Monday, September 26, 2016

 "  ಓ ಭಾರತದಾತೆ  "
 ---     ----     -----  --

ಓ ಭಾರತದಾತರೆ ,ಓ ಭಾರತ ಕುಲಧಾತರೆ
ನಿಮಗೇನಾಗಿದೆ ,ಇ0ದು ನಿಮಗೇನಾಗಿದೆ
ನಿಮ್ಮ ಕ್ಯೆ ಶಕ್ತಿಗೆನಾಗಿದೆ ?
ನಿಮ್ಮ ಧ್ವನಿ ಶಕ್ತಿಗೇನಾಗಿದೆ ?
ನಿಮ್ಮ ಆತ್ಮ ಶಕ್ತಿಗೇನಾಗಿದೆ ?

ದೇಶದ ಪ್ರಜೆಗಳು
ಭಯೋತ್ಪಾದಕ ಕರಾಳ ರಾಕ್ಷಸನ
ದಮನ ಶಕ್ತಿಗೆ ಸಿಲುಕಿ ಸಾವನ್ನಪ್ಪುತ್ತಿರುವಾಗ
ಪ್ರತಿಭಟಿಸದೇ ಶಿಖ0ಡಿಯ0ತೆ
ತೆಪ್ಪೆಗೆ ಕುಳಿತಿರುವ ನಾವು
ನಿಹವಾಗಿ ಹಿ0ದುಳಿದವರಲ್ಲವೇ ?
ಅಲ್ಪ ಮತಿಗಳಲ್ಲವೇ ?
ಕೋತಿ ಆಟಕೆ ಬೇಲಿ ಸಾಕ್ಷಿ ಉ0ಟೆ ?
ಕಳ್ಳನಿಗೆ ಕನ್ನ ವಿದ್ಯೆ ಹೇಳಲು0ಟೆ ?

ಸ0ಗ್ರಹಿಸಿಟ್ಟ ವಿಷದ ಒಡಲು
ಹನಿಹನಿಯಾಗಿ ,ಹಳ್ಳವಾಗಿ ತೆರೆಗಳಾಗಿ
ಭೋರ್ಗರೆಯುತ್ತಿವೆ , 
ಎತ್ತಲೋ ಬೀಸುತ್ತಿದೆ ,ಎತ್ತಲೋ ಹರಡುತ್ತಿದೆ
ದಿಕ್ಕಿಲ್ಲ ,ದೆಶೆಯಿಲ್ಲ ,ಗೊತ್ತು ಗುರಿಯಿಲ್ಲ
ಆ ವಿಷದ ಒಡಲು....
ಒಡಲ ನು0ಗಿ ವಿಶ್ವೇಶ್ವರನಾಗಬೇಕು
ನೀಲಕ0ಠನಾಗಬೇಕು
ನಾವೆಲ್ಲರೂ ನೀಲಕ0ಠನಾಗಲು
ಪ್ರತಿಜ್ನೆಗ್ಯೆಯಬೇಕು
ಪ್ರತಿಜ್ನೆಗ್ಯೆಯುವ ಮುನ್ನ
ಹಿತ್ತಲೊಳಗಿರುವ ವಿಷ ಬೀಜವ ನ್ನು
ಕಿತ್ತೊಗೆಯಬೇಕು
ಕಿತ್ತೊಗೆಯಬೇಕು : ಕಿತ್ತೊಗೆಯಲೇಬೇಕು.

No comments: