Tuesday, October 31, 2017


 "ಕನ್ನಡ  ನಾಡು  ".
           --------------------
ಈ ನಮ್ಮ  ನಾಡು
ಚೆಲುವ  ಕನ್ನಡ ನಾಡು  .  ||

ದೇಶ -ವಿದೇಶಿಯರೆಲ್ಲಾ
ಕರೆಯುತಿಹರು
"ಬೆ0ಗಳೂರು "
ಚೆಲುವ ಹಸಿರು ಕನ್ನಡ ನಾಡು...1
ಕನ್ನಡ  ಕಲೆಯ  ನಾಡು
ಕನ್ನಡ ಹೆಮ್ಮೆಯ  ಬೀಡು
ನೋಡೋಣ ಬನ್ನಿ
"ಮ್ಯೆಸೂರು ದಸರಾ "
ಚೆಲುವ ನಾಡು  ಕನ್ನಡ  ನಾಡು. ..2

ಸಿರಿಗ0ಧದ ನಾಡು
ಬನಸಿರಿಯ ನಾಡು.
ಗುಡ್ಡ  ಬೆಟ್ಟಗಳ ನಾಡು
ನೋಡೋಣ ಬನ್ನಿ
"ಬದಾಮಿಯ " ಭುವದ ಭುವನೇಶ್ವರಿಯ
ಬನಶ0ಕರಿಯ ನಾಡು  ಶ0ಕರಾಯಣಿಯನಾಡು....3
ಕನ್ನಡ ಸಿರಿಯ
ಶಿಲಾ ವ್ಯೆಭವ ನೋಡಬನ್ನಿ
ಪಟ್ಟದಕಲ್ಲು ,ಐಹೊಳಿ ,ವಿಜಯಪುರಕ್ಕೆ
ಕನ್ನಡ ನಾಡು
ಚೆಲುವ ಕನ್ನಡ ನಾಡು  ನಮ್ಮ  ನಾಡು...4
ಜೋಗ  ,ಶರಾವತಿ ಜಲಪಾತಗಳ ನಾಡು
ಕನ್ನಡನಾಡು  ಚೆಲುವ ಕನ್ನಡ  ನಾಡು
ಕಾವೇರಿ ,ಕೃಷ್ಣ , ತು0ಗ-ಭದ್ರೆಯರ
ಜಲಸಿರಿಗಳ ನಾಡು
ಕನ್ನಡ ನಾಡು  ಚೆಲುವ ಕನ್ನಡ  ನಾಡು..5
ವೀರಪುಲಿಕೇಶಿ ,ಕೃಷ್ಣದೇವರಾಯ
ಚೆನ್ನಮ್ಮ ಸ0ಗೊಳ್ಳಿ ರಾಯಣ್ಣ
ಜನಿಸಿದ ವೀರ ಜನ್ಮಭೂಮಿ ನೋಡಬನ್ನಿ
ಕನ್ನಡ ನಾಡು ಚೆಲುವ ಕನ್ನಡ ನಾಡು..6
ಉಡುಪಿಯ ಶ್ರೀ ಕೃಷ್ಣ
ಧರ್ಮಸ್ಥಳದ ಮ0ಜುನಾಥ
ಮ್ಯೆಸೂರು ಚಾಮು0ಡೇಶ್ವರಿ
ಹ0ಪಿಯ ವಿರುಪಾಕ್ಷ ದೇವಾಲಯ
ಪುಣ್ಯ ಕ್ಷೇತ್ರಗಳನ್ನು ನೋಡಬನ್ನಿ
ಬಸವಣ್ಣ ,ಅಕ್ಕಮಹದೇವಿ
ಅಲ್ಲಮಪ್ರಭು ,ಸಿದ್ಧರಾಮೇಶ್ವರ ಸರ್ವಜ್ನ
ಲೋಕ ದಾರ್ಶನಿಕರ ನಾಡಿದು ನೋಡಬನ್ನಿ
ನಮ್ಮಕನ್ನಡ ನಾಡು ಚೆಲುವ ನಾಡು..7
ಕನ್ನಡ ಸ0ತರ ವಚನ ಸಾಹಿತ್ಯ
ನುಡಿಮುತ್ತುಗಳ ಸ0ಗಮ
ನೊಡೋಣ ಬನ್ನಿ ಚಿತ್ರದುರ್ಗಕ್ಕೆ
ಕನ್ನಡ ನಾಡು ನಮ್ಮ ಚೆಲುವ ನಾಡು...8



ಕಾಯಕ

ಮನುಷ್ಯ
ಕಾಯಕ ನಿರತನು.
ಏನಾದರೊ0ದು ಕೆಲಸ
ಮಾಡುತ್ತಲೇ ಇರುತ್ತಾನೆ ,ಮಾಡುತ್ತಲೇ
ಇರಬೇಕು .

ಮಾಡುತ್ತಾ..ಮಾಡುತ್ತಾ ಹೀಗೆ ಜೀವನ
ಪೂರ್ತಿಮಾಡುವದೇ ಆಗುತ್ತದೆ
......ನಾವು ಮಾಡಿಟ್ಟ್......
..ಈ ಬುತ್ತಿ ಗ0ಟಿನಲ್ಲಿ
ಯಾವುದು"ಬೆಷ್ಟ"
ಅನ್ನುವದು
..
ನಾವು ಕಾಲವಾದ ಮೇಲೆ
ಜನ ಗುರುತಿಸುವದು.
ಈಮಹಾನ್ ಕ್ಷಣಕ್ಕಾದರೂ
ನಾವು ನಿರ0ತರ ಒಳ್ಳೇ
ಕೆಲಸ ಮಾಡುತ್ತಲೇ ಸಾಗಬೇಕು
"ಶಬರಿಯ0ತೆ"

Monday, October 30, 2017


 " ಸ0ಗಾನ ಮಾತು "
  ----   ----  ----  ----   ----  ----
  * ಆಪೇಕ್ಷಗಳು - ಆಕ್ಷೇಪಗಳಾಗಬಾದದು.

  * ಸೋಲು -ಗೆಲವು ಗೇಲಿಯಾಟವಾಗಬಾರದು

  *  ಲಾಭಕ್ಕಾಗಿ ದೇವರು -ಗುರುವನ್ನು
      ಪಾಲುಮಾಡಬಾರದು.

"  ದೇವರು   "
         ----   ----   ---
ಜಾತಿ,ಮತ,ಪ0ಥ,ಧರ್ಮ ,ವೇದ,ಆಗಮ,
ಉಪನಿಷತ್ತು ಗಳಲ್ಲಿ ದೇವರಿದ್ದಾನೆ. ಯಾರು
ಯಾವ ಗು0ಪಿಗೆ ಸೇರುತ್ತಾರೋ ,ಆ ಗು0ಪಿ
ನಲ್ಲಿ ಅವರ0ದುಕೊ0ಡ0ತೆ ದೇವರಿದ್ದಾನೆ.
ದೇವರಿಲ್ಲದೇ ಜಗವಿಲ್ಲ.ಜಗವಿಲ್ಲದೇ ದೇವರಿಲ್ಲ.
ಭಕ್ತರಿಲ್ಲದೇ ದೇವರಿಲ್ಲ.ದೇವರಿಲ್ಲದೇ ಭಕ್ತರಿಲ್ಲ.
ದೇವನು ವ್ಯಕ್ತನೂ ಹೌದು.ಅವ್ಯಕ್ತನೂ ಹೌದು.
ಶಬ್ದನೂ ಹೌದು.ನಿಶಬ್ದನೂ ಹೌದು. ಆಕಾರವೂ
ಹೌದು.ನಿರಾಕಾರವೂ ಹೌದು. ಸಕಲ ಜೀವರಾಶಿ
ಗಳಲ್ಲಿಯೂ ದೇವನಿಹನು. ಸಕಲ ಜೀವರಾಶಿಗಳ
ಆತ್ಮನೂ ಅವನೇ.ಪರಮಾತ್ಮನೂ ಅವನೇ.

 ದೇವನನ್ನು ಅರಿಯಬೇಕಾದರೆ ನಮ್ಮ
ಮನಸ್ಸು ಸಕಲ ರೀತಿಯಿ0ದ ಭ0ಧ ಮುಕ್ತವಾ
ಗಿರಬೇಕು.ಬ0ಧ ಮುಕ್ತಿ ಸ್ಥಿತ ಪ್ರಜ್ನೆಗೆ ಹಾದಿ.
ಸ್ಥಿತಪ್ರಜ್ನೆ -ಏಕಚಿತ್ತಕ್ಕೆ ಹಾದಿ. ಏಕಚಿತ್ತ -ಓ0ಕಾರ
ಸಾಕ್ಷತ್ಕಾರಕ್ಕೆ ಹಾದಿ.ಆ ಓ0ಕಾರವೇ ದೇವ
ಸ್ವರೂಪ.ವಿಶ್ವ ಸ್ವರೂಪ.ವಿರಾಟ ಸ್ವರೂಪ.
ಇವೆಲ್ಲವುಗಳಿಗೆ ಪ್ರವೇಶ ದ್ವಾರ ಪ್ರಾರ್ಥನೆ.
ಪ್ರಾರ್ಥನೆಯಿ0ದ ಸಕಲವನ್ನು ಪಡೆಯಬಹುದು.

Wednesday, October 18, 2017



 "  ಸ0ಗಾನ  ಮಾತು  "

---    ----  ----   ---- --------- --
    *  ಶ್ರೀವಿಷ್ಣು -ಲಕ್ಷ್ಮೀದೇವಿಯ
          ವಿವಾಹ  ದೀಪಾವಳಿ.

    *    ರಾಮ-ಸೀತೆ -ಲಕ್ಷ್ಮಣ
          ಮರಳಿ ಅಯೋಧ್ಯಗೆ-- ದೀಪಾವಳಿ

    *     ಅಸುರ ಶಕ್ತಿಯ ಸ0ಹಾರ ದೀಪಾವಳಿ

  "  ದೀಪಾವಳಿಯ  ಆಶಯಗಳು  "
      ---    ----    -----   ----------
ಶುಭ0 ಕರೋತಿ ಕಲ್ಯಾಣ0
ಆರೋಗ್ಯ ಧನ ಸ0ಪದ0
ಶತೃ ವಿನಾಶಾಯ
ದೀಪ ಜ್ಯೋತಿ ನಮೋಸ್ತುತೇ
ದೀಪ ಜ್ಯೋತಿಃ ಪರಬ್ರಹ್ಮ
ದೀಪ ಜ್ಯೋತಿ ಜನಾರ್ಧನ0
ದೀಕ್ಷೋ ಹ0ತಿ ಸಾಪಾನಿ
ಸ0ಧ್ಯಾದೀಪ ನಮೋಸ್ತುತೇ...
   ನಾವು ಹಚ್ಚುವ ದೀಪದಿ0ದ ಶಾ0ತಿ,
ಸಮೃದ್ಧಿ ನೆಲಸಲಿ.ಎಲ್ಲರಿಗೂ ಮ0ಗಳವಾಗಲಿ..
ವಿಶೇಷವೆ0ದರೆ ಈಗಲೂ ಯಾವುದೇ ಸಮಾ
ರ0ಭಗಳಾಗಲಿ,ಉತ್ಸವ ,ಜಾತ್ರೆ, ಪೂಜೆ,
ಗ್ರಹ ಪ್ರವೇಶ ಇತ್ಯಾದಿ ಶುಭ ಕಾರ್ಯಗಳಲ್ಲಿ
ಮೊದಲು ನಾವು ದೀಪ ಹಚ್ಚುವ ಮೂಲಕ
ಬೆಳಕನ್ನು ನೀಡಿ ಶುಭ ಆಕಾ0ಕ್ಷಿಗಳಾಗಿ
ಜ್ಯೋತಿಯನ್ನು ಪ್ರಾರ್ಥಿಸುತ್ತೇವೆ.ಈಗಲೂ
ದೇವಾಲಯಗಳಲ್ಲಿ 'ನ0ದಾ ದೀಪ ' ಉರಿಸು
ವದರ ಹಿನ್ನಲೆ ಬೆಳಕನ್ನು ಬಯಸುವದಾಗಿದೆ.
----  ------  -'
ಕೃಪೆ - ಅ0ತರ್ಜಾಲ
------
ಸರ್ವರಿಗೂ ದೀಪಾವಳಿಯ ಶುಭಾಷಯಗಳು

Tuesday, October 17, 2017

"ದೀಪಾವಳಿ ಹಬ್ಬದ ವ್ಯೆಶಿಷ್ಟ್ಯಗಳು "
--- ---- ---- ----- ------------
ದೀಪ +ಅವಳಿ= ದೀಪಾವಳಿ.ಅ0ದರೆ
ಜೋಡು ದೀಪ.ಸಾಲು ಸಾಲು ದೀಪಗಳ ಹಬ್ಬ.
ಹಬ್ಬದ ವ್ಯೆಶಿಷ್ಟ್ಯಗಳು
------ ----- --------

ತ್ರಯೋದಶಿ. --- ಬ0ಗಾರ ,ಒಡವೆ ಪಾತ್ರೆ
ಖರೀದಿಗೆಶುಭದಿನ.ವ್ಯೆದ್ಯ
ಧನ್ವ0ತರಿ ಜನಿಸಿದ್ದು ಈ ದಿನ.
ಪೃಥ ರಾಜ --- ಗೋರೂಪದಲ್ಲಿರುವ ಭೂದೇವಿ
ಯನ್ನು ಓಡಿಸಿಕೊ0ಡು ತನ್ನ
ರಾಜ್ಯವನ್ನು ಸುಭೀಕ್ಷೆಯಾಗಿ ಮಾಡಿದ್ದು
ಈ ಕಾರಣ ಭೂಮಿಗೆ 'ಪೃಥ್ವಿ'
ಎ0ದು ಕರೆಯುತ್ತಾರೆ.
ಚತುರ್ದಶಿ. ---- ಈ ದಿನ ನೀರು ತು0ಬುವ
ಹಬ್ಬವೆ0ದೇ ಕರೆಯುತ್ತಾರೆ.ಶ್ರೀ ಕೃಷ್ಣ
'ನರಕಾಸುರನನ್ನು 'ವಧಿಸಿ,16000
ಸ್ತ್ರೀಯರನ್ನು ಬ0ಧಮುಕ್ತಗೊಳಿಸಿದ್ದು.
ನರಕಾಸುರನನ್ನು ವಧಿಸಿದ್ದರಿ0ದ ಈ ದಿನ
ನರಕ ಚತುರ್ದಶಿ ಎ0ದೇ ಕರೆಯುತ್ತಾರೆ
ಬಲಿಪಾಡ್ಯಮಿ --ಉತ್ತರ ಕರ್ನಾಟಕ -ಮಹಾರಾ
ಷ್ಟ್ರದಲ್ಲಿ ಅ0ಗಡಿಕಾರರು ತಮ್ಮ ವರ್ಷದ
ಹೊಸ ಲೆಕ್ಕಗಳನ್ನು ಹೊಸ ಖಾತೆ -ಕಿರ್ದಿ ಪುಸ್ತಕ
ಮೂಲಕ ಪ್ರಾರ0ಭಿಸುತ್ತಾರೆ.ಶುಭ+ ಲಾಭ
ಸ0ಕೇತಾಕ್ಷರಗಳೊ0ದಿಗೆ ಸ್ವಸ್ತಿಕ ಚಿಹ್ನೆಯನ್ನು
ಪ್ರತಿ ಪುಸ್ತಕದ ಮೇಲೆ ಬರೆಯುತ್ತಾರೆ.
*ಶ್ರೀ ವಿಷ್ಣು ವಾಮನರೂಪಿಯಾಗಿ 'ಬಲಿ ಚಕ್ರ
ವರ್ತಿ'ಯನ್ನು ಪಾತಾಳಕ್ಕೆ ಕಳಿಸಿದ ದಿನ.
*ಶ್ರೀ ರಾಮಚ0ದ್ರ ರಾವಣನನ್ನು ಸ0ಹರಿಸಿ
ಸೀತೆ ,ಲಕ್ಷ್ಮಣ ಸಮೇತ ಅಯೋಧ್ಯಗೆ
ಮರಳಿದ ದಿನ.
* ಹೊಸದಾಗಿ ಮದುವೆಯಾದ ಅಳಿಯ
ಮಗಳನ್ನು ಹಬ್ಬಕ್ಕೆ ಕರೆಯಿಸಿ,ಅವರಿಗೆ ಹೊಸ
ಬಟ್ಟೆ ,ಬ0ಗಾರ ಗಳಿ0ದ ಸತ್ಕರಿಸುವ ದಿನ.
-- ---- ----' ----- ----- ----
ಕೃಪೆ -ಅ0ತರ್ಜಾಲ
-------------
ಸರ್ವರಿಗೂ ದೀಪಾವಳಿಯ ಶುಭಾಷಯಗಳು


 " ಸ0ಗಾನ   ಮಾತು "
   --- -----   -----   ----   ------
  *  ನರಕಾಸುರನ  ಸ0ಹಾರ ದೀಪಾವಳಿ

  *  ಬಲಿಚಕ್ರವರ್ತಿ ಪಾತಾಳ -ದೀಪಾವಳಿ

  *  ಧನ್ವ0ತರಿ ಜನಿಸಿದ ಹಬ್ಬ ದೀಪಾವಳಿ

Monday, October 16, 2017

 "  ದೀಪಾವಳಿ  "
                 ----   -----------
    ದೀಪಗಳ ಹಬ್ಬವೇ ದೀಪಾವಳಿ. ದೀಪಾವಳಿಗೆ
8-10 ದಿವಸ ಮು0ಚೆಯೇ ಮನೆ ಎಲ್ಲಾ ಸಾರಿಸಿ ,ಸುಣ್ಣ -ಬಣ್ಣ ಹಚ್ಚುವ ಹಬ್ಬ ದೀಪಾವಳಿ.
ದೀಪಾವಳಿ ಹೊಸಬಟ್ಟೆ ,ಸಿಹಿಊಟ , ಪಟಾಕಿ
ಹಾರಿಸುವದು,ಸುರ-ಸುರಕಡ್ಡಿ ಸುಡುವದು,
ಪಣತಿಗಳಲ್ಲಿ ದೀಪ ಹಚ್ಚುವದು -- ಚಿಕ್ಕಮಕ್ಕಳಲ್ಲಿ
ಹೊಸ ಚ್ಯೆತನ್ಯ ,ಹುರುಪು ,ಸ0ತೋಷ ತರುವ
ಹಬ್ಬ ದೀಪಾವಳಿ.
  ವಾಸಿಸುವ ಮನೆಯಲ್ಲಿ ಕಸ ಗೂಡಿಸದೇ
ಧೂಳಿನ ರಾಶಿ ಇರುತ್ತದೆ.ಈ ಧೂಳಿನ ರಾಶಿಯು
ಆರೋಗ್ಯಕ್ಕೆ ಒಳ್ಳೆಯದಲ್ಲ.ಬೆಳವಣಿಗೆಗೆ ಒಳ್ಳೆಯ
ದಲ್ಲ.ವರ್ಷಕ್ಕೊಮ್ಮೆಯಾದರೂ ಶುಚಿಗೊಳಿಸಿ
ಧೂಳಿಕಣಗಳಿ0ದ ಮುಕ್ತಗೊಳಿಸಿ -ದೀಪವನ್ನು
ಹಚ್ಚುವದನ್ನು ನಮ್ಮ ಹಿರಿಯರು ಸ0ಪ್ರದಾಯ
ವಾಗಿ ಆಚರಿಸಿಕೊ0ಡು ಬ0ದಿದ್ದಾರೆ. ಜಡತ್ವ,
ಜ0ಜಾಟಗಳಿ0ದ ಕೂಡಿದ ಈ ಜೀವನಕ್ಕೆ
ಆಸಕ್ತಿ,ಉತ್ಸಾಹ ಮೂಡಿಸುವ ಹಿನ್ನಲೆಯೇ
ದೀಪಾವಳಿಯ ಆಚರಣೆ. ದಕ್ಷಿಣ ಭಾರತದಲ್ಲಿ
ದೀಪಾವಳಿ ಹಬ್ಬವನ್ನು ಆಶ್ವೀಜ ಕೃಷ್ಣ ಪಕ್ಷದ
ತ್ರಯೋದಶಿಯಿ0ದ ಹಿಡಿದು ದೀಪಾವಳಿ
ಅಮವಾಸ್ಯೆ ಹಾಗು ಅದರ ಮುರುದಿನ ಬಲಿ
ಪಾಡ್ಯಮಿ-ಹೀಗೆ ಒಟ್ಟು  ನಾಲ್ಕು ದಿನಗಳವರೆಗೆ
ಈ ಹಬ್ಬವನ್ನು ಆಚರಿಸುತ್ತಾರೆ.
   ಅಸತೋಮಾ ಸದ್ಗಮಯ
   ತಮಸೋಮ ಜ್ಯೋತಿರ್ಗಮಯ
   ಮೃತ್ಯೋರ್ಮ ಅಮೃತ0ಗಮಯ
   ಓ0 ಶಾ0ತಿ,ಶಾ0ತಿ ,ಶಾ0ತಿ..
ಅಜ್ನಾನವನ್ನು ಕಳೆದು ಸುಜ್ನಾನದ ಜ್ಯೋತಿ
ಯನ್ನು ಬೆಳಗುವ ಈ ದೀಪಾವಳಿ ಹಬ್ಬಕ್ಕೆ
'ಕೌಮಿದಿ' ಹಬ್ಬವೆ0ತಲೂ ಕರೆಯುತ್ತಾರೆ.
    ಎಲ್ಲರಿಗೂ ಸ0ತೋಷ ಕೊಡುವ ,ಭಾ0ಧವ್ಯ
ಗಳನ್ನು ಬೆಸೆಯುವ,ಉತ್ಸಾಹವನ್ನು ಇಮ್ಮಡಿ
ಸುವ,ರಾಗ -ದ್ವೇಷ ಮರೆತು ,ಸೌಹಾರ್ಧ ,
ಸ0ಪ್ರೀತಿಯನ್ನು ಹೊರಸೂಸುವ ಈ ಹಬ್ಬವನ್ನು
ಬಡವರಿ0ದ ಹಿಡಿದು ಎಲ್ಲರೂ ಸಡಗರದಿ0ದ
ಆಚರಿಸುತ್ತಾರೆ.

ದೀಪಾವಳಿ ಅಮವಾಸ್ಯೆಯೆ0ದು ಲಕ್ಷ್ಮೀದೇವಿಯ
ಪೂಜೆಯನ್ನು ಸ0ಭ್ರಮದಿ0ದ ಆಚರಿಸುತ್ತಾರೆ.
ವ್ಯಾಪಾರಸ್ಥರಾದರೆ ಅವರ ಅ0ಗಡಿಯಲ್ಲಿ
ದುಡಿಯುವ ಎಲ್ಲಾ ಕಾರ್ಮಿಕರಿಗೂ ಹೊಸ
ಬಟ್ಟೆಗಳನ್ನು ಕೊಡುವದು ,ಅವರ ವೇತನ
ಇತ್ಯಾದಿಗಳನ್ನು ಪರಿಷ್ಕರಿಸುವದು ರೂಢಿ.
ಪೂಜೆಗೆ ಬ0ದ ಎಲ್ಲರಿಗೂ ಬೆ0ಡು,ಬೆತ್ತಾಸ
ಚೂರಮರಿ ಕೊಡುತ್ತಾರೆ.ಆದಿನ ರಾತ್ರಿಯಿ0ದ
ಬೆಳಗಿನವರೆಗೆ ಲಕ್ಷ್ಮೀದೇವಿಯ ಮು0ದೆ ಹಚ್ಚಿದ
ಕಾಲುದೀಪ (ಸಮೆ) ಗಳನ್ನು  ಬೆಳಗಿನವರೆಗೆ
ತ್ಯೆಲವನ್ನು ಹಾಕುತ್ತಾ ದೀಪಗಳನ್ನು ಉರಿಸು
ತ್ತಾರೆ.ಲಕ್ಷ್ಮೀದೇವಿಯು ಇದರಿ0ದ ಸ0ತುಷ್ಟ
ಳಾಗಿ ಸ0ಪತ್ತು ,ವ್ಯಾಪಾರ ಅಭಿವೃದ್ಧಿ,ಸೌಖ್ಯ
ನೀಡುತ್ತಾಳೆವೆ0ಬುದು ನ0ಬಿಕೆ. ದೊಡ್ಡ ದೊಡ್ಡ
ವ್ಯಾಪಾರಸ್ಥರು ದೀಪಾವಳಿ ಹಬ್ಬದ ಆಮ0ತ್ರಣ
ಪತ್ರ ನೀಡಿ ಹಬ್ಬಕ್ಕೆ ಅಹ್ವಾನಿಸುತ್ತಾರೆ. ಆದರೆ ಈಗ ಈ ಪದ್ಧತಿ ಕಡಿಮೆ.ಈಗ ವ್ಯಾಟ್ಸಫ್
ದಿ0ದ ಸ0ದೇಶ ಕಳಿಸುತ್ತಾರೆ.
ಈ ದಿನವೇ ವಿಷ್ಣು -ಲಕ್ಷ್ಮೀದೇವಿಯನ್ನು ವಿವಾಹ
ವಾಗಿದ್ದು ಎ0ದು ಪುರಾಣಗಳಲ್ಲಿ ಉಲ್ಲೇಖಿಸಿದೆ.
--'  ----'   -----   -----   ----   -----  ---
ಸರ್ವರಿಗೂ ದೀಪಾವಳಿಯ ಶುಭಾಷಯಗಳು
----  --------   -----   ----   ----   ----

 "  ಸ0ಗಾನ  ಮಾತು "
  --    ---  ---   ---  -----  ---------
  *  ಸಾಲು - ಸಾಲುಗಳ ಹಬ್ಬ ದೀಪಾವಳಿ

  *  ಗೃಹಾಲ0ಕಾರ ಹಬ್ಬ ದೀಪಾವಳಿ

  *   ಗೃಹ ಸ್ವಚ್ಛ ಅಭಿಯಾನ ದೀಪಾವಳಿ.

Friday, October 13, 2017


 "  ಸ0ಗಾನ ಮಾತು "

    --   ---  ---  ---   ---   ---  ----
  *  "  ತು0ಬಿದ ಕೊಡ ತುಳುಕುವದಿಲ್ಲ
         ಅರಳಿದ ವಿನಯ ಮಾಸುವದಿಲ್ಲ ".

  *   "  ಜ್ನಾನಕ್ಕೆ  ಬರಗಾಲವಿಲ್ಲ
          ಅಜ್ನಾನಕ್ಕೆ  ಉಳಿಗಾಲವಿಲ್ಲ ".

  *    ಸುಮ್ಮನೆ ಛಟಾಕಿ ಹಾರಿಸಿದರೆ
        ' ಢ0 ' ಅನ್ನುತ್ತೆ
        ಪಟಾಕಿ ಹಾರಿಸಿದರೆ-'ಟುಸ್ಸ 'ಅನ್ನುತ್ತೆ
        ಸುಳ್ಳಿನ ಕ0ತೆಗಳು !!.


  "   ಆತ್ಮಾನ0ದ    "
        ---    ---   ---   -------
    " ಕರ್ಮಫಲವನ್ನು  ಬೆನ್ನಟ್ಟಿಹೋದರೆ
      ಸುತ್ತಲೂ ಕಾರ್ಗತ್ತಲು ಕಾಣುವೆ.
      ನಿಷ್ಕಾಮ ಕರ್ಮ ಮಾಡುತ್ತಾ ಸಾಗು
       ಬೆಳಕು -ಸೂರ್ಯಪ್ರಕಾಶ ನೀ ಕಾಣುವೆ
       ಇದೇ ಆತ್ಮಾನ0ದ ಯೋಗದ ಬುನಾದಿ".
"     ಲೋಭ   "
       ---    ---    ---  --
    ಲೋಭ ಎ0ದರೇನು..? ಲೋಭತನ
ಎ0ದರೇನು..?ಯಾವುದಕ್ಕೆ ಲೋಭ
ಎನ್ನಬೇಕು..? ಯಾವುದಕ್ಕೆ ಇಲ್ಲ್..? ಇದು
ಚರ್ಚೆಯ ವಿಷಯ.

         ಆಸೆಗಳಿರಬೇಕು.ದುರಾಸೆಗಳಿರಬಾರದು.
'ಆಸೆಯೇ ದುಃಖಕ್ಕೆ ಮೂಲ ಕಾರಣ. ' ಆಸೆಗಳಿ0ದ
ಉತ್ಪನ್ನವಾಗುವ,ಯಾರಿಗೂ
ಬೇಡವಾದ0ತಹ ವಿಷಯಗಳು 'ಲೋಭತನ '
ವೆ0ದು ಕರೆಯಬಹುದು. ಇವುಗಳನ್ನು ಅನು
ಸರಿಸುವವನೇ ಲೋಭಿ.

ಹಾಗಾದರೆ  ಯಾವುದು ಲೋಭತನ..? ಯಾವ
ಒ0ದು ಕ್ರಿಯೆಯಿ0ದ  ಸಜ್ಜನರೆನಿಸಿಕೊ0ಡವರು,
ಹಿರಿಯರು, ಆದರ್ಶವುಳ್ಳವರು, ಮಾನವ0ತರು
ಹಿ0ದೆ ಸರಿಯುವರೋ.? ಯಾವ ಒ0ದು
ಕ್ರಿಯೆಗೆ  ಸ0ಪೂರ್ಣವಾಗಿ ಬೆ0ಬಲಿಸದಿಲ್ಲವೋ
ಅವೆಲ್ಲಾ ಲೋಭಗಳು.ದುರ್ಮಾರ್ಗಗಳು.

   ಈ ಲೋಭಗಳಿ0ದ ಲೋಭತನ ಹೆಚ್ಚಿ
ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಹಾಳು
ಗೆಡುವುತ್ತದೆ.ಲೋಭದ ಮದದಿ0ದ ಕೆಳಗೆ
ಬಿದ್ದವನು ಮೇಲೇರಬೇಕಾದರೆ ಹರಸಾಹಸ
ಮಾಡಿರಬೇಕು. ಇಲ್ಲವೇ ಹಿ0ದೆ ಮಾಡಿದ
ಯಾವುದೋ ಸತ್ಕರ್ಮಗಳು  ಅವನ ಇ0ದಿನ
ದುಸ್ಥಿತಿಯಲ್ಲಿ  ಸ್ವಲ್ಪ ಮಟ್ಟಿಗೆ  ಮೇಲೇರಲು
ಸ0ಜೀವಿನಿಯಾಗಬಹುದು.

  ಮನುಷ್ಯ ಯಾವಾಗ ಬದಲಾಗುತ್ತಾನೆ ?
ಹೇಗಾಗುತ್ತಾನೆ ? ಹೇಳಲಿಕ್ಕಾಗುವದಿಲ್ಲ.
ಅವಕಾಶ ಸಿಕ್ಕಾಗಲೆಲ್ಲಾ  ಸತ್ಕಾರ್ಯಗಳನ್ನು
ಮಾಡುತ್ತಾ ಹೋದರೆ ,ಈ ಸತ್ಕಾರ್ಯಗಳೇ
ಮು0ದೆ  ನಮ್ಮ ಆಪತ್ಕಾಲೀನ ಬ0ಧುಗಳಾ
ಗುತ್ತಾರೆ.

ಆಸೆ ಭವಿಷ್ಯದ  ಆದರ್ಶದ ಕಲ್ಪನೆಯ ಕೂಸಾದರೆ
ಲೋಭ -ಭವಿಷ್ಯದ ನರಕ.ಲೋಭ ಪ್ರವೃತ್ತಿಯು
ಮನಸ್ಸನ್ನು ಆವರಿಸದ0ತೆ  ಇ0ದ್ರಿಯಗಳನ್ನು
ನಿಗ್ರಹಿಸುವದು ಅಗತ್ಯ.

Thursday, October 12, 2017

"   ಸಾಲಗಳು   "
      ---    -----    ---
ಸಾಲಗಳ ಸುಳಿಯಲ್ಲಿ ಸಿಕ್ಕವನು ಮೇಲೆ
ಬರಲಾರ. ಸಾಲದ ಸುಳಿ ಯಾವ ಕಡೆ ಸುಳಿಯ
ತ್ತದೆಯೋ ಗೊತ್ತಾಗುವದಿಲ್ಲ.ಅದರ ಆಳವು
ಗೊತ್ತಾಗುವದಿಲ್ಲ.ಒಮ್ಮೊಮ್ಮೆ ಈ ಸುಳಿಗಳು
ಚಕ್ರತೀರ್ಥಕ್ಕೆ ಸೇರಿಸಿ ಬಿಡುತ್ತವೆ.

"  ಹಾಸಿಗೆ ಇದ್ದಷ್ಟು ಕಾಲು ಚಾಚು ".- ಈ
ಗಾದೆಯ0ತೆ ನಾವು ನಡೆದರೆ  ನಮ್ಮ ಜೀವನ
ವನ್ನು ಸಾಲಗಳ ಸುಳಿಯಿ0ದ ಪಾರು ಮಾಡ
ಬಹುದು.

  ಮೋಜಿನ ಜೀವನ ,ಅಡ0ಬರದ ಜೀವನ,
ವಿಲಾಸಿ ಜೀವನ ,ನಾವು ಯಾರಿಗೇನು ಕಡಿಮೆ
ಇಲ್ಲವೆ0ದು ತೋರ್ಪಡಿಸುವ ಇರಾದೆಯುಳ್ಳ
ವರು ಮೊದ -ಮೊದಲು ಸಣ್ಣ ಸಣ್ಣ ಸಾಲಗಳಿಗೆ
ಅ0ಟಿಕೊ0ಡು ಬರಬರುತ್ತಾ ,ಸಾಲದ ಜಾಲಕ್ಕೆ
ಜೋತು ಬಿದ್ದು , ಊರಲ್ಲಿ ಎಷ್ಟು ಸಾಲಕೊಡುವ
ತಾಣಗಳಿವೆಯೋ ಅಲ್ಲಲ್ಲಿ ಇವರು ಸಾಲ ಪಡೆ
ಯುವ ಗಿರಾಕಿಗಳಾಗುತ್ತಾರೆ. ಇವರ ಆದಾಯ
ಅವರು ತೆಗೆದುಕೊ0ಡ ಸಾಲಕ್ಕೆ -ಬಡ್ಡಿಗೆ
ಹೋಗುತ್ತದೆ.

ಇಲ್ಲಿ ಸಾಲ ಪಡೆಯುವವನ ಚಾತುರ್ಯವನ್ನು
ಮೆಚ್ಚಬೇಕು. ಒ0ದು ಕಡೆಯ ಸಾಲವನ್ನು ,
ಇನ್ನೊ0ದು ಕಡೆ ಸಾಲ ತೆಗೆದು ತೀರಿಸುವ
ಬಹು ದೊಡ್ಡ ವ್ಯವಸ್ಥೆಯಲ್ಲಿ  ಇ0ತವರು ಸಿಕ್ಕು
ನರಳಾಡುತ್ತಾರೆ.

    ಹಿ0ದಿನ ತೆಲೆಮಾರಿನ ಜನ ಸಾಲಕ್ಕೆ
ಹೆದರುತ್ತಿದ್ದರು. ಮನೆ ಮು0ದೆ ಬ0ದು ನಿಮ್ಮದು
ಬಾಕಿ ಐತಿ ನೋಡ್ರಿ,ಅ0ದರ ಅವರಿಗೆ ಅದು
ಮರ್ಯಾದೆಯ ಪ್ರಶ್ನೆಯಾಗುತ್ತಿತ್ತು. ಅಷ್ಟೊ0ದು
ಅವರಿಗೆ ಸಾಲದ ಭಯ.

ಹೊಸ ಕಾಲ.ಅಭಿವೃದ್ಧಿ ಹೊ0ದ ಬೇಕಾದರೆ
ಸಾಲ ತೆಗೆಯಬೇಕು.ಅನಿವಾರ್ಯ.ಇದು ಇರಲಿ.
ಆದರೆ ಸಾಲ ತೀರಿಸುವ ಸಾಮರ್ಥ್ಯದ ಮೇಲೆ
ಸಾಲ ಪಡೆದರೆ ಎಲ್ಲವೂ ನೆಟ್ಟಗೆ.


  "  ಸ0ಗಾನ  ಮಾತು "
   ---   ---   ---   ---  ---  ---  ------
  *   ಶೂನ್ಯದ  ಹಿ0ದಿನ ಸ0ಖ್ಯೆಗಳಿಗಾಗಿ
       ನಾವೆಲ್ಲಾ ಶಕ್ತಿಯನ್ನು ದೃವೀಕರಣಗೊ
       ಳಿಸುತ್ತೇವೆ.
       ' ಶೂನ್ಯ '  --  ಪ್ರತಿಪಾದನೆಯೇ
      ನಿಜವಾದ ಶಕ್ತಿ ಎ0ಬುದನ್ನು
      ಮರೆಯುತ್ತೇವೆ.

  *   ಬೇಡವೆ0ದರೂ ಸ0ಪತ್ತು ಬ0ದಾಗ
       ಮನಸ್ಸು ತನ್ನ  ಚೇತನಾ ಶಕ್ತಿಯನ್ನು
       ಕಳೆದುಕೊಳ್ಳುತ್ತದೆ.

  *   ಸತ್ಯ0 --  ಶಿವ0  --ಸು0ದರ0
       ದೇವನ ಅಸ್ತಿತ್ವದ ಮೂಲಬೀಜಾಕ್ಷರ.
   "  ನೆನಪು  "
---   ---  ---
  ನೆನಪೊ0ದು ಬುಗುರಿ ಆಟ.ನಾವು ಹೇಗೆ
ಬುಗುರಿ ಆಟ ಆಡಿಸುತ್ತೇವೆಯೋ..?ಹಾಗೆ
ನೆನಪಿನ ಆಟ.ಬುಗುರಿ ಆಟ ಆಡಬೇಕಿದ್ದರೆ  ,
ಅದಕ್ಕೆ ಬುಗುರಿಬೇಕು,ಬುಗುರಿಗೆ ಸುತ್ತಲು
ದಾರಬೇಕು.ದಾರ ಇಲ್ಲದೇ ಬುಗುರಿ ಆಡಲು
ಸಾಧ್ಯವಿಲ್ಲ.ಇಲ್ಲಿ ಮುಖ್ಯವಾದ ವಿಷಯವೆ0ದರೆ,
ನೆನಪುಗಳು ದಾರ ಇದ್ದ ಹಾಗೆ.ಬುಗುರಿಗೆ
ದಾರ ನಾವು ಯಾವ ಎಳೆಯಿ0ದ ಸುತ್ತುತ್ತೇ
ವೆಯೋ,..?ಎ0ತಹ ದಾರಗಳಿ0ದ ಸುತ್ತುತ್ತೇ
ವೆಯೋ..?ಬುಗುರಿ ಮೊಳೆ ಎಷ್ಟು ಚೂಪಾಗಿ
ರುತ್ತೋ.   ಅದರ ಮೇಲೆ ಬುಗುರಿಯ ಆಟ.

    ನೆನಪುಗಳು ಘನೀಕೃತವಾಗಿರುತ್ತವೆ.
ಯಾವಾಗ ನೆನಪಿನ ಆಟ ಆಡಬಯಸುತ್ತೇ
ವೆಯೋ, ಆವಾಗ ಆ ಬುಗುರಿ ಗರಿ ಕೆದರಿ
ಹೊರ ಬರುತ್ತವೆ. ನೆನಪುಗಳು ಮಾಸುವದಿಲ್ಲ.
ಒಳ್ಳೆಯ ನೆನಪುಗಳನ್ನು ಮಾತ್ರ  ನೆನಪುಮಾಡಿ
ಕೊಳ್ಳಬೇಕು.ಸ0ತೋಷ ಇಮ್ಮಡಿಯಾಗುತ್ತದೆ.
ಕೆಟ್ಟ ನೆನಪುಗಳು,ಅವುಗಳ ಸ್ಮರಣೆ ಮನಸ್ಸಿಗೆ
ಗಾಯ ಮಾಡುತ್ತವೆ.ಅದರಿ0ದ ದೂರ ಇರಬೇಕು

    ನೆನಪು ಮನಸ್ಸೆ0ಬ ಬುಗುರಿಯ ಆಟ.
ಆಡಲು ಪ್ರೇರೇಪಿಸುತ್ತದೆ.ಆಟ ಆಡಬೇಕೋ.?
ಬೇಡವೋ..?ನಾವು ನಿರ್ಧರಿಸಬೇಕು.

Wednesday, October 11, 2017


 "  ಸ0ಗಾನ  ಮಾತು  "
   ---    ----    ----    ----    ----
  *  " ಸೋಲುಗಳು ಕ್ರೀಡೆಯೆ0ದು
        ಭಾವಿಸಿದರೆ -  ಸಾಧಕಗಳಾಗುತ್ತವೆ ".

  *  "  ಸ್ಫೋಟದಿ0ದಾದ ಗು0ಡಿ ಮುಚ್ಚಬಹುದು
         ಹೃದಯದ ಗು0ಡಿ ಸ್ಫೋಟವಾದರೆ
         ಮುಚ್ಚಲಾಗದು ".

  *  "  ಗೆಳೆತನದಲ್ಲಿಯ ಮೋಸಗಳು
         ಅಭಿವೃದ್ಧಿಗೆ  ತಾರಕ ".





    "    ಸತ್ಯ  ಹಾಗು  ಸ0ಶೋಧನೆ "
       ---    ---   ---   ----     --- -----
        ಸ0ಶೋಧನಾತ್ಮಕ    ಸತ್ಯಗಳು
ಹೊರಬರಲಿ.ಸ್ವಾಗತ. ಆದರೆ ಈ ಸತ್ಯಗಳು
ಈಗಿನ ಲೋಕ ವ್ಯವಹಾರಗಳಿಗೆ ,ಇತರೆ
ಚಿ0ತನೆಗಳಿಗೆ ಪೂರಕವಾಗಿರಬೇಕು.
    ಸತ್ಯದ -  ದನಿ ನಮ್ಮಲ್ಲಿ ಉಡುಗಿರುವ
ಚ್ಯೆತನ್ಯವನ್ನು ಬಡಿದೆಬ್ಬಿಸಬೇಕು. ಅದರ ಬದಲು
ಚ್ಯೆತನ್ಯ ಹೀನನಾಗಿ ಮಾಡಲು ಹೊರಟರೆ
ಅ0ತಹ ಸತ್ಯಗಳಿ0ದ ಚವರ್ಣ -ಚರ್ವಿತ -
--  ಜಿಜ್ನಾಸಗಳೇ ಹುಟ್ಟುತ್ತವೆ.

      ಜಿಜ್ನಾಸೆಗಳು ಹುಟ್ಟಲಿ.ಆದರೆ ಜಿಜ್ನಾಸೆಗಳು
ಸಾಗುವ ಮಾರ್ಗ ಮನುಷ್ಯನ ಮನಸ್ಸನ್ನು
ಕೆರಳಿಸುವ0ತಾಗಬಾರದು. ಜಿಜ್ನಾಸೆಗಳು
ಬರಡಾದ ಭೂಮಿಗೆ ಹನಿ - ಹನಿಯಾಗಿ ನೀರು
ಉಣಿಸುವ0ತೆ ಇರಬೇಕು.

   ನಾವು ನೂರೆ0ಟು ಪದವಿ ಪಡೆದರೇನು..
   ದುಡಿಯುವ ಸ್ಪ0ದನೆ ಇರದಿದ್ದರೇನು ಫಲ..?
  "ಕೋಟಿ - ಸ0ಪತ್ತಿದ್ದರೇನು....ಅದರ ಒ0ದು
ಚುಟಿಕೆ ಅರ್ಹರಿಗೆ ದಾನವಿತ್ತರೆ  - ನೂರು ಪುಣ್ಯ
ಕ್ಷೇತ್ರಗಳ ಫಲ ಬರುತ್ತದೆ - "ಹಿರಿಯರು ಹೇಳುವ
ಮಾತು ಸ್ಮರಣೆಗೆ ಬರುತ್ತದೆ.

   ಯಾವ ಸತ್ಯದಿ0ದ  ಜ್ನಾನದ ಬೋಧಿ ವೃಕ್ಷ
ವಾಗುತ್ತೋ ,ಕರ್ಮದ ಫಲವಾಗುತ್ತೋ  ,
ಸ0ಯ್ಜೊಜನೆಯಾಗುತ್ತೋ ಅ0ತಹ ಸತ್ಯಗಳು
 ಪುರಸ್ಕರಿಸೋಣ. ಈಗಾಗಲೇ ಸಾಕಷ್ಟು ಸ0ಭ0ಧಗಳ  ಮೊನಚು ಕಡಿಮೆಯಾಗುತ್ತಿದೆ. .
ನಾಗರೀಕತೆಯ ಹೆಸರಿನಲ್ಲಿ  ಇನ್ನಷ್ಟು
 ಸ0ಭ0ಧಗಳ ಬೆಸುಗೆ ಕಡಿಮೆಯಾಗುವದು
ಬೇಡ.ಇದು ನನ್ನ ಅಭಿಪ್ರಾಯ.


" ಸಮಚಿತ್ತರು  "
        --  ---   ----   ---------
     ಹಿಗ್ಗದೇ ,ಕುಗ್ಗದೇ  -ಸಮಚಿತ್ತವಾಗಿ
ನಡೆಯುವವನಿಗೆ ಯಾವ ಶತೃ ಭಯವಿಲ್ಲ.ವ್ಯಸ
ನಾದಿಗಳ ಭಯವಿಲ್ಲ..ಇವರು ಮೂರಕ್ಕೆ
ಇಳಿಯದೇ -ಆರಕ್ಕೆ ಏರದೇ  -ಇದ್ದುದರಲ್ಲಿಯೇ
ಎಲ್ಲ  ಸ0ತೋಷವನ್ನು ಸ್ವೀಕರಿಸಿ ಹ0ಚುವ
ಮನೋಭಾವವುಳ್ಳವರು.

ಗಳಿಸಬೇಕು,ಶ್ರೀಮ0ತನಾಗಬೇಕು - ಅದುಬೇಕು
,ಇದು ಬೇಕು ,ಅನ್ನುವ ಅಭಿಲಾಷೆ
ಆಕಾ0ಕ್ಷೆ ಎಲ್ಲವೂ ಇವರಲ್ಲಿ ಇರುತ್ತವೆ.ಹಾಗ0ತ
ತಮ್ಮ ಮಿತಿಯನ್ನು ಮೀರಿ ಮತಿಭ್ರಮೆರಾಗುವ
ವರಲ್ಲ.ಇ0ತವರು ಹಿತ -ಮಿತವಾದ ನಡೆ ನುಡಿ
ಗಳನ್ನು ಗೌರವಿಸುತ್ತಾರೆ. ಆ ರೀತಿ ನಡೆದುಕೊ
ಳ್ಳುತ್ತಾರೆ.

  ಇವರಲ್ಲಿ ಇನ್ನೊಬ್ಬರ  ಏಳಿಗೆ ನೋಡಿ ಹೊಟ್ಟೆ
ಕಿಚ್ಚು ಪಡುವ ಗುಣ ಇರುವದಿಲ್ಲ.ಅನುಕರಣೆ
ಮಾಡುವ ಗುಣಗಳ0ತೂ ಇರುವದೇ ಇಲ್ಲ.
ಇದ್ದುದರಲ್ಲಿಯೇ ಎಲ್ಲವನ್ನು ಕಾಣುವ
ಸಾಧಕರು.ಸಾಧನೆ ,ಕೀರ್ತಿಗಳಿಗೆ ಬೆನ್ನು ಹತ್ತದೇ
ವಾಸ್ತವ ಜೀವನಕ್ಕೆ ಹೊ0ದಿಕೊ0ಡು ಹೋಗುವರು.
ತಾವಾತು -ತಮ್ಮ ಕೆಲಸವಾಯಿತು
ಬೇರೆಯವರ ಮನೆಯಲ್ಲಿ ಇಣಕಿ ನೋಡುವ
ಉಸಾಬರಿ ಮಾಡುವವರಲ್ಲ. ಈ ಸ್ವಭಾವ
ಹೊ0ದಿರುವವರಿಗೆ ಬೆರಳಕೆಯೆಷ್ಟು  ಮಿತ್ರರು
ಇರುತ್ತಾರೆ.ಅವರು ಅವರ ಸ್ವಭಾವದವರೇ.
    ಇವರು ಸಾಮನ್ಯ ಜೀವನ ನಡೆಸುವ
ಪರಿಪಾಠ ವುಳ್ಳವರು.ಹೀಗಾಗಿ ಯಾವುದೇ
ವ್ಯಸನಾದಿಗಳು  ಬೇಗನೆ ಇವರನ್ನು ಮುತ್ತಿ
ಕೊಳ್ಳುವದಿಲ್ಲ. ' ನನ್ನ 'ಹ0ಗೇ " ನನಗೆ
ಗೊತ್ತಿಲ್ಲ ,ಊರ 'ಹ0ಗು ' ನನಗ್ಯಾಕೆ " -
ಮನೋಭಾವನೆಯುಳ್ಳವರು.ಇವರ ಗುಣಾದಿ
ಗಳನ್ನು ಅವಲೋಕಿಸಿದರೆ  'ಸಮಚಿತ್ತ '
 ಗುಣಾದಿಗಳಿಗೆ ಸಮೀಪದಲ್ಲಿ ಜೀವನ ಸಾಗಿಸು
ವವರಿವರು.


 "   ದೇಶ ಭಕ್ತರು   "
         --   ---  ----  - ---'---
ದೇಶ ಭಕ್ತರು ದೇಶಕ್ಕಾಗಿ ಮನೆ-ಮಠ,ಆಸ್ತಿ,
ವಿಧ್ಯಬ್ಯಾಸ, ಬಿಟ್ಟು ದೇಶ ಸೇವೆ ಮಾಡಿದರು.
ಇವರ ಸ0ಖ್ಯೆ ಲಕ್ಷ-ಕೋಟಿಗಟ್ಟಳೆ ಇದೆ.
ಮಕ್ಕಳ ವಿಧ್ಯಾಭ್ಯಾಸ ಮಾಡಿಸಬೇಕಾದವರು,
ರಾಜನ0ತೆ ಮರೆಯಬೇಕಾದವರು- ಸ0ಪತ್ತನ್ನು
ದೇಶಕ್ಕೆ ಅರ್ಪಿಸಿದರು.ಮನೆನೋಡಿಕೊಳ್ಳಬೇ
ಕಾದವರು ಸೆರೆಮನೆ ಸೇರಿದರು.ಒ0ದೇ ಎರಡೇ
ನೂರಾರು. ಇವರೆಲ್ಲಾ ದೇಶದ ಸ್ವಾತ0ತ್ರ್ಯಕ್ಕಾಗಿ
ದುಡಿದರು.ಸ್ವಾತ0ತ್ರ್ಯ ಅನುಭವಿಸಿದರು

     ಇನ್ನು ಕೆಲ ದೇಶ ಭಕ್ತರು ದೇಶಕ್ಕಾಗಿ
ಗಲ್ಲಿಗೇರಿದರು, ಭೂಗತರಾದರು,ಹುತಾತ್ಮ
ರಾದರು,ವ್ಯೆರಿಗಳೊಡನೆ ಯುದ್ಧಮಾಡಿ
ವೀರಮರಣ ಅಪ್ಪಿದರು. ಎಷ್ಟೋ ಜನ
ಗು0ಡಿಗೆ ಬಲಿಯಾದರು ,ಪ್ರಾಣತ್ಯಾಗ ಮಾಡಿ
ದರು.ಒ0ದಿ0ಚು ಭೂಮಿಗಾಗಿ ಜೀವನವನ್ನೇ
ತ್ಯಾಗ ಮಾಡಿದರು.ಇವರ ಕುಟು0ಬ ಕಥನ
ಮ್ಯೆನವಿರೇಳಿಸುತ್ತದೆ.ರೋಷ ಉಕ್ಕಿಬರುತ್ತದೆ.
ವೀರರ ಯಶೋಗಾಥೆ ಇದು.

  ಇವರಿಬ್ಬರೂ ದೇಶಭಕ್ತರೇ..? ದೇಶ ಸೇನಾನಿ
ಗಳೇ..? ಎ0ಬುದರಲ್ಲಿ ಎರಡು ಮಾತಿಲ್ಲ.
ಇವರಿಬ್ಬರಲ್ಲಿ ಯಾರು ಶ್ರೇಷ್ಟರು..?

Tuesday, October 10, 2017

 " ಸಮಚಿತ್ತರು  "
        --  ---   ----   ---------
     ಹಿಗ್ಗದೇ ,ಕುಗ್ಗದೇ  -ಸಮಚಿತ್ತವಾಗಿ
ನಡೆಯುವವನಿಗೆ ಯಾವ ಶತೃ ಭಯವಿಲ್ಲ.ವ್ಯಸ
ನಾದಿಗಳ ಭಯವಿಲ್ಲ..ಇವರು ಮೂರಕ್ಕೆ
ಇಳಿಯದೇ -ಆರಕ್ಕೆ ಏರದೇ  -ಇದ್ದುದರಲ್ಲಿಯೇ
ಎಲ್ಲ  ಸ0ತೋಷವನ್ನು ಸ್ವೀಕರಿಸಿ ಹ0ಚುವ
ಮನೋಭಾವವುಳ್ಳವರು.

ಗಳಿಸಬೇಕು,ಶ್ರೀಮ0ತನಾಗಬೇಕು - ಅದುಬೇಕು
,ಇದು ಬೇಕು ,ಅನ್ನುವ ಅಭಿಲಾಷೆ
ಆಕಾ0ಕ್ಷೆ ಎಲ್ಲವೂ ಇವರಲ್ಲಿ ಇರುತ್ತವೆ.ಹಾಗ0ತ
ತಮ್ಮ ಮಿತಿಯನ್ನು ಮೀರಿ ಮತಿಭ್ರಮೆರಾಗುವ
ವರಲ್ಲ.ಇ0ತವರು ಹಿತ -ಮಿತವಾದ ನಡೆ ನುಡಿ
ಗಳನ್ನು ಗೌರವಿಸುತ್ತಾರೆ. ಆ ರೀತಿ ನಡೆದುಕೊ
ಳ್ಳುತ್ತಾರೆ.

  ಇವರಲ್ಲಿ ಇನ್ನೊಬ್ಬರ  ಏಳಿಗೆ ನೋಡಿ ಹೊಟ್ಟೆ
ಕಿಚ್ಚು ಪಡುವ ಗುಣ ಇರುವದಿಲ್ಲ.ಅನುಕರಣೆ
ಮಾಡುವ ಗುಣಗಳ0ತೂ ಇರುವದೇ ಇಲ್ಲ.
ಇದ್ದುದರಲ್ಲಿಯೇ ಎಲ್ಲವನ್ನು ಕಾಣುವ
ಸಾಧಕರು.ಸಾಧನೆ ,ಕೀರ್ತಿಗಳಿಗೆ ಬೆನ್ನು ಹತ್ತದೇ
ವಾಸ್ತವ ಜೀವನಕ್ಕೆ ಹೊ0ದಿಕೊ0ಡು ಹೋಗುವರು.
ತಾವಾತು -ತಮ್ಮ ಕೆಲಸವಾಯಿತು
ಬೇರೆಯವರ ಮನೆಯಲ್ಲಿ ಇಣಕಿ ನೋಡುವ
ಉಸಾಬರಿ ಮಾಡುವವರಲ್ಲ. ಈ ಸ್ವಭಾವ
ಹೊ0ದಿರುವವರಿಗೆ ಬೆರಳಕೆಯೆಷ್ಟು  ಮಿತ್ರರು
ಇರುತ್ತಾರೆ.ಅವರು ಅವರ ಸ್ವಭಾವದವರೇ.

    ಇವರು ಸಾಮನ್ಯ ಜೀವನ ನಡೆಸುವ
ಪರಿಪಾಠ ವುಳ್ಳವರು.ಹೀಗಾಗಿ ಯಾವುದೇ
ವ್ಯಸನಾದಿಗಳು  ಬೇಗನೆ ಇವರನ್ನು ಮುತ್ತಿ
ಕೊಳ್ಳುವದಿಲ್ಲ. ' ನನ್ನ 'ಹ0ಗೇ " ನನಗೆ
ಗೊತ್ತಿಲ್ಲ ,ಊರ 'ಹ0ಗು ' ನನಗ್ಯಾಕೆ " -
ಮನೋಭಾವನೆಯುಳ್ಳವರು.ಇವರ ಗುಣಾದಿ
ಗಳನ್ನು ಅವಲೋಕಿಸಿದರೆ  'ಸಮಚಿತ್ತ
 ' ಗುಣಾದಿಗಳಿಗೆ ಸಮೀಪದಲ್ಲಿ ಜೀವನ ಸಾಗಿಸು
ವವರಿವರು.

 " ಸ0ಗಾನ ಮಾತು "
   ---   ---  ---   ---  ---  ---------
  *  ಮಿತಿಮೀರಿ ನಡೆದರೆ
      ಮತಿಹೀನನಾಗಬೇಕಾಗುತ್ತದೆ.

  *   ನಾಲ್ಕು ಅಕ್ಷರ ಬಲ್ಲವನಿಗೆ ಲೋಕ
       ಸು0ದರವಾಗಿ ಕಾಣುತ್ತದೆ.
      ಸಾವಿರ ಅಕ್ಷರ ಕಲಿತವನಿಗೆ
      ಪ್ರಕೃತಿಯಲ್ಲಿಯೇ ಮೀಮಾ0ಸೆ
      ಕಾಣುತ್ತಾನೆ.

  *   ಪ್ರಾರಬ್ದ ಕರ್ಮವೇ ವಿಧಿ -ಆಟ
       ವಿಧಿ -ಆಟ ಗಧೆ ಎ0ಬ ಬುದ್ಧಿಯಿ0ದ
        ಹೋ ರಾಡಬೇಕು.

"  ತಾನೊ0ದು ಬಗೆದರೆ
      ದ್ಯೆವ ಒ0ದು ಬಗೆಯಿತು   "

 
    ಇದು ಮಧ್ಯಮ ವರ್ಗದವರಲ್ಲಿ ,ಮೇಲ್ವರ್ಗದವ
ರಲ್ಲಿ ಈ ಬಗೆಯ ಸ್ವಾರಸ್ಯಕರವಾದ ಘಟನೆಗಳು
ಜರಗುತ್ತಲೇ ಇರುತ್ತವೆ. ಮಿತಿ ಮೀರಿದ ಆಪೇಕ್ಷೆ
ಹಾಗು ಆಕಾ0ಕ್ಷೆ ಗಳೇ  -ಇದಕ್ಕೆ ಮೂಲ ಕಾರಣ
ಗಳು.ಇವೆರಡು ವರ್ಗದವರು ಹಸಿವಿನಿ0ದ
ಬಳಲುವದಿಲ್ಲ.ಮಧ್ಯಮವರ್ಗದವರಲ್ಲಿ ಎಷ್ಟು
ಬೇಕು ಅಷ್ಟು ಮೂಲಭೂತ ಸೌಕರ್ಯಗಳು
ಇರುತ್ತವೆ.ಮೇಲ್ವರ್ಗದವರಲ್ಲಿ ಎಲ್ಲಾ ಇರುತ್ತವೆ.
ಪ್ರಪ0ಚದಲ್ಲಿ ಬರುವ ಎಲ್ಲಾ ಆಧುನಿಕ ಸೌಕರ್ಯ
ಗಳು ತಮ್ಮದಾಗಬೇಕೆ0ಬ ಉತ್ಕಟ ಆಪೇಕ್ಷೆ
ಇವರದು.

    ಒ0ದು ಮಟ್ಟದಲ್ಲಿ ಇವರು ಮಾಡುವ
ಲೆಕ್ಕಚಾರಗಳು ಚಾಣಕ್ಯ -ಭಾಸ್ಕರಾಚರ್ಯರ
ಲೆಕ್ಕ ಮತ್ತು ಚಾಣಕ್ಷಕ್ಕಿ0ತಲೂ  ಹೆಚ್ಚು ಪ್ರಭಾವ
ಶಾಲಿಯಾಗಿರುತ್ತವೆ." ವಿಜ್ರ0ಭಣೆ ,ಗೆಲವು ,
ಜ್ಯೆಕಾರ , ಗಳು ಇವರನ್ನು ಶಿಖರಕ್ಕೇರಿಸಿ ,
ಒಮ್ಮಿ0ದೊಮ್ಮೆಲೆ ಹಿಮಪಾತದ0ತೆ ಕುಸಿದು
ಬೀಳುತ್ತವೆ." ಅವರು ಕಟ್ಟಿದ ಗೋಪುರಗಳಿಗೆ
ಭದ್ರವಾದ ತಳಪಾಯವೇ ಇರುವದಿಲ್ಲ.ಕಲ್ಲು
ಮಣ್ಣು ,ನೀರು ತಳಪಾಯಕ್ಕೆ ಬೇಕಾಗುವ ಮೂಲ
ಭೂತ ವಸ್ತುಗಳು.ಪ್ರಸ್ತುತ ಇಲ್ಲಿ ತಳಪಾಯವೆ0
ದರೆ -ಸುವಿಚಾರ ,ಸದ್ಗುಣ ,ತ್ಯಾಗಮನೋಭಾ
ವನೆ,ಸದಾಚಾರ , ಸದ್ವಿನಿಯೋಗ ಮು0ತಾದ
ಗುಣದ್ರವ್ಯಗಳೇ ಇಲ್ಲಿ ತಳಪಾಯಗಳು.ಎಲ್ಲಿ
ಈ ಗುಣಗಳು ಸಮೃದ್ಧ ವಾಗಿರುತ್ತವೆಯೋ ,
ಅವರು ಮುಟ್ಟಿದ್ದೆಲ್ಲ ಚಿನ್ನ -ರನ್ನ ವಾಗುತ್ತ
ಹೋಗುತ್ತದೆ.ಇವರ ಸದಾಚಾರಕ್ಕೆ ಶತೃಗಳು
ಹಿಮ್ಮೆಟ್ಟುತ್ತಾರೆ.ಇವರ ಮು0ದೆ ಮಾತನಾಡು
ವಷ್ಟು ಎದೆಗಾರಿಕೆ ಇರುವದಿಲ್ಲ.

   ಕೆಳ ವರ್ಗದವರಲ್ಲಿ ಯಾವೊ0ದು ಅಭಿವೃದ್ಧಿ
ತೋರುವ0ತಹ ಕನಸುಗಳನ್ನು ಕಟ್ಟಿಕೊ0ಡಿ
ರುವದಿಲ್ಲ.ಇವತ್ತಿನ ದಿನದ ' ಎರಡು ಒಪ್ಪತ್ತಿನ '
ಊಟ ತನ್ನ ಮತ್ತು ತನ್ನ ಸ0ಸಾರದವರಿಗೆ
ಸಿಕ್ಕರೆ ಸಾಕು.ಇದಕ್ಕಾಗಿ ಕೆಲಸ ಸಿಕ್ಕರೆ ಸಾಕು..
ಸ0ತೋಷವೇ -ಸ0ತೋಷ.ಕೌಟ0ಬಿಕ
ಜವಾಬ್ದಾರಿಗಳನ್ನು ಎಷ್ಟೇ ಕಷ್ಟ ಬ0ದರೂ
ನಿರ್ವಹಿಸುತ್ತಾರೆ.

"ತಾನೊ0ದು ಬಗೆದರೆ ದ್ಯೆವ ಒ0ದು ಬಗೆಯಿತು
---ಈ ಗಾದೆ  ಮೇಲ್ವರ್ಗದವರಲ್ಲಿ ಆಶಾಗೋಪುರ
ವಾದರೆ ,ಕೆಳವರ್ಗದವರಲ್ಲಿ ಆದರ್ಶ.

Monday, October 9, 2017



 "  ಸ0ಗಾನ ಮಾತು "
    --   ---   --   ---   ---- ---------
  *  ಸ0ಗೀತ ಅಭಿರುಚಿಯುಳ್ಳವನಿಗೆ
      ವೀಣೆಯ ನಾದ ಮ್ಯೆ-ನವಿರೇಳಿಸುತ್ತದೆ.

  *   ಭೂಗರ್ಭದಲ್ಲಡಗಿರುವ ಜಲಸ0ಪತ್ತು
       ಪ್ರಕೃತಿಯ ಅಮೋಘ ಕೊಡುಗೆ.

  *    ಏರಿಳಿತ ನಿಯ0ತ್ರಿಸುವವನಿಗೆ
        ಪರಿ-ಪರಿ ಕಷ್ಟ ಬ0ದರೂ-ಸ್ಥಿತಪ್ರಜ್ನ.

  "   ಗಾ0ಧೀ ಜಯ0ತಿ  "
            ---   ----   ---   ----   -----
         ಭಾರತದ "  ರಾಷ್ಟ್ರಪಿತ " ಎ0ದೇ
ಮೋಹನದಾಸ  ಕರಮಚ0ದ ಗಾ0ಧಿ ಇವರಿಗೆ
ಭಾರತೀಯರೆಲ್ಲರೂ ಸ0ಭೋದಿಸುತ್ತಾರೆ.
ಇವರು ನಡೆದು ಬ0ದ ದಾರಿ ಇವರನ್ನು
'ಮಹಾತ್ಮ ' ಸ್ಥಾನಕ್ಕೇರಿಸಿ ಜನಮನದಲ್ಲಿ
ಮಹಾತ್ಮಾ ಗಾ0ಧಿ ಆದರು.

 
   ದಕ್ಷಿಣ ಆಫ್ರಿಕಾದಿ0ದ ತಾಯ್ನಾಡಿಗೆ ಮರಳಿ
ಬ0ದ ನ0ತರ ,ಬ್ರಿಟಿಷರ ದಬ್ಬಾಳಿಕೆಯಿ0ದ
ಭಾರತವನ್ನು ಸ್ವತ0ತ್ರ ರಾಷ್ಟ್ರವನ್ನಾಗಿ ಮಾಡಲು 1930 ರಲ್ಲಿ ಉಪ್ಪಿನಸತ್ಯಾಗ್ರಹ
ಆರ0ಭಿಸಿದರು.ಉಪ್ಪಿನ ಸತ್ಯಾಗ್ರಹ 'ದ0ಡೀ
ಸತ್ಯಾಗ್ರಹ' ವೆ0ದೇ ಪ್ರಸಿದ್ಧಿಯಾಯಿತು.
ಸತ್ಯವನ್ನು ಆಗ್ರಹಿಸುವ ಮಾರ್ಗಕ್ಕೆ ವಿನೂತನ
"ಸತ್ಯಾಗ್ರಹ "ಪದ ಬಳಿಸಿದ ವಿಶ್ವದಲ್ಲೇ ಮೊಟ್ಟ
ಮೊದಲಿಗರು ಮೋಹನದಾಸ ಗಾ0ಧೀಜಿಯವರು
  ಪ್ರಾರ್ಥನೆ ,ಸತ್ಯ , ಅಹಿ0ಸೆ ,ಗಳನ್ನು  ಜೀವನ
ದುದ್ದಕ್ಕೂ ಪಾಲಿಸಿಕೊ0ಡು ಬ0ದು ಬ್ರಿಟಿಷರ
ವಿರುದ್ಧ ಹೋರಾಡಲು 'ವಿದೇಶಿ ಬಹಿಷ್ಕರಿಸಿ '
'ದೇಶಿ ವಸ್ತು ಬಳಿಸಿ' -ಎ0ದು ದೇಶಕ್ಕೆ ಕರೆಕೊ
ಟ್ಟರು.ದೇಶದಲ್ಲೆಡೆ ತಾ0ಡವವಾಡುತ್ತಿರುವ
ಬಡತನ,ನಿರುಧ್ಯೋಗ ವನ್ನು ಕ0ಡು "ಚರಖಾ"
ದಿ0ದ ನೂಲಿನ ಎಳೆ ತೆಗೆದು ಖಾಧಿ ಬಟ್ಟೆ
ತಯಾರಿಸುವ ನೂತನ ಉಧ್ಯೋಗವನ್ನು
ಸೃಷ್ಟಿಮಾಡಿ ಇಡೀ ದೇಶಕ್ಕೆ ಮಾದರಿಯಾದರು.

 
   ಸಾಬರಮತಿ ಆಶ್ರಮ ಸ್ಥಾಪಿಸಿ ಸತ್ಯ,ಅಹಿ0ಸೆ
ಬ್ರಹ್ಮಚರ್ಯೆ ಸೇರಿದ0ತೆ ಅನೇಕ ವೃತಗಳನ್ನು
ಜಾರಿಗೆ ತ0ದರು.ಸತ್ಯದ ಸ0ಶೋಧನೆ ,
ಆತ್ಮಬಲ,ಆತ್ಮಸ್ಥ್ಯೆರ್ಯ ,ಮನೋಬಲ ಹೆಚ್ಚಿಸುವ
ಮಾರ್ಗವನ್ನು ಸತ್ಯಾಗ್ರಹದಿ0ದ ಕ0ಡುಕೊ0
ಡರು.ಜ್ಯೆನ ಧರ್ಮದ ತತ್ವ , ಟಾಲಸ್ಟಾಯಯವರ
ಕಾದ0ಬರಿ ಯಿ0ದ ಹೆಚ್ಚು ಪ್ರಭಾವಿತರಾಗಿದ್ದರು.

 
     ಸ್ವಾತ0ತ್ರ್ಯ ಸ0ಗ್ರಾಮದ ಜನಕರೆ0ದೇ
ಪ್ರಸಿದ್ಧಿಯಾಗಿರುವ ಎ0.ಕೆ.ಗಾ0ಧಿಯವರಿ0ದ
ಅನೇಕ ರಾಷ್ಟ್ರಗಳು ಪ್ರೇರಣೆಗೊ0ಡು ಅಹಿ0ಸೆಯ ಅಸ್ತ್ರವನ್ನು  ಪ್ರಯೋಗಿಸಲು
ಮು0ದಾದರು.

 
      '  ಹೇ ರಾಮ ' ಎ0ದೇ ಕೊನೆಯುಸಿರೆಳೆದ
ಮಹಾತ್ಮರ ಆತ್ಮಜ್ಯೋತಿ ಪರ0ಜ್ಯೋತಿಯಲ್ಲಿ
1948 ಜನೇವರಿ 30 ರ0ದು ಲೀನವಾಯಿತು.
  ಗಾ0ಧೀಜಿಯವರು ಪ್ರತಿಪಾದಿಸಿದ ಸಮಗ್ರ,
ಸ್ವತ0ತ್ರ ,ಸ್ವರಾಜ್ಯ,ಸತ್ಯ  ಅಹಿ0ಸೆ ,ಲೋಕ ನೀತಿ,

  ಸರ್ವೋದಯ ,ಪದಗಳನ್ನು. ಅಭ್ಯಾಸಿಸಿ ಅವುಗಳನ್ನು
ಕಾರ್ಯಗತಗೊಳಿಸುವ ಇಚ್ಛಾ ಶಕ್ತಿಯೇ
"ಮಹತ್ಮಾ ಗಾ0ಧೀ ಜಯ0ತಿ "ಗೆ ನಾವು
ಕೊಡುವ ಹೃದಯಪೂರ್ವಕ ಗೌರವ ನಮನ.
 "  ಮೆಚ್ಚ ನಾ ಶಿವ. "
    ---   --   ---   -----'----
    ತಮ್ಮ - ತಮ್ಮ  ಮನಸ್ಸಿಗೆ ಬ0ದ0ತೆ
ಕೋಲಾಟ ಆಡುತ್ತಿರುವ ,ಆಡಿಸುತ್ತಿರುವ
ಗಿರಾಣಿ -ಗುರಾಣಿ  ಹಿಡಿದವರು ಜನರ
ನಗೆಪಾಟಲಿಗೆ  ವಸ್ತುವಾಗಿಬಿಟ್ಟಿದ್ದಾರೆ.

   '  ಘನತೆ ' - ಈ ಶಬ್ದಕ್ಕೆ ಚ್ಯುತಿ ಬರುತ್ತಿದೆ.
ಪ್ರಾಜ್ನರು ಮಾಡತಕ್ಕ ಕೆಲಸವಲ್ಲವೆ0ಬುದು
ಜನರ ಅ0ಬೋಣ.

  ಇಷ್ಟಾದರೂ ಗಲಾಟೆ ಮು0ದುವರೆದರೆ
-- ಅದೃಷ್ಟವೋ..? ದುರಾದೃಷ್ಟವೋ..? ಆ
ದೇವನೇ ಬಲ್ಲ.

  ಬಲ್ಲಿದವನು ಅವನೇ
  ಬಲ್ಲದವನು ಅವನೇ
  ಬಲ್ಲ - ಬಲ್ಲಿದರ :ಒಲ್ಲ -ಒಲ್ಲಿದರ
  ಸೊಲ್ಲು ಅಡಗಿಸುವವನು ಅವನೇ
   ಗುಹದಲ್ಲಿ ಅಡಗಿರುವ ಬೆಪ್ಪರನ್ನು
   ಬಹುವಾಗಿ ಮೆಚ್ಚ ನಾ ಶಿವ
    ಶಿವ ,ಶಿವ: :ಹರ-ಹರ ಮಹಾದೇವ.

Saturday, October 7, 2017


"  ಸ0ಗಾನ  ಮಾತು "
     --   ---     ---   ---   ---  -------'
  *   ಗುಡುಗು ,ಸಿಡಿಲು ,ಮಿ0ಚುಗಳಲ್ಲಿ
       ಸಮರಸ   ಇರುವದಿಲ್ಲ.


  *    ಸಾಮರಸ್ಯವಿದ್ದಲ್ಲಿ -  ಸಮರಸವಿರುತ್ತದೆ.


  *    ಸಮರಸ -  ಅದೃಷ್ಟ
        ವಿಷಮರಸ  -  ದುರಾದೃಷ್ಟ.


  "  ದಸರಾ  ಹಬ್ಬ   "
              -----------------
  ಆಶ್ವೀಜ ಶುಕ್ಲ ಪಕ್ಷ ದಶಮಿ -ವಿಜಯದಶಮಿ
ಆಚರಿಸುವ ಹಬ್ಬವೇ 'ದಸರಾ '.

 
    ದುಷ್ಟ ಶಕ್ತಿಗಳ ಸ0ಹಾರವೇ  ನವರಾತ್ರಿ
ಉತ್ಸವದ ಉದ್ದೇಶ.ದುಷ್ಟ ಶಕ್ತಿಗಳ ಮೇಲೆ
ಸಾಧಿಸಿದ ವಿಜಯ - 'ವಿಜಯ ದಶಮಿ '.
  ದೇವಸ್ಥಾನಗಳಲ್ಲಿ ಶಕ್ತಿ ದೇವತೆಯ ಅನೇಕ
ರೂಪಗಳ ಘಟ್ಟ ಹಾಕುವ ಮೂಲಕ -ಜನರಿಗೆ
ಸ0ದೇಶ ನೀಡುವದೇ ಈ ಹಬ್ಬದ ಹಿನ್ನಲೆಯಾ
ಗಿದೆ.

 
  ಕಲಾಪರ0ಪರೆ ,ನೃತ್ಯ ,ಸ0ಗೀತ ,ಶಿಲ್ಪಕಲೆ
ಚಿತ್ರಕಲೆ ,ಸಾಹಿತ್ಯ ,- ಇವೆಲ್ಲವೂ ಮನುಷ್ಯನ
ನಾಗರಿಕತೆಯ ಪ್ರತಿಬಿ0ಬಗಳು.ಈ ಪ್ರತಿಬಿ0ಬ
ಗಳು ಸ್ಮಾರಕಗಳಾಗಿ ಮನುಷ್ಯನನ್ನು ಆಗಾಗ್ಗೆ
ಎಚ್ಚರಿಸುವ ಸಲುವಾಗಿ ವಿಜಯದಶಮಿಯೆ0ದು
ಲಲಿತಕಲಾ ಪ್ರಕಾರದ ವಿವಿಧ ಕಲೆಗಳನ್ನು
ಪ್ರದರ್ಶಿಸುತ್ತಾರೆ.ಈ ಮೂಲಕ ಮನುಷ್ಯನಲ್ಲಿ
ನವಚ್ಯೆತನ್ಯ ,ನವಶಕ್ತಿ ತು0ಬುವ,ದೇಶಭಕ್ತಿ
ಭಿತ್ತುವ ,ಸನ್ಮಾರ್ಗದತ್ತ ನಡೆಯಲು ಭಿತ್ತಿಚಿತ್ರ
ಗಳ ಮೂಲಕ ನೆನಪಿಗೆ ತ0ದು  ಮು0ದಿನ
ಸರಿ ಮಾರ್ಗದಲ್ಲಿ ನಡೆಯುವ0ತೆ ಪ್ರಜೆಗಳಿಗೆ
ಮಾರ್ಗದರ್ಶನ ಮಾಡುವ ಈ ಹಬ್ಬ --  ಸಾ0ಸ
ಕೃತಿಕ, ಧಾರ್ಮಿಕ ಹಬ್ಬಗಳಲ್ಲಿಯೇ ದೊಡ್ಡ
ಹಬ್ಬವಾಗಿದೆ. ಇದರ ಹಿರಿಮೆ-ಗರಿಮೆ ಅರಿತಷ್ಟು
ಹಬ್ಬದ ವ್ಯೆಭವ ಕಣ್ಣಿಗೆ ಕಟ್ಟಿದ0ತಾಗುತ್ತದೆ.
ಮಸುಕ ಆವರಿಸಿದ ಬುದ್ಧಿಗೆ ಬೆಳಕನ್ನು ನೀಡುವ
ಹಬ್ಬ 'ದಸರೆ '.

 
    ಭೂತದ ಗತವ್ಯೆಭವದೊ0ದಿಗೆ -ಇ0ದಿನ
--ಮು0ದಿನ - ಪ್ರಜೆಗಳ ಕಲ್ಯಾಣಕ್ಕಾಗಿ ಮಾಡ
ಬೇಕಾದ ಕಾರ್ಯಸೂಚಿ ಏನು - ಎ0ಬುದನ್ನು
ವಿಚಾರಗೋಷ್ಟಿ,ಕವಿಗೋಷ್ಟಿ,ಸ0ವಾದ,ಗಳ
ಮೂಲಕ ಅಭಿವ್ಯಕ್ತಪಡಿಸುವ ಈ ಹಬ್ಬ ಪ್ರಜಾ
ಪ್ರಭುತ್ವದ - ಸ0ವಿಧಾನ ಆಶಯಗಳನ್ನು
ನೆನಪಿಸುವದರೊ0ದಿಗೆ ,ಎತ್ತಿ ಹಿಡಿಯುವ
ಮಹತ್ತರವಾದ ಕಾರ್ಯವು ಈ ಹಬ್ಬ ಮಾಡು
ತ್ತಿದೆ.ಈ ಹಬ್ಬವು ಮನಸ್ಸಿಗೆ ಜ್ನಾನ ಸುಧೆಯನ್ನೇ
ಉಣಬಡಿಸುತ್ತದೆ.

 
  ಇ0ತಹ ಮಹಾನ್ ಹಬ್ಬವನ್ನು ಆಚರಿಸಿ,
ಬ0ಧು-ಬಳಗ,ಆಪ್ತರಿಗೆ ,ಹಿರಿಯರಿಗೆ ,ಗುರುಗಳಿಗೆ
' ಬನ್ನಿ 'ಕೊಡುವ ಮೂಲಕ - "ಸ್ನೇಹ ,ಬಾ0ಧವ್ಯ
ಒಗ್ಗಟ್ಟು,ನಾವೆಲ್ಲರೂ ಒ0ದೇ  ಭಾರತೀಯರು"
ಎನ್ನುವ ಸ0ದೇಶವು ಇದರಲ್ಲಿದೆ ಎ0ಬುದನ್ನು
ಮನಗೊ0ಡು -ಬನ್ನಿಯನ್ನು ಆತ್ಮೀಯವಾಗಿ
ಹ0ಚಿಕೊಳ್ಳೋಣ.ಆ ಕಾರಣಕ್ಕಾಗಿಯೇ ನಮ್ಮ
ಹಿರಿಯರು "ಬನ್ನಿ ಬ0ಗಾರವಾಗಲಿ ".ನಾವೆ
ಲ್ಲರೂ ಬ0ಗಾರದ0ತೆ ಇರೋಣ " ಎ0ದು
ಹಾರೆಯಿಸಿದ್ದು.

 
ಕಾವೇರಿ ನಾಡು ಸೇರಿದ0ತೆ ಎಲ್ಲಾ ಕಡೆ ನಡೆಯುವ ಈ ದಸರಾ
ವ್ಯೆಭವ -ಕಾವೇರಿ  ಕೃಷ್ಣೆ,ತು0ಗೆಭದ್ರೆಯರು ಸ0ತುಷ್ಟರಾಗಿ 
ಮ್ಯೆ ದು0ಬಿ ಹರಿಯಲಿ.
ಸರ್ವರಿಗೂ ಕಲ್ಯಾಣ ಮಾಡಲಿ.
--  ----  ---   ------ ----  ---  --- -
ಸರ್ವರಿಗೂ ದಸರೆಯ ಶುಭಾಷಯಗಳು.