Friday, January 19, 2018

     "   ಭೋಗ್ಯ ಸಾಲ "
        ----  ----   ---
 
   ಇಲ್ಲಿರುವುದೆಲ್ಲಾ ಸೃಷ್ಟಿಗೆ ಸೇರಿದ್ದು.ಪರಮಾತ್ಮ
ನಿಗೆ ಸೇರಿದ್ದು.ಜಗನ್ಮಾತೆಗೆ ಸೇರಿದ್ದು.
"ಹೋಗುವಾಗ ಬತ್ತಲೆ
ಬರುವಾಗ ಬತ್ತಲೆ   " -ದಾಸ ವಾಣಿಯಂತೆ
ನಮ್ಮದೇನು ಇಲ್ಲ.
ನಂದಿಷ್ಟಿದೆ  ಅಷ್ಟಿದೆ ,ಕಾರಿದೆ,ಬಂಗಲೋ ಇದೆ, ಇವೆಲ್ಲವೂ
ಭೋಗಕ್ಕಾಗಿ ಪಡೆದ ಭೋಗ ವಸ್ತುಗಳು.
ಸಾಮಾನ್ಯನೂ  -ನಾನು ಏನು ಇದ್ದಿಲ್ಲ. ನಾನೀಗ
ನಾಲ್ಕಾರು ತಗಡು ಹಾಕ್ಸೀನಿ ,ಶೌಚಾಲಯ
ಮಾಡ್ಸೀನಿ,ಸಣ್ಣ ಟಿವಿ.ತಗೋಂಡೀನಿ ಅಂತಾ
ಅಭಿಮಾನದಿಂದ  ತನಗಿಂತ ಕೆಳಗಿರುವವರಲ್ಲಿ
ಹೇಳುತ್ತಿರುತ್ತಾನೆ.ಇದು ಸಾಮಾನ್ಯ.
 
     'ಭೋಗ' ವಸ್ತುಗಳು ಭೋಗ್ಯಧಾತನು
ನೀಡುವ ತಾತ್ಕಾಲಿಕ ಪ್ರಸಾದಗಳು.ಈ ಪ್ರಸಾದ
ಗಳನ್ನು ನೀಡುವಾತ -"ಭೋಗ್ಯದಾತ ".
ಪಡೆದುಕೊಂಡವ  "ಭೋಗ್ಯ ಸಾಲಗಾರ ".
ಮರಣದ ನಂತರ ಇವುಗಳನ್ನು ಬಿಟ್ಟು
ಹೋಗುವದೇ " ಸಾಲ ತೀರಿಸುವಿಕೆ ".
 
  "  ಓಂ ಕೃಷ್ಣಾರ್ಪಣಮಸ್ತು. "

No comments: