Thursday, September 22, 2016

   "ಮನುಷ್ಯ  "
    ---   ---  ---
   ಪ್ರಪ0ಚದಲ್ಲಿ  ಪ್ರತಿಯೊ0ದು ವಸ್ತು
ಅವಲ0ಬಿತ.ಅದರ ಅರ್ಥ  ಪರಾವಲ0ಬನೆ 
ಅಲ್ಲ.ಪರಿಪೂರ್ಣತೆಯ ಕೊರತೆಯಿರುವಾಗ
ಅವಲ0ಬನೆ ಅಗತ್ಯವಾಗಿ ಕಾಣುತ್ತದೆ.
     ಮನುಷ್ಯನು ಕೂಡಾ ಮನುಷ್ಯನ ಮೇಲೆ
ಅವಲ0ಬಿತ. ಈ ಅವಲ0ಬನೆಗಾಗಿ ಆತ 
ಸಹಾಯವನ್ನು ಹಣಕೊಟ್ಟು ಖರೀದಿಸುತ್ತಾನೆ.
      
 ಈ ಖರೀದಿಸುವಿಕೆ ಮನುಷ್ಯನನ್ನು
ಮನುಷ್ಯರಲ್ಲಿಯೇ ಗು0ಪು -ಗು0ಪಾಗಿ
ವಿ0ಗಡಿಸುತ್ತದೆ.
   
ಮನುಷ್ಯ ಬುದ್ಧಿ ಜೀವಿ.ಕೆಲವೊ0ದು
ರ0ಗಗಳನ್ನು ಹೊರತುಪಡಿಸಿ ಉಳಿದೆಲ್ಲಾ
ರ0ಗಗಳಲ್ಲಿ  "ಕೊಡು -ಕೊಳ್ಳುವಿಕೆ "  ಇದನ್ನು
ವ್ಯಾಪಾರಿಕರಣ ಮಾಡಿ ಹೆಚ್ಚು ಹೆಚ್ಚು ಲಾಭವನ್ನು
ಗಳಿಸುವ ಹ0ಚಿಕೆ ಮಾಡುತ್ತಿರುತ್ತಾನೆ.
  ಈ ಒ0ದು ಕಾರಣದಿ0ದ ಮನುಷ್ಯನಲ್ಲಿಯ
'ದಾಹ ' ತೆ ಹೆಚ್ಚಿ ಲಾಭವನ್ನೇ ಪ್ರಮುಖ
ಅ0ಶವನ್ನಾಗಿಸಿ ,ಉಳಿದೆಲ್ಲವೂ ಗೌಣ ವಾಗುವ
ಕಾರಣದಿ0ದ ಈ ಮೊದಲು ತನ್ನ ಕಾರ್ಯಗಳಲ್ಲಿ
ಅವಲ0ಬಿಸಿದವರನ್ನು ದೂರಮಾಡಿ ವಿಭಜನೆಯ
.ಮೊಳಕೆಯನ್ನು ಬಿತ್ತುತ್ತಾನೆ.ಬರಬರುತ್ತಾ 
ಆತನಲ್ಲಿ ದುಡಿಯುವ ಕ್ಯೆಗಳನ್ನು ಗುಲಾಮಗಿರಿಯ
ರೂಪಕ್ಕೆ ತಳ್ಳುವ ಪ್ರಯತ್ನ ಮಾಡಿ ಅ0ತವರನ್ನು
'ಉಪಯೋಗಕ್ಕೆ ಬಾರದ ಹಾಳೆಯ0ತೆ'
ಬಿಸಾಡುತ್ತಾನೆ. ಇ0ತಹ ಕೃತ್ಯಗಳಿ0ದ
ಎಚ್ಚರವಹಿಸಿ ,ಸ್ವಾವಲ0ಬನೆ ಕಡೆಗೆ ಗಮನ
ಹರಿಸುವದು ಶ್ರೇಯಸ್ಕರ.

No comments: