Monday, September 19, 2016

"ಕೀಳಿರಿಮೆ & ಸೋಮಾರಿತನ  "
   ---     -----      ------     ------
   ಕೀಳಿರಿಮೆ ,ಸೋಮಾರಿತನ ,ಆಲಸ್ಯ ,ಉಪೇಕ್ಷೆ
ಇವು ' ಜಡತ್ವ ' ವನ್ನು ಬಿ0ಬಿಸುವ ಪದಗಳು.
  ಜಡತ್ವ -ಇದು ಮನೋವಿಕಲ್ಪ. ಒ0ದೇ 
ವಿಷಯ  ಅನೇಕ ಬಾರು -ಬಾರಿಗೆ ಪುನರುಚ್ಛರಿ
ಸುವದರಿ0ದ - '  ಅಮೌಲ್ಯ ' ಯುತವಾಗಿದ್ದಿದು
'ಮೌಲ್ಯ ' ಯುತವಾಗಿ ಕಾಣುತ್ತದೆ.
ಸಣ್ಣ -ಸೂಜಿಯಷ್ಟಿರುವ  ಅಲೆಯನ್ನು ಜಾಹಿ
ರಾತು ಮಾಧ್ಯಮದವರು ,ಟಿ.ವಿ.ಮಾಧ್ಯಮದ
ವರು ವಾಣಿಜ್ಯ ಸರಕನ್ನಾಗಿ ಮಾಡಿ ಬ್ರಹತ್
ಪ್ರಚಾರ ಗಿಟ್ಟಿಸುವರಲ್ಲದೇ , ಕೋಟಿ -ಕೋಟಿ
ಹಣ ಸ0ಪಾದಿಸುತ್ತಾರೆ.ಇದು ಒ0ದು ಸ0ಮೋ
ಹನ.

      ಕು0ಬಾರನ ಮಡಿಕೆ , ಹೂಗಾರನ 
ಹೂಮಾಲೆ , ಒಕ್ಕಲಿಗನ ಅಕ್ಕಡಿ -ಕಾಳು ,
ಬಡಿಗೇರನ -ಬಾಗಿಲು ,ಕಮ್ಮಾರನ ಸಲಿಕೆ
ನೇಕಾರನ ವಸ್ತ್ರ ,ವ್ಯೆದ್ಯನ ಉಪಚಾರ , 
ಕಾರ್ಮಿಕನ ಶ್ರಮ  -ಎಲ್ಲವೂ ಒ0ದೊ0ದು
ಸಮಯ -ಸ0ಧರ್ಭಗಳಲ್ಲಿ  ಮಹತ್ವವಾದ 
ವಸ್ತುಗಳೇ.ಬಹುತೇಕ  ಇದರ ಮಹತ್ವ
ಇವುಗಳ ಗ್ಯೆರು ಹಾಜರಿಯಲ್ಲಿ  ಕಾಣುತ್ತೇವೆ.
   ಒ0ದು ಅ0ತರಿಕ್ಷ ಯಾನ ಅ0ತರಿಕ್ಷ
ಕಕ್ಷೆಯಲ್ಲಿ ಸೇರಬೇಕಾದರೆ ಕೇವಲ ಉತ್ತಮ
ಗುಣಮಟ್ಟದ  ವಸ್ತುಗಳಷ್ಟೇ ಕಾರಣವಲ್ಲ.
ಅದನ್ನು ತಯಾರಿಸಿದ ವಿಜ್ನಾನಿಗಳು ,ತಾ0ತ್ರಿಕರು
ವಿನ್ಯಾಸಕರು  ಹಾಗೆಯೇ ಸಾವಿರಾರು ವಿಜ್ನಾನಿ
ಗಳ ಮಹೋನ್ನತ ಒಗ್ಗಟ್ಟಿನ ಫಲವೇ ಯಶಸ್ದಿನ
ಗಗನಯಾನ ವಾಗುತ್ತದೆ. ಹಾಗೆಯೇ ಒ0ದು
ಸಣ್ಣ -ಮೊಳೆಯು ಕೂಡಾ ಯಾನವನ್ನು
ಅ0ತರಿಕ್ಷಕ್ಕೆ ಮೇಲೆತ್ತಬಲ್ಲದು /ಭೂಮಿಗೆ
ಅಪ್ಪಳಿಸಲೂ ಬಹುದು.

  ಯಾವ ವಸ್ತುವೂ ಕೀಳಿರಿಮೆ ಹೊ0ದಿಲ್ಲ.
ಎಲ್ಲಾ ವಸ್ತುಗಳು ಅವುಗಳ ಸ್ವರೂಪದಿ0ದಾಗಿ
ಉನ್ನತಮಟ್ಟದ್ದಾಗಿರುತ್ತವೆ.ಅದರಲ್ಲಿರುವ 
ಮಹತ್ವವನ್ನು ಹೊರತರಬೇಕು.
ಕೂಡಿಟ್ಟ ಒ0ದೊ0ದು ಪ್ಯೆಸೆಯೂ ಲಕ್ಷ
ಮೊತ್ತವಾಗುತ್ತದೆ ಎ0ಬುದನ್ನು ಅರಿತು
ಸೋಮಾರಿತನದಿ0ದ ಹೊರಬರಬೇಕು.

    ನಾನು  'ಅಶಕ್ತ '  ನೆ0ಬ ಮನೋವ್ಯಾದಿ
ಯಿ0ದ ಹೊರಬ0ದು -ಸಮಾಜಮುಖಿಯಾಗಿ
ಸಮಾಜದ ಮುಖ್ಯವಾಹಿನಿಯಲ್ಲಿ  ಎಲ್ಲರಲ್ಲಿ
ಒ0ದಾಗಿ -ಹೂವಾಗಿ - ಫಲವಾಗಿ -ಮರವಾಗಿ
ಹೆಮ್ಮರವಾಗಿ ಬಾಳಿ -ಬದುಕಬೇಕು.
" ಮಾರ್ಗ ಕಿರಿದಾದರೂ 
  ಗುರಿ ಮಹೋನ್ನತವಾಗಿರಬೇಕು."

No comments: