" ದಾರ್ಶನಿಕರು -- 3 "
ಇವುಗಳನ್ನು ನೋಡಿ ಜನತೆ ರೋಸಿ
ಹೋಗಿದೆ.ಕ0ಗಾಲಾಗಿ ಬಿಟ್ಟಿದೆ.ಇ0ದು ಏನೋ ,
ನಾಳೆ ಏನೋ ,ಎ0ತೋ ಎನ್ನುವ ಜೀವ
ಭಯದಲ್ಲಿ ಜೀವನ ಸಾಗಿಸಬೇಕಾಗಿದೆ. ಶಾಲೆಗೆ
ಹೋದ ಮಕ್ಕಳು ಮರಳಿ ಬರುತ್ತಾರೋ ಇಲ್ಲೋ
ಅನ್ನುವ ಆತ0ಕದ ಛಾಯೆಯಲ್ಲಿ ತಾಯಿಯಾದ
ವಳು ಮನೆ ಬಾಗಿಲನ್ನೇ ಕಾಯುವ0ತಾಗಿದೆ.
'ಢ0 ಢಮಾರ ' ಶಬ್ದ ಕೇಳಿದಾಗ ಬೆಚ್ಚಿ ,
ಏನೋ ಸ್ಫೋಟ ಆಗಿದೆ ಅ0ತಾ ಭಾವಿಸಿ --
ನೆರೆಹೊರೆ ,ಓಣಿಕೇರಿ ,ರಸ್ತೆ -ಸ0ದು ಗೊ0ದು
ಗಳಲ್ಲಿ ಸಿಕ್ಕ ಸಿಕ್ಕವರನ್ನು ಕೇಳಿದ್ದನ್ನೇ ಕೇಳು
ವುದೇ ದೊಡ್ಡ ಕೆಲಸವಾಗಿಬಿಟ್ಟಿದೆ. ಕೆಲಸಕ್ಕೆ
ಹೋದವರು ಸ0ಜೆಯ ವೇಳೆಗೆ ಸುರಕ್ಷಿತವಾಗಿ
ಬ0ದರೆ 'ಪುಣ್ಯ ' ಎ0ದು ಕೊಳ್ಳುವ0ತಾಗಿದೆ.
ದೇವರಿದ್ದಾನೆ ಎ0ಬ ನ0ಬಿಕೆ ,ಅರಿವು
ದ್ಯೆವಪ್ರಜ್ನೆಯಾದರೆ , ದೇವರು ಮೆಚ್ಚುವ0ತೆ
ಮಾಡುವ ಕಾರ್ಯಗಳು "ಧರ್ಮ ಪ್ರಜ್ನೆ "
ಎನಿಸಿಕೊಳ್ಳುತ್ತವೆ.
ದ್ಯೆವಿಪ್ರಜ್ನೆ , ಧರ್ಮಪ್ರಜ್ನೆ ಮಾತ್ರ ಈ
ಸಾಮಾಜಿಕ ವಿಪ್ಲವ ,ಸ0ಕಟದಿ0ದ ನಮ್ಮನ್ನು
ಪಾರುಮಾಡಬಲ್ಲದು.ಶುದ್ಧಕಾಯಕ , ಧೃಡ
ನ0ಬಿಕೆ ,ಪ್ರೀತಿ ,ವಾತ್ಸಲ್ಯ ,ಸತ್ಯ , ಈ
ಸಧ್ಗುಣಗಳನ್ನು ನಾವು ಬೆಳಸಿಕೊಳ್ಳಬೇಕು.
ರೂಢಿಸಿಕೊಳ್ಳಬೇಕು.
ಎಲ್ಲಿ ಈ ಸಧ್ಗುಣಗಳು ಜಾಗೃತವಾಗಿರು
ವವೋ , ಅಲ್ಲಿ ಧರ್ಮ ಪ್ರಜ್ನೆ ತನ್ನಷ್ಟಕ್ಕೆ ತಾನೆ
ಜಾಗೃತವಾಗಿರುತ್ತದೆ.! ಆದರೆ ಈ ಮಾರ್ಗದಲ್ಲಿ
ಮುನ್ನಡೆಯುವ0ತೆ ದಾರಿತೋರುವ
' ದಾರ್ಶನಿಕರು ' ಅವತರಿಸಬೇಕಾಗಿದೆ.
ಭಗವ0ತನ ಲೀಲೆ ಬಲ್ಲವರಾರು.ಎಲ್ಲಾ
ದ್ಯೆವೇಚ್ಛೆ.
ಕೃಷ್ಣಾರ್ಪಣಮಸ್ತು.
No comments:
Post a Comment