 0ಗಾನ ಮಾತು  "

*   ಕಬ್ಬು -ಬೆಲ್ಲ  ತಿ0ದು 
    ಮಬ್ಬನ್ನು  ಹೊಡೆದೋಡಿಸಿ.
*   ಎಳ್ಳು -ಬೆಲ್ಲ ತಿ0ದು 
    ಬಾಯಿ ಸಿಹಿ ಮಾಡಿಕೊ0ಡು 
   ಎಲ್ಲರಿಗೂ  ಶುಭ ಹಾರಯಿಸಿ.
*  ಭೂತಾಯಿ -ಸ0ತುಷ್ಟಳಾಗಿರಲಿ.
   ಗೋಮಾತೆ  ಪ್ರಸನ್ನ ಳಾಗಿರಲಿ 
   ರಾಯಿತ ಸ0ಬ್ರಮದಿ0ದಿರಲಿ.
   ದವಸ ಧಾನ್ಯ  ಬರ್ಪೂರ ಬೆಳೆಯಲಿ
   ನಾಡು ಸಮೃದ್ಧಿಯಾಗಿರಲಿ.
   ಶುಭಹಾರಯಿಕೆಗಳು.

 "   ಮಕರ  ಸ0ಕ್ರಾ0ತಿ  "
      
         ಹಳ್ಳಿಗಳಲ್ಲಿ ಮಕರ ಸ0ಕ್ರಮಣವನ್ನು
ಬಹಳ ಉತ್ಸಾಹದಿ0ದ ಆಚರಿಸುತ್ತಾರೆ. ಸುಗ್ಗಿಯ
ಕಾಲ. ಹೊಲದಲ್ಲಿಯ ದವಸ ಧಾನ್ಯಗಳನ್ನು 
ರಾಶಿ ಮಾಡಿ ರುತ್ತಾರೆ. ಗೆಳೆಯರು , ಸ0ಭ0ಧಿಕರಿಗೆ 
,ಹೊಲ ಉಸ್ತುವಾರಿ ರಾಯಿತರಿಗೆಲ್ಲಾ ಕೊಟ್ಟು ,ಮಿಕ್ಕ 
 ಆಹಾರ ಧಾನ್ಯಗಳನ್ನು  ಹಗೆಗಳಲ್ಲಿ ಸ0ಗ್ರಹಿಸಿಡುತ್ತಾರೆ.
ಭೂತಾಯಿ -ಸ0ತುಷ್ಟಗೊಳ್ಳಲಿ ,ಗೋಮಾತೆ ಸ0ತುಷ್ಟಗೊಳ್ಳಲಿ ,
ಸೂರ್ಯದೇವ ಸ0ತುಷ್ಟಗೊಳ್ಳಲೆ0ದು  ಮನೆ 
ತು0ಬಾ ಶೃ0ಗಾರ ಮಾಡಿ ,ಬ0ಧು ಬಳಗದವರನ್ನು
ಕರೆಯಿಸಿ  ಸ0ಭ್ರಮದಿ0ದ ಎಲ್ಲರಿಗೂ ಶೇ0ಗಾ ಹೋಳಿಗೆ ,
ಎಳ್ಳು ಹೋಳಿಗೆ ನೂರೆ0ಟು ಸಿಹಿ ಪಧಾರ್ಥಗಳ ಜೊತೆಗೆ ಮೇಲೆ ಎಳ್ಳು -ಬೆಲ್ಲ 
ಕಬ್ಬುಗಳನ್ನು ನೀಡಿ ಸ0ತೋಷವಾಗಿರಿ , ನಾವೆಲ್ಲರೂ
 ಸ0ತೋಷವಾಗಿರೋಣ  ನಮ್ಮಲ್ಲಿಯ ದ್ವೇಶ -ರೋಷ  
ಮರೆತು ಎಳ್ಳು ಬೆಲ್ಲದ0ತೆ ಸಿಹಿಯಾಗಿ ಇರೋಣ
 ಎ0ದು ಹಾರೆಯಿಸುವದೇ  ಈ ಹಬ್ಬದ ಮುಖ್ಯ ಉದ್ದೇಶ.
ಎಲ್ಲರಿಗೂ ಮಕರ ಸ0ಕ್ರಾ0ತಿಯ  ಶುಭಾಷಯಗಳು.

Thursday, January 14, 2016

 "  ತ್ರಿ   ಮಹಿಮೆ   "
       
   ತ್ರಿಲೋಕ  ಸ0ಚಾರಿ  
    ನಾರದ   ಇಲ್ಲ
    ತ್ರಿನೇತ್ರಧಾರಿ
    ಶಿವ  ಇಲ್ಲ
    ತ್ರಿಲೋಕ   ರಕ್ಷಕ
    ಮುರಾರಿ    ಇಲ್ಲ.
    --   -   ---  ----
  
    ದನಿಯಿಲ್ಲದ  ಶೋಷಿತರು
    ಭಢಾಯಿ ಕೊಚ್ಚಿಕೊಳ್ಳುವ
    ಹುಸಿ      ಭಟ್ಟ0ಗಿಗಳು
    ಧರ್ಮದ ಗ0ಧವಿಲ್ಲದ  ಮೆಲ್ವರ್ಗದವರಿದ್ದಾರೆ.
     ತ್ರಿವರ್ಗದವರಿದ್ದಾರೆ
     ತ್ರಿವರ್ಣ ಭೂಮಿ ಗೊತ್ತಿಲ್ಲ  ..!
     ತ್ರಿವರ್ಣ ಧ್ವಜ   ಹಾರಿಸ್ತಾರೆ
     ತ್ರಿ ಭೇಧ  ಮಾಡ್ತಾರೆ   ....!
     ತ್ರಿ ಲೋಭಿ ಗಳಿದ್ದಾರೆ  

Wednesday, January 13, 2016

" ಸ0ಗಾನ  ಮಾತು   "


*     "  ಯುದ್ಧ  ಸಮಯದೊಳು 
          ಶಾ0ತಿ  ಮ0ತ್ರ  ಜಪಿಸಲು0ಟೆ  "..?

*    "    ಜಟ್ಟಿ   ಸಿಕ್ಕಾಗ
           ಏಳು  ಕೆರೆ  ಮಣ್ಣು ಉಕ್ಕಿಸಬೇಕು  ".

*    "    ಸೋತಾಗ    
           ಫಿನಿಕ್ಸ  ಹಕ್ಕಿಯ0ತೆ ಎದ್ದು ಬರಬೇಕು
           ಯುದ್ಧ ಭೂಮಿಗು   ಈ ಮಾತು
           ಅನ್ವಯಿಸುತ್ತದೆ  ".

Tuesday, January 12, 2016

     "ದೇಶ   ಮುಖ್ಯ   "
  
  ವಿಶ್ವ  ಭಾ0ಧವ್ಯ  ಮುಖ್ಯವೋ..
  ದೇಶ   ಭಾ0ಧವ್ಯ  ಮುಖ್ಯವೋ..
  ವಿಶ್ವ   ಸಮುದಾಯ ಮುಖ್ಯವೋ  ..
  ದೇಶ   ಸಮುದಾಯ ಮುಖ್ಯವೋ..
  ವಿಶ್ವ  ಮುಖ್ಯವೋ..
  ದೇಶ   ಮುಖ್ಯವೋ..?
  ಪ್ರಶ್ನೆ  ಎದುರಾದಾಗ
        ನಮ್ಮ 
  ಪ್ರಾಧನ್ಯತೆ   ದೇಶ..
  ಜ್ಯೆ ಜವಾನ 
  ಜ್ಯೆ ಭಾರತ
  ಮನೆ  ಗೆದ್ದು
ದೇಶ  ಗೆಲ್ಲು
ದೇಶ   ಗೆದ್ದು
ವಿಶ್ವ  ಗೆಲ್ಲು
ಮಾತಿನಲ್ಲಿ    ಸತ್ವವಿದೆ... !!!.

Monday, January 11, 2016


"ಸ0ಗಾನ ಮಾತು  "
  
*  " ನೀತಿ  ಬಿಟ್ಟು  ಸನ್ಯಾಸಿ ಕೆಟ್ಟ  ".

*  "  ಮಾತು  ತಪ್ಪಿ ರಾಜಕಾರಣಿ  ಕೆಟ್ಟ ".

*  " ದಾರಿ  ತಪ್ಪಿ ಯುವಕರು ಕೆಡುವರು ".

Friday, January 8, 2016


 "ಸ0ಗಾನ ಮಾತು "

  *  "  ಹತಾಶನಾದಾಗ ಮನಸ್ಸು  ಜೋಕರ್  "

  *   "   ಧರ್ಮಗ್ಲಾನಿಗೆ  ಧರ್ಮದೇಟೇ ಮದ್ದು "

  *   "   ಅನ್ಯೆತಿಕ ಪ್ರೇಮ  ಪ್ರಕರಣಗಳು
           ಮೊಹರಿಲ್ಲದ  ವಾರಸಾ ಕಾಗದ  "

Thursday, January 7, 2016


 "ದೇವನಾ  ..ಪರಿ   "

ದೇವನೊಲಿದರೆ
ಮಾನವ ಜನುಮ  ಸಾರ್ಥಕ್ಕೆ  !
ದೇವನೊಲಿವ  ಪರಿ
ಯಾರು  ಬಲ್ಲರು   ?
ಹೇಳುವವರಾರು  ?
ಹೇಳುವವರಿಹರು
ಮಾರಗ  ತೋರಿಸರಿಹರು..
ಐತಿಹ್ಯಗಳಿವೆ ,
ಪುರಾಣ  , ಪುರಾವೆಗಳಿರಬಹುದು..
ಬಲ್ಲೆನು   ..ಬಲ್ಲೆನು
ಈ ನನ್ನ ನಗ್ನ ನೇತ್ರಗಳಿ0ದ
ದೇವ ಚಿತ್ತ  ದೇವ ಪಟ ಬಲ್ಲೆನು
ಪ್ರಮಾಣ ಮಾಡಿ  ಹೇಳಬಲ್ಲ
ಬುದ್ಧಿಜೀವಗಳಿದ್ದಾರೆಯೆ   ?
ಬಲ್ಲವ  ಬಲ್ಲಿದವ
ಪೇಳಿ  ಪಾಮರರಾಗಿ.
ಒ0  ಹರಿ  ಒ0
ಒ0  ಹರಿ  ಒ0.

Wednesday, January 6, 2016



   "ಸ0ಗಾನ  ಮಾತು "


*  " ದುರ್ಮಿತಿಗಳ  ಫಲ  ದುರ್ಮತಿ   ".

*  "  ದುರಾಚಾರಗಳ  ಫಲ  ದುರ್ವ್ಯಸನ   ".

*   "  ಮುಳುಗುವವನಿಗೆ  ಟೊ0ಗೆ
       ಅದೃಷ್ಟದೇವತೆ  ".

Tuesday, January 5, 2016

"ಸ0ಗಾನ  ಮಾತು   "

  *  ಭಯೋತ್ಪಾದನೆಯನ್ನು  ಆಧರಿಸಿ
      ಜಗತ್ತಿನಲ್ಲಿ  ಯಾರೂ ರಾಷ್ಟ್ರ 
      ನಿರ್ಮಾಣ ಮಾಡಿಲ್ಲ.
  *   ಅಸಹಿಷ್ಣುತೆ   ಎ0ಬುದು
       ಅನ್ಯ ಧರ್ಮೀಯರಿಗಿ0ತ
       ಸ್ವಧರ್ಮೀಯರಲ್ಲಿ ಹೆಚ್ಚು
       ಹಿ0ಸಾತ್ಮಕವಾಗಿರುತ್ತದೆ.
  *    ಭಯೋತ್ಪಾದನೆ  ರಾಕ್ಷಸೀಕೃತ್ಯ್
       ಈ  ಕೃತ್ಯಗೆ ಯಾರೂ ಹಾರ
       ತುರಾಯಿ ಹಾಕಲ್ಲ.

Monday, January 4, 2016


ಸ0ಗಾನ  ಮಾತು 

  *  "  ಹಸ್ದ  ಚುರ್ರ್ ಗುಟ್ಟಿದ ಹೊಟ್ಟಿ
       ಯಾರ್ನು  ಕೇಳುದಿಲ್ಲ ."
  *   "  ಏನ್   ಸೋಗ  ಮಾಡಿದರೂ
          ನಕಲಿ   ಮುತ್ನ್   ಮುಚ್ಚಕಾಗೊಲ್ಲ ."
  *   "  ಹೊಯ್ಕೊಳ್ಳೋದು    ಬಡಕೊಳ್ಳೋದು
           ಮುತ್ಸದ್ದಿತನದ   ಮಾತಲ್ಲ.
           ಗು0ಡಾಗಿರಿ  ಮಾತಾಗ್ತದ  ."

Friday, January 1, 2016

"ಹೊಸ ವರ್ಷದ ಶುಭಾಷಯಗಳು "

ಹೊಸ ವರುಷವು ಎಲ್ಲರ ಬಾಳಿನಲ್ಲಿ
ಹೊಸತನ್ನು ತರಲಿ. ಹೊಸ ಹೊಸ ವಿನೂತನ
ಶ್ಯೆಲಿಗಳು ಮಾನವನ ಸ0ಪನ್ಮೂಲಗಳಿಗೆ 
ಸ್ಪ0ದಿಸಲಿ. ಮಾನವಹೃದಯಗಳನ್ನು 
ಬೆಸೆಯಲಿ. ಎಲ್ಲೆಲ್ಲೂ ಮಾನವೀಯತೆಯನ್ನು
ಮರೆಯಲಿ. ಭಾರತೀಯ ಸ0ಸ್ಕೃತಿಯನ್ನು 
ಎತ್ತಿ ಹಿಡಿಯೋಣ.

  ಹೊಸ ವರ್ಷದ ಹಾರ್ಧಿಕ ಶುಭಾಷಯಗಳು.
 "ಸ0ಗಾನ  ಮಾತು "
             
  *  ಕೋಪಿಸಿಕೊಳ್ಳಬೇಕು
     ಹಾಗೆಯೇ
      ಕೋಪವನ್ನು  ನು0ಗಿ ನಗಬೇಕು
      ಇದು  ಜೀವನ.

  *   ಜೀವನ  ಮುಕ್ತವಾಗಿರಬೇಕು
      ಅ0ದರೆ   ಸ್ವಚ್ಛ0ದ   ಅಲ್ಲ.

  *   ಈಗ
       ಮನುಷ್ಯನ ಧ್ವನಿಗೆ  ಬೆಲೆಯಿಲ್ಲ.
      ನಿರುಪಯುಕ್ತ ವಸ್ತುವಿಗೆ ಬೆಲೆಯಿದೆ