Wednesday, January 17, 2018

  "  ಸಂಗಾನ ಮಾತು --378 "
   ---   -----   -----
  *  ದಾಯಾದಿಗಳು ಆಪದ್ಭಾಂಧವರಾದರೆ ,
     ಮಹಾಭಾರತ ಸೃಷ್ಟಿಯಾಗುತ್ತಿರ
     ಲಿಲ್ಲವೇನೋ...?
     ಹಾಗಂತ ಆಪದ್ಭಾಂದವರಾದರೆ ಅದು
     'ಶಕುನಿಯ ತಂತ್ರ ' ವೆಂದು  ಆಡಿಕೊಳ್ಳುತ್ತಾರೆ.
 
  *  ಕಾಲಬಂದಾಗ
      ಪೂರ್ವಗ್ರಹಪೀಡಿತರು
      ಪೂರ್ವಾನುಮತಿಯಿಲ್ಲದೇ
      ಅವನತಿಗೆ ಜಾರುತ್ತಾರೆ.
 
  *   ಬೆಂಕಿ-ಉರಿದು ನಂದಿಹೋಗುತ್ತೆ
       ಜ್ವಾಲೆ -ಕಿಚ್ಚನ್ನು ಹರಡುತ್ತದೆ
                         'ಧರ್ಮ  '
       ಎಡಕ್ಕೆ ತಿರುಗಿದರೆ ಬೆಂಕಿ
        ಬಲಕ್ಕೆ ವಾಲಿದರೆ ಜ್ವಾಲೆ
        ಮಧ್ಯೆ ಹೋಗಲು -'ದೀಪ '
        ಜ್ನಾನದೀಪ :ನಂದಾದೀಪ
        ಆಶಾದೀಪ :ಬದುಕಿನ ದೀಪ

No comments: