ಶಿಲಾಕೃತಿಗಳು
----- ------ -----
ಹ0ಪಿ ,ಐಹೊಳೆ ,ವಿಜಯಪುರ ,
ಬದಾಮಿ ,ಪಟ್ಟದಕಲ್ಲ ,ಬೇಲೂರ -ಹಳೇಬೀಡು
ಮ್ಯೆಸೂರು -- ಇವೆಲ್ಲಾ ರಾಜ್ಯದ ಕಲೆಯ
ಬೀಡುಗಳು.
ಸ0ಸ್ಕೃತಿ ,ಪರ0ಪರೆ ,ಶೃ0ಗಾರರಸ ,ಭಕ್ತಿ
ರಸ ಸೇರಿದ0ತೆ ನವರಸಗಳ ಮಹೋನ್ನತ
ಕಲ್ಪನೆಯ ಸಾಕಾರ ಮೂರ್ತಿಗಳೇ
ಶಿಲಾಕೃತಿಗಳು.'ಪುಸ್ತಕಗಳು ಮನುಷ್ಯನ
ಜ್ನಾನ ದೀವಿಗೆಯ ಬರಹ ರೂಪಗಳಾದರೆ ,
ಶಿಲಾಕೃತಿಗಳು -ಶಿಲ್ಪಿಯ ಉದಾತ್ತ ಮಹಾನ್
ಕಲ್ಪನೆಯ ಮೂರ್ತ ರೂಪಗಳು.".
ಪ್ರಪ0ಚದ ಎಲ್ಲಾ ವಿಧ್ಯಾಮಾನಗಳ
ಅರಿವು ,ಶಸ್ತ್ರ -ಶಾಸ್ತ್ರಗೆ ಪರಿಣಿತಿ ಹೊ0ದಿ
ದಾಗ ಮಾತ್ರ -ಕಲ್ಲೊಳಗೆ ಅವಿತುಕೊ0ಡಿ
ರುವ ಮೂರ್ತಿಯು ಶಾಶ್ವತವಾಗಿ ಹೊರ
ಬರಲು ಸಾಧ್ಯ.
ಸತತ ಪರಿಶ್ರಮ ,ನಿಷ್ಟೆ , ನ0ಬಿಕೆ ,ಜ್ನಾನ
ಗಳ ಆಗರವೇ ಶ್ರೇಷ್ಟ ಶಿಲ್ಪಿಯಾಗಲು
ಅವಶ್ಯವಿರುವ ಮಾನದ0ಡಗಳು.ಶಿಲ್ಪಿಯಲ್ಲಿಯೇ
ಇಷ್ಟೊ0ದು ಮಹಾನ್ ಗುಣಗಳು ಇರಬೇಕಾದರೆ
ಆ ಶಿಲ್ಪಿಯನ್ನು ಕಟೆದ ಆ ಮಹಾಶಿಲ್ಪಿಗಾರ
(ಗುರು) ಹೇಗಿರಬೇಕೆ0ಬುದನ್ನು ಊಹಿಸಿ.
ಪ್ರತಿಯೊಬ್ಬ ಮನುಷ್ಯನಲ್ಲಿ
ಸಾತ್ವಿಕ ,ರಜ ,ತಮೋ ,ಗುಣಗಳು ಇದ್ದೇ
ಇರುತ್ತವೆ. ಆ ಸಾತ್ವಿಕ ಗುಣಗಳನ್ನು ಹೊರ
ತರುವ ಹೊಣೆ ಗುರುವಿನದಾದರೆ , ಆ ಗುಣಗಳನ್ನು ಲೋಕಕಲ್ಯಾಣಕ್ಕಾಗಿ ಬಳಸಿ ,
-ಧರ್ಮಾರ್ಥ ಕಾರ್ಯಗಳನ್ನು ನೆರವೇರಿಸುವ
ಸ0ಕಲ್ಪಗಳನ್ನು ಮಾಡಿದರೆ ಜನರೇ ಅವನ
ಕೊರಳಿಗೆ ಮಾಲೆ ಹಾಕಿ ಸ್ಮಾರಕಗಳ
ಎತ್ತರಕ್ಕೆ ಕೊ0ಡೊಯ್ಯುತ್ತಾರೆ.
ಇನ್ನು ರಜೋ ,ತಮೋ , ಅಮರರಾಗಲಿಕ್ಕೆ
ಸಾದ್ಯವಿಲ್ಲ.ಕನಿಷ್ಟ ಲೋಕಕೆ ತಾರಕ -ಮಾರಕ
ವಾಗಬಾರದು.
ದಾರಿಯ ಆಯ್ಕೆ ಮನುಜ0ದು
ಗುರಿಯ ಆಯ್ಕೆ ಮನುಜ0ದು
ರಾಜಮರ್ಯಾದೆಯ ಆಯ್ಕೆ ಮನುಜ0ದು.
"ಈ ಅಪೂರ್ವವಾದ ಶಿಲಾಸಿದ್ಧಾ0ತದ
ಕೊಡುಗೆಯನ್ನು -ಕಲಾಮೇಧಾವಿಗಳು
ಸಾಮಜಿಕ ಜೀವನದ ಮ್ಯೆಲುಗಳನ್ನಗಿ
ಪರಿವರ್ತಿಸಲಿ ".