Monday, March 14, 2016

"ಶ್ರೀ ರಾಮಕೃಷ್ಣರ ಚಿ0ತನೆಗಳು "
---   ------   ------   -------   ----

       ಮನುಷ್ಯ  ಸಚ್ಛಾರಿತ್ರ್ಯವುಳ್ಳವನಾಗಿ,ಸದಾ
ಚಾರಿಯಾಗಿ ,ನಾಲ್ಕು ಮ0ದಿಗೆ ಬೇಕಾದವ
ನಾಗಿ ಬಾಳಿ ,ಲೋಕ ಕಲ್ಯಾಣ ಕಾರ್ಯಗಳನ್ನು 
ಮಾಡುತ್ತಾ ಸತ್ಸ0ಗ್ ,ಸದ್ಗುರು ಚಿ0ತನೆ
ಸದ್ಗುರುಗಳ ಉಪದೇಶ  ಭೋಧನೆಗಳನ್ನು
ಪಾಲಿಸುತ್ತಾ ಲೋಕಕಲ್ಯಾಣಾರ್ಥದಲ್ಲಿ
ಅಳಿದುಳಿದ ಸೇವೆಯನ್ನು ಮುಡುಪಾಗಿರಿಸಿ
"ಆ ಪರಮಾತ್ಮನಿಗೆ ಅರ್ಪಿಸಿ ಕೃತಾರ್ಥವಾಗು
ವುದೇ-ಜೀವನ್ಮುಕ್ತಿಯ ತಿರುಳಾಗಿದೆ.
ದೇವ ಸಾನಿಧ್ಯಕ್ಕೆ ಹಲವಾರು ಮಾರ್ಗಗಳಿವೆ.ಭಕ್ತಿ
ಮಾರ್ಗ,ಕರ್ಮ ಮಾರ್ಗ ,ಇನ್ನು ಕೆಲವರು
ಸದಾಚಾರ ,ಇನ್ನು ಹಲವರು ದೀನ-ದಲಿತರ 
ಸೇವೆಯಲ್ಲಿ ಪರಮಾತ್ಮನ ಇರುವನ್ನು ಕ0ಡು
ಪರಮಾನ0ದವನ್ನು ಅನುಭವಿಸಿದವರಿದ್ದಾರೆ.
ಲೋಕಕಲ್ಯಾಣಕ್ಕಾಗಿ ಹಲವಾರು ಮಾರ್ಗಗಳಿವೆ.
ಚಿ0ತನೆಗಳಿವೆ.ತನ್ನ ಅನುಕೂಲಕ್ಕೆ ತಕ್ಕ0ತೆ
ಯಾರಿಗೂ ತೊ0ದರೆಯಾಗದ0ತೆ ,ನೋವಾಗ
ದ0ತೆ ಎಲ್ಲರಿಗೂ ಲೇಸನ್ನು ಬಯಸಿ ಮುನ್ನಡೆ
ಯುವುದೇ  ಲೋಕ ಸೇವೆಯ ಮೂಲಉದ್ದೇಶ.
ಶ್ರೀಕೃಷ್ಣನ ಅವತಾರವೆ0ದೆ ಪ್ರಸಿದ್ಧರಾದ
ಪರಮಹ0ಸರ ಭೋಧನೆಗಳುಲೋಕಕಲ್ಯಾ
ಣಾರ್ಥವಾಗಿವೆ.ಇಲ್ಲಿ ಬೋಧನೆಗಿ0ತ 
ಅನುಕರಣೆಗೆ ಹೆಚ್ಚು ಒಲವಿದೆ.ಒಳ್ಳೆಯನಡತೆ
ಒಳ್ಳೆಯ ಗುಣ ,ಸಚ್ಛಾರಿತ್ರ್ಯವುಳ್ಳವನನ್ನು ದೇವರು
ಹೇಗೆ ಅವನ ಸಾಮಿಪ್ಯವನ್ನು ಬರಮಾಡಿಕೊಳ್ಳು
ತ್ತಾನೆಯೋ ,ಹಾಗೆಯೇ ಸದಾಚಾರಿಗಳನ್ನು 
ಅನುಸರಿಸಿ ಸನ್ಮಾರ್ಗ ಪಡೆಯುವ0ತೆ ಭಕ್ತಾಧಿ
ಗಳಲ್ಲಿ ಅನುಕರಣೆಯ ಮಹತ್ವವನ್ನು ತಮ್ಮ
ಬೋಧನೆಗಳಲ್ಲಿ ,ಉಪದೇಶಗಳಲ್ಲಿ ತಿಳಿಸಿದ್ದಾರೆ..
ದೇಶದೆಲ್ಲಡೆ  ರಾಮಕೃಷ್ಣ ಪರಮಹ0ಸರ ಸಾಕಷ್ಟು ಆಶ್ರಮಗಳಿವೆ.
"ಆ ಧರ್ಮ ಈ ಧರ್ಮವೆನ್ನದೇ  ಸದಾಕಾಲ
ಮಾನವ ಚಿ0ತನೆಗೆ ಅಭಿವೃದ್ಧಿಗೆ ಪೂರಕವಾಗುವ
ಮಾನವ ಧರ್ಮವನ್ನು ಅವರು ಸದಾಕಾಲ
ಪೋಷಿಸುತ್ತಿದ್ದರು.ಅವರ ಅಧ್ಯಾತ್ಮಿಕ ಚಿ0ತನೆ
ಗಳು ಜನ ಮನದಲ್ಲಿ ಇನ್ನು ಹೆಚ್ಚು ಆಳವಾಗಿ
ಬೇರೂರುವ0ತೆ  ಮಾಡಬೇಕಾಗಿದೆ.


No comments: