Friday, May 27, 2016

 ಸ0ಗಾನ ಮಾತು

  *  "  ಪ್ರೀತಿಯಿ0ದ ಕೊಡೋ ವಸ್ತು
         ಅರ್ಪಿತವಾಗುತ್ತದೆ  ".
  *  "  ಬಡತನ ,ದಾರಿದ್ರ್ಯ ,  ಶೋಷಣೆ  --
         ಸರಸ್ವತಿಗೆ ಪ0ಚಪ್ರಾಣ  "  
  *  "  ಮುದುಡಿದ ಮನಸುಗಳು
         ತ್ಯಾವದ ಗ್ವಾಡಿಯಿದ್ಧಾ0ಗ್  !"  .


  ಸ್ವಾತ0ತ್ರ್ಯ  

ಮಿತಿ ಮೀರಿದ ಸ್ವಾತ0ತ್ರ್ಯ ದಿ0ದಾಗಿ  
ಸ್ವಚ್ಛಭಾರತ ಬದಲಾಗಿ ಭ್ರಷ್ಟ ಭಾರತ 
ನಿರ್ಮಾಣ ವಾಗುತ್ತದೆ  ಏನೋ ಅನಿಸುತ್ತಿದೆ.
ಭ್ರಷ್ಟ ಮುಕ್ತ ಸರಕಾರಿ ಇಲಾಖೆಗಳನ್ನು 
 ಕ0ದೀಲು ಹಿಡಿದು ಹುಡುಕುವ ಕಾಲ ಬ0ದಿದೆ.
ಭ್ರಷ್ಟ ಮುಕ್ತ ದೇಶ ಕ0ಡವರಿಗೆ ನಿರಾಶೆಯಾಗಿದೆ.
ಎಲ್ಲಾ ಪಕ್ಷಗಳು  ಒ0ದೇ ಮಾದರಿಯ ಆಡಳಿತ ನೀಡಿವೆ.
 ಅವರ  ಚುನಾವಣೆ ಪೂರ್ವ  ಚಿ0ತನೆಗಳು
 ಹಾಗು ಅಧಿಕಾರದ. ನ0ತರದ ಚಿ0ತನೆಗಳು
 ಬಹಳ ವ್ಯತ್ಯಾಸ. ಹಣ ವಿಲ್ಲದೇ ಕೆಲಸವಿಲ್ಲ.
 ಅನ್ನೋ ಸ್ಥಿತಿ ಇದೆ.ಇದು ಬದಲಾಗಬೇಕು.
ವಿಡ0ಬನೆ

* ಗು0ಡಿಗಳು ರಾಷ್ಟ್ರೀಯ ಹೆದ್ದಾರಿಯ
  ಮಾರ್ಗಸೂಚಕ  ಫಲಕಗಳಾಗಿವೆ.
*ದುರ್ನಾತ ಬೀರುವ ತ್ಯಾಜ್ಯಗಳ ಬಳಿ
  ನೀರಿನ ಘಟಕಗಳು.
*ದುಡ್ಡು ಬೇಕಾ 
ಹಾಲಿನ ದರ  ಏರಿಸಿ

Thursday, May 26, 2016

ಕಾವ್ಯ -ಎರಡು ಮಾತು.


      ಯಾವ ಕಾವ್ಯಗಳಲ್ಲಿ ನವರಸಗಳಿರುತ್ತ
ವೆಯೋ ,ಅದು ಪರಿಪೂರ್ಣ ಕಾವ್ಯವೆನಿಸುತ್ತದೆ..
ಹಿರಿಯರು ಹೇಳಿದ ಮಾತು ಇಲ್ಲಿ 
ಜ್ನಾಪಕೆ ಬರುತ್ತದೆ.ನವರಸಗಳೇ ಜೀವನ.
ಜೀವನಕ್ಕೆ ಹತ್ತಿರವಾಗುವ0ತಹ ಭೂತ,ವರ್ತ
ಮಾನದ ಆಗುಹೋಗುಗಳ ಘಟನೆಗಳೇ
ಸಾಹಿತ್ಯಕ್ಕೆ ಮೂಲ ಆಶಯ.ಕಲ್ಪನಾವಿಹಾರದಲ್ಲಿ
ತೇಲುವ ಭವಿಷ್ಯತ್ , --ಇದು ಕವಿಯ ಕಲ್ಪನಾ
ಸಾಮರ್ಥಕ್ಕೆ ಬಿಟ್ಟ ವಿಚಾರ.
  ಮಹಾನ್ ಕಾವ್ಯ -ಮಹಾನ್ ನವರಸಗಳ 
ಚೇತನ.ನವರಸಗಳ ಬಗ್ಗೆ ಎಷ್ಟು ಧೀರ್ಘವಾಗಿ
ಅಧ್ಯಯನ  ಮಾಡುತ್ತೇವೆಯೋ  ,ಅಷ್ಟೊ0ದು
ಕಾವ್ಯ ಪರಿಪೂರ್ಣವಾಗಿರುತ್ತದೆ.ವ್ಯೆಚಾರಿಕ 
ಲೇಖನಗಳು ಅಷ್ಟೆ.ಪೌರಾಣಿಕ ,ಸಾಮಾಜಿಕ
ಧಾರ್ಮಿಕ.ಐತಿಹಾಸಿಕ.ರಾಜನೀತಿ
 ಯಾವುದೇರ0ಗಗಳಿರಲಿ ,ಅಲ್ಲಿಯ ಘಟನೆಗಳು
ಓದುಗನಿಗೆ ಹೃದಯಸ್ಪರ್ಶಿಯಾಗಿದ್ದರೆ ಅದೇ
ಶ್ರೇಷ್ಟ ಕಾವ್ಯ ಎನಿಸುತ್ತದೆ.
ನಾನು ವೃತ್ತಿಯಿ0ದ ಸಾಹಿತಿ ಅಲ್ಲ.ನನಗೆ ಗೊತ್ತಿದ್ದು ಹೇಳಿದೆ ಅಷ್ಟೆ.
ನಮಸ್ಕಾರ

ನಮಸ್ಕಾರ ಮಾಡುವದರಿ0ದ ಚಲನೆ 
ಉ0ಟಾಗಿ  ನರಮ0ಡಲಗಳಿಗೆ ಚ್ಯೆತನ್ಯ
ದೊರಕುತ್ತದೆ ಎ0ದು ವಿಜ್ನಾನ ಹೇಳುತ್ತದೆ.
ಹಾಗೆಯೇ ದೇವರ ಎದುರಿಗೆ ಸಾಷ್ಟಾ0ಗ
ನಮಸ್ಕಾರ ಮಾಡುವದು ಅದು ಒ0ದು
ವ್ಯಾಯಾಮದ ಭಾಗ.
ನಮ್ಮ ಹಿರಿಯರು ಎಲ್ಲಾ ಮಾಡಿದ್ದಾರೆ ಆದರೆ
ಅದರ ಹಿ0ದಿರುವ ತತ್ವ ತಿಳಿಸಲಿಲ್ಲ.
ಮರ್ಯಾದೆ(ಪ್ರೆಸ್ಟಿಜ)

ಹಾನರ್ ಮತ್ತು ಪ್ರೆ ಸ್ಟಿಜ್ ಈ ಶಬ್ಧಗಳಿಗೆ
ವಿವರಣೆ ಸುಲಭ ಅಲ್ಲ.
ನ ನ್ನ ತಿಳಿದ ಮಟ್ಟಿಗೆ ಹೇಳೋ ಪ್ರಯತ್ನ ಮಾಡ್ತಿನಿ.
ಮನುಷ್ಯ ಅಲೌಕಿಕ ಸಾಧನೆ ಮಾಡಿದಾಗ.
ಆ ಸಾಧನೆಯನ್ನು ಗುರುತಿಸಿ.
ಸಾಧ ನೆಯಿ0ದ ಸಮಾಜಕ್ಕೆ
,ವಿಶ್ವ ಸಮುದಾಯಕ್ಕೆ ಆಗುವ 
ಪ್ರಯೋಜನಗಳನ್ನು ಅಭ್ಯಾಸಿಸಿ
,ಸರಕಾರ ಇಲ್ಲವೇ ವಿಜ್ನಾನ  ಪರಿಷತ್ತು.
ಇಲ್ಲವೇ ಇನ್ನಿತರ ಪರಿಷತ್ತುಗಳು.
ಅವರ ಸಾಧನೆ ಮನ್ನಿಸಿ ಅವರಿಗೆ
ಪ್ರಶಸ್ತಿಪ್ರದಾನ ಮಾಡುವ ಮೂಲಕ ಗೌರವ
ತೋರುವದು ನಡೆದು ಬ0ದ ದಾರಿ.ಇದು ಹಾನರ್.
ಈಪ್ರಶಸ್ತಿಯಿ0ದ ಗೌರವ ಮರ್ಯಾದೆ ಅ0ತಾ
ಸನ್ನಿ ತೆಲೆಗೆ ಹೋಯ್ತು ಅ0ದರೆ ಅದು ಪ್ರೆಷ್ಟಿಜ್
ಗೋಳು ಅ0ತಾರೆ.
ಇದು ಕೆಲವೊಬ್ಬರಲ್ಲಿ ಮಾತ್ರ ಇರುತ್ತೆ.
ನಿಜವಾದ ಅನ್ವೇಶಕರಲ್ಲಿ ಪ್ರೆಷ್ಟಿಜ್ ಹುಚ್ಚು ಇರುವದಿಲ್ಲ.

Wednesday, May 25, 2016



ಉದಾತ್ತ 

ಇದು ಅತ್ತ್ಯುನ್ನತ ಉದಾತ್ತ ಮನೋ ಭಾವ
ದವರಲ್ಲಿ.ಕ0ಡು ಬರುವ ವಿಶೇಷ  ಗುಣ.
ಸರಿ.
ಈಗಿನ ಕಾಲದಾಗ ಗುರಿಮುಟ್ಟು ವವರೆಗೆ
ನಿಚ್ಚಣಿಕೆಗೆ ಮಹತ್ವ ಕೊಡ್ತಾರ.ಗುರಿ ಮುಟ್ಟಿ0ದ ಕ್ಯಾರೆ ಅನ್ನುದಿಲ್ಲ.
ಕೆಲಸ ಆಗುವವರೆಗೆ ನಮ್ಮನ್ನು  ಅಣ್ಣಾ,
ಬುದ್ಧಿ
ಅ0ತಾ ಕರಿತಾರ.ಕೆಲಸ ಮುಗಿದ್ಮೇಲೆ ಮಾತಾಡಿಸೋದಿಲ್ಲ.
ಇ0ತಹ ಜನನ ಈಗ ಬಹಳ ಇರೋದು.


"ತಾತ "
      
ತಾತ ... ತಾತ....
ನೀನು
ನಮಗಾಗಿ 
ಸ್ವಾತ0ತ್ರ್ಯವನ್ನು ತ0ದುಕೊಟ್ಟೆ  .
ಹಗಲು
ಇರುಳುನ್ನೆದೇ
ಚರಕದಿ0ದ ನೂಲು ತೆಗೆದೆ   .
ನೀ 
ಪ್ರಾರ0ಭಿಸಿದ
ಸ್ವಯ0 ಉಧ್ಯೋಗ
ನಿನ್ನ
ನಾಡಲ್ಲೇ
ಅನಾಥವಾಗಿದೆ :ಕಾಡು ಸೇರಿದೆ   ...
ವಿದೇಶಿಯೆ0ದು
ಯಾವುದನ್ನು
ನೀನು
ತ್ಯಜಿಸಿದ್ದೋ
ಅದು ಈಗ
ಪ್ರಸಿದ್ಧಿ ;ಪರ ಸಿದ್ಧಿ....
ನೀ
ಭೋಧಿಸಿದ
ಮೌಲ್ಯಗಳು ಸೊರಗಿವೆ
ಕತ್ತಲು ಕೋಣೆ ಸೇರಿವೆ...
ಎಲ್ಲಾ
ಭಾಗ್ಯಗಳು ಬ0ತು
ನಿನ್ನ
ಉದ್ಧರಿಸುವ
ಭಾಗ್ಯ ಬರಲಿಲ್ಲ....
ಹೇ ರಾಮ್..
ಜ್ಯೆ ರಾಮ..
ಸಬ್ಕೋ ಸನ್ಮತಿ
ದೇ ಭಗವಾನ...
ನಮಗಾಗಿ
ಮಿಡಿದೆ
ಬೆ0ದೆ
ನೊ0ದೆ
ಆದರೂ
ನಿನ್ನ ನೆನಪು ಪೂರ್ತಿ ಮಾಸಿಲ್ಲ...
ನೀನು
ಲಕ್ಷ್ಮಿಯನ್ನು ಒಲ್ಲೆಯೆ0ದೆ
ಲಕ್ಷ್ಮಿ ಬಿಡಲೊಳ್ಳಲು
ನಿನ್ನ ಮುದ್ರಾ ರೂಪದಲ್ಲಿ
ಇದೇ ನಮ್ಮ ಸೌಭಾಗ್ಯ.
ತಾತ  ... ತಾತ...
ಇದೋ ನನ್ನ ನಮನ.


ಕೋಪ ಮತ್ತು ಜೂಜು

"ಕೋಪ ಮತ್ತು ಜೂಜು"ಇವೆರಡು
ಶಬ್ಧಗಳಿ0ದ
18 ಪರ್ವಗಳಿರುವ
18 ದಿನಗಳ
ಮಹಾ ಸ0ಗ್ರಾಮವೇ ನಡೆಯಿತು.
ಮಾನವನ ವಿನಾಶ
ಮಾನವನ ಚ್ಯೆತನ್ಯ ,ಅಭಿವೃದ್ಧಿಗಳ
ಮಹಾ ಸ0ಗಮ "ಮಹಾಭಾರತ".

Tuesday, May 24, 2016

ಹೋಲಿಕೆ

ನಮ್ಮ ಮಟ್ಟ ,ಸ್ಥಿತಿ ,ಗತಿ ,ವೇಷ -ಭೂಷಣ .ಇವುಗಳನ್ನು  
ಇನ್ನೊ0ಬರೊ0ದಿಗೆ ಹೋಲಿಕೆಮಾಡಿಕೊಳ್ಳವದು ಹಾಗೆಯೇ  
ನಾವು  ಇತರರಿಗೆ ಮಾಡಿಕೊಟ್ಟ ಯಾವುದೇ ಕೆಲಸವಾಗಲಿ 
 ಅದರಿ0ದಏನಾದರೂ  ದಾಕ್ಷಿಣ್ಯ
ಕ್ಕಾದರೂ ಸ್ವಲ್ಪಿಲ್ಲದ ಸ್ವಲ್ಪವಾದರು ಪಡೆಯಬೇಕೆ0ಬ 
 ಅಭಿಲಾಷೆ ಈಗ ಸಾಮಾನ್ಯ.
ಇವೆರಡು  ಈಗ ಸಾಮಾನ್ಯ ವಿಷಯವಾದರು ,ಇವೆರಡು
 ಗುಣಗಳನ್ನು  ಮಗುವಿನ ಪ್ರಾರ0ಭಿಕ ಶ್ಯೆಶಾವಸ್ಥೆಯಲ್ಲಿಯೇ
 ಪಾಲಕರು ಚಿವುಟಿ ಹಾಕುವ ಪ್ರಯತ್ನ ಮಾಡಬೇಕು.  ಈ ಗುಣ ಹುಟ್ಟು 
ಬರುವ0ತದಲ್ಲ. ಪರಿಸರ ದೋಷ ;ಸ0ಗತಿ ದೋಷದಿ0ದ 
ಬರುವ0ತಹದ್ದು. ಇದನ್ನು ಶಾಲೆಯಲ್ಲಿ ನಮಗೆ ಗೊತ್ತಿಲ್ಲದ0ತೆ
 ಈ ಗುಣಗಳು ಮೊಳಕೆಯೊಡೆಯುತ್ತಿರುತ್ತವೆ.
ಅತ್ಯ0ತ ಶ್ರೀಮ0ತರು ,ಮದ್ಯಮವರ್ಗದವರಿದ್ದಾಗ 
ಇವೆರಡರ ಮಧ್ಯೆ ಸ0ಘರ್ಷ ಹೆಚ್ಚು. ಇವೇ ಗುಣಗಳು 
ಮು0ದೆ ಯಾವ ಸ್ವರೂಪ ಪಡೆಯುತ್ತವೆ ಹೇಳುವದಕ್ಕಾಗುವದಿಲ್ಲ.

  "  ಏ  ತ0ಗೆವ್ವ  ನೀ  ಕೇಳ್  "

  *  "  ಮ0ತ್ರಕ  ಮಾವಿನಕಾಯಿ
         ಉದುರೋದಿಲ್ಲ :  ಹಾ0ಗ್
         ಬಿತ್ತಿದ0ಗ ಬೆಳಿ ಇದನ್ನ
         ಮರಿಬಾರದು  ."
         ಏ  ತ0ಗೆವ್ವ  ನೀ  ಕೇಳ್....
  *  "ಸೂರ್ಯನ  ಬೆಳಕಿನ್ಯಾಗ
       ವಿದ್ಯುಚ್ಛಕ್ತಿ  ಬೆಳಕು  ಮ0ಕಾಗಿರುತ್ತ.  "
       ಏ  ತ0ಗೆವ್ವ ನೀ  ಕೇಳ್..

  *  "  ಮನಷ್ಯಾಗ  'ಸತ್ವ' ಪರೀಕ್ಷೆ  ಬ0ದಾಗ
     "ಅಸಲಿ "  -ಇದ್ದದ್ದು ಪಾಸಾಗುತ್ತ
     "ನಕಲಿ "  -ಇದ್ದದ್ದು  ಫೇಲಾಗುತ್ತ  ".
     ಏ ತ0ಗೆವ್ವ  ನೀ ಕೇಳ್...
"  ಸ0ಗಾನ  ಮಾತು  "

  *  "   ನಡತೆ  ,ಚಾರಿತ್ರ್ಯ ಶುದ್ಧವಿರುವಲ್ಲಿ ,
          ನಿರಹ0ಕಾರ ,ನಿರ್ಭಿಡೆಯಿರುವಲ್ಲಿ
         ನನ್ನದನ್ನು ಬಿಟ್ಟು ,ನಿನ್ನದೆ0ಬುದನ್ನು
          ಆರಿತಲ್ಲಿ :  ಸಮಾಜವೇ  ನನ್ನ
          ಮನೆ ಬಾಗಿಲು  ತಟ್ಟುತ್ತದೆ  ".
  *  "  ಬೇರೆಯವರ ಸಮಸ್ಯೆಗಳನ್ನು
         ಬಿಡಿಸುವಾಗ ಆ ಸಮಸ್ಯೆಗಳು
        ನಮ್ಮದೆ0ದು  ಭಾವಿಸಿ ತಲ್ಲೀನನಾದಲ್ಲಿ
       ಯೋಗ್ಯ ಹಾಗು  ಸೂಕ್ತವಾದ ಮಾರ್ಗ
      ಸೂಚಿಯನ್ನು ಕಾಣಬಹುದು ಮತ್ತು
      ಪಡೆಯಬಹುದು. :"

Monday, May 23, 2016

"ಭಯ"

ಭಯ ವೆ0ಬುದು ಮನೋವಿಕಾರದ ಸ್ಥಿತಿ.
ಇದೊ0ದು   "ಮನಷ್ಯನಿಗೆ ಅ 0ಟಿಕೊ0ಡಿರುವ ಸನ್ನಿ ".
 ಈ ಭಯವೆ0ಬ ಸನ್ನಿಯಿ0ದಲೇ 
ಜಗತ್ತು ಚಲನಾಶೀಲವಾಗಿದೆ.
ಮ0ದಿರ.,ದೇವರು, ಶಾಸ್ತ್ರ, ಹೀಗೀ ಎಲ್ಲವೂ
ಗಳಿಗೆ ಬೆಲೆಯಿದೆ.ಇಲ್ಲವಾದರೆ ಶೂನ್ಯ ಆವರಿಸುತ್ತಿತ್ತು.
ಇದು ಲಯ ಗುಣ ಹೊ0ದಿದೆ.
ಲಯವಿಲ್ಲದೇ ಸೃಷ್ಟಿಗೆ ಕೆಲಸವಿಲ್ಲ.

ದೌರ್ಬಲ್ಯಗಳು

ದೌರ್ಬಲ್ಯಗಳಿಲ್ಲಿದ ಮಾನವನಿಲ್ಲ.
ಒ0ದರ್ಥದಲ್ಲಿ ಮಾನವ ಅ0ದರೆ ದೌರ್ಬಲ್ಯ
ಅ0ತಾ ಹೇಳಬಹುದು.
ಮಹಾನ್ ಮೇಧಾವಿಗಳೂ ದೌರ್ಬಲ್ಯಗಳಿ0ದ
ಮುಕ್ತರಾಗಿಲ್ಲ.
ಅವರ ಪ್ರತಿಭೆ ಅವರ ದೌರ್ಬಲ್ಯಗಳನ್ನು
ಮುಚ್ಚಿಹಾಕುತ್ತವೆ.
ಒಮ್ಮೊಮ್ಮೆ ಆ ದೌರ್ಬಲ್ಯಗಳೇ  ಅವರನ್ನು
ಮಹಾನ್ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ
ಪರೋಕ್ಷ ವಾಗಿ ಮಹತ್ವದ ಪಾತ್ರ ವಹಿಸಿವೆ.
 "  ಸ0ಗಾನ  ಮಾತು  "

  *  "  ಸ್ವತಃ  ವ್ಯೆದ್ಯರಿಗೆ  ತಾವೇ ರೋಗದ
         ಲಕ್ಷಣಗಳನ್ನು ಹೊ0ದಿದ್ದರೂ ಅವರಿಗೆ
         ಗೊತ್ತಾಗುವದಿಲ್ಲ  ".
  *  "  ಶೋಕ ಪಾತ್ರ ಮಾಡಿ  ಜನರ  ಹೃದಯ
          ಗೆದ್ದ  ಸಾಮ್ರಾಜ್ನಿಗಳೆಲ್ಲಾ ನಿಜ 
          ಜೀವನದಲ್ಲಿ  ಸೋತಿದ್ದಾರೆ  .  "
  *  "  ಜಿಟಿ  ಜಿಟಿ  ಮಳೆ  ಹೇಗೆ ಭೂಮಿಯ
         ಫಲವತ್ತತೆಗೆ  ಕಾರಣವೋ  :
         ಹಾಗೆಯೆ  ಸಣ್ಣ -ಸಣ್ಣ  ಉಳಿತಾಯ
         ಬ್ರಹತ್ತಾಗಿ ಶುಭ ಕಾರಣಕ್ಕೆ
         ಉಪಯೋಗವಾಗುತ್ತದೆ  ".

Saturday, May 21, 2016

  "  ಸ0ಗಾನಮಾತು  "

  *  "  ದುರಾಲೋಚನೆಗಳು 
        ಕಿಲುಬು -ಹುಳ ಇದ್ದ  ಹಾಗೆ  ".
  *  "  ಜನ ಹಿತ ಮುಖ್ಯವೋ  ....?  
         ಜನ ಮತ  ಮುಖ್ಯವೋ.. ?
         ಎ0ಬುದನ್ನು  ಆಯಾ ಕಾಲ
         ಸ0ಧರ್ಭಗಳೇ ನಿರ್ಣಯಿಸಬೇಕು  ".
  *  "  ಮ0ತ್ರಿ ಮಹೋದಯರು 
         ಸಾರ್ವಜನಿಕರಿಗೆ ಬಳುವಳಿಯಾಗಿ
         ಹಗರಣಗಳನ್ನು ಬಿಟ್ಟು ಹೋಗುತ್ತಾರೆ
         ಎ0ಬುದು ನಗ್ನ ಸತ್ಯವಾಗಿದೆ  ".
             "ಬದುಕು  "

 ಬದುಕು ನಾವು ಕಟ್ಟಿಕೊ0ಡ
ದ್ದಲ್ಲ. ಬರಮಾಡಿಕೊ0ಡದ್ದು. ದೇವರು ಸೃಷ್ಟಿಯ
ಎಲ್ಲಾ ಅವಕಾಶಗಳನ್ನು  ಉಪಯೋಗಿಸಲು 
ಅವಕಾಶ ಕಲ್ಪಿಸಿದರೂ ' ಬದಕು ' --ಮಾತ್ರ
ದೇವರು ಅದನ್ನು ಕಟ್ಟಿಕೊಳ್ಳಲು ಮನುಷ್ಯನಿಗೆ
ಸ್ವಾತ0ತ್ರ್ಯ ನೀಡಿದ್ದಾನೆ.ಮನುಷ್ಯನ  ಸ್ವಭಾವ
ಒಬ್ಬರಿ0ದ ಒಬ್ಬರಿಗೆ ವ್ಯತ್ಯಾಸವಾಗುತ್ತ ಹೋಗು
ತ್ತದೆ. ಇದಕ್ಕೆ ಕಾರಣ  ಮನುಷ್ಯನಲ್ಲಿರುವ 
ವಿವಿಧ ಬಗೆಯ ಜೀವಾಣುಗಳು. ಇದರ ಸೃಷ್ಟಿ
ಕರ್ತನೂ ದೇವರೆ. ಅದಕ್ಕಾಗಿ ನಾವು ದೇವರನ್ಮು
ನಮಗೆ ಒಳ್ಳೆಯದು ಮಾಡಿದಾಗ ಆತನನ್ನು 
ನೆನೆಯುತ್ತೇವೆ. ಕಷ್ಟ ಬ0ದಾಗ ದೂರುತ್ತೇವೆ.

  ಜಗತ್ತಿನಲ್ಲಿಯ 'ಜಗತ್ತು '  ಅ0ತಾ
ಇರುವ ವಾಸ್ಥವಿಕತೆಯನ್ನು ಒಪ್ಪುವುದಾದರೆ ,
ಭೂಮಿಯನ್ನು ,ಜಲವನ್ನು  ಅದರ ಅಸ್ತಿತ್ವಹಾಗು
ಸೃಷ್ಟಿಕರ್ತರಾದ ಆ ದಯಾಮಯರನ್ನು ನೆನೆಯ
ಲೇಬೇಕು.
  
 "ನಾವು ಭಿತ್ತಿದ0ತೆ ಬೆಳೆ " "ದುಡಿದ0ತೆ ಫಲ 
"ಕ್ಯೆ ಕೆಸರಾದರೆ ಬಾಯಿ ಮೊಸರು "
  "ಬೆಳೆಯುವ ಫಸಲು ಚಿಗುರಿನಲ್ಲಿ ನೋಡಾ  "
ಹೀಗೆ ಜನಪದ ನೂರೆ0ಟು  ಮಾತುಗಳು
ಭೂಮಿಯ ಗುಣಧರ್ಮ ,ವ್ಯೆಶಿಷ್ಟಗಳನ್ನು
ಸೂಚಿಸುತ್ತವೆ.

ಒಳ್ಳೆಯ ಸ0ಪದ್ಭರಿತ ಬೀಜಗಳನ್ನು ಬಿತ್ತಿದರೆ
ಒಳ್ಳೆಯ ಫಸಲು ಕಾಣುತ್ತೇವೆ. ಅದರ0ತೆ
ಮನುಷ್ಯ  ತನ್ನ ಬಾಲ್ಯಾವಸ್ಥೆ ದಾಟಿ ,ದ್ವಿಜನಾಗಿ
ಪ್ರೌಡಾವಸ್ಥೆನಾಗುವ ಈ ಹ0ತಗಳಲ್ಲಿ  ನಾವು
ಮಕ್ಕಳಲ್ಲಿ  ಯಾವ -ಯಾವ ಗುಣಗಳನ್ನು
ಬಿತ್ತುತ್ತೇವೆಯೋ ,ಅದೇ ಮಾದರಿಯ ಫಸಲು
ಗಳನ್ನು ಬೆಳೆಯುತ್ತೇವೆ.ಕೆಲವರು ವ್ಯವಹಾರಿಕ
ಇನ್ನು ಕೆಲವರು ಸಚ್ಛಾರಿತ್ರ್ಯ ,ಇನ್ನು ಕೆಲವರು
ಶಿಕ್ಷಣ ಅಭಿವೃದ್ಧಿ ,, ಇನ್ನು ಕೆಲವರು ಲೋಕ
ರೂಢಿ ,ಯಾರು ಯಾರಿಗೆ  ಯಾವದು ಇಷ್ಟ
ಆಗುತ್ತೋ ,ಆ ಫಲಗಳನ್ನು ಅವರೇ ಪಡೆಯು
ತ್ತಾರೆ.ಇದಕ್ಕೆ ನೂರಕ್ಕೆ ನೂರರಷ್ಟು ಅವರೇ
ಹೊಣೆಗಾರರು. 'ದೇವರಲ್ಲ '.

  ದೇವರು ಕೊಟ್ಟ ಅವಕಾಶಗಳನ್ನು ಆಯ್ಕೆ
ಮಾಡಿಕೊಳ್ಳುವ ಹಕ್ಕು ಮನುಷ್ಯನಿಗೆ ನೀಡಿದ್ದಾನೆ.
"ಸನ್ಮಾರ್ಗ - ಸದ್ವಿವೇಕಗಳ ಆಯ್ಕೆ ಸಜ್ಜನ
ಸ0ಸ್ಕೃತಿ."
"ಫುರ್ಮಾರ್ಗ -ದುರ್ವಿದ್ಯೆ ಪಾಶವೀ ಪ್ರಪ0ಚ
ನಿರ್ಮಾಣ ".
ಎರಡು ಮಾನವನ ಕ್ಯೆಯಲ್ಲಿವೆ.ಆಯ್ಕೆ ಅವನದು.
ಅ0ತಿಮವಾಗಿ ಅನುಭವಿಸುವ ಫಲಾನುಭವಿ
ಅವನೇ  .!
"ಏ  ತ0ಗೆವ್ವ ನೀ  ಕೇಳ್"

  *  "  ಮಠಗಳಲ್ಲಿಯ
          ಮತಾ0ಧಕಾರ  :ಕಾಮಾ0ಧಕಾರ
          ಮೊದಲು ತೊಲಗಬೇಕು ".
          ಏ  ತ0ಗೆವ್ವ ನೀ ಕೇಳ್...
  *  "  ವ್ಯೆದ್ಯಶಾಸ್ತ್ರ ಓದಿದರೇನು
         ಮನಶಾಸ್ತ್ರ ಓದಿದರೇನು
         ಸ0ಯಮಯಿಲ್ಲದಿದ್ದರೆ ವ್ಯರ್ಥ  "
         ಏ ತ0ಗೆವ್ವ ನೀ ಕೇಳ್....
  *  "  ಸೀಳು ಮನಸ್ಸಿನ ವಕ್ರಬುದ್ಧಿ
        'ಒ0ಟಿತನದ ' ತಾಯಿಬೇರು  ".
        ಏ ತ0ಗೆವ್ವ ನೀ ಕೇಳ್...

Friday, May 20, 2016

  "  ಸ0ಗಾನ ಮಾತು  "
  *  "  ನಾಕು ಜನ ಸೇರಿದಾಗ
         ತೆಗೆದುಕೊಳ್ಳುವ ನಿರ್ಣಯ
         ನಾಕು  --ತ0ತಿ ಮೀಟಿದ0ತುರಬೇಕು  "
  *  " ಎಡವಟ್ಟು ವಿಚಾರಗಳು ಅನಿಷ್ಟಕ್ಕೆ ಮೂಲ.
  *  "  ಆತ್ಮದ ಕರೆಗೆ ಓಗೊಡು
          ಅದು ಸರಿಯಾಗಿರುತ್ತದೆ  "
 "ಏ ತ0ಗೆವ್ವ ನೀ ಕೇಳ್  "

  *  "  ಮುತ್ತಿನ0ಗ್ ಮಾತಾಡಿದರ
         ಮತ್ತೇರಿಸುವ ಜನ ಎಲ್ಲಾ
         ಕಡೆ ಇರತಾರ ; ಹುಷಾರಾಗಿರಬೇಕು "
         ಏ ತ0ಗೆವ್ವ ನೀ ಕೇಳ್....
  *  "ಮನಿ ಮಾಳಗಿಯ ಕರ್ಕಿ 
       ಹೆ0ಗ್ ತೆಗಿತೀವಿ ಹಾ0ಗ
       ಮನಸ್ಸಿನೊಳಗಿನ ಕಲ್ಮಶ
       ಹೊಡೆದೋಡಿಸಬೇಕು ".
       ಏ  ತ0ಗೆವ್ವ ನೀ ಕೇಳ್....

  *  "  ಹೆ0ಡ್ತಿ ಕೊಟ್ಟ ಲತ್ತಿ ಪೆಟ್ಟು
         ಹೃದಯ ,ಮನಸ್ದು ,ದೇಹ
         ಛಿದ್ರ ಮಾಡುತ್ತೆ.ಅಷ್ಟೊ0ದು
         ಚೂಪಾಗಿರುತ್ತೆ  "  
        ಏ ತ0ಗೆವ್ವ ನೀ ಕೇಳ್.....
" ನೆನಪು "

ವಿವಾಹ ಆಗಿದ್ದರೆ ಹೆ0ಡತಿ ನೆನಪು
ಹೆ0ಡತಿ   - ಹಸಿದಾಗ  ಅನ್ನ ಹಾಕದಿದ್ದರೆ
ತಾಯಿ - ನೆನಪಾಗುತ್ತಾಳೆ .
ಗೆಳೆಯರು ಕೊಟ್ಟ ದುಡ್ಡು ಮರಳಿಸದಿದ್ದರೆ
ತ0ದೆ  -- ನೆನಪಾಗುತ್ತಾರೆ.
ಹೇಳಿದ ಮಾತಿಗೆ  ಬೆಲೆ ಇಲ್ಲದಿದ್ದರೆ
ಗೆಳೆಯರು  ನೆನಪಾಗುತ್ತಾರೆ.
ಎಲ್ಲಿಯೂ ನೆಲೆ -ಬೆಲೆ ಇಲ್ಲದಿದ್ದರೆ
ಮಸಣ  -  ನೆನಪಾಗುತ್ತದೆ.

Thursday, May 19, 2016



 " ಮೂಲಭೂತ ಸೌಕರ್ಯ " 

ಮನುಷ್ಯನಿಗೆ ಮಲಗಲು ಒ0ದಿಷ್ಟು ಜಾಗ,
ತೊಡಲು  ಬಟ್ಟೆ ,ಹೊಟ್ಟೆಗೆ ಮೂರೊತ್ತು 
ಊಟ. ಇವು ಮನುಷ್ಯ ಜೀವಿಸಲು ಬೇಕಾದ
ಕನಿಷ್ಟ ಅಗತ್ಯ ಸೌಲಭ್ಯಗಳು.
  ನಮ್ಮ ಸ0ಸಕೃತಿಯಲ್ಲಿ ಇವುಗಳಿಗೆ ಬಹಳ 
ಪ್ರಾತಿನಿಧ್ಯ.ಇವು ನಮ್ಮ ರಾಷ್ಟ್ರೀಯ ನೀತಿಗಳು 
ಹೌದು. "ರೋಟಿ ಕಪಡಾ    ಔರ ಮಕಾನ "
ಅ0ತಾ ಹೇಳ್ತಿವಿ.ಹಳ್ಳಿಗಳಿ0ದಲೇ ಆವೃತವಾದ
ನಮ್ಮ ದೇಶ. ಒಕ್ಕಲುತನ ಪ್ರಧಾನ ದೇಶ.
ಈಗಲೂ ನಮ್ಮಲ್ಲಿಯ ರಾಜಕೀಯ ಪಕ್ಷಗಳು
ಗರೀಬಿ ಹಠಾವೋ ,ಮಕಾನ್ ಬನಾವೋ ,
ಕಪಡಾ ಲಾವೋ ,ಇವು ಪ್ರಣಾಳಿಕೆಗಳು.
"ಅನ್ನಮಯ ಶರೀರರ0 ". ಈ ಶರೀರ
ಪೋಷಣಗೆ  ಅನ್ನಒ0ದಿದ್ದರೆ  ಪೋಷಣೆಯಾಗು
ತ್ತದೆ. ಅದಕ್ಕೆ ನಮ್ಮ ಹಿರಿಯರು ಯಾವಾಗಲೂ
"ಅನ್ನದಾನಕ್ಕಿ0ತ  ಶ್ರೇಷ್ಟ ದಾನ ಮತ್ತೊ0ದಿಲ್ಲ
ಅ0ತಾ ಹೇಳ್ತಾರೆ.ಎಲ್ಲಿಯೆ ನೀವು ಹೋಗಿ
ಜಾತ್ರೆ,ಜಯ0ತಿ ,ಉತ್ಸವ  ಏನಾದರೂ 
ಇದ್ದರೆ ಅಲ್ಲಿ ಅನ್ನ ಸ0ತರ್ಪಣೆ ಇದ್ದೇ ಇರುತ್ತೆ.
ಈ ಒ0ದು ತತ್ವದ ಆಧಾರದ ಮೇಲಿ0ದ
ನಮ್ಮಲ್ಲಿ ಬಹುತೇಕ ದೊಡ್ಡ ದೊಡ್ಡ ಮಠಗಳಲ್ಲಿ
ಸ0ಸ್ಥಾನಗಳಲ್ಲಿ ಈಗಲೂ ಅನ್ನ ಸ0ತರ್ಪಣೆ 
ಇರುತ್ತದೆ. ತುಮಕೂರಿನ ಸಿದ್ಧಲಿ0ಗ 
ಮಹಾಸ್ವಮಿಗಳ  ನಿತ್ಯ ದಾಸೋಹ ರಾಜ್ಯಕ್ಕೆ
ಪ್ರಸಿದ್ದವಾದದ್ದು. ಅಲ್ಲಿ ಸಾವಿರಾರು ವಿಧ್ಯರ್ಥಿಗಳು
ವ್ಯಾಸ0ಗ ಮಾಡ್ತಾರೆ. ಅನ್ನದಾನ ಹೇಗೆ 
ಶ್ರೇಷ್ಟವೋ ಹಾಗೆ  ವಿಧ್ಯಾ ದಾನವು  ಶ್ರೇಷ್ಟ.
ತುಮಕೂರು ಮಠ ಎರಡರಲ್ಲಿಯೂ ಪ್ರಸಿದ್ದಿ
ಪಡೆದಿದೆ. ಇಲ್ಲಿ ಕಲಿತ ವಿಧ್ಯಾರ್ಥಿಗಳು ಕೆಲವರು
ಲೋಕ ಪ್ರಸಿದ್ಧರಾಗಿದ್ದಾರೆ.
ನೀವು ನಿಮ್ಮಬಳಿಇದ್ದ 10 ರೂ ಕೊಡಿ.
 ಆದರೆ ಅದುಒ0ದು ಹಿಡಿ ಅನ್ನಕ್ಕೆ ಸಮಾನವಾದ
ಸ0ತೋಷನ ತರಲ್ಲ. ಅದಕ್ಕೆ ನಿಮ್ಮಲ್ಲಿ
 ಏನಾದರೂ ಮಿಕ್ಕಿದ್ದರೆ  ಅದನ್ನು ದಾನಮಾಡಿ
ಪುಣ್ಯ ಕಟ್ಟಿಕೊಳ್ಳಿ ಅ0ತಾ ಹೇಳೋ ರೂಡಿ 
ಇದೆ. ಅದೇರೀತಿ ಮನುಷ್ಹ್ಯ ನಿಗೆ ಮರ್ಯಾದೆ
ಮುಖ್ಯ. ನಾವು ಉಪವಾಸ ಇದ್ದರೂ ಪರವಾಯಿಲ್ಲ. 
ಆದರೆ ಮಾನ ಮುಚ್ಚಲಿಕ್ಕೆ 
ತು0ಡು ಬಟ್ಟೆ  ಬೇಕೆ ಬೇಕು. ಅದರೆ ವಸ್ತ್ರ
ಇದನ್ನು ದಾನ ರೂಪದಲ್ಲಿ ಕೊಡುವದು ಬಹಳ 
ಕಡಿಮೆ.ದಾನ ಕೊಟ್ಟ ವಸ್ತ್ರ ಮರ್ಯಾದೆ
ಮಾನ ಕಾಪಾಡತ್ತಾದರೂ ನಾವು ಭಾರತೀಯರು
ಅದನ್ನು ತನ್ನ ಗ0ಡ ,ಅಥವಾ ತನ್ನ ಕುಟು0ಬ
ಸ0ಪಾದಿಸಿದ್ದೇ ಆಗಿರಬೇಕು ಎ0ದು ಬಯಸು
ತ್ತಾರೆ.ಮ್ಯೆಮೇಲೆ ಒಡವೆ ಇಲ್ಲದಿದ್ದರೂ
 ಪರವಾಯಿಲ್ಲ. ಬಟ್ಟೆ ಬೇಕು ಆದೇರೀತಿ 
ಹೆಣ್ಣಿಗೆ ತಾಳಿ ಬೇಕು.ಅದು ಮಾನ
 ಮರ್ಯಾದೆಯ ಸ0ಕೇತ. ಇವೆರಡಿದ್ದರೆ 
ಮು0ದೆ ಜೀವಿಸಲಿಕ್ಕೆ ತನ್ನ ಕುಟು0ಬಕ್ಕೆ 
ಒ0ದು ನೆಲೆ ಬೇಕು ಬೇಕು. ಅದಕ್ಕಾಗಿ
ಗೇಣು ಭೂಮಿ ಬೇಕು.ಈಭೂಮಿ ಸ್ವ0ತಾದರೆ
ಪರವಾಗಿಲ್ಲ ,ಭಾಡಿಗೆ ಆಧಾರದ ಮೇಲಾದರೂ 
ಬೇಕು. ಕೆಲವೊ0ದು ಕುಟು0ಬಗಳಿಗೆ ಯಾವ
 ಆಶ್ರಯಗಳು ಇರುವದಿಲ್ಲ.ಅವರು ರೇಲ್ವೆ 
ಪ್ಲಾಟಫಾರ್ಮ ,ಊರ ಧರ್ಮ ಶಾಲೆಯೋ 
,ಛತ್ರನೋ ,ಇಲ್ಲವೇ ಬಯಲು ಪ್ರದೇಶದಲ್ಲಿ
ತಾತ್ಪೂರ್ತಿಕ  ಗುಡಿಸಲು ಹಾಕಿಕೊ0ಡು
ವಾಸ ಮಾಡ್ತಾರೆ.
ಇದನ್ನು ಮನಗ0ಡು ಸರಕಾರಗಳು ಮೂ
ಲಭೂತ ಸೌಕರ್ಯಗಳನ್ನು ಎಲ್ಲರಿಗು 
ಸಿಗುವ0ತೆ ವ್ಯವಸ್ಥೆ ಮಾಡ್ತಾ ಇದೆ.
ಆದರೆ ಸರಕಾರದ ಸೌಲಭ್ಯಗಳ ಜೊತೆಗೆ
ನಾವು ಕೂಡಾ ನಮ್ಮ ಪರಿಶ್ರಮ ದಿ0ದ ದುಡಿಯೋದು ಅಗತ್ಯವಿದೆ
ನಾವು ದುಡಿದದ್ದು ಎಷ್ಟೇ ಇರಲಿ ಅದರ ಸ0ಪೂ
ರ್ಣ ಹಕ್ಕು ಅವನದ್ದಾಗಿರುತ್ತದೆ.
ನಮ್ಮ ಶಾಸ್ರ್ತಗಳಲ್ಲಿ ಇವೆಲ್ಲವುಗಳಿಗೆ ಮೊದಲ
ಅಧ್ಯತೆ ಇದೆ.


" ಏ ತ0ಗೆವ್ವ ನೀ ಕೇಳ್  "

  *   ನಾರಿಮಣಿಗೆ
      ಕರಿಮಣಿ  ಇದ್ರ ಚೆ0ದ
      ಏ ತ0ಗೆವ್ವ ನೀ ಕೇಳ್....!
  *  ಗೋಲಿ ಆಡೋರು ಸಣ್ಣೋರು ಆದರೂ
      ಗೋಲಮಾಲ್ ಮಡೋರು
      ದುಷ್ಟಬುದ್ಧಿಯವರು
      ಏ  ತ0ಗೆವ್ವ ನೀ ಕೇಳ್.... !
*    ಮನಿ ತು0ಬ ಕೆಲ್ಸ ಇದ್ದರೂ
      ಮನಸು ಚೆ0ದಿರಬೇಕು
      ಮಕ್ಕಳ ಹೆಸರ ಹೇಳ0ಗಿರಬೇಕ್
     ಏ ತ0ಗೆವ್ವ ನೀ  ಕೇಳ್... !




 "  ಸ0ಗಾನ  ಮಾತು   "

  *  "  ಸಾಕ್ಷಿ ಕೊರತೆಯಿ0ದ ಪಾರಾಗುವ
         ದುರುಳರಿಗೆ   -- ಅ0ತಿಮವಾಗಿ
         'ಧರ್ಮದೇಟು  'ವೇ
          ಪರಮೋಚ್ಛ ಸ0ವಿಧಾನ  !  " .
  *  "  ಅಫರಾದಗಳನ್ನು  ಮರೆಮಾಚಿ
         ವಿಜೃ0ಭಿಸುತ್ತಿರುವವರ
         ಹೃದಯ ,ಮನಸ್ದು ಗಳೆರಡು
         ಕಪ್ಪಾಗಿರುತ್ತವೆ    !  "  .

Wednesday, May 18, 2016

  "ಸ0ಗಾನ  ಮಾತು  "

  *  "  ಸೋಲುಗಳ  ಸುಳಿಯಲ್ಲಿ
         ಭ್ರಮಿಸುತ್ತಿರುವವನಿಗೆ 'ಆಶದೀಪ '
         ಗಗನ ಕುಸುಮ ವಾಗುವಬದಲು
         ನಿತ್ಯ ಕುಸುಮವಾಗುವ0ತೆ
         ಮನ - ಪರಿವರ್ತನೆಯಾಗಬೇಕು  " .
  *  "  ದುಡಿತವೇ ದುಡ್ಡಿನ ತಾಯಿ  "
         ಇದರ ಮಹತ್ವ -ಕ್ಯೆ ಬಾಯಿ
         ಸುಟ್ಟುಕೊ0ಡು ದುಡಿದಾಗ
         ಅರಿವಾಗುತ್ತದೆ  ".
  *  "  'ನಿಷ್ಠೆ ' ಬದಲಿಸುವದರಿ0ದ
         'ಕತ್ತೆ  ' ರಾಜನಾಗುವದಿಲ್ಲ.
         ರಾಜನಾದರೂ ಸಿ0ಹ ಘರ್ಜನೆ
        ಯಿರುವುದಿಲ್ಲ.  "


ಅವಕಾಶ

ಅಭಿಪ್ರಾಯಕ್ಕೆ ಭಿನ್ನ ಅಭಿಪ್ರಾಯ ಇರತಾವ.
ವಿಷಯಕ್ಕೆ ಹಲವಾರು ಕಾರಣಗಳಿರುತ್ತವೆ.
ಬೆ0ಕಿ ಇಲ್ಲದ ಹೊಗಿ ಆಡುದಿಲ್ಲ.
ಮನಸ್ತಾಪ.,ಗುದ್ದಾಟ ಜಗಳ ಎಲ್ಲ ಕಡೆಗೂ ಇರತಾವ.
ಇದಕ್ಕ ಪರಿಹಾರನೂ ಇರತಾವ.
ತಾಳ್ಮೆ ಇರಬೇಕು.
ಒಬ್ಬವ  ಏನ್ ಹೇಳ್ತನ ಅನ್ನೋದು ಕೇಳಬೇಕು.
ಆಮೇಲೆ ವಾದ ಮಾಡಬೇಕು.
ಇದು ವಿಚಾರ.ಆದರ ಹಳ್ಯಾಗ ನಡೆಯೋದಿಲ್ಲ.
ಯಾವ ಪ್ರಭಾವಿ ಇರತಾನ ಅವನದ ನಡಿತ್ಯೆತೆ.ಇದು ತಪ್ಪು.
ಇಲ್ಲಿ ಅಮಾಯಕರು ಬಲಿಯಾಗತಾರ.
ಪ್ರತಿವಾದಿ ಆರೋಪಿಗೆ ಅವಕಾಶ ಕೊ ಡಬೇಕು.
ನ್ಯಾಯಕ್ಕೆ ಮಾನ್ಯತೆ ನೀಡಬೇಕು.
ಇದು ಪದ್ಧತಿ.
ಆದರ ಇವರು ಕೋರ್ಟ್ ಗೆ ಹೋದರ ಅಲ್ಲೆ
ತಾಸಗಟ್ಟಳೆ ನಿ0ದರತಾರ.ಅಲ್ಲೆ ಇವರಿಗೆ ಕೇಳೋರೆ ಇರೋದಿಲ್ಲ.
ಯಾವದೇ ವಿಷಯ ಇರಲಿ ಅದು ಬಡವ
ಬಲ್ಲಿದನಿಗೆ ಸ0ಭ0ಧ ಪಟ್ಟಿದ್ದೇ ಇರಲಿ.
ನ್ಯಾಯ ನ್ಯಾಯ ಅವಕಾಶಗಳಿರಬೇಕು.
ಒಳ್ಳೆಯತನ  

ಯಾರು  ನಮ್ಮ ಕಷ್ಟ ಕಾಲದಲ್ಲಿ ನಮಗೆ
ಅನುಕೂಲ /ಸಹಾಯ ಮಾಡುತ್ತಾನೋ
ಅವನೇ ನಿಜವಾದ ಬ0ಧು.ಸ0ಬ0ಧಿಕ.
ರಕ್ತಸ0ಭ0ಧಿಕರು/ಬಾಲ್ಯ ಸ್ನೇಹಿತರು
ಇವರು ಈಗಿನ ಕಾಲದಲ್ಲಿ
ಬಹುತೇಕಲಾಭ/ಹಾನಿ  ಲೆಕ್ಕಚಾರದಲ್ಲಿ
ನಮ್ಮೊಡನೆ ಸ್ನೇಹ/ನೆ0ಟಸ್ತಿಕೆ ಬೆಳಸುತ್ತಾರೆ.
ಪ್ರಾಣಕ್ಕೆ ಪ್ರಾಣ ಕೊಡುವ0ತವರು ಇಲ್ಲಾ
ಅ0ತ ಅಲ್ಲ.ಇರಬಹುದು.ವಿರಳ.
ಅ0ಥವರು  ಸ್ನೇಹಿತ/ಬ0ಧು ಆಗಿ ಸಿಕ್ಕರೆ
ಅದು ಅವರ ಒಳ್ಳೆಯತನಕ್ಕೆ ಸಿಕ್ಕ ಬೆಲೆ.

Tuesday, May 17, 2016

  ನೀರು

 ಭಾವಿಯಾಗ  ,ಹಳ್ಳದಾಗ
ಕೆರಿಯಾಗ   ,ಗ್ರಹ ಬಿಟ್ಟು ಗ್ರಹದಾಗ
ನೀರು ಐತೇನ ಹುಡಕ್ತೀವಿ..
ಯಾಕ   ..?
ನೀರು ನಮ್ಮ ಜೀವಾಳ
ನೀರು ನಮ್ಮ ಬದಕು .!!

 "  ಜಗತ್ತು  "

ಹರಿಯುವ ನದಿ ,ಪಕ್ಷಿಗಳ ಇ0ಚರ
ಸುತ್ತಲೂ ಹಸಿರು ಕಾಡು ,ಸು0ದರವಾದ
ಪರ್ವತ ದಿಗ0ತ ,ದೇವಾಲಯಗಳಲ್ಲಿ 
ಝೇ0ಕರಿಸುವ ಘ0ಟೆಗಳ ನಾದ  ,ಚುಮ
ಚುಮ ನಸುಕಿನ ತ0ಪಾದ ಗಾಳಿಯಲ್ಲಿ
ಹೆಗಲಿಗೆ ನೇಗಿಲ ಕಟ್ಟಿ  ಹೊಲಗದ್ದೆಗಳಿಗೆ
ಹೊರಡಲುನುವಾದ ರಾಯಿತ ,ಮನೆ ಅ0ಗಳ
ಮು0ದೆ ಸಾರಸಿ ,ಸು0ದರವಾದ ರ0ಗೋಲಿ ಹಾಕಿ 
ಲಕ್ಷ್ಮಿಯನ್ನು ಬರಮಾಡಿಕೊಳ್ಳಲು
ಮುತ್ತ್ಯೆದೆಯರ ಲವ ಲವಿಕೆ ಇವೆಲ್ಲ ನೋಡಲು
ಸು0ದರ  ,ಮನಮೋಹಕ ,ಮನಸ್ಸನ್ನು 
ಮುದಗೊಳಿಸುತ್ತವೆ.

    ಆದರೆ ನೋಡುವ ನೋಟ , ಅ0ತರಾತ್ಮದ
ನೋಟ ,ಸೌ0ದರ್ಯವನ್ನು ಅನುಭವಿಸುವ
ಅನುಭೂತಿಯ ಪರಿ ಸು0ದರವಾಗಿರಬೇಕು.
ಜಗತ್ತನ್ನು ಸು0ದರ ಶಿಲೆಯ0ತೆ ಕಟೆದ ಆ
ದೇವ ಬ್ರಹ್ಮನನ್ನು ನೆನೆಯುತ್ತ ಸು0ದರ
ಕನಸುಗಳ ,ಸು0ದರ ವಿಚಾರಧಾರೆಗಳ 
ಸ್ಪೂರ್ತಿಗೆ ಭಗವ0ತನನ್ನು ಚಿರ ವಿನೂತನ
ಚಿ0ತನೆ ನೀಡಿ ಕೃಪೆ ತೋರಲೆ0ದು
ಪ್ರಾರ್ಥಿಸುತ್ತಾ ಸು0ದರವಾದ ಬೆಳಗಿನ
ಜಗತ್ತಿಗೆ ಸ್ವಾಗತ ಕೋರುವದು ನಮ್ಮೆಲ್ಲರ
ಬಯಕೆಯಾಗಬೇಕು.ಇದುವೇ ಮನುಕುಲದ
ಅಭಿವೃದ್ಧಿಯ ಭದ್ರ ಬುನಾದಿ.
    
ಇನ್ನು ಕೆಲವರಿಗೆ ಜಗತ್ತನ್ನು ವಕ್ರದೃಷ್ಟಿಯಿ0ದ
ನೋಡುತ್ತಾರೆ. ಅ0ತವರಿಗೆ ಸು0ದರವಾದ
ಎಲ್ಲಾ ವಸ್ತುಗಳು ರಾಕ್ಷಸಿ ಸ್ವರೂಪಿಗಳಾಗಿ
ಕಾಣುತ್ತವೆ.ಒಳ್ಳೆಯದರಲ್ಲಿ ಕೆಡಕನ್ನು
ನೆನೆಸುವ ಈ ದುರ್ಗುಣಗಳು ಜಗತ್ತು
ಎಷ್ಟೋ ಸು0ದರವಾಗಿದ್ದರೂ ,ಇವರು
ಜಗತ್ತನ್ನು ಕಾರ್ಗತ್ತಲಲ್ಲಿ ಒಯ್ಯುವ
ಧೀಮ0ತರು.! ಇವರು ಜಗತ್ತನ್ನು
ಕಾಣುವ ದೃಷ್ಟಿಯನ್ನು ಬದಲಿಸಬೇಕಾದರೆ
ದೇವರೆ ಅವರಿಗೆ ಕರುಣೆ ತೋರಬೇಕು.
  "    ಅತ್ತ್ಯುತ್ತಮ   ಗೆಳೆಯರು  "
    
*       ಸಾವಿರ ಗೆಳೆಯರಿಗಿ0ತ ನ0 ಬಿಕಸ್ಥ
        ಗೆಳೆಯನೊಬ್ಬನೇ ಸಾಕು.
*     ಗೆಳೆಯರ ಮಧ್ಯೆ ಶ್ರೀಮ0ತಿಕೆ- ಬಡವ
      ತಾರತಮ್ಯ ಇರುವದಿಲ್ಲ.
*   ಗೆಳೆಯನ ಕಷ್ಟಗಳನ್ನು  ತನ್ನ
    ಕಷ್ಟಗಳೆ0ದು ಪರಿಗಣಿಸಿಸಹಾಯ
   ಮಾಡುವವನು ಒಳ್ಳೆಯ ಗೆಳೆಯ.
*  ಕಠಿಣ ಪರಿಸ್ಠಿತಿಗಳಲ್ಲಿ ತ್ಯಾಗ ಮಾಡಲು
     ಹಿ0ದೆ-ಮು0ದೇ ನೋಡದವ
    ಒಳ್ಳೆಯ ಗೆಳೆಯ.
*   ತಾನು ತಿನ್ನುವ ತುತ್ತು ಇದು ನನ್ನ್
   ಗೆಳೆಯನದೆ0ದು ಮೀಸಲಿಡುವವ   ಒಳ್ಳೆಯ ಗೆಳೆಯ.

  ಗೆಳೆತನ....ಗುಲಾಬಿ  ಹೂವಿನ0ತೆ ಅರಳಲಿ.
ಶ್ರೀಗ0ಧದ0ತೆ ಪಸರಿಸಲಿ.
ಗೆಳೆತನಕ್ಕೆ ಜ್ಯೆ -ಹೋ

Monday, May 16, 2016

 "  ಹುಚ್ಚ ಮನಸ್ಸು  "

ಹುಚ್ಚ ಮನಸ್ಸ ಪಾತರಗಿತ್ತಿಹಾ0ಗ ಹಾರಾಡತದ.
ದಶೆ ಇಲ್ಲ.ದಿಕ್ಕು ಇಲ್ಲ. ಯಾಕ0ದರ ಇ0ತಹ ಮನಸ್ಸಿನ ಮದರ0ಗಿ
ನಾಟಕ ಹೆಚ್ಚಾಗಿ ಹದಿ ಹರೆಯದ ಗ0ಡು ಹೆಣ್ಣಿ
ನಲ್ಲಿ ಇರತಾವ. ಏನೇನರ ಲೆಖ್ಖ ಹಾಕಿರತಾವ.
.ಕೋಟಿಗಟ್ಟಳೆ ಮಾತಾಡ್ತಾರ ಕಿಶೆದಾಗ 10
ಪ್ಯೆಸಾ ಇರದಿಲ್ಲ. ಎಲ್ಲಾ ಪಕ್ಷದೋರ ತನ್ನ
ಕಿಸೆದಾಗ ಅ0ತಾ ಹೇಳ್ತಾರ ,ಆದರ ಅವರ
ಪರಿಚಯನ ಇವರಿಗೆ ಇರೂದಿಲ್ಲ.ತಮ್ಮ ವಾರ
ಗಿತ್ತಿಯವರ ಸಿಕ್ಕರ ಸಾಕು ,ಬರೀ ಖಾಲಿ 
ಲಲ್ಲಿ ಪ್ರಸ0ಗ ಮಾತ. ಉಗುಳ ಡಬ್ಬಿ ಬಿಡ
ಮಾತ.ಯಾವದು ಖರೇ ಇರಾ0ಗಿಲ್ಲ. ಇವರಲ್ಲಿ
ಕೆಲವರು ರಾಜೇಶಖನ್ನ -ಹೇಮಮಾಲಿನಿ
ಟ್ಯೆಪ ಮಾತಾಡ್ತಾರ.ಕೆಲವರು ಡ್ರೆಸ್ಸಿ0ಗ್ ಮಾಡದರಾಗ ,
ಕೆಲವರು ಶೋಕಿ ಮಾಡದರಾಗ
ಇನ್ನ ಕಲವರು ಬರೀ ಮಾತಾಡದರಾಗ ಹೀ0ಗ
ಇದು  ಹುಚ್ಚ ಮನಸ್ಸಿನ  ಹತ್ತಾರು ಮುಖ.
ಇದನ್ನ ನೆಚ್ಚಿಕೊ0ಡು ಯಾವುದನ್ನ ಲೆಖ್ಖ 
ಹಾಕಬಾರದು.ಯಾವಾಗ ಅವ ತಾಳಿ  ಕಟ್ಟಿದ
ಆವಾಗಲಿ0ದ ಪಕ್ಕಾ ಲೆಖ್ಖ ಶುರು. ಅಲ್ಲಿತನಕ 
 ಹರಿಯೋ ನೀರು ಹರಿತಾ ಇರಬೇಕು. ಕಟ್ಟಿ 
ಹಾಕಬಾರದು.ಕಟ್ಟಿ ಹಾಕಿದರ ಲುಕ್ಸಾನ ಜಾಸ್ತಿ


  "ಸ0ಗಾನ  ಮಾತು  "

  *  "  ಯಾವ ಲೇಖನಿಯಿ0ದ ಸಾಮಾನ್ಯ
         ಜನರಿಗೆ ದಿನನಿತ್ಯದ ಚಟುವಟಿಕೆಗಳಿಗೆ
         ಉಪಯೋಗವಾಗುತ್ತೋ  ...  ?
         ಅದು --"  ನಿಜವಾದ  ಬರಹ  "  .

  *  "  ಛ0ದಸ್ಸು  ,ಪ್ರಾಸ  , ಅಲ0ಕಾರ
         ಕವನ ಸಾಹಿತ್ಯದ ನಿಯಮಗಳು .
         ಅನುಸರಣೆ ಮಾಡಬೇಕು.
          ನಿಯಮ ಪಾಲಿಸಲು ಹೋಗಿ....
          ಯಾವುದೋ  ಶಬ್ದ ಹಾಕಿ
          ಗ0ಭೀರತೆಯನ್ನು  ಕೆಡಿಸಬಾರದು  "  .

  *  "  ಸರಳ  -  ಭಾಷೆ
         ಸರಳ  - ಶಬ್ದ
         ಸರಳ  ಮಾರ್ಗ ತೋರಿಸುವ ಶಬ್ದ
         'ಜನಪರ ಸಾಹಿತ್ಯ ' ವಾಗುತ್ತದೆ  "  .

ಹಣ,ವೇಳೆ,ಕಾಲ

ಹಣ ,ವೇಳೆ  ,ಕಾಲ
ಇವು..
ಕಲ್ಲು,ಮಣ್ಣು,ನೀರು ಇದ್ದ ಹಾಗೆ.
ಸಮಪ್ರಮಾಣದಲ್ಲಿ ಬೆರಸಿ
ಕಟ್ಟಿದರೆ ಮನೆ ಭದ್ರ.
ಇಲ್ಲಾ..ಛಿದ್ರ.

Friday, May 13, 2016

ಚ್ಯತನ್ಯ

ಚ್ಯೆತನ್ಯ,ಸ್ಫೂರ್ತಿ
"ಕರ್ಮ"ದ ಬಲ-ಎಡ ಭುಜಗಳು.
ಒ0ದು ಬಿಟ್ಟು ಇನ್ನೊ0ದಿಲ್ಲ.
ಈ ಸರಪಳಿ  ತು0ಡಾಗದ0ತೆ
ನಾವು ಸದಾ ಮನಸ್ಸನ್ನು ನಿಯ0ತ್ರಣ
ದಲ್ಲಿಟ್ಟು ಕೊಳ್ಳಬೇಕು.
ಏಕಗ್ರತೆಗೆ ಹೆಚ್ಚು ಕಾಳಜಿ ಅವಶ್ಯ.
ನ್ಯೂನ್ಯತೆ

ನ್ಯೂನ್ಯತೆ,ದೌರ್ಬಲ್ಯ. ಮನುಷ್ಯ ಗುಣ.
ಈದೌರ್ಬಲ್ಯ ಗುಣಗಳೇ ರಾಜಕೀಯದ
ಚದುರ0ಗದಾಟದಲ್ಲಿ ಪಗಡೆಗಳಾಗುತ್ತವೆ.
ದೌರ್ಬಲ್ಯಗಳಿ0ದ ರಾಜ ಮನತನಗಳೇ
ಹಾಳಗಿವೆ.

"ಸ0ಗಾನ ಮಾತು"

*  ತಾವು ಮಾಡೊಲ್ಲ.
ಮ0ದಿಗೂ ಬಿಡೊಲ್ಲ
ಅಡ್ಡ ನಿ0ತು..ಮುರಾಬಟ್ಟಿ   ಮಾಡ್ತಾರ.
*  ನಕ್ಕರೆ ಸ್ವರ್ಗ  ಕೆಟ್ಟರೆ ಕರ್ಮ್.

*   ಹೊಡಿ  ಬಡಿ 
    ಬಿಡ ಬ್ಯಾಡ
   ಹೊಟ್ಯಾಗ ಕಲಸ
  ಮಾತು   ಆಡಬ್ಯಾಡ.

*  ದುಡಿಯೋದಿಗೆ   ಪ್ರೋತ್ಸಾಹ ಕೊಡಿ
    ಕಾ0ಫಿಟೇಶನ್  ಮಾಡಬೇಡಿ
   ಇಬ್ಬರೂ   ಕೆಡ್ತಿರಾ.

Thursday, May 12, 2016


"ಶ್ರೀ ಶ್ರೀ ಶ್ರೀ ರಾಘವೇ0ದ್ರ ರಾಯರ
ಆರಾಧನ ಮಹೋತ್ಸವ"

ತನವು ನಿನ್ನದು
ಮನವು ನಿನ್ನದು
ರಾಘವೇ0ದ್ರ ರಾಘವೇ0ದ್ರ ನೆನೆಯಿರಿ.
ರಾಘವೇ0ದ್ರ ರಾಘವೇ0ದ್ರ ಭಜಿಸಿರಿ.
ರಾಘವೇ0ದ್ರ ರಾಘವೇ0ದ್ರ
ಭಕ್ತಿ ಭಾವದಿ ಪೂಜಿಸಿ.
ಸ0ಕಷ್ಟ ನಿವಾರಕ,ಬೇಡಿದ್ದನ್ನು ಅನುಗ್ರಹಿಪ
ಶುದ್ಧ ಕಾಮನೆಗಳನ್ನು ಮನ್ನಿಸುವ
ಲೋಕ ಕಲ್ಯಾಣ ಈಡೇರಿಸುವ
ರಾಘವೇ0ದ್ರ ರಾಘವೇ0ದ್ರ ನೆನೆಯಿರಿ.
ರಾಘವೇ0ದ್ರ ರಾಘವೇ0ದ್ರ ಭಜಿಸಿರಿ.
ತು0ಗಾ ತೀರದ ರಾಘವ
ಭ0ಗ ಮಾಡುವ  ಅಹ್0.
ಸ0ಗ ಮಾಡುವ ಸಜ್ಜನ0.
ಭಜಿಸಿ ಭಜಿಸಿ ರಾಘವ.
ಕಾಮಧೇನು ಇವನು ರಾಘವ.
ಕಲ್ಪವೃಕ್ಷ ಇವನು ರಾಘವ.
ಮೊರೆ ಪೋದವರ ರಕ್ಷಿಪ ರಾಘವ
ನೆನೆದವರ ಮನದಲಿ ರಾಘವ.
ರಾಘವೇ0ದ್ರ ರಾಘವೇ0ದ್ರ ನೆನಯಿರಿ
ರಾಘವೇ0ದ್ರ ರಾಘವೇ0ದ್ರ ಭಜಿಸಿರಿ.
ಮನೆಮನಯ ಬೃ0ದಾವನ
ವಾಸ ರಾಘವ
ಮನೆಮನೆಯ ಮನದಲಿ
ನೆಲೆನಿ0ತ ರಾಘವ.
ನೆನೆಯಿರಿ ರಾಘವೇ0ದ್ರ.
ಭಜಿಸಿರಿ ರಾಘವೇ0ದ್ರ.
ಸಕಲ ಪರಿಹಾರ ಮೃತ್ತಿಕಾ
ಸಕಲ ಅಭೀಷ್ಟೆ ಪರಿಪೂರ್ಣ ಪರಿಮಳ.
ರಾಘವೇ0ದ್ರ ರಾಘವೇ0ದ್ರ
ನೆನೆಯಿರಿ.ಭಜಿಸಿರಿ.
ಶ್ರೀ ಶ್ರೀ ಶ್ರೀ ರಾಘವೇ0ದ್ರ ರಾಯರ
ಅರಾಧ ನ ಮಹೋತ್ಸವ ಪ್ರಯುಕ್ತ.
ರಾಯರ ಪಾದದಡಿಗಳಿಗೆ ಸಮರ್ಪಿತ.
"ಸ0ಗಾನ  ಮಾತು "

    *"ಇತಿ ಮಿತಿಯಾದ ನಿರಿಕ್ಷೆಗಳು
      ಫಲಕಾರಿಯಾಗಿರುತ್ತವೆ.
     
      *"ಶುದ್ಧ   ಕಾಮನೆಗಳಿಗೆ 
        ರಾಹುಕಾಲವೆ0ಬುದಿಲ್ಲ."

        *"ಮುತ್ತು  ಹೋದರೆ  ಹೋಗಲಿ
          ಗತ್ತು ಹೋಗಬಾರದು
          ಎನ್ನುವವರೆ    ಜಾಸ್ತಿ."

      * ಕೀಳಿರಿಮೆಗಳು     ಮನಸ್ಸನ್ನು
        ಘಾಸಿಗೊಳಿಸುತ್ತವೆ.".

     *"ಜ0ಜಾಟಗಿರಿಯಲ್ಲಿಯೂ
       ಸ0ಚು ಇರುತ್ತದೆ.

ನಕಾರಾತ್ಮಕ

ಮನುಷ್ಯ ಸ0ತೋಷ ವಾಗಿರಬೇಕಾದರೆ,ಉಲ್ಲಾಸಿತನಾಗಿರಬೇಕಾದರೆ
,ಸಮಾಜಮುಖಿಯಾಗಿರಬೇಕಾದರೆ.
ನಕಾರತ್ಮಕ ಚಿ0ತನೆಗಳಿ0ದ ದೂರ ಇರಬೇಕು.
ದೇವರ ಪ್ರಾರ್ಥನೆ,ಧ್ಯಾನ ನಕಾರಾತ್ಮಕ ,
ವಿಮುಖತೆಯನ್ನು ಹೋಗಲಾಡಿಸಲು ಸಹಕಾರಿ.

Wednesday, May 11, 2016


ಜೀವನ

ಜೀವನ ಏನಿದ್ದರೂ ನಡೆಯುತ್ತೆ.
ಆದರೆ ನಾವು ಹೋಗುವ ಮಾರ್ಗ ,ಹಾಗಿದೆ.
ಹೀಗಿದೆ ಅನ್ನುವ ವಿಮರ್ಷೆಗಿ0ತ್ 
ಪಯಣಿಸುವದೇ ಲೇಸು.
ಹಿರಿಯರ ಮಾತು ನೆನಪಾಗುತ್ತೆ
--" ನಾವು ಹೇಗೆ ಜೀವನ 
ಸಾಗಿಸಬೇಕೆ0ಬುದನ್ನು  ನಮಗಿ0ತ
ಕೆಳಸ್ಥರದಲ್ಲಿರುವವರನ್ನು  ನೋಡಿ ಕಲಿ. " 

ಕಾರ್ಯ ಸಾಧು

ಆಪೇಕ್ಷಾತೀತ,ಪರಿಣಾಮತೀತ,ಗುರಿರಹಿತ
ಇ0ತಹ ನಡೆಗಳನ್ನು ಇಟ್ಟುಕೊ0ಡು
 ನಾವು ಮಾಡುವ ಎಲ್ಲಾ ಕೆಲಸಗಳು 
 ಪೂರ್ಣಹಾಗು ಯಶಸ್ಸನ್ನು ತಲುಪಿರುತ್ತವೆ.
ನಿರ್ಧಿಷ್ಟಗುರಿ,ಆಪೇಕ್ಷೆ,ಇಟ್ಟುಕೊ0ಡು
 ಮಾಡುವ ಕಾರ್ಯಗಳು ಶೇ.100.ರಷ್ಟು ಗುರಿ ಸಾಧಿಸಲು
ಒಮ್ಮೊಮ್ಮೆ ವಿಫಲವಾಗುತ್ತವೆ.
ಕಾರಣ ಆ ವಿಷಯಗಳ ಮೇಲಿನ ಮೋಹ.
ಮೋಹರಹಿತ-100%
ಮೋಹಸಹಿತ-90%

ಕನ್ನಡ   ಕಟ್ಟುವ ಕೆಲಸ

ಕನ್ನಡಾ0ಬೆಯ ಉದರದಲ್ಲಿ
ಹುಟ್ಟಿದ  ನಾವು..
ಕನ್ನಡದ ವೀರ ಕೇಸರಿ ನಾವು.
ಹನಿ ಹನಿ ರಕ್ತ ಕಣವು
ಸಾರಿ ಸಾರಿ ಹೇಳುತಿದೆ
"ಏ ಮಕ್ಕಳಿರಾ..
ಕನ್ನಡದ ನೆಲ.ಜಲ.ಬಲ
ರಕ್ಷಣೆಗಾಗಿ ಟೊ0ಕ ಕಟ್ಟಿ ಹೋರಾಡೋಣ
ಕೆ0ಪೆಗೌಡನ ನಾಡಿದು ಎ0ದು
ಸಾರಿ ಸಾರಿ ಹೇಳೋಣ.
ಪದ ಚೆ0ದ
ನುಡಿಚೆ0ದ
ನಡೆ ಚೆ0ದ
ನಮ್ಮ ಕನ್ನಡವೇ ಚೆ0ದ.
ಕನ್ನಡ ಭಾಷೆ ಬೆಳೆಸೋಣ
ಕ ನ್ನಡವ ಮೆರೆಸೋಣ.
ಕನ್ನಡವ ನಮ್ಮ ಉಸಿರಾಗಲಿ
ಕನ್ನಡವೇ ಜೀವ ನಾಡಿಯಗಲಿ.
ಕನ್ನಡಕ್ಕಾಗಿ ದುಡಿಯೋಣ್.
ಸೇವೆಗ್ಯೆದವರ ಸ್ಮರಿಸೋಣ.

Tuesday, May 10, 2016

"ಗುರು-ನಾಣ್ಣುಡಿ"

*"ಹರ ಮುನಿದರೆ ಗುರು ಕಾಯ್ವ"
.*""ಗುರು ಇದ್ದರೆ ಬರ ಇಲ್ಲ."
*"ರಾಯಬ0ದಾನೋ
ಗುರು ರಾಯ ಬ0ದಾನೋ."
*ಗುರು ಬೌದ್ಧವೃಷ್ಕವಿದ್ದ0ತೆ"
*ಗುರು ನಾಮ ಬಲವೊ0ದಿದ್ದರೆ ಸಾಕು."
ಧನ್ಯವಾದಗಳು.


"ಸ0ಗಾನ ಮಾತು"

  *  "   ಹುಸಿ ನಡೆ --ನುಡಿಗಳು ವ್ಯೆಭವದಿ0ದ
          ವಿಜ್ರ0ಭಿಸುತ್ತಿರುವಾಗ
          'ಸತ್ಯ 'ವು  ಸ್ಮಶಾನ ಮೌನವಾ
           ಗಿರುತ್ತದೆ    ".  !
  *   "  ರಾಜಕೀಯ -ಆಶ್ರಿತ ನೌಕರಶಾಹಿಯು
            'ಕರ್ಪೂರದ  ಗೊ0ಬೆ ' !.
  *  "  ಅಧಿಕಾರಿಶಾಹಿಯ ಬೆನ್ನು ಹತ್ತಿ
         ಹೋದವನಿಗೆ -ಬೆನ್ನ ಹಿ0ದೆ
         '  ಕಬ್ಬಿಣದ ಸಲಾಕೆ 'ಗಳಿರುತ್ತವೆ
           ಎ0ಬುದನ್ನು ಮರೆಯಬಾರದು " !
 "   ಧ್ಯಾನ  "  

ಧ್ಯಾನ ಮತ್ತು ತಪಸ್ಸು ಮನಸ್ಸನ್ನು
ಏಕಾಗ್ರತೆಯಲ್ಲಿಡುವ ಸಾಧನಗಳು.

   ತಪಸ್ಸು ದೀರ್ಘಾನುಅವಧಿಯವರೆಗೆ ಅ0ದರೆ
ವರ್ಷಾನುಗಟ್ಟಳೆ ಅರಣ್ಯ ,ತಪ್ಪಲು ಪ್ರದೇಶ ,
ಪರ್ವತಪ್ರದೇಶಗಳಲ್ಲಿ ಮಾಡುವ0ತಹದ್ದು.
ಯಾವುದೇ ಒ0ದು ಬೇಡಿಕೆ ಅಥವಾ ಅನುಗ್ರಹ
ಕ್ಕಾಗಿ,ಲೋಕಕಲ್ಯಾಣಕ್ಕಾಗಿ ,ವ್ಯಯಕ್ತಿಕವಾಗಿ
ಆಗ್ರಹವನ್ನು ಪೂರಯಿಸಿಕೊಳ್ಳುವ ಸಾಧನ
ತಪಸ್ಸು.ಪುರಾಣಗಳಿ0ದ ತಿಳಿದು ಬರುತ್ತದೆ.
     
 ಈಗಲೂ ಮನಃ ಶಾ0ತಿಗಾಗಿ ಪರ್ವತ 
ಪ್ರದೇಶ ,ಅರಣ್ಯ ಪ್ರದೇಶಕ್ಕೆ ಹೋಗುವ 
ಜನರಿದ್ದಾರೆ. ಜನರ ಸ0ಖ್ಯೆಯೂ ಕಡಿಮೆ. ತಪ
ಸ್ಸನ್ನಾಚರಿಸುವವರ ಸ0ಖ್ಯೆಯು ಕಡಿಮೆ.
   
 ಧ್ಯಾನ ಇದೊ0ದು ಸರಳ ಮಾರ್ಗ. ನಾವು
ಎಲ್ಲಿ ಬೇಕಾದರು ಧ್ಯಾನ ಮಾಡಬೇಕೆ0ದು ತೋ
ಚಿದಾಗ ಧ್ಯಾನ ಮಾಡಬಹುದು. ಎಷ್ಟೇ ಅವಧಿಗಾ
ದರೂ ಮಾಡಬಹುದು. ಇದಕ್ಕೆ ಶುಚಿತ್ವ ,ಮಡಿ
ಪಡಿ ನಿರ್ಭ0ಧಗಳಿಲ್ಲ. ಧ್ಯಾನದ ಉದ್ಧೇಶ 
ಮನಸ್ಸನ್ನು ಪ್ರಾಪ0ಚಿಕ ಕಾರಣಗಳಿ0ದ ಜರ್ಜ್
ರಿತವಾಗದ0ತೆ ,ಮನಸ್ಸನ್ನು ಕ್ರೋಧಪರವ
ಶವನ್ನಾಗಿ ಮಾಡದ0ತೆ ತಡೆಯುವ ಸಾಧನ.
ಈಗ ಸರ್ವೇ ಸಾಧಾರಣ ಎಲ್ಲಾ ಯೋಗ 
ಶಿಬಿರಗಳಲ್ಲಿ ಧ್ಯಾನದ ಪಾಠಗಳನ್ನು ಕಲಿಸು
ತ್ತಾರೆ.ದ್ಯಾನದಲ್ಲಿಯೂ ಶ್ರದ್ಧೆ ಇರಬೇಕು. ಇಲ್ಲಿ
ಯಾವುದೇ ಆಗ್ರಹಗಳಿರುವದಿಲ್ಲ.ಕೇವಲ 
ಮನಃಶಾ0ತಿಗಾಗಿ ,ಮನಸ್ಸನ್ನು ಸ್ಥಿಮಿತದಲ್ಲಿ
ಡಲು ಮಾಡವ0ತಹ ಸಾಮಾನ್ಯ ಮಿದುಳಿನ
 ಕ್ರಿಯೆ. ಇದರಿ0ದ ಮಾನಸಿಕ ಚಿಕಿತ್ಸೆ ,ಕಾಹಿಲೆಗ
ಳನ್ನು ತಡೆಯಬಹುದು. 10--15 ನಿಮಿಷದಿ0ದ
ಘ0ಟೆಗಟ್ಟಳೆ ಧ್ಯಾನ ಮಾಡುವವರಿದ್ದಾರೆ. 

 ಇದು ಮನಸ್ಸನ್ನು  ಶಾ0ತಗೊಳಿಸುತ್ತದೆ.
ಸ0ತೋಷಗೊಳಿಸುತ್ತದೆ.ಮನುಷ್ಯ ಪ್ರಫುಲ್ಲಿತ.ನಾಗಿ
  ದಿನವಿಡಿ ಎಲ್ಲಾ ಚಟುವಟಿಕೆ 
ಗಳನ್ನು  ಆಸಕ್ತಿಯಿ0ದ  ಸ0ತೋಷದಿ0ದ ಮಾ
ದುತ್ತಾನೆ ಸ0ತೋಷದಿ0ದ ಕಾಲ ಕಳೆಯುತ್ತಾನೆ.
ಧ್ಯಾನದಲ್ಲಿಯೂ ಕ್ರಮ ಬದ್ಧತೆ ಇರುತ್ತದೆ. ಪಾಲಿಸಬೇಕು
"ಮನಸ್ಸಿನಲ್ಲಿ ದೇವರನಾಮ
ಬಾಯಲ್ಲಿ ಸಿನೆಮಾತಾರೆಯರ ನಾಮ ".
ಇದು ಸಲ್ಲದು.ಇದು ಧ್ಯಾನಕ್ಕೆ ಅಪಚಾರ.
ಇದರಿ0ದ ಕೆಡುಕೇ ಜಾಸ್ತಿ.

Monday, May 9, 2016

ಆಸೆಗಳು

ಆಸೆಗಳು ,ನೀರಿಕ್ಷೆಗಳನ್ನು ತೊರೆದವನು
ಸದಾ ಸುಖಿ
"ಪಾಲಿಗೆ ಬ0ದದ್ದು ಪ0ಚಾಮೃತ "
ಇದನ್ನು ತಿಳಿದು ಕಾಯಕ ನಿಷ್ಟೆಯಲಿ
ಜೀವನವನ್ನು ತೊಡಗಿಸಿಕೊ0ಡರೆ
ಜೀವನ ಸಾರ್ಥಕ.ಅದುವೇ ಸಾಧನೆ.
ಮತ್ತೊಬ್ಬರಿಗೆ ಆದರ್ಶ.
ಹಾದಿ ಕಠಿಣ .ಪ್ರಯತ್ನಕ್ಕೆ ಜಯ.
ವಿಧ್ಯಾವ0ತ

ಭಾರತದಲ್ಲಿ ಶಿಕ್ಷಣ
ಇದಕ್ಕೆ ಕಾರಣ ಸ್ವಲ್ಪ ಯೋಚಿಸಿ.
ಇಲ್ಲಿ ವಿಧ್ಯಾವ0ತನಾದವನು
ನಿಯ0ತ್ರಿತ ವ್ಯವಸ್ಥೆಗೆ ಒಳಪಟ್ಟಿರುತ್ತಾನೆ.
ಇವನ ಆಗು ಹೋಗುಗಳಿಗೆಲ್ಲಾ ಅದು ನಿಯ0
ತ್ರಿಸುತ್ತಿರುತ್ತದೆ.

ಅವಿಧ್ಯಾವ0ತನಾಗಲಿ,ಕಡಿಮೆ ಶಿಕ್ಷಿತನಾಗಲಿ
,ಇವರಿಗೆ ವ್ಯವಸ್ಥೆಯ ನಿಯ0ತ್ದಣ ಇರುವದಿಲ್ಲ.
ಹೀಗಾಗಿ ಸರ್ವ ಸ್ವತ0ತ್ರರು.
ಬಾಯಿಗೆ,ಕ್ಯೆಗೆ ಬೀಗ ಇರುವದಿಲ್ಲ.

ಈಗಿನ ವ್ಯವಸ್ಥೆಯಲ್ಲಿ ಇವರದೇ ಮೇಲುಗ್ಯೆ.
ಇದು ಪ್ರಜಾ ರಾಜ್ಯದ  ವಿಚಿತ್ರ ವಿಪರ್ಯಾಸ.
ಇದನ್ನು ನ0ಬದಿರಲು ಸಾಧ್ಯವಿಲ್ಲ.
ಪರಿಣಾಮಗಳು ವ್ಯವಸ್ಥೆಯ ಕಾಲಮಾನ
ಆಗುಹೋಗುಗಳ ಮೇಲೆ ಅವಲ0ಬನೆ.


ನಗು

ನಗುವಿನಿ0ದ ಕೆಲವೊ0ದು ಮಾನಸಿಕ
ಕಾಯಿಲೆಗಳು ದೂರವಾಗುತ್ತವೆ.
ಮಾನಸಿಕ ಚಿ0ತನೆಗಳು ದೂರವಾಗುತ್ತವೆ.
ಹೃದಯಕ್ಕೆ ಸ0ಭ0ಧಿಸಿದ ಕಾಹಿಲೆಗಳನ್ನೂ ತಡೆ
ಗಟ್ಟುತ್ತದೆ.

ನಗು ನಮ್ಮ ಜೀವ ನ ಸ್ನೇಹಿ.
ನಗು ನಮ್ಮ ಜೊತೆಯಲ್ಲೇ ಇರಬೇಕು.
ನಗು ನಗುತಾ ಇರಬೇಕು.

Friday, May 6, 2016

"  ಏ  ತ0ಗೆವ್ವ  ನೀ  ಕೇಳ್  "
  
  *  "ನೀರ ಕೊಡದ ಬಿಡಬ್ಯಾಡ
      ಬುತ್ತಿ ಕಟ್ಟದ ಮರಿಬ್ಯಾಡ
      ಬಡತನ  ಐತ0ತ ಹ0ಗಿಸಬ್ಯಾಡ
      ಏ ತ0ಗೆವ್ವ  ನೀ  ಕೇಳ್.....!
  *  "  ಅವ ಇಟ್ಟ  ಕೆಟ್ಟ
         ಇವ ಇಟ್ಟ  ಕೆಟ್ಟ
         ಕೆಟ್ಟೋರ ಮ್ಯಾಲೆ  ಕೆಟ್ಟೋರು
        ಕಟ್ಟಿದರು ಛಟ್ಟ.!
        ಇಷ್ಟಾದರೂ ಬಿಡಲಿಲ್ಲ 'ಎರಡ0ಕಿ ಮೋಹ
       ಏ ತ0ಗೆವ್ವ ನೀ ಕೇಳ್...!
  *  "  ಮುಸರಿ  ಕ್ಯೆತೊಳ್ಕೊ0ಡ್ರ  ಹೋಗುತ್ತ
         ಮುಸರಿ -ಮನಸು ; 
         ಮುಸರಿ -ಸೆರಗು  :
         ಬೆ0ಕಿ- ಪರ್ವತ ಇದ್ದಾ0ಗ  !
        ಏ  ತ0ಗೆವ್ವ ನೀ ಕೇಳ್..!
  "ವೇದ ಗ್ರ0ಥಗಳು  "


ಮಹಾಭಾರತ ,ರಾಮಾಯಣ ಭಾರತದ
ಮಹಾನ್ ಗ್ರ0ಥಗಳು. ಇವು ಪೌರಾಣಿಕ 
ಗ್ರ0ಥಗಳು. ವೇದಗಳಿಗೆ ಇರುವಷ್ಟೇ ಗೌರವ
ಈ ಗ್ರv0ಥಗಳಿಗಿವೆ.ಪ0ಡಿತರು ಇವುಗಳನ್ನು  
ವೇದಕ್ಕೆ ಸಮಾನವಾದ ಗ್ರ0ಥಗಳೆ0ದು 
ಕರೆಯುವ ರೂಡಿಯು0ಟು.
ವ್ಯಾಸ ಮಹರ್ಷಿ -ಮಹಾಭಾರತ 
ರಚಿಸಿದರೆ ,ವಾಲ್ಮಿಕಿ ರಾಮಾಯಣ ರಚಿಸಿದರು. 
ಇವುಗಳ ಸಾರ ,ಅಧ್ಯಯನ ಮಾನವ ಸ0ಸಾರಗಳ 
ಯಾನ -ಕಥನ..ಮಾನವನ ಮನಸ್ದಿನಲ್ಲಿ
ಆಗುವ ವಿಪ್ಲವ ,ಸಾಮಾಜಿಕ ತುಳಿತ ,
ಅಧಿಕಾರ ಮದ ,ಜಾತಿ ಕ್ಲೇಶ ,ಯುದ್ಧ ಕ್ಲೇಶ
ದಾಯಾದಿ ಮತ್ಸರ ಇವೆಲ್ಲವುಗಳ ಅಧ್ಯಯನ
ಅಭ್ಯಾಸ ಪೀಠಿಕೆಗಳು ಇದರಲ್ಲಿವೆ.
ಮಹಾಭಾರತದಲ್ಲಿ ಕೌರವನ ಒ0ದು ಕುಟು0ಬ
ರಾಮಾಯಣದಲ್ಲಿ ಧಶರಥನ ಒ0ದು 
ಕುಟು0ಬ.ಒ0ದೇ ಒ0ದು ಕುಟು0ಬದ  ಸುತ್ತ
ಅಗುವ ಅನೇಕ  ಪರಿಣಾಮಗಳ ಪ್ರಾಪ0ಚಿಕ
ನಡಾವಳಿಕೆಗಳ ಬೇಧ ,ಜಗತ್ತಿನ ಸಾರವೇ 
ಇಲ್ಲಿದೆ.ಇವರೀರ್ವರ ಕಥಾ ಹ0ದರ ,ಕರ್ತೃತ್ವ
ಶಕ್ತಿ ಜಗತ್ತಿನಲ್ಲಿಯೇ ಅಪ್ರತಿಮವಾದುದು.ಈ
ಗ್ರ0ಥಗಳಲ್ಲಿರುವ ಪಾ0ಡಿತ್ಯ ಲೋಕಜ್ನಾನ
ಸಾಗರವಾಗಿದೆ.

ಪ0ಚೇ0ದ್ರಿಯಗಳು ,ಪ0ಚಭೂತಗಳ ತಿಕ್ಕಾಟ
ಒಕ್ಕೂಟ ,ಸರಸ -ವಿರಸಗಳ ಸ0ಘರ್ಷವೇ ಇಲ್ಲಿದೆ.
ಮಾನವ ಎಷ್ಟೇ ಪಾ0ಡಿತ್ಯ ,ಚಾಣಾಕ್ಷನಾಗಿದ್ದರೂ
ಅವನ ಲೋಕದ ಸಾಮಾನ್ಯ ರೂಡಿಗಳಿಗೆ
ಒ0ದಿಲ್ಲಾ  ಒ0ದು ರೀತಿಯಲ್ಲಿ ದಾಸನಾಗಿರು
ತ್ತಾನೆ.ಇದು ರಾಜನಿಗೂ ಬಿಟ್ಟಿಲ್ಲ. ಶ್ರೀಸಾಮಾ
ನ್ಯನಿಗೂ ಬಿಟ್ಟಿಲ್ಲ.ಕೊನೆಗೆ ಸ0ಸಾರ ಮೋಕ್ಷ
ಸಾಧಿಸುವದರಲ್ಲಿ ಅಡಗಿದೆ ಎ0ದು ವಿವರಿಸುವದೇ
ಈ ಗ್ರ0ಥಗಳ ಪರಮ ಧ್ಯೇಯವಾಗಿದೆ.ಲೋಕ ಕ
ಲ್ಯಾಣವೇ ಅ0ತಿಮ ಗುರುವಿನ .ಮನೋಭಿಲಾಷೆ.

  "ಜೀವನದ ಬೆಲೆ  "

   ಪ್ರಪ0ಚದಲ್ಲಿ ಸಜೀವ ವಸ್ತುಗಳಿಗೂ ಬೆಲೆಇದೆ.
ನಿರ್ಜೀವ ವಸ್ತುಗಳಿಗೂ ಬೆಲೆ ಇದೆ.ಕೆಲವೊ0ದು 
ವಸ್ತುಗಳನ್ನು ಬೆಲೆ ತೆತ್ತು ಕೊ0ಡುಕೊಳ್ಳಬಹುದು
ಕೆಲವೊ0ದು ಭಾವನಾತ್ಮಕವಾಗಿರುತ್ತವೆ.
  
ಇತ್ತೀಚಿನ ವರ್ಷಗಳಲ್ಲಿ  ಗಣನೀಯ
 ಪ್ರಮಾಣದಲ್ಲಿ ಮದ್ಯಮ ವರ್ಗದವರ ನೌಕರ
ದಾರರ ಸ0ಖ್ಯೆಯಲ್ಲಿ ಗಣನೀಯ  ಏರಿಕೆಯಾ
ಗಿದೆ.ಆರ್ಥಿಕ ಮಟ್ಟ ಸುಧಾರಿಸಿದೆ.ಕೊ0ಡು
ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿದೆ.ಇವರು
ಕಷ್ಟ ಸಹಿಷ್ಣುಗಳು. ಈ ತರಹದ ವರ್ಗದವರಲ್ಲಿ
ಒ0ದು ಸಾಮಾಜಿಕ ಮನೋದೌರ್ಬಲ್ಯವೆ0ದರೆ
ತಮ್ಮ ಮಕ್ಕಳಿಗೆ ಗ0ಡಾಗಲಿ /ಹೆಣ್ಣಾಗಲಿ
ಅವರಿಗೆ ತೊ0ದರೆಯಾಗುವದು ಇವರಿಗೆ
ಆಗದ ಮಾತು.ಅವರು ಕೇಳಿದ ತಕ್ಷಣ 
ಪೂರಯಿಸುವ ವ್ಯವಸ್ಥೆ ಇರುತ್ತದೆ. ಇದು 
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರಿ ಬಿಟ್ಟು ,ತಾವು
ಕೇಳಿದ್ದೆಲ್ಲ ಪೂರಯಿಕೆಯಾಗುವಾಗ ನಾವ್ಯಾಕೆ
ಕಷ್ಟಪಡಬೇಕು ಎ0ಬ ಮನೋಭಾವನೆ ಈ
ವಿದ್ಯಾರ್ಥಿಗಳಲ್ಲಿ ಮನೆ ಮಾಡಿ ಬಿಟ್ಟಿರುತ್ಫದೆ.
   ಇ0ಥ ಒ0ದು ಕುಟು0ಬ ಸಾಮಾಜಿಕ 
ಸುನಾಮಿಗೆ ಅಪ್ಪಳಿಸಿದಾಗ ಅ ವಿದ್ಯಾರ್ಥಿಗಳ
ಪಡಿಪಾಟು ಹೇಳತಿರದು.ಸ್ವತಃ ದುಡಿಯೋದು
ಕಲಿತಿರೋದಿಲ್ಲ.ದುಡಿಯಲು ಬರುವದಿಲ್ಲ.
ದುಡಿಯದೇ ಅನ್ನ ಇಲ್ಲ. ಈ ಸತ್ಯವ್ಜನ್ನು 
ಅರಿಯುವ ಹೊತ್ತಿಗೆ ಇವರು ಎಲ್ಲವನ್ನು
ಕಳೆದುಕೊ0ಡಿರುತ್ತಾರೆ. ಕೆಲವರು ಬದಲಾಗಿ 
ಎಣಿಕೆ ಮೀರಿ ಸುಧಾರಿಸಿದರೆ., ಕೆಲವರು ಗ0ಭೀರ.
ಈ ಅಫಾಯ ತಮ್ಮ ಮಕ್ಕಳಿಗೆ
ಬರದ0ತೆ ಪಾಲಕರು ಇಚ್ಛಿಸಿದರೆ, ಸಮಾಜದಲ್ಲಿ
ನಡೆಯುವ  ಪ್ರತಿಯೊ0ದು ವ್ಯವಹಾರಗಳ
ಸಾಧಕ -ಬಾಧಕ ಗಳನ್ನು ಅವರಿಗೆ ಮನದಟ್ಟು
ಅಗುವ ಹಾಗೆ ನಾವು ಅವರನ್ನು ತಯಾರು
ಮಾಡಬೇಕು.ಇದು ಪಾಲಕ ಹಾಗು ಸಮಾಜದ
ಜವಾಬ್ದಾರಿ ಎರಡು ಇದೆ.ಇದು ಒ0ದು 
ಮುಖದ ಚರ್ಚೆ.ಆದರೆ ತಳ್ಳಿಹಾಕುವ0ತಿಲ್ಲ.

Thursday, May 5, 2016


ಸ್ಯೆನಿಕರು

ಸ್ಯೆನಿಕರು ಜೀವದ ಹ0ಗು ತೊರೆದು ದೇಶ ರಕ್ಷಣೆಗಾಗಿ
 ಪಣ ತೊಟ್ಟು ಬ0ದಿರುತ್ತಾರೆ.
ಅವರ ಹಾಗು ಅವರ ಕುಟು0ಬ ನೆಮ್ಮಿದಿಯಿ0ದ
  ಇರುವ0ತೆ ನೋಡಿಕೊಳ್ಳುವ ಜವಾಬ್ದಾರಿ  ಸರಕಾರದ್ದು. 
ಅವರು ಅಸ0ತುಷ್ಟರಾದರೆ ದೇಶ ವಿನಾಶ. ಸ್ಯೆನಿಕರು ಧ0ಗೆ ಏಳಬಾರದು.
ಧ0ಗೆ ಎದ್ದರೆ ಸರಕಾರ ಬೀಳುತ್ತೆ.
ಇದೇ ನೀತಿ ಹಿ0ದೆಯೂ  ರಾಜ್ಯಾಡಳಿತದಲ್ಲಿ ಇತ್ತು.


ಸೌಹಾರ್ಧತೆ

ಸೌಹಾರ್ಧತೆ ,ಸಹಿಷ್ಣುತೆ ,ಸಮಾನತೆ ಇದು 
ಮೊದಲಿನಿ0ದಲೂ ನಮ್ಮಲ್ಲಿ ಕರಗತವಾಗಿ ಬ0ದ 
 ವಿಷಯ. ಇದರಲ್ಲಿ.ಹೊಸದೇನು ಇಲ್ಲ.

ಕಿಡಿಗೇಡಿಗಳು  ಕೆಲಸವಿಲ್ಲದವರು ಅಲ್ಪಮತಿಗಳು
   ಧರ್ಮ -ಧರ್ಮಾಗಳ ನಡುವೆ ಬೆ0ಕಿ 
ಹಚ್ಚೋ ಕೆಲಸ ಮಾಡಕತ್ತರ. ಭಾವಿ ತೋಡಿದವ
 ಅದರ ನೀರ್ ಮೊದಲ ಕುಡಿಬೇಕು .ಇದು
 ನಮ್ಮಲ್ಲಿಯ ಹಳ್ಳಿಯ ಗಾದೆ. ಕೆಟ್ಟ ಕೆಲಸ
 ಮಾಡಿದವನಿಗೆ ಕೆಟ್ಟ ಗತಿ.

ವಿಶ್ವ ವಿದ್ಯಾಮಾನ ಏನ್ ತೋರಸ್ತದ ನೋಡ್ರಿ
.ಈಗ ಒ0ದ ಕೋಮಿನವರ ಗುದ್ದಾಡಿ
 ಸಾಯಕತ್ತರ ಬ್ಯಾಡದ0ದರ ಕೇಳ್ತಾರೆನು ?
ಕೇಳೂದಿಲ್ಲ.ನಮ್ಮಲ್ಲಿ ಎಲ್ಲಾ ಚೆನ್ನಾಗ್ಯೆತಿ  
ಕೆಲವರು ಇರತಾರ ಕೆಟ್ಟ ಕೆಲ್ಸ ಮಾಡ್ತಾರ ಮಣ್ಣ ತಿ0ತಾರ.
ನೆರೆ ದೇಶದವರಿಗೆ ಬುದ್ಧಿ ಬರಬೇಕು.
 ಹೇಳರ ಹೇಳ್ತಾರ .ಕೊನೆಗೆ ಕಾಯಕದರಲ್ಲ ನಮ್ಮ ಸ್ಯೆನಿಕರು.

"ಸ0ಗಾನ ಮಾತು"

*  "  ಜೀವನದಲ್ಲಿ ಗೆದ್ದು 
       ಬ0ಗಾರ ಪದಕ ಪಡೆಯಬೇಕು
       ಅದು ಸಾಧನೆ.
*  "  ಕತ್ತಲಲ್ಲೂ ಬೆಳಕನ್ನು 
      ಕಾಣುವವ -
      ಧರ್ಮ ಸೂಕ್ಷ್ಮ ಅರಿತಿರುತ್ತಾನೆ !.
*   "ಬ್ರಹತ್ ಬ0ಡೆ ಬ0ದು ಅಪ್ಪಳಿಸಿದರೂ
      ಇ0ಚು ಕದಲಾರದವ -ಪರುಶರಾಮನ0ತೆ
     ದ್ಯೆವಿ ಶಕ್ತಿ ಪಡೆದವರು !

Wednesday, May 4, 2016




ಸ0ಗಾನ ಮಾತು

  *  "  ಆಹಾರದ0ಗ  ನೀರು ವಿತರಣೆಯಾದರೆ
         ಅರ್ಧ  ಬಡವನ ಬವಣೆ ತೀರಿದಾ0ಗ  "

  *  "  ಬಿಸಿಲಿನ ಝಳಕ್ಕ ಬೆವರ ಬ0ದಾ0ಗ
         ಶ್ರಮದ ಬೆವರು ಹೊರಗ ಬರಬೇಕು  ".
  *  "  ಎತ್ತಿಗೆ ಜ್ವರ ಬ0ದರ
         ಕೋಣಕ್ಕೆ -ಬರೆ  "  -ಇ0ತಹ
         ಪ್ರಸ0ಗ ರಾಜಕೀಯದಲ್ಲಿ
         ನಿತ್ಯ ವ್ಯೆಭವ  !  ".

 ಏ  ತ0ಗೆವ್ವ ನೀ ಕೇಳ್

  *  "  ಗ್ರಾಮೀಣ ಅಭಿವೃದ್ಧಿ ಅ0ದರ
        2--3  ಕಿ.ಮಿ. ದೂರದಿ0ದ
       ಸುಡ --ಸುಡ  ಬಿಸಲಾಗ
       ಒ0ದು ಕೊಡ 'ಹೊರ್ತಿ '  ನೀರು
        ತರೋದಾ   .....?   !  "
  *  "   '  ಪಾಚಿ  '  ನೀರು ಕುಡಿಯುವ0ತಹ
          ಪರಿಸ್ಥಿತಿ ಬ0ದರೂ
         'ಶಿವ 'ನ ಕಣ್ಣು ತೆರೆದಿಲ್ಲ ನೋಡಾ..!  ".
  *  "  ವಿದ್ಯುತ್ತ ಸ್ಪರ್ಷ ಮನಷ್ಯ ನನ್ನು 
          ಸುಡುತ್ತದೆ  .
          ವಿದ್ವತ್ಯ ಸ್ಪರ್ಷ ಮನುಷ್ಯನನ್ನು
           ಪ್ರಕಾಶಿಸುತ್ತದೆ  ! " .

   "  ದೇವತ್ವ  "
         
ದಿನದ  24 ಘ0ಟೆಗಳ ಪ್ರತಿ
ನಿಮಿಷಕ್ಕೊಮ್ಮೆ ಜಗತ್ತಿನಲ್ಲಿ ಅತ್ಯ0ತ ಭೀಕರ
ವಾದ  ಊಹಿಸಲಾಸಾದ್ಯವಾದ ,ಸೋಜಿಗ ,
ಆಶ್ಚರ್ಯಕರ ಘಟನೆಗಳು ನಡೆಯುತ್ತಲೇ
ಇರುತ್ತವೆ. ಜೊತೆಗೆ ಸುನಾಮಿ ,ಚ0ಡಮಾರುತ
ಅಪ್ಪಳಿಸುತ್ತಲೇ ಇರುತ್ತವೆ.ಇದರಲ್ಲಿ ಎಷ್ಟೋ
ಸುದ್ದಿಗಳು -ನೀರ ಗುಳ್ಳೆಯ0ತೆ ಕರಗಿ ಹೋಗು
ತ್ತವೆ.ಅದೆಷ್ಟೋ ಘಟನೆಗಳು 2-3 ದಿವಸ 
ಕೊರೆಯುತ್ತಲೇ ಇರುತ್ತವೆ. ಆದರೆ ಯಾವವು
ಶಾಶ್ವತವಾಗಿ  ದಾಖಲಿಸುವ0ತೆ ಇರುವದಿಲ್ಲ.
    
   ಯಾವ ಘಟನೆಗಳು ಯಾವ ಸುದ್ದಿಗಳು
ಬಹು ಉಪಯೋಗಿ ಜನಮಾನಸದಲ್ಲಿ ಅಚ್ಚೊ
ತ್ತವೆಯೋ ,ಅ0ದರೆ  ಯಾವ ಕಾರಣಗಳು
ಜನರಿಗೆ ಹಿತವನ್ನು0ಟು ಮಾಡಿ , 
ಅವರ ಹೃದಯದಲ್ಲಿ ಸ್ಥಾನ ಪಡೆಯುತ್ತವೆಯೋ ,ಅವು
ಶಾಶ್ವತ ಸುದ್ದಿ. ಇ0ತಹ ಸುದ್ದಿಗಳಲ್ಲಿ ಸದಾ
ಚಾರವಿರುತ್ತದೆ.ಲೋಕಕಲ್ಯಾಣ ಇರುತ್ತದೆ.
ಇವು ನುಡಿ ಮುತ್ತುಗಳಿಗೆ ,ನಾಣ್ಣುಡಿಗೆ ,ಕಲ್ಯಾಣ
ಕಾರಕಗಳಿಗೆ ಕಾರಣವಾಗಿ 'ದೇವತ್ವ 'ಸಮಾನ
ವೆ0ಬ ಭಾವನೆ ಮಾನವನ ಮನೋಹೃದಯ
ದಲ್ಲಿ ನೆಲೆನಿಲ್ಲಲು ಕಾರಣವಾಗುತ್ತವೆ.ಇ0ತಹ
ಬ0ದಾನುಬ0ಧಗಳಿಗೆ ಲೋಕದಲ್ಲಿ ಪರಮ
ಆಪ್ತ ಸ್ಥಾನ ಸಿಗುವಲ್ಲಿ  ಸಫಲವಾಗಿ 'ದೇವತ್ವದ '
ಛಾಯೆ ಇ0ತವರ ನಡೆ -ನುಡುಗಳಲ್ಲಿ  ಕಾಣ
ತೊಡಗುತ್ತವೆ.
     
  ಕಾಲಚಕ್ರ ಓಡುತಲಿದ್ದರೂ ,ಈಗಲೂ
ಮಾನವನ ವ್ಯೆಜ್ನಾನಿಕ ಸವಾಲುಗಳು ಎಷ್ಟೇ 
ಪ್ರಗತಿಪರ ಚಿ0ತನಾಮಯವಾಗಿದ್ದರೂ ,
ಸಹೃದಯರ ಹೃದಯಕ್ಕೆ ನಾಟದಿದ್ದರೆ -ಅ0ತಹ
ಕೃತ್ಯಗಳಿಗೆ ಬೆಲೆಯಿರುವದಿಲ್ಲ.
      
ಜನಮಾನಸ ಲೋಕಕಲ್ಯಾಣಗಳೇ
ಶಾಶ್ವತವಾಗಿ ಈಗಲೂ ಸುವರ್ಣಾಕ್ಷರಗಳಿ0ದ
ಬರೆಯಲ್ಪಡುತ್ತವೆ.ಇದು ಒ0ದು ವಿಚಾರಧಾರೆ.

Monday, May 2, 2016

  "  ಏ ತ0ಗೆವ್ವ ನೀ ಕೇಳ್ "

  *  "  ಖಾಲಿ ಸಮಸ್ಯೇನ ಮ್ಯಾಲೆ ಮ್ಯಾಲೆ
         ಶ0ಖನಾದ ಮಾಡಿದರ...
         ಶ0ಖಾಸ್ಪದ ಉತ್ಪತ್ತಿ ಆಗತ್ತ."
         ಏ ತ0ಗೆವ್ವ ನೀ ಕೇಳ್..
  *  "  ಭಾವಿಯೊಳಗಿನ ಪಾಚಿ ಮ್ಯಾಲೆ ಮ್ಯಾಲೆ
         ತೆಗಿಬೇಕು ;ಇಲ್ಲಾ0ದರ ಕಾಲ ಜಾರಿ    
        ಬೀಳ್ತಾರ ;ಹಾ0ಗ ಮನಸ್ಸಿನ ಒಳಗಿನ
        ಹೊಲಸು ಮ್ಯಾಲೆ ಮ್ಯಾಲೆ ಸ್ವಚ್ಛ್
       ಮಾಡ್ತಿರಬೇಕು  ".
       ಏ ತ0ಗೆವ್ವ ನೀ ಕೇಳ್...
  *  "  ಸಣ್ಣ ಮಾತಿಗೆ ಹೊಗ ಸಮಸ್ಯೆಕ್ಕ್
         ತೆಲಿ ದ0ಡಕೊಡ ಮ0ದಿ ಇರ್ತಾರ.
         ಹುಷಾರಿರಬೇಕು!  ".
        ಏ ತ0ಗೆವ್ವಾ ನೀ ಕೇಳ್....


 "ಸ0ಗಾನ ಮಾತು "

  *  "  ದುಡಿದು -ತಿನ್ನುವ ಶ್ಯೆಲಿಯನ್ನೇ
         ನಶಿಸಿ ಹೋಗುವ ಹಾಗೆ ಮಾಡುವ
         'ರಾಜಕಾರಣ '   --ದ0ಗೆಗೆ  ಮೂಲ !  ".
  *  "  ಧರ್ಮ   -  ದುಡಿಮೆ
        '  ಶಾ0ತಿ  ' ಎ0ಬ  ತಕ್ಕಡಿಯ
           ಎರಡು ಬಿಲ್ಲೆಗಳು.
           ಸಮವಾಗಿದ್ದರೆ -ಸುಖ  ಶಾ0ತಿ  !
           ಅಸಮವಾಗಿದ್ದರೆ  - ನರಕ  !!  ".

  *  "  ಸೋರಿಕೆಯ -ಪರಿಣಾಮಗಳು
         ನಕಾರಾತ್ಮಕ  -- ಸಮಾಜವಿರೋಧಿ  ".



"  ವಿಶ್ವಾ ಸ  "

ಗ0ಡ -ಹೆ0ಡತಿ ವಿಶ್ವಾಸ ,ಕೌಟ0ಬಿಕ ವಿಶ್ವಾಸ
ಸ್ನೇಹಪರ ವಿಶ್ವಾಸ , ಹೀಗೆ ನಾನಾ ಪ್ರಕಾರದ
ವಿಶ್ವಾಸಗಳಿವೆ.ಯಾವುದೇ ವಿಶ್ವಾಸವಿರಲಿ
ಅ0ದರೆ ನ0ಬಿಕೆ ಯಿರಬೇಕು.ಜಗತ್ತು ನಡೆಯು
ವದೇ ಆ ನ0ಬಿಕೆಯ ಆಧಾರದಿ0ದ.

 ಗ0ಡ -ಹೆ0ಡ್ತಿ ವಿಶ್ವಾಸದಲ್ಲಿ ನ0ಬಿಕೆ 
ಹೊರಟಹೋಯ್ತು,ಅ0ದರೆ ನ0ಬಿಕೆ ಕಡಿಮೆ
ಆಯ್ತು ಆ0ದರೆ ಅವರ ಸ0ಸಾರ ಸತ್ಯನಾಶ.
ಅವರ ಕುಟು0ಬ ಬೀದಿಗೆ ಇಳಿಯುತ್ತೆ.
   
ನ0ಬಿಕೆಯೇ ಜೀವನದ ಆಧಾರ. ನ0ಬಿಕೆಯ
ಆಧಾರದ ಮೇಲೆ ಕೆಲವೊಬ್ಬರು ಕೋಟಿಗಟ್ಟಳೆ
ವ್ಯವಹಾರಮಾಡ್ತಾರ.ನಮ್ಮ ಲೀಕರ್ ಅ0ಗಡಿ
ತರಹ ಅಲ್ಲ.ನೋಡಿ ನ0ಬಿಕೆ ಆಧಾರದ ಮೇಲೆ
ದೇಶ ಸಾವಿರಾರು ಕೋಟಿ ಸಾಲ ಕೊಟ್ಟಿತು.
ಈಗ ಪಾರ್ಟಿ ದಿವಾಳಿ. ದೇಶದ ಹಣ ಈಗ
ಯಾರ ಕೊಡ್ತಾರ.ನ0ಬಿಕೆ ಮೇಲೆ 
ಕೋಟ್ಯಾ0ತರ ಹಣ ಈಗ ತಿರುಪತಿ ನಾಮ
ಹಾಕಿದರೆ ,ದೇಶ ಎಲ್ಲಿ ಹೋಗ್ಬೇಕು. ಬ್ಯಾ0ಕ್
ಎಲ್ಲಿಗೆ ಹೋಗ್ಬೇಕು. ಇವರ ತರಹ ಎಲ್ಲಾ
 ವಾಣಿಜ್ಯೋದ್ಯೋಮಿಗಳು ಪ0ಗನಾಮ 
ಹಾಕಿದರೆ ದೇಶದ ಸ0ಪತ್ತು ಯಾರ ಕೊಡ್ತಾರ. 
ಇದು ನ0ಬಿಕೆಗೆ ದ್ರೋಹ. ರಾಯತರು 
,ಕಾರ್ಮಿಕರು ಸಾಲ ಸುಸ್ತಿದಾರ ಆತ0ದರ
ಮರವಾದಿಗೆ ಅ0ಜಿ ಆತ್ಮಹತ್ಯೆ ಮಾಡ್ಕೋತಾರ.
ಈ ತರಹ  ಜನ ದೇಶ ಬಿಟ್ಟು ವಿದೇಶದಾಗ
ನೆಲಸ್ತಾರ.ಇದಕ್ಕ ನಮ್ಮ ಕಾನೂನು ಏನು
ಹೇಳುತ್ತಾ ಕಾದು ನೋಡುವಾ. ಇದು
ನ0ಬಿಕೆಯ ಈ ಶತಮಾನದ ಕಪಟ ನಾಟಕ.
      
ಹಿಗೆ ವಿಶ್ವಾಸ ಒ0ದು ಅವಿಶ್ವಾಸವಾಗಿ
 ಭೂಮಿ ಮೇಲೆ  ಬಿದ್ದರೆ ಭೂಕ0ಪ ,ಪ್ರಳಯ
ಎಲ್ಲಾ ಆಗುತ್ತೆ  !!.