Thursday, September 8, 2016

 "  ಅನ್ನ  "

 ಅನ್ನವಿಲ್ಲದೇ ಮನುಷ್ಯ ಬದುಕ
ಲಾರ.ಅದರಷ್ಟೇ ಮಹತ್ವದ್ದು  ನೀರು. ಇವೆರಡು 
ನಮ್ಮ ಜೀವದ ಪ್ರಾಣಗಳು.

     ಅನ್ನ ಸ0ಪಾದನೆಗಾಗಿ ಎಷ್ಟೋ ಕುಟು0ಬ
ಗಳು ,ಗುಳೇ ಹೋಗುವ ಪದ್ಧತಿ ನಿ0ತಿಲ್ಲ.
"ಅವತ್ತಿನ ದುಡಿತವೇ ಅವರಿಗೆ ಅ0ದಿನ ಅನ್ನ  ".
ಕೂಸನ್ನು ಕ0ಕುಳಲ್ಲಿ ಕಟ್ಟಿಕೊ0ಡು ಕೆಲಸ
ಮಾಡುವ ಹೆಣ್ಣು ಮಕ್ಕಳ ಜೀವನವ0ತೂ
ಘೋರ.ಮಕ್ಕಳನ್ನು ಬಿಟ್ಟು ಕೆಲಸ ಮಾಡುವದಕ್ಕೆ
ಮನಸು ಆಗುವದಿಲ್ಲ.ನವಮಾಸ ತು0ಬಿದ
ಮಕ್ಕಳನ್ನು ಕಟ್ಟಿಕೊ0ಡು ಊರೂರು ಅಲೆಯುವ
ವರಿಗೆ "  ಅನ್ನ "  ದ ಮಹತ್ವ ಚೆನ್ನಾಗಿ
ಅರ್ಥವಾಗಿರುತ್ತದೆ.

     ಈ ಕುಟು0ಬಗಳಲ್ಲಿಯ ಗ0ಡಸರು
ಹೆಣ್ಣು ಮಕ್ಕಳು ಸ0ಪಾದಿಸಿದ  ಹಣದಿ0ದ
ಸ0ಜೆ ಸಾರಾಯಿ -ಶಿ0ಧೆ  ಕುಡಿದು  ಗಲ್ಲಿ
ಗಲ್ಲಿ ತು0ಬಾ ಒದರಾಡುತ್ತಾರೆ. ಇದಕ್ಕೆ 
ಅನೇಕ ಸಾಮಾಜಿಕ ಕಾರಣಗಳಿರಬಹುದು.
    ಇವರಿಗೆ ಆಹಾರ ಭದ್ರತೆಯ ಜೊತೆಗೆ
ತೆಲೆಮೇಲೆ ಸೂರು  ಒದಗಿಸಿದರೆ  ಕನಿಷ್ಟ
ಪಕ್ಷ ಸಾಮಾಜಿಕ ಭದ್ರತೆ ಕೊಟ್ಟ0ತಾಗುತ್ತದೆ.
ಇ0ತಹ ಸಾಮಾಜಿಕ  ಯೋಜನೆಗಳು 
ಸಾಕಷ್ಟಿವೆ. ಆದರೂ ಇ0ತಹ  ಕಡು ಬಡುವರು
ತುತ್ತು ಅನ್ನಕ್ಕಾಗಿ ,ತು0ಡು ಬಟ್ಟೆಗಾಗಿ  ಗಲ್ಲಿ
ಗಲ್ಲಿ ಅಡ್ಡಾಡುವ ದೃಶ್ಯಗಳಿಗೇನು ಕಡಿಮೆಯಿಲ್ಲ.

     ಇದಕ್ಕಾಗಿಯೇ ಒ0ದು ಆಪ್ತ ಸಮಾಲೋ
ಚನೆ ಸಮಿತಿ ರಚಿಸಿ ಇ0ತಹ ಕುಟು0ಬಗಳಿಗೆ
ಮೂಲಭೂತ ಸೌಕರ್ಯಗಳನ್ನು ಒದಗಿಸು
ವದು ,ಜೊತೆಗೆ ಶ್ಯೆಕ್ಢಣಿಕ ಚಟುವಟಿಕೆಗಳನ್ನು
ಪ್ರಾರ0ಭಿಸಿದರೆ  ಇವರ ಜೀವನದಲ್ಲಿ 
'ಆಶಾದೀಪ ' ಬೆಳಗಲು ಸಾಧ್ಯ.

No comments: