Friday, March 4, 2016

 "ಸ0ಕಷ್ಟ  "

ಸ0ಕಷ್ಟ ಇವು ತಾತ್ಕಾಲಿಕ.ಕೆಲವು
ಸಮಯ ಇದ್ದು ಪರಿಹಾರವಾಗಬಲ್ಲವು.ಸ0ಕಷ್ಟ
ಗಳು ಸ್ವಯ0ಕೃತ ಆಗಿರಬಹುದು / ನಮ್ಮ ತಪ್ಪು
ನಿರ್ಧಾರದಿ0ದ /ತಪ್ಪು ಕಲ್ಪನೆಯಿ0ದ ಘಟಿ
ಸಿರಬಹುದು.ಇವೆಲ್ಲವುಗಳಿಗೆ ಉತ್ತರ ಇದ್ದೇ 
ಇರುತ್ತದೆ.

ಸಮಸ್ಯೆಗಳ ಸ್ವರೂಪವೇ ಬೇರೆ. ಇವು
ವ್ಯಕ್ತಿಯಿ0ದ ವ್ಯಕ್ತಿಗೆ ,ಗು0ಪು -ಸಮಾಜ 
-ರಾಷ್ಟ್ರ ಮಧ್ಯೆ ವಿಷಯಾಧರಿತ ಮೇಲೆ 
ಇವುಗಳ ಗಾಡತೆ ,ತೀವ್ರತೆ ,ಪಡೆದುಕೊ0ಡಿರುತ್ತದೆ.
 ಇವುಗಳ ಪರಿಣಾಮ ಭೌತಿಕವಾಗಿಯಾಗಲಿ ,
ಅಭೌತಿಕವಾಗಿಯಾಗಲಿ ಅಗಣಿತ.
  ನ್ಯೆಸರ್ಗಿಕವಾಗಿ ಉತ್ಪತ್ತಿಯಾದ ಸಮಸ್ಯೆಗಳಿಗೆ
ಪರಿಹಾರ ಪಡೆಯಬಹುದು. ಕೃತ್ರಮವಾಗಿ 
ಸೃಷ್ಟಿಯಾದ ಸಮಸ್ಯೆಗಳಿಗೆ ಪರಿಹಾರ ಅಸಾದ್ಯ.
ಇವುಗಳ ಮೂಲ ಬೇರು ಎಲ್ಲಿರುತ್ತೋ ಗೊತ್ತಿಲ್ಲ.
ಸ0ಕಷ್ಟಗಳೇ ಆಗಲಿ ,ಸಮಸ್ಯೆಗಳೇ ಆಗಲಿ,
"ತಾಳ್ಮೆ" ಇಲ್ಲಿ ಬಹು ಪ್ರಮುಖ ಪಾತ್ರ ವಹಿ
ಸುತ್ತದೆ."  ತಾಳ್ಮೆ  " ಮೌನದ ಸೂಚಕವು 
ಹೌದು.ಎಷ್ಟೋ ಸ0ಕಷ್ಟಗಳು ಈ ತಾಳ್ಮೆ/
ಮೌನದಿ0ದ ತನ್ನಿ0ದ ತಾನೇ ಪರಿಹಾರ
ವಾಗಿವೆ. ಮೌನದಿ0ದ ಸಾಕಷ್ಟು ಸಮಯ
ನಕಾರಾತ್ಮಕಗಳು ಉತ್ಪತ್ತಿಯಾಗಿ ಸಮಸ್ಯೆಗಳಿಗೆ
ಪರೋಕ್ಷವಾಗಿ ಪರಿಹಾರ ಕಲ್ಪಗಳಾಗುವ
ಸಾಧ್ಯತೆಗಳಿವೆ.

     ಮನುಷ್ಯ ಸ್ವಭಾವ ಜನ್ಯ ಸಾಮಾಜಿಕ
ಸ0ಕಷ್ಟಗಳಿಗೆ "ತಾಳ್ಮೆ "ಯೇ ಮದ್ದು.
ಇದರ ತಾತ್ಪರ್ಯ     ---   ---  --
" ತಾಳಿದವನು -ಬಾಳಿಯಾನು ".

No comments: