" ಹೃದಯ ,ಕಾಲ ,ಜಗತ್ತು "
ಮಿಡಿಯುವ ಹೃದಯ ವಿರಬೇಕು
ಅರಿಯುವ ಹೃದಯ ವಿರಬೇಕು
ಅರಿತು ನಡೆಯುವ ಹೃದಯವಿರಬೇಕು
ಸಜ್ಜನರಿಗೆ ಗೌರವಿಸುವ ಹೃದಯವಿರಬೇಕು
ಧರ್ಮ -ಕಾಯಕ ಕೊ0ಡಾಡುವ ಹೃದಯವಿರಬೇಕು.
ಇದೆಲ್ಲಕ್ಕಿ0ತ ಮಿಗಿಲಾಗಿ
ಸನ್ಮಾರ್ಗ ತೋರಿಸುವ ಸದ್ಗುರುವಿನ
ಕರುಣೆ ,ಕಟಾಕ್ಷೆ ಇರಬೇಕು.ಇ0ತಿಪ್ಪು
ಇದು ನೋಡಾ ಹೃದಯವ0ತಿಕೆ .
ಉತ್ತಮರ ಕೂಟವು ಇದೆ
ದುರ್ಜನರ ಕೂಟವು ಇದೆ
ಉತ್ತಮರ ಸ0ಗವೂ ಇದೆ
ದುರ್ಜನರ ಸ0ಗವೂ ಇದೆ
ಉತ್ತಮರ ನಾಣ್ಣುಡಿಯೂ ಇದೆ
ದುರ್ಜನರ ದುರ್ನುಡಿಯು ಇದೆ.ಇವೆಲ್ಲಾ
ನಿರ್ಣಯಿಸುವವನು ಆ ಪರಮಾತ್ಮನಾದ
ಕಾಲನೇ.ಕಾಲಕಾಲೇಶ್ವರನೇ. ಇದು ನೋಡಾ
ಕಾಲನ ಮಹಿಮೆ.
ಕಾಲನ ವಿಶ್ವ ಭ0ಡಾರದ ಜ್ನಾನ ಪುಸ್ತಕಗಳಲ್ಲಿ
ಅಡಗಿರುವ ಜ್ನಾನ ಬಿ0ದುಗಳನ್ನು ಹಾಗು
ಸದ್ಗುರುವಿನ ಭೋಧಾನಾಮೃತ ಸವಿಯಲು
ಮೊದಲು ಸದ್ಗುರುವಿನ ಕೃಪಾಕಟಾಕ್ಷಕ್ಕೆ
ಭಾಜನರಾಗಬೇಕು.ಸದಾ ಪರಮಾತ್ಮನ
ಚಿ0ತನೆ ನಮ್ಮನ್ನು ಸದ್ಗುರುವು ಇರುವ
ಆಲದ ಮರಕ್ಕೆ ಸೇರಿಸುತ್ತದೆ.
ಎಲ್ಲಾಕ್ಕೂ ಕಾರಣನಾದ ಪರಮಾತ್ಮನೇ
ಎಲ್ಲ ಅರಿವಿಗೂ ಕಾರಣ.
ಪರಮಾತ್ಮನೇ ಜಗವೆಲ್ಲಾ
ಜಗವೇ ಪರಮಾತ್ಮ .!!!
No comments:
Post a Comment